ETV Bharat / sitara

ಇಬ್ಬರದ್ದೂ ಅದೇ ಹೋಲಿಕೆ.. ಕಿನ್ನರಿಯ ಪುಟ್ಟ ಬಾಲಕಿ, ಭೂಮಿ ಶೆಟ್ಟಿ ಇಬ್ರೂ ಅಕ್ಕ-ತಂಗಿನಾ...? - ಭೂಮಿ ಶೆಟ್ಟಿ ಕಿನ್ನರಿ ಧಾರಾವಾಹಿಗೆ ಆಯ್ಕೆ ಆದದ್ದು ಹೇಗೆ

ಮಣಿ ಪಾತ್ರಕ್ಕೆ ಭೂಮಿ ಆಯ್ಕೆಯಾಗಿದ್ದರ ಹಿಂದೆ ಕೂಡಾ ಒಂದು ಕಾರಣ ಇದೆ. ಬಾಲಕಿ ಮಣಿ ಪಾತ್ರ ಮಾಡುತ್ತಿದ್ದ ಪುಟ್ಟ ಹುಡುಗಿ ದಿಶಾ ರಾಮ್​​ಗೂ ಭೂಮಿ ಮುಖಕ್ಕೂ ಬಹಳ ಚೆನ್ನಾಗಿ ಹೋಲಿಕೆಯಾಗುತ್ತಿದ್ದರಿಂದ ಆ ಪಾತ್ರಕ್ಕೆ ಸುಲಭವಾಗಿ ಆಯ್ಕೆಯಾದರು.

ಕಿನ್ನರಿ ನಟಿಯರು
author img

By

Published : Oct 18, 2019, 5:24 PM IST

Updated : Oct 18, 2019, 6:24 PM IST

ಕುಂದಾಪುರದ ಕುವರಿ ಭೂಮಿ ಶೆಟ್ಟಿ ಬಗ್ಗೆ ನಿಮಗೆ ಗೊತ್ತಾ? ಎಂದು ಯಾರನ್ನಾದ್ರೂ ಕೇಳಿದರೆ ಅವರು ಯಾರು ಎಂದು ಕೇಳುವವರೇ ಹೆಚ್ಚು. ಆದರೆ, ಕಿನ್ನರಿ ಧಾರಾವಾಹಿಯ ಮಣಿ ಗೊತ್ತಾ..? ಎಂದು ಕೇಳಿದರೆ ಹೋ..ಮಣಿನಾ..ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಎಂಬ ಉತ್ತರ ಸಿಗುವುದು ಗ್ಯಾರಂಟಿ.

Bhoomi shetty
ಕಿನ್ನರಿ ಖ್ಯಾತಿಯ ಭೂಮಿ ಶೆಟ್ಟಿ

'ಕಿನ್ನರಿ' ಧಾರಾವಾಹಿಯ ಈ ಮುದ್ದು ಮುಖದ ಚೆಲುವೆ ವೀಕ್ಷಕರಿಗೆ ಇನ್ನೂ ಮಣಿ ಎಂದೇ ಪರಿಚಯ. ಆದರೆ ಆಕೆ ಹೆಸರು ಭೂಮಿ ಶೆಟ್ಟಿ. ಇದೀಗ ಈ ಕ್ಯೂಟಿ ಬಿಗ್​ಬಾಸ್​​​​​​ 7 ರ ಸ್ಪರ್ಧಿ. ಮಹಾನಗರಿಗೆ ಓದಲು ಬಂದ ಭೂಮಿ ಆದದ್ದು ಮಾತ್ರ ನಟಿ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಜೀವನ ಚೈತ್ರ' ಧಾರಾವಾಹಿಗಾಗಿ ಆಡಿಷನ್‍ ಏರ್ಪಡಿಸಲಾಗಿತ್ತು. ಸ್ನೇಹಿತರ ಒತ್ತಾಯದ ಮೇರೆಗೆ ಧಾರಾವಾಹಿಯಲ್ಲಿ ಆಡಿಷನ್​​​ಗೆ ಹೋದ ಭೂಮಿ ಕೊನೆಗೂ ನಟಿಯಾಗಿ ಆಯ್ಕೆ ಆಗಿಬಿಟ್ಟರು. ನಂತರ 'ಕಿನ್ನರಿ' ಧಾರಾವಾಹಿಯ ಮಣಿ ಆಗಿ ಬದಲಾದರು. ಮಣಿ ಪಾತ್ರಕ್ಕೆ ಆಯ್ಕೆಯಾಗಿದ್ದರ ಹಿಂದೆ ಕೂಡಾ ಒಂದು ಕಾರಣ ಇದೆ. ಬಾಲಕಿ ಮಣಿ ಪಾತ್ರ ಮಾಡುತ್ತಿದ್ದ ದಿಶಾ ರಾಮ್​​ಗೂ ಭೂಮಿಗೂ ಚೆನ್ನಾಗಿ ಹೋಲಿಕೆಯಾಗುತ್ತಿದ್ದರಿಂದ ಆ ಪಾತ್ರಕ್ಕೆ ಸುಲಭವಾಗಿ ಆಯ್ಕೆಯಾದರು.

Kinnari
ದಿಶಾ ರಾಮ್ (ಫೋಟೋ ಕೃಪೆ: ಕಲರ್ಸ್ ಕನ್ನಡ)
Kinnari
ಭೂಮಿ ಶೆಟ್ಟಿ (ಫೋಟೋ ಕೃಪೆ: ಕಲರ್ಸ್ ಕನ್ನಡ)

ಇದಕ್ಕೂ ಮುನ್ನ ಭೂಮಿ ಆ ಧಾರಾವಾಹಿಯೇ ನೋಡಿರಲಿಲ್ಲವಂತೆ. ಸ್ನೇಹಿತರ ಒತ್ತಾಯಕ್ಕೆ ಮಣಿದು ಆಡಿಷನ್​​​​ಗೆ ಹೋದೆ, ಆಯ್ಕೆಯಾದದ್ದು ನಿಜಕ್ಕೂ ಆಶ್ಚರ್ಯ. ಏಕೆಂದರೆ ಕಿನ್ನರಿ ಪ್ರೋಮೋ ನೋಡಿದವರೆಲ್ಲಾ ನಿಜವಾಗಿಯೂ ಆ ಪುಟ್ಟ ಬಾಲಕಿಯೇ ಬೆಳೆದು ದೊಡ್ಡವಳಾದಳೇ ಎಂದು ಧಾರಾವಾಹಿ ತಂಡದವರನ್ನು ಪ್ರಶ್ನಿಸುತ್ತಿದ್ದರಂತೆ. ನಟನೆ ಜೊತೆಗೆ ಚಿತ್ರಕಲೆ, ಭರತನಾಟ್ಯ, ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಭೂಮಿ ಶೆಟ್ಟಿ ಇಂದಿಗೂ ಕಿರುತೆರೆ ವೀಕ್ಷಕರ ಪಾಲಿನ ಮಣಿ. ಧಾರಾವಾಹಿ ಮುಗಿದಿದ್ದರೂ ಇಂದಿಗೂ ಇವರ ಪಾತ್ರ ಜನರ ಮನಸ್ಸಿನಲ್ಲಿ ಉಳಿದಿದೆ. ಇದೀಗ ಬಿಗ್​​​​​​​​​​​​​ಬಾಸ್ ಮನೆಗೆ ಕಾಲಿಟ್ಟಿರುವ ಕುಂದಾಪುರದ ಕುವರಿ ಅಲ್ಲಿ ಅದೆಷ್ಟು ದಿನ ಇರುತ್ತಾರೆ ಕಾದು ನೋಡಬೇಕು.

Bhoomi shetty
ಭೂಮಿ ಶೆಟ್ಟಿ

ಕುಂದಾಪುರದ ಕುವರಿ ಭೂಮಿ ಶೆಟ್ಟಿ ಬಗ್ಗೆ ನಿಮಗೆ ಗೊತ್ತಾ? ಎಂದು ಯಾರನ್ನಾದ್ರೂ ಕೇಳಿದರೆ ಅವರು ಯಾರು ಎಂದು ಕೇಳುವವರೇ ಹೆಚ್ಚು. ಆದರೆ, ಕಿನ್ನರಿ ಧಾರಾವಾಹಿಯ ಮಣಿ ಗೊತ್ತಾ..? ಎಂದು ಕೇಳಿದರೆ ಹೋ..ಮಣಿನಾ..ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಎಂಬ ಉತ್ತರ ಸಿಗುವುದು ಗ್ಯಾರಂಟಿ.

Bhoomi shetty
ಕಿನ್ನರಿ ಖ್ಯಾತಿಯ ಭೂಮಿ ಶೆಟ್ಟಿ

'ಕಿನ್ನರಿ' ಧಾರಾವಾಹಿಯ ಈ ಮುದ್ದು ಮುಖದ ಚೆಲುವೆ ವೀಕ್ಷಕರಿಗೆ ಇನ್ನೂ ಮಣಿ ಎಂದೇ ಪರಿಚಯ. ಆದರೆ ಆಕೆ ಹೆಸರು ಭೂಮಿ ಶೆಟ್ಟಿ. ಇದೀಗ ಈ ಕ್ಯೂಟಿ ಬಿಗ್​ಬಾಸ್​​​​​​ 7 ರ ಸ್ಪರ್ಧಿ. ಮಹಾನಗರಿಗೆ ಓದಲು ಬಂದ ಭೂಮಿ ಆದದ್ದು ಮಾತ್ರ ನಟಿ. ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ 'ಜೀವನ ಚೈತ್ರ' ಧಾರಾವಾಹಿಗಾಗಿ ಆಡಿಷನ್‍ ಏರ್ಪಡಿಸಲಾಗಿತ್ತು. ಸ್ನೇಹಿತರ ಒತ್ತಾಯದ ಮೇರೆಗೆ ಧಾರಾವಾಹಿಯಲ್ಲಿ ಆಡಿಷನ್​​​ಗೆ ಹೋದ ಭೂಮಿ ಕೊನೆಗೂ ನಟಿಯಾಗಿ ಆಯ್ಕೆ ಆಗಿಬಿಟ್ಟರು. ನಂತರ 'ಕಿನ್ನರಿ' ಧಾರಾವಾಹಿಯ ಮಣಿ ಆಗಿ ಬದಲಾದರು. ಮಣಿ ಪಾತ್ರಕ್ಕೆ ಆಯ್ಕೆಯಾಗಿದ್ದರ ಹಿಂದೆ ಕೂಡಾ ಒಂದು ಕಾರಣ ಇದೆ. ಬಾಲಕಿ ಮಣಿ ಪಾತ್ರ ಮಾಡುತ್ತಿದ್ದ ದಿಶಾ ರಾಮ್​​ಗೂ ಭೂಮಿಗೂ ಚೆನ್ನಾಗಿ ಹೋಲಿಕೆಯಾಗುತ್ತಿದ್ದರಿಂದ ಆ ಪಾತ್ರಕ್ಕೆ ಸುಲಭವಾಗಿ ಆಯ್ಕೆಯಾದರು.

Kinnari
ದಿಶಾ ರಾಮ್ (ಫೋಟೋ ಕೃಪೆ: ಕಲರ್ಸ್ ಕನ್ನಡ)
Kinnari
ಭೂಮಿ ಶೆಟ್ಟಿ (ಫೋಟೋ ಕೃಪೆ: ಕಲರ್ಸ್ ಕನ್ನಡ)

ಇದಕ್ಕೂ ಮುನ್ನ ಭೂಮಿ ಆ ಧಾರಾವಾಹಿಯೇ ನೋಡಿರಲಿಲ್ಲವಂತೆ. ಸ್ನೇಹಿತರ ಒತ್ತಾಯಕ್ಕೆ ಮಣಿದು ಆಡಿಷನ್​​​​ಗೆ ಹೋದೆ, ಆಯ್ಕೆಯಾದದ್ದು ನಿಜಕ್ಕೂ ಆಶ್ಚರ್ಯ. ಏಕೆಂದರೆ ಕಿನ್ನರಿ ಪ್ರೋಮೋ ನೋಡಿದವರೆಲ್ಲಾ ನಿಜವಾಗಿಯೂ ಆ ಪುಟ್ಟ ಬಾಲಕಿಯೇ ಬೆಳೆದು ದೊಡ್ಡವಳಾದಳೇ ಎಂದು ಧಾರಾವಾಹಿ ತಂಡದವರನ್ನು ಪ್ರಶ್ನಿಸುತ್ತಿದ್ದರಂತೆ. ನಟನೆ ಜೊತೆಗೆ ಚಿತ್ರಕಲೆ, ಭರತನಾಟ್ಯ, ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಭೂಮಿ ಶೆಟ್ಟಿ ಇಂದಿಗೂ ಕಿರುತೆರೆ ವೀಕ್ಷಕರ ಪಾಲಿನ ಮಣಿ. ಧಾರಾವಾಹಿ ಮುಗಿದಿದ್ದರೂ ಇಂದಿಗೂ ಇವರ ಪಾತ್ರ ಜನರ ಮನಸ್ಸಿನಲ್ಲಿ ಉಳಿದಿದೆ. ಇದೀಗ ಬಿಗ್​​​​​​​​​​​​​ಬಾಸ್ ಮನೆಗೆ ಕಾಲಿಟ್ಟಿರುವ ಕುಂದಾಪುರದ ಕುವರಿ ಅಲ್ಲಿ ಅದೆಷ್ಟು ದಿನ ಇರುತ್ತಾರೆ ಕಾದು ನೋಡಬೇಕು.

Bhoomi shetty
ಭೂಮಿ ಶೆಟ್ಟಿ
Intro:Body:ಕುಂದಾಪುರದ ಕುವರಿ ಭೂಮಿಕಾ ಶೆಟ್ಟಿ ಬಗ್ಗೆ ನಿಮಗೆ ಗೊತ್ತಾ? ಎಂಬ ಪ್ರಶ್ನೆ ಕೇಳಿದರೆ ನಿಮಗೆ ದೊರಕುವ ಉತ್ತರ ಯಾರದು? ಹೇಗಿದ್ದಾಳೆ? ಇದೇ ಮೊದಲನೇ ಬಾರಿ ನಾನು ಅವಳ ಹೆಸರು ಕೇಳುತ್ತಿರುವುದು ಎಂಬ ಉತ್ತರಗಳು ಸಿಗಬಹುದು. ಆದರೆ ಅದೇ, ಕಿನ್ನರಿ ಧಾರಾವಾಹಿಯ ಮಣಿ ಗೊತ್ತಾ ಎಂದರೆ ಸಾಕು, ಹೋ ಅವಳಾ! ಅವಳನ್ನು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಎಂದು ಹೇಳದಿದ್ದರೆ ಮತ್ತೆ ಕೇಳಿ!

ಯಾಕೆಂದರೆ ಕುಂದಾಪುರದ ರಾಯಲ್ ಶೆಟ್ಟಿ ಎಂದೇ ಖ್ಯಾತರಾಗಿದ್ದು ಮುದ್ದು ಮುಕಲದ ಚೆಲುವೆ ಕಿರುತೆರೆ ವೀಕ್ಷಕರ ಪಾಲಿಗೆ ಪ್ರೀತಿಯ ಮಣಿ! ಭೂಮಿ ಶೆಟ್ಟಿ ಇಂದು ಮಣಿಯಾಗಿ ಬದಲಾಗಿದ್ದಾರೆ ಎಂದರೆ ಅದಕ್ಕೆ ಕಿನ್ನರಿ ಕಾರಣ! ಭೂಮಿಕಾ ಅವರು ಆಡಿಶನ್ ಗೆ ಬಂದುದು, ಆಯ್ಕೆ ಆಗಿದ್ದು, ಮತ್ತೆ ಮಣಿಯಾಗಿ ಬದಲಾಗಿದ್ದು ಎಲ್ಲಾ ಈಗ ಇತಿಹಾಸ.

ಮಹಾನಗರಿಗೆ ಓದಲಿಕ್ಕೆಂದು ಬಂದ ಭೂಮಿಕಾ ಆದದ್ದು ನಟಿ. ಎತ್ತಣ ಮಾಮರ,ಎತ್ತಷ ಕೋಗಿಲೆ ಏನಿಂದೇನಿ ಸಂಬಂಧ ಅನ್ನುವುದು ಇದಕ್ಕೆ ಇರಬೇಕೇನೋ! ಸ್ಟಾರ್ ಸುವರ್ಣದಲ್ಲಿ ಪ್ರಸಾರವಾಗುತ್ತಿದ್ದ ಜೀವನ ಚೈತ್ರ ಧಾರಾವಾಹಿಗಾಗಿ ಆಡಿಶನ್‍ ಏರ್ಪಡಿಸಿದ್ದರು. ಸ್ನೇಹಿತರು ಒತ್ತಾಯ ಮಾಡದಿರುತ್ತಿದ್ದರೆ ಅದಕ್ಕೆ ಭೂಮಿಕಾ ಹೋಗುತ್ತಲೇ ಇರಲಿಲ್ಲ. ಆಡಿಶನ್ ಹೋದ ಕಾರಣ ಆ ಧಾರಾವಾಹಿಯಲ್ಲಿ ಚಿಕ್ಕದೊಂದು ಪಾತ್ರಕ್ಕೆ ಬಣ್ಣ ಹಚ್ಚಿದರು. ಆ ಮೂಲಕ ಬಣ್ಣದ ಪಯಣ ಆರಂಭಿಸಿದರು.

ನಂತರ ಕಿನ್ನರಿಯ ಮಣಿಯಾಗಿ ಆಯ್ಕೆಯಾದ ಭೂಮಿಕಾ ಮೊದಲ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಿನ್ನರಿ ಧಾರಾವಾಹಿಗೆ ಬಹುಬೇಗನೇ ಭೂಮಿಕಾ ಆಯ್ಕೆಯಾಗಿದ್ದಕ್ಕೆ ಕಾರಣವೂ ಕೂಡಾ ಇದೆ. ಮೊದಲು ಕಿನ್ನರಿಯಲ್ಲಿ ಮಣಿ ಪಾತ್ರ ಮಾಡುತ್ತಿದ್ದ ಹುಡುಗಿಗೂ ನಿನಗೂ ಅದೆಷ್ಟು ಹೋಲಿಕೆಯಿದೆ, ಒಂದು ವೇಳೆ ಮಣಿ ದೊಡ್ಡವಳಾದ ಪಾತ್ರ ಇದೆ ಎಂದಾದರೆ ಅದನ್ನು ನೀನು ಮಾಡಬಹುದು ಎಂದು ಹಲವರು ಹೇಳಿದರು. ಧಾರಾವಾಹಿಯೇ ನೋಡದ ನಾನು ಅವರೆಲ್ಲರ ಮಾತು ಕೇಳಿ ಯೂಟ್ಯೂಬ್‍ನಲ್ಲಿ ನೋಡಿದಾಗ ಅವರು ಹೇಳುತ್ತಿರುವುದು ಸರಿ ಎನಿಸಿತು. ನಂತರ ಆಡಿಶನ್ ಕರೆದಾಗ ಹೋದೆ, ಆಯ್ಕೆಯಾದೆ. ಏನು ಆಶ್ಚರ್ಯ ಎಂದರೆ ಆ ಸಮಯದಲ್ಲಿ ಕಿನ್ನರಿಯ ಪ್ರೋಮೋ ನೋಡಿದವರೆಲ್ಲ ಆ ಪುಟ್ಟ ಹುಡುಗಿಯೇ ಬೆಳೆದು ದೊಡ್ಡವಳಾದದ್ದೇ ಎಂದು ಧಾರಾವಾಹಿಯ ತಂಡದವರನ್ನು ಪ್ರಶ್ನಿಸುತ್ತಿದ್ದರು ಎಂದು ನೆನಪಿಸುತ್ತಾರೆ ಭೂಮಿಕಾ.


ನಟನೆಯ ಜೊತೆಗೆ ಚಿತ್ರಕಲೆ, ಭರತನಾಟ್ಯ, ಯಕ್ಷಗಾನದಲ್ಲಿ ತೊಡಗಿಸಿಕೊಂಡಿರುವ ಭೂಮಿಕಾ ಶೆಟ್ಟಿ ಇಂದಿಗೂ ಕಿರುತೆರೆ ವೀಕ್ಷಕರ ಪಾಲಿನ ಮಣಿ. ಧಾರಾವಾಹಿ ಮುಗಿದಿದ್ದರೂ ಇಂದಿಗೂ ಇವರ ಪಾತ್ರ ಜನರ ಮನಸ್ಸಿನಲ್ಲಿ ನೆನಪಿನಲ್ಲಿ ಉಳಿದಿದೆ. ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿರುವ ಕುಂದಾಪುರದ ಕುವರಿ ಅದೆಷ್ಟು ದಿನ ಇರುತ್ತಾರೆ ಕಾದು ನೋಡಬೇಕು.Conclusion:
Last Updated : Oct 18, 2019, 6:24 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.