ETV Bharat / sitara

ನನಗೆ ಸದ್ಯ ಮನೆ ಇಲ್ಲ, ಮುಂದೆ ಎಂದಾದರೂ ಖರೀದಿಸುವೆ; ಪುನೀತ್ ಸಮಾಜಮುಖಿ ಸೇವೆ ಮುಂದುವರೆಸುವೆ: ನಟ ವಿಶಾಲ್

author img

By

Published : Nov 16, 2021, 6:19 PM IST

Updated : Nov 16, 2021, 7:52 PM IST

ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ 'ಪುನೀತ್​ ನಮನ' ಕಾರ್ಯಕ್ರಮದಲ್ಲಿ ಭಾಗಿಯಾಗಿ ತಮಿಳು ನಟ ವಿಶಾಲ್ ಮಾತನಾಡಿದರು. ಈ ವೇಳೆ ಪುನೀತ್ ರಾಜ್​​ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವುದಾಗಿ ಹೇಳಿದರು.

actor Vishal
actor Vishal

ಬೆಂಗಳೂರು: ಸ್ಯಾಂಡಲ್​ವುಡ್ ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಚಿತ್ರರಂಗದ ಪರವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ನಮನ’ (Puneetha Namana) ಕಾರ್ಯಕ್ರಮ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ತಮಿಳು ನಟ ವಿಶಾಲ್​, ಸಹೋದರ ಪುನೀತ್​ಗೆ ನೀಡಿರುವ ಮಾತು ಉಳಿಸಿಕೊಳ್ಳುತ್ತೇನೆ ಎಂಬ ಭರವಸೆ ನೀಡಿದರು.

ಯಾವುದೇ ರೀತಿಯ ಪ್ರಚಾರ ಅಥವಾ ಹಣಕ್ಕೋಸ್ಕರ ನಾನು ಈ ಕೆಲಸ ಮಾಡ್ತಿಲ್ಲ. ಇಲ್ಲಿಯವರೆಗೆ ಇರಲು ನನಗೆ ಸ್ವಂತಃ ಮನೆ ಇಲ್ಲ. ಪರವಾಗಿಲ್ಲ ಮುಂದಿನ ವರ್ಷ ನಾನು ಅದನ್ನು ಖರೀದಿ ಮಾಡ್ತೀನಿ. ಆದರೆ ಪುನೀತ್​ ರಾಜ್​ಕುಮಾರ್​ ಅವರ ಸಮಾಜಮುಖಿ ಸೇವೆಗಳನ್ನು ಮುಂದುವರೆಸುತ್ತೇನೆ ಎಂದರು. ಪುನೀತ್‌ ರಾಜ್‌ಕುಮಾರ್‌ ಅವರು ಹೊತ್ತಿದ್ದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ಹೊರುತ್ತೇನೆಂದು ಈಗಾಗಲೇ ಹೇಳಿರುವೆ. ಈ ಮಾತನ್ನು ಉಳಿಸಿಕೊಳ್ಳುತ್ತೇನೆ. ನಾನು ಯಾವುದೇ ರೀತಿಯ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಎಂದು ನಟ ವಿಶಾಲ್‌ ಹೇಳಿದರು.

ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ನಟ ವಿಶಾಲ್​​

ಪುನೀತ್ ರಾಜ್​ಕುಮಾರ್​ ಅವರ ಓದಿಸುತ್ತಿರುವ 1800 ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಈಗಾಗಲೇ ನಟ ವಿಶಾಲ್​ ಹೇಳಿಕೆ ನೀಡಿದ್ದು, ಇನ್ಮುಂದೆ ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೂ ಮುಂಚಿತವಾಗಿ ಮಾತನಾಡಿದ ಕಾಲಿವುಡ್​ ನಟ ವಿಶಾಲ್​ (Actor Vishal) ಪುನೀತ್​ ರಾಜ್​ಕುಮಾರ್ ನನ್ನ ಒಳ್ಳೆಯ ಸ್ನೇಹಿತ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಹೋದರನಾಗಿ ಪುನೀತ್​ಗೆ ಪ್ರಾಮಿಸ್​ ಮಾಡುತ್ತಿದ್ದೇನೆ. ಅವರಿಗೆ ಈಗಾಗಲೇ ಹೇಳಿರುವ ಮಾತು ನಡೆಸಿಕೊಡುತ್ತೇನೆ. ಬದುಕಿದ್ದ ವೇಳೆ ಪುನೀತ್​ ಅವರು ಮಾಡಿರುವ ಸಮಾಜಮುಖಿ ಸೇವೆಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಅವುಗಳ ಬಗ್ಗೆ ಇದೀಗ ಇಡೀ ದೇಶಕ್ಕೆ ಗೊತ್ತಾಗಿವೆ. ನೀವು ಮಾಡುತ್ತಿದ್ದ ಕಾರ್ಯ ನಾನು ಮುಂದುವರೆಸುತ್ತೇನೆ ಎಂದರು.

ಇದನ್ನೂ ಓದಿರಿ: ಸ್ಯಾಂಡಲ್​ವುಡ್​​ ಯುವರತ್ನ ಪುನೀತ್​​ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ

ಪುನೀತ್​ ನಮ್ಮಣ್ಣ, ಅವನ ಮುಖ ಇನ್ನು ನನ್ನ ಮುಂದೆ ಕಾಣುತ್ತಿದೆ. ಅಪ್ಪು ಇಲ್ಲದ ನೋವು ಎಲ್ಲರಲ್ಲಿಯೂ ಕಾಣಿಸುತ್ತಿದೆ. ಅಪ್ಪು ನಿಧನ ಅರಗಿಸಿಕೊಳ್ಳಲು ಈಗಲೂ ಸಾಧ್ಯವಾಗುತ್ತಿಲ್ಲ. ಒಳ್ಳೆಯದು ಮಾಡಬೇಕೆಂದು ಎಲ್ಲರಿಗೂ ಅನಿಸುವುದಿಲ್ಲ. ನನ್ನ ಹುಟ್ಟುಹಬ್ಬದಂದೇ ಪುನೀತ್​ ನಿಧನರಾದರು. ಅವರ ಜನಪರ ಕಾರ್ಯಗಳನ್ನು ಮುಂದುವರೆಸಬೇಕಿದೆ. ಪುನೀತ್ ರಾಜ್​​ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ ಎಂದರು.

ಬೆಂಗಳೂರು: ಸ್ಯಾಂಡಲ್​ವುಡ್ ನಟ ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಚಿತ್ರರಂಗದ ಪರವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ‘ಪುನೀತ ನಮನ’ (Puneetha Namana) ಕಾರ್ಯಕ್ರಮ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ತಮಿಳು ನಟ ವಿಶಾಲ್​, ಸಹೋದರ ಪುನೀತ್​ಗೆ ನೀಡಿರುವ ಮಾತು ಉಳಿಸಿಕೊಳ್ಳುತ್ತೇನೆ ಎಂಬ ಭರವಸೆ ನೀಡಿದರು.

ಯಾವುದೇ ರೀತಿಯ ಪ್ರಚಾರ ಅಥವಾ ಹಣಕ್ಕೋಸ್ಕರ ನಾನು ಈ ಕೆಲಸ ಮಾಡ್ತಿಲ್ಲ. ಇಲ್ಲಿಯವರೆಗೆ ಇರಲು ನನಗೆ ಸ್ವಂತಃ ಮನೆ ಇಲ್ಲ. ಪರವಾಗಿಲ್ಲ ಮುಂದಿನ ವರ್ಷ ನಾನು ಅದನ್ನು ಖರೀದಿ ಮಾಡ್ತೀನಿ. ಆದರೆ ಪುನೀತ್​ ರಾಜ್​ಕುಮಾರ್​ ಅವರ ಸಮಾಜಮುಖಿ ಸೇವೆಗಳನ್ನು ಮುಂದುವರೆಸುತ್ತೇನೆ ಎಂದರು. ಪುನೀತ್‌ ರಾಜ್‌ಕುಮಾರ್‌ ಅವರು ಹೊತ್ತಿದ್ದ ಬಡ ಹೆಣ್ಣುಮಕ್ಕಳ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ನಾನು ಹೊರುತ್ತೇನೆಂದು ಈಗಾಗಲೇ ಹೇಳಿರುವೆ. ಈ ಮಾತನ್ನು ಉಳಿಸಿಕೊಳ್ಳುತ್ತೇನೆ. ನಾನು ಯಾವುದೇ ರೀತಿಯ ಪ್ರಚಾರಕ್ಕಾಗಿ ಈ ಕೆಲಸ ಮಾಡುತ್ತಿಲ್ಲ ಎಂದು ನಟ ವಿಶಾಲ್‌ ಹೇಳಿದರು.

ಪುನೀತ್ ನುಡಿ ನಮನ ಕಾರ್ಯಕ್ರಮದಲ್ಲಿ ನಟ ವಿಶಾಲ್​​

ಪುನೀತ್ ರಾಜ್​ಕುಮಾರ್​ ಅವರ ಓದಿಸುತ್ತಿರುವ 1800 ಮಕ್ಕಳ ಜವಾಬ್ದಾರಿ ತೆಗೆದುಕೊಳ್ಳುವುದಾಗಿ ಈಗಾಗಲೇ ನಟ ವಿಶಾಲ್​ ಹೇಳಿಕೆ ನೀಡಿದ್ದು, ಇನ್ಮುಂದೆ ಮಕ್ಕಳ ಶಿಕ್ಷಣದ ಜವಾಬ್ದಾರಿ ನನ್ನದು ಎಂದು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೂ ಮುಂಚಿತವಾಗಿ ಮಾತನಾಡಿದ ಕಾಲಿವುಡ್​ ನಟ ವಿಶಾಲ್​ (Actor Vishal) ಪುನೀತ್​ ರಾಜ್​ಕುಮಾರ್ ನನ್ನ ಒಳ್ಳೆಯ ಸ್ನೇಹಿತ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಸಹೋದರನಾಗಿ ಪುನೀತ್​ಗೆ ಪ್ರಾಮಿಸ್​ ಮಾಡುತ್ತಿದ್ದೇನೆ. ಅವರಿಗೆ ಈಗಾಗಲೇ ಹೇಳಿರುವ ಮಾತು ನಡೆಸಿಕೊಡುತ್ತೇನೆ. ಬದುಕಿದ್ದ ವೇಳೆ ಪುನೀತ್​ ಅವರು ಮಾಡಿರುವ ಸಮಾಜಮುಖಿ ಸೇವೆಗಳ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಆದರೆ ಅವುಗಳ ಬಗ್ಗೆ ಇದೀಗ ಇಡೀ ದೇಶಕ್ಕೆ ಗೊತ್ತಾಗಿವೆ. ನೀವು ಮಾಡುತ್ತಿದ್ದ ಕಾರ್ಯ ನಾನು ಮುಂದುವರೆಸುತ್ತೇನೆ ಎಂದರು.

ಇದನ್ನೂ ಓದಿರಿ: ಸ್ಯಾಂಡಲ್​ವುಡ್​​ ಯುವರತ್ನ ಪುನೀತ್​​ಗೆ ಮರಣೋತ್ತರ 'ಕರ್ನಾಟಕ ರತ್ನ' ಪ್ರಶಸ್ತಿ ಘೋಷಣೆ

ಪುನೀತ್​ ನಮ್ಮಣ್ಣ, ಅವನ ಮುಖ ಇನ್ನು ನನ್ನ ಮುಂದೆ ಕಾಣುತ್ತಿದೆ. ಅಪ್ಪು ಇಲ್ಲದ ನೋವು ಎಲ್ಲರಲ್ಲಿಯೂ ಕಾಣಿಸುತ್ತಿದೆ. ಅಪ್ಪು ನಿಧನ ಅರಗಿಸಿಕೊಳ್ಳಲು ಈಗಲೂ ಸಾಧ್ಯವಾಗುತ್ತಿಲ್ಲ. ಒಳ್ಳೆಯದು ಮಾಡಬೇಕೆಂದು ಎಲ್ಲರಿಗೂ ಅನಿಸುವುದಿಲ್ಲ. ನನ್ನ ಹುಟ್ಟುಹಬ್ಬದಂದೇ ಪುನೀತ್​ ನಿಧನರಾದರು. ಅವರ ಜನಪರ ಕಾರ್ಯಗಳನ್ನು ಮುಂದುವರೆಸಬೇಕಿದೆ. ಪುನೀತ್ ರಾಜ್​​ಕುಮಾರ್ ಓದಿಸುತ್ತಿದ್ದ ಮಕ್ಕಳ ವಿದ್ಯಾಭ್ಯಾಸದ ಹೊಣೆ ಹೊರುವೆ ಎಂದರು.

Last Updated : Nov 16, 2021, 7:52 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.