ETV Bharat / sitara

2021ಕ್ಕೆ ಮತ್ತೆ ನಿರ್ದೇಶನಕ್ಕೆ ಬರ್ತಾರಂತೆ ವಿನಯಾ ಪ್ರಸಾದ್ - ವಿನಯಾ ಪ್ರಕಾಶ್

ನಟಿ ವಿನಯಾ ಪ್ರಸಾದ್, ಕಥೆ ಹಾಗೂ ಚಿತ್ರಕಥೆ ಬಗ್ಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, 2021ರ ವೇಳೆಗೆ ಮತ್ತೊಂದು ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾವನ್ನು ನಿರ್ದೇಶನ ಮಾಡಲು ತೀರ್ಮಾನಿಸಿದ್ದಾರೆ.

ವಿನಯಾ ಪ್ರಸಾದ್
author img

By

Published : Aug 17, 2019, 10:06 AM IST

ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದೆ ವಿನಯಾ ಪ್ರಸಾದ್ (ವಿನಯಾ ಪ್ರಕಾಶ್​​). ಸದ್ಯಕ್ಕೆ ನ್ಯಾಯಾಧೀಶೆ ಪಾತ್ರದಲ್ಲಿ ಕನ್ನಡದ ‘ತಮಟೆ’ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಅವರು, ಒಂದು ವರ್ಷದಲ್ಲಿ ತಯಾರಿ ಮಾಡಿಕೊಂಡು 2021ಕ್ಕೆ ಮತ್ತೆ ನಿರ್ದೇಶನಕ್ಕೆ ಬರುತ್ತೇನೆ ಎಂದು ನಿಶ್ಚಯಿಸಿದ್ದಾರೆ.

ಕಡಿಮೆ ಬಜೆಟ್​​ನಲ್ಲಿ, ಕಡಿಮೆ ಅವಧಿಯಲ್ಲಿ ತಯಾರಾಗಿ, 2017 ರಲ್ಲಿ ಬಿಡುಗಡೆಯಾದ ವಿನಯಾ ಪ್ರಸಾದ್ ಅವರ ‘ಲಕ್ಷ್ಮಿ ನಾರಾಯಣ ಪ್ರಪಂಚವೇ ಬೇರೆ’ ಎಂಬ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಉಳಿಯಲಿಲ್ಲ. ವಿನಯಾ ಅವರ ಪತಿ ಜ್ಯೋತಿ ಪ್ರಕಾಶ್​ ಅವರ ಕಥೆ, ಚಿತ್ರಕಥೆ, ನಿರ್ಮಾಣದಲ್ಲಿ ಈ ಸಿನಿಮಾ ತಯಾರಾಗಿತ್ತು. ಇದೇ ಚಿತ್ರಕ್ಕೆ ನಟ ಮಂಜುನಾಥ್ ಹೆಗ್ಡೆ ಅವರಿಗೆ ಪೋಷಕ ಕಲಾವಿದ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಸಹ ಬಂದಿತ್ತು. ಆದರೆ, ಹಾಕಿದ ಹಣ, ಟಿವಿ ರೈಟ್ಸ್ ಕಲರ್ಸ್ ಕನ್ನಡ ವಾಹಿನಿಗೆ ಕೊಟ್ಟ ಮೇಲೆ ಸ್ವಲ್ಪ ಲಾಸ್ ಆಯಿತು ಎಂದು ಹೇಳಿಕೊಳ್ಳುವ ವಿನಯಾ, ಈ ಸಿನಿಮಾದಿಂದ ನಿರ್ದೇಶಕಿಯಾಗಿ ಪಡೆದ ಅನುಭವ ನಿಜಕ್ಕೂ ಚನ್ನಾಗಿತ್ತು ಅಂತಾರೆ.

ವಿನಯಾ ಪ್ರಸಾದ್, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಓದುತ್ತಾ ಇರುವಾಗ ಮದನ್ ಪಟೇಲ್ ಅವರ ಸಂಗೀತ ಕೇಳಿಕೊಂಡು ಬಂದವರು. ಈಗ ಅವರ ಪುತ್ರ ಮಯೂರ್ ಪಟೇಲ್ ನಿರ್ದೇಶನದ ಚಿತ್ರಕ್ಕೆ ಆಹ್ವಾನ ಬಂದಾಗ ಇಲ್ಲ ಎನ್ನಲಾಗಲಿಲ್ಲ ಎನ್ನುತ್ತಾರೆ. ಈ ಸಿನಿಮಾ ಅಲ್ಲದೇ ಅವರು ಕೆಲವು ಮಲಯಾಳಂ ಹಾಗೂ ಕನ್ನಡ ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ.

ವಿನಯಾ ಅವರು, ಕಥೆ ಹಾಗೂ ಚಿತ್ರಕಥೆ ಬಗ್ಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಮತ್ತೊಂದು ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾವನ್ನು ನಿರ್ದೇಶನ ಮಾಡಲು ತೀರ್ಮಾನಿಸಿದ್ದಾರೆ. 2021 ಆರಂಭದಲ್ಲಿ ನಿರ್ದೇಶನ ಆಗಬಹುದು ಎಂಬುದು ಅವರ ಲೆಕ್ಕಾಚಾರ.

ಕನ್ನಡ ಚಿತ್ರರಂಗದ ಅಪ್ರತಿಮ ಕಲಾವಿದೆ ವಿನಯಾ ಪ್ರಸಾದ್ (ವಿನಯಾ ಪ್ರಕಾಶ್​​). ಸದ್ಯಕ್ಕೆ ನ್ಯಾಯಾಧೀಶೆ ಪಾತ್ರದಲ್ಲಿ ಕನ್ನಡದ ‘ತಮಟೆ’ ಸಿನಿಮಾದಲ್ಲಿ ಅಭಿನಯಿಸುತ್ತಿರುವ ಅವರು, ಒಂದು ವರ್ಷದಲ್ಲಿ ತಯಾರಿ ಮಾಡಿಕೊಂಡು 2021ಕ್ಕೆ ಮತ್ತೆ ನಿರ್ದೇಶನಕ್ಕೆ ಬರುತ್ತೇನೆ ಎಂದು ನಿಶ್ಚಯಿಸಿದ್ದಾರೆ.

ಕಡಿಮೆ ಬಜೆಟ್​​ನಲ್ಲಿ, ಕಡಿಮೆ ಅವಧಿಯಲ್ಲಿ ತಯಾರಾಗಿ, 2017 ರಲ್ಲಿ ಬಿಡುಗಡೆಯಾದ ವಿನಯಾ ಪ್ರಸಾದ್ ಅವರ ‘ಲಕ್ಷ್ಮಿ ನಾರಾಯಣ ಪ್ರಪಂಚವೇ ಬೇರೆ’ ಎಂಬ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಉಳಿಯಲಿಲ್ಲ. ವಿನಯಾ ಅವರ ಪತಿ ಜ್ಯೋತಿ ಪ್ರಕಾಶ್​ ಅವರ ಕಥೆ, ಚಿತ್ರಕಥೆ, ನಿರ್ಮಾಣದಲ್ಲಿ ಈ ಸಿನಿಮಾ ತಯಾರಾಗಿತ್ತು. ಇದೇ ಚಿತ್ರಕ್ಕೆ ನಟ ಮಂಜುನಾಥ್ ಹೆಗ್ಡೆ ಅವರಿಗೆ ಪೋಷಕ ಕಲಾವಿದ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಸಹ ಬಂದಿತ್ತು. ಆದರೆ, ಹಾಕಿದ ಹಣ, ಟಿವಿ ರೈಟ್ಸ್ ಕಲರ್ಸ್ ಕನ್ನಡ ವಾಹಿನಿಗೆ ಕೊಟ್ಟ ಮೇಲೆ ಸ್ವಲ್ಪ ಲಾಸ್ ಆಯಿತು ಎಂದು ಹೇಳಿಕೊಳ್ಳುವ ವಿನಯಾ, ಈ ಸಿನಿಮಾದಿಂದ ನಿರ್ದೇಶಕಿಯಾಗಿ ಪಡೆದ ಅನುಭವ ನಿಜಕ್ಕೂ ಚನ್ನಾಗಿತ್ತು ಅಂತಾರೆ.

ವಿನಯಾ ಪ್ರಸಾದ್, ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಓದುತ್ತಾ ಇರುವಾಗ ಮದನ್ ಪಟೇಲ್ ಅವರ ಸಂಗೀತ ಕೇಳಿಕೊಂಡು ಬಂದವರು. ಈಗ ಅವರ ಪುತ್ರ ಮಯೂರ್ ಪಟೇಲ್ ನಿರ್ದೇಶನದ ಚಿತ್ರಕ್ಕೆ ಆಹ್ವಾನ ಬಂದಾಗ ಇಲ್ಲ ಎನ್ನಲಾಗಲಿಲ್ಲ ಎನ್ನುತ್ತಾರೆ. ಈ ಸಿನಿಮಾ ಅಲ್ಲದೇ ಅವರು ಕೆಲವು ಮಲಯಾಳಂ ಹಾಗೂ ಕನ್ನಡ ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ.

ವಿನಯಾ ಅವರು, ಕಥೆ ಹಾಗೂ ಚಿತ್ರಕಥೆ ಬಗ್ಗೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು, ಮತ್ತೊಂದು ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾವನ್ನು ನಿರ್ದೇಶನ ಮಾಡಲು ತೀರ್ಮಾನಿಸಿದ್ದಾರೆ. 2021 ಆರಂಭದಲ್ಲಿ ನಿರ್ದೇಶನ ಆಗಬಹುದು ಎಂಬುದು ಅವರ ಲೆಕ್ಕಾಚಾರ.

ವಿನಯಾ ಪ್ರಸಾದ್ ಮತ್ತೆ ನಿರ್ದೇಶನಕ್ಕೆ ಬರ್ತಾರೆ

ಕನ್ನಡ ಚಿತ್ರ ರಂಗ ಕಂಡ ಅಪ್ರತಿಮ ಕಲಾವಿದೆ ವಿನಯಾ ಪ್ರಸಾದ್ (ಪ್ರಕಾಷ್ ಅಂತಲೂ ಹೇಳುತ್ತಾರೆ) ಸಧ್ಯಕ್ಕೆ ಚಿತ್ರ ನಿರ್ದೇಶನದ ಬಗ್ಗೆ ಯೋಚಿಸುವುದರ ಬದಲು ಚಿತ್ರಕ್ಕೆ ಬೇಕಾದ ತಯಾರಿ ಒಂದು ವರ್ಷದಲ್ಲಿ ಮಾಡಿಕೊಂಡು 2021ಕ್ಕೆ ಮತ್ತೆ ನಿರ್ದೇಶನಕ್ಕೆ ಬರುತ್ತೇನೆ ಎಂದು ನಿಶ್ಚಯಿಸಿದ್ದಾರೆ.

ಹೌದು ವಿನಯಾ ಪ್ರಸಾದ್ ಅವರ ಲಕ್ಷ್ಮಿ ನಾರಾಯಣ ಪ್ರಪಂಚವೆ ಬೇರೆ (2017 ಬಿಡುಗಡೆ) ಕನ್ನಡ ಸಿನಿಮಾ ಬಹಳ ಶಿಸ್ತಿನಿಂದ ಮಾಡಿದ ಸಿನಿಮಾ, ಕಡಿಮೆ ಬಜೆಟಿನಲ್ಲಿ, ಕಡಿಮೆ ಆವದಿಯಲ್ಲಿ, ಚಿತ್ರಕ್ಕೆ ಬಜೆಟಿಂಗ್ ಬಗ್ಗೆ ಬಹಳ ಯೋಚಿಸಿ ಮಾಡಿದ ಸಿನಿಮಾ ಗಲ್ಲ ಪೆಟ್ಟಿಗೆಯಲ್ಲಿ ಉಳಿಯಲಿಲ್ಲ. ವಿನಯಾ ಅವರ ಪತಿ ಜ್ಯೋತಿ ಪ್ರಕಾಷ್ ಅವರ ಕಥೆ ಹಾಗೂ ಚಿತ್ರಕಥೆ, ನಿರ್ಮಾಣದಲ್ಲಿ ಸಹಾಯ ಸಹ ಈ ಸಿನಿಮಾ ಪಡೆದಿತ್ತು. ಇದೆ ಚಿತ್ರಕ್ಕೆ ನಟ ಮಂಜುನಾಥ್ ಹೆಗ್ಡೆ ಅವರಿಗೆ ಪೋಷಕ ಕಲಾವಿದ ಪಾತ್ರಕ್ಕೆ ರಾಜ್ಯ ಪ್ರಶಸ್ತಿ ಸಹ ಬಂದಿತು. ಆದರೆ ಹಾಕಿದ ಹಣ ಟಿ ವಿ ರೈಟ್ಸ್ ಕಲಾರ್ಸ್ ಕನ್ನಡ ವಾಹಿನಿಗೆ ಕೊಟ್ಟ ಮೇಲೆ ಸ್ವಲ್ಪ ಲಾಸ್ ಆಯಿತು ಎಂದು ಹೇಳಿಕೊಳ್ಳುವ ವಿನಯಾ ಪ್ರಸಾದ್ ಎಂಬ ಬುದ್ದಿವಂತ ನಿರ್ದೇಶಕಿ ಪಡೆದ ಅನುಭವ ನಿಜಕ್ಕೂ ಚನ್ನಾಗಿತ್ತು ಅನ್ನುತ್ತಾರೆ.

ಸಧ್ಯಕ್ಕೆ ಅವರು ನ್ಯಾಯಾದೀಷೆ ಪಾತ್ರದಲ್ಲಿ ತಮಟೆ ಕನ್ನಡ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ವಿನಯಾ ಪ್ರಸಾದ್ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ಓದುತ್ತಾ ಇರುವಾಗ ಮದನ್ ಪಟೇಲ್ ಅವರ ಸಂಗೀತ ಕೇಳಿಕೊಂಡು ಬಂದವರು. ಈಗ ಅವರ ಪುತ್ರ ಮಯೂರ್ ಪಟೇಲ್ ನಿರ್ದೇಶನದ ಚಿತ್ರಕ್ಕೆ ಆಹ್ವಾನ ಬಂದಾಗ ಇಲ್ಲ ಎನ್ನಲಾಗಲಿಲ್ಲ ಎನ್ನುತ್ತಾರೆ. ಈ ಸಿನಿಮಾ ಅಲ್ಲದೆ ಅವರು ಕೆಲವು ಮಲಯಾಳಂ ಹಾಗೂ ಕನ್ನಡ ಸಿನಿಮಾಗಳನ್ನು ಸಹ ಒಪ್ಪಿಕೊಂಡಿದ್ದಾರೆ.

ವಿನಯಾ ಪ್ರಸಾದ್ ಅವರ ಕಥೆ ಹಾಗೂ ಚಿತ್ರಕಥೆ ಬಗ್ಗೆ 2020 ರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಮತ್ತೊಂದು ಕುಟುಂಬ ಸಮೇತ ಕುಳಿತು ನೋಡುವ ಸಿನಿಮಾವನ್ನು ನಿರ್ದೇಶನ ಮಾಡಲು ತೀರ್ಮಾನಿಸಿದ್ದಾರೆ. 2021 ಆರಂಭದಲ್ಲಿ ಅದು ಆಗಬಹುದು ಎಂಬುದು ಅವರ ಲೆಕ್ಕಾಚಾರ. 

ETV Bharat Logo

Copyright © 2025 Ushodaya Enterprises Pvt. Ltd., All Rights Reserved.