ETV Bharat / sitara

ಬಿಗ್​ಬಾಸ್​​​​​​ -8 ಸ್ಪರ್ಧಿಗಳ ಬಗ್ಗೆ ಕುತೂಹಲ ವ್ಯಕ್ತಪಡಿಸಿದ ನಿರೂಪಕಿ ಚೈತ್ರಾ ವಾಸುದೇವನ್

author img

By

Published : Feb 24, 2021, 6:49 PM IST

ಈ ಸೀಸನ್​​​ನಲ್ಲಿ ಯಾರೆಲ್ಲಾ ಸ್ಪರ್ಧಿಗಳು ಭಾಗವಹಿಸಲಿದ್ದಾರೆ ಎಂದು ತಿಳಿಯಲು ನಿರೂಪಕಿ ಚೈತ್ರಾ ವಾಸುದೇವ್ ಕಾತರದಿಂದ ಕಾಯುತ್ತಿದ್ದಾರೆ. ಫೆಬ್ರವರಿ 28 ರಂದು ಸಂಜೆ 6 ಗಂಟೆಗೆ ಕಲರ್ಸ್ ಕನ್ನಡದಲ್ಲಿ ಬಿಗ್​ಬಾಸ್ -8 ಆರಂಭವಾಗಲಿದೆ.

Anchor Chaitra Vasudevan
ನಿರೂಪಕಿ ಚೈತ್ರಾ

ಬಿಗ್​​​ಬಾಸ್​​​​​​ ಸೀಸನ್ 8 ಸದ್ಯದಲ್ಲೇ ಆರಂಭವಾಗಲಿದೆ. ಬಿಗ್​​ಬಾಸ್​​​​​​​​​​ 7ರ ಮಾಜಿ ಸ್ಪರ್ಧಿ ಹಾಗೂ ನಿರೂಪಕಿ ಚೈತ್ರಾ ವಾಸುದೇವನ್ ಈ ಶೋನ ಹೊಸ ಸೀಸನ್ ಬರುತ್ತಿರುವುದಕ್ಕೆ ಉತ್ಸುಕರಾಗಿದ್ದಾರೆ. ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ದೀರ್ಘ ವಿರಾಮದ ನಂತರ ಈ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ಮುಂದಿನ ಸೀಸನ್​​​​​​​​​​​​​​​​​​​ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಕಾತರದಿಂದ ಕಾಯುತ್ತಿದ್ದಾರೆ.

Anchor Chaitra Vasudevan
ಬಿಗ್​ಬಾಸ್​​​​​​ -7 ಸ್ಪರ್ಧಿ ಚೈತ್ರಾ

ಇದನ್ನೂ ಓದಿ: ಉಡುಪಿ ಕಡಲ‌‌ ತೀರದಲ್ಲಿ ನಿಧಿಮಾ ಜೊತೆಗೆ ರೊಮ್ಯಾನ್ಸ್ ಮಾಡಿದ ಪೃಥ್ವಿ ಅಂಬರ್​...!

ಈ ಬಗ್ಗೆ ಮಾತನಾಡಿರುವ ಚೈತ್ರಾ,"ತುಂಬಾ ಸಮಯದ ನಂತರ ಬಿಗ್ ಬಾಸ್ ಬರುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕಿಚ್ಚ ಸುದೀಪ್ ನಿರೂಪಣೆ ನೋಡುವುದೇ ಒಂದು ಹಬ್ಬ. ಸ್ಪರ್ಧಿಗಳ ಕುರಿತು ತಿಳಿಯಲು ನಾನು ಉತ್ಸುಕಳಾಗಿದ್ದೇನೆ. ಕಳೆದ ಸೀಸನ್​​​​​​​​​​​​​​​ಗಳಂತೆ ಈ ಬಾರಿ ಕೂಡಾ ಸ್ಪರ್ಧಿಗಳಲ್ಲಿ ಒಬ್ಬರು ನಿರೂಪಕರಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟವಂತ ನಿರೂಪಕರು ಯಾರೆಂಬುದನ್ನು ತಿಳಿಯಲು ಕಾತರದಿಂದ ಕಾಯುತ್ತಿದ್ದೇನೆ. ಸೋಷಿಯಲ್ ಮೀಡಿಯಾ ಮೂಲಕ ಹಲವಾರು ಪ್ರತಿಭಾವಂತರು ಜನರಿಗೆ ಪರಿಚಯವಾಗಿದ್ದಾರೆ. ಇವರಲ್ಲಿ ಯಾರಾದರೂ ಸ್ಪರ್ಧಿಯಾಗಿ ಹೋದರೆ ಚೆನ್ನಾಗಿರುತ್ತದೆ. ನಮ್ಮನ್ನು ಗುರುತಿಸಿಕೊಳ್ಳಲು ಬಿಗ್​ಬಾಸ್ ಸೂಕ್ತ ವೇದಿಕೆ. ನಿವೇದಿತಾ ಗೌಡ ಬಿಗ್​ಬಾಸ್ ಮನೆಗೆ ಹೋಗಿ ಬಂದ ನಂತರ ಅದೇ ರೀತಿಯ ಪ್ರತಿಭಾವಂತರು ಬಿಗ್​ಬಾಸ್​​​ನಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅಂತವರಿಗೆ ಭಾಗವಹಿಸುವ ಅವಕಾಶ ದೊರೆಯಬೇಕು" ಎಂದು ಚೈತ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Anchor Chaitra Vasudevan
ನಿರೂಪಕಿ ಚೈತ್ರಾ ವಾಸುದೇವನ್

ಬಿಗ್​​​ಬಾಸ್​​​​​​ ಸೀಸನ್ 8 ಸದ್ಯದಲ್ಲೇ ಆರಂಭವಾಗಲಿದೆ. ಬಿಗ್​​ಬಾಸ್​​​​​​​​​​ 7ರ ಮಾಜಿ ಸ್ಪರ್ಧಿ ಹಾಗೂ ನಿರೂಪಕಿ ಚೈತ್ರಾ ವಾಸುದೇವನ್ ಈ ಶೋನ ಹೊಸ ಸೀಸನ್ ಬರುತ್ತಿರುವುದಕ್ಕೆ ಉತ್ಸುಕರಾಗಿದ್ದಾರೆ. ಕೊರೋನಾ ಲಾಕ್ ಡೌನ್ ಕಾರಣದಿಂದಾಗಿ ದೀರ್ಘ ವಿರಾಮದ ನಂತರ ಈ ರಿಯಾಲಿಟಿ ಶೋ ಪ್ರಸಾರವಾಗಲಿದ್ದು, ಮುಂದಿನ ಸೀಸನ್​​​​​​​​​​​​​​​​​​​ನಲ್ಲಿ ಯಾರೆಲ್ಲಾ ಸ್ಪರ್ಧಿಗಳಾಗಿ ಭಾಗವಹಿಸುತ್ತಿದ್ದಾರೆ ಎಂಬುದನ್ನು ತಿಳಿಯಲು ಕಾತರದಿಂದ ಕಾಯುತ್ತಿದ್ದಾರೆ.

Anchor Chaitra Vasudevan
ಬಿಗ್​ಬಾಸ್​​​​​​ -7 ಸ್ಪರ್ಧಿ ಚೈತ್ರಾ

ಇದನ್ನೂ ಓದಿ: ಉಡುಪಿ ಕಡಲ‌‌ ತೀರದಲ್ಲಿ ನಿಧಿಮಾ ಜೊತೆಗೆ ರೊಮ್ಯಾನ್ಸ್ ಮಾಡಿದ ಪೃಥ್ವಿ ಅಂಬರ್​...!

ಈ ಬಗ್ಗೆ ಮಾತನಾಡಿರುವ ಚೈತ್ರಾ,"ತುಂಬಾ ಸಮಯದ ನಂತರ ಬಿಗ್ ಬಾಸ್ ಬರುತ್ತಿರುವುದಕ್ಕೆ ಸಂತೋಷವಾಗುತ್ತಿದೆ. ಕಿಚ್ಚ ಸುದೀಪ್ ನಿರೂಪಣೆ ನೋಡುವುದೇ ಒಂದು ಹಬ್ಬ. ಸ್ಪರ್ಧಿಗಳ ಕುರಿತು ತಿಳಿಯಲು ನಾನು ಉತ್ಸುಕಳಾಗಿದ್ದೇನೆ. ಕಳೆದ ಸೀಸನ್​​​​​​​​​​​​​​​ಗಳಂತೆ ಈ ಬಾರಿ ಕೂಡಾ ಸ್ಪರ್ಧಿಗಳಲ್ಲಿ ಒಬ್ಬರು ನಿರೂಪಕರಿರಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟವಂತ ನಿರೂಪಕರು ಯಾರೆಂಬುದನ್ನು ತಿಳಿಯಲು ಕಾತರದಿಂದ ಕಾಯುತ್ತಿದ್ದೇನೆ. ಸೋಷಿಯಲ್ ಮೀಡಿಯಾ ಮೂಲಕ ಹಲವಾರು ಪ್ರತಿಭಾವಂತರು ಜನರಿಗೆ ಪರಿಚಯವಾಗಿದ್ದಾರೆ. ಇವರಲ್ಲಿ ಯಾರಾದರೂ ಸ್ಪರ್ಧಿಯಾಗಿ ಹೋದರೆ ಚೆನ್ನಾಗಿರುತ್ತದೆ. ನಮ್ಮನ್ನು ಗುರುತಿಸಿಕೊಳ್ಳಲು ಬಿಗ್​ಬಾಸ್ ಸೂಕ್ತ ವೇದಿಕೆ. ನಿವೇದಿತಾ ಗೌಡ ಬಿಗ್​ಬಾಸ್ ಮನೆಗೆ ಹೋಗಿ ಬಂದ ನಂತರ ಅದೇ ರೀತಿಯ ಪ್ರತಿಭಾವಂತರು ಬಿಗ್​ಬಾಸ್​​​ನಲ್ಲಿ ಭಾಗವಹಿಸುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಅಂತವರಿಗೆ ಭಾಗವಹಿಸುವ ಅವಕಾಶ ದೊರೆಯಬೇಕು" ಎಂದು ಚೈತ್ರಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Anchor Chaitra Vasudevan
ನಿರೂಪಕಿ ಚೈತ್ರಾ ವಾಸುದೇವನ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.