ETV Bharat / sitara

ರಾಜ್ಯಾದ್ಯಂತ ಪ್ರೇಕ್ಷಕರನ್ನ ಸೆಳೆದ 'ಸುವರ್ಣ ಸುಂದರಿ'... ಚಿತ್ರತಂಡ ಖುಷ್​

ಮೇ 31 ರಂದು ಬಿಡುಗಡೆಯಾಗಿದ್ದ 'ಸುವರ್ಣ ಸುಂದರಿ' ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಖುಷಿಯನ್ನು ಪತ್ರಿಕಾಗೋಷ್ಟಿ ಮೂಲಕ ಚಿತ್ರತಂಡ ಹಂಚಿಕೊಂಡಿದೆ.

author img

By

Published : Jun 5, 2019, 12:31 AM IST

'ಸುವರ್ಣ ಸುಂದರಿ'

ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾದ 'ಸುವರ್ಣ ಸುಂದರಿ' ಚಿತ್ರ ಮಲ್ಟಿಪ್ಲೆಕ್ಸ್​​​​​​ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕೂಡಾ ಹೆಚ್ಚುತ್ತಿರುವುದು ಚಿತ್ರತಂಡಕ್ಕೆ ಖುಷಿ ತಂದಿದೆ.

'ಸುವರ್ಣ ಸುಂದರಿ' ಚಿತ್ರತಂಡ

'ಸುವರ್ಣ ಸುಂದರಿ' ಚಿತ್ರತಂಡ ಇತ್ತೀಚೆಗೆ ಸಕ್ಸಸ್ ಮೀಟ್ ಕರೆದು ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡಿತು. ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ಚಿತ್ರದ ನಂತರ ಹಿರಿಯ ನಟಿ ಜಯಪ್ರದ ಈ ಸಿನಿಮಾ ಮೂಲಕ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರ ನಟನೆ​​ಗೆ ಸಿನಿ ಪ್ರಿಯರು ಫಿದಾ ಆಗಿದ್ದು, ಥಿಯೇಟರ್​​​​ಗೆ ಜನರನ್ನು ಸೆಳೆಯುವಲ್ಲಿ ಸುವರ್ಣ ಸುಂದರಿ ಯಶಸ್ವಿಯಾಗಿದ್ದಾಳೆ. ಇನ್ನು ಈ ಚಿತ್ರವನ್ನು ಆಂಧ್ರ ಮೂಲದ ಎಂ​​​​​.ಎಸ್​​​​​​.ಎನ್ ಸೂರ್ಯ ನಿರ್ದೇಶಿಸಿದ್ದು, ಮೊದಲ ಚಿತ್ರದಲ್ಲೇ ಯಶಸ್ಸನ್ನು ಕಂಡಿದ್ದಾರೆ.

ಆಂಧ್ರ ಮೂಲದ ಎಂ​​​.ಎಲ್​​. ಲಕ್ಷ್ಮಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರದ ಸಕ್ಸಸ್​​​​​​​ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಪ್ರಮೋಷನ್ ಇನ್ನೂ ಚೆನ್ನಾಗಿ ಆಗಿದ್ದರೆ ನಮ್ಮ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ತಿತ್ತು. ಆದ್ರೆ ಚಿತ್ರವನ್ನು ಪ್ರಮೋಷನ್ ಮಾಡುವುದಾಗಿ ಕೆಲವರು ಹಣ ಪಡೆದು ವಂಚಿಸಿದ್ದಾರೆ ಎಂದು ಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ವಂಚಕರ ವಿರುದ್ಧ ಫಿಲ್ಮ್​ ಚೇಂಬರ್ ಹಾಗೂ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿರುವುದಾಗಿ ಲಕ್ಷ್ಮಿ ಹಾಗೂ ನಿರ್ದೇಶಕ ಸೂರ್ಯ ಇದೇ ವೇಳೆ ತಿಳಿಸಿದರು.

ಕಳೆದ ವಾರ ರಾಜ್ಯಾದ್ಯಂತ ಬಿಡುಗಡೆಯಾದ 'ಸುವರ್ಣ ಸುಂದರಿ' ಚಿತ್ರ ಮಲ್ಟಿಪ್ಲೆಕ್ಸ್​​​​​​ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಕೂಡಾ ಹೆಚ್ಚುತ್ತಿರುವುದು ಚಿತ್ರತಂಡಕ್ಕೆ ಖುಷಿ ತಂದಿದೆ.

'ಸುವರ್ಣ ಸುಂದರಿ' ಚಿತ್ರತಂಡ

'ಸುವರ್ಣ ಸುಂದರಿ' ಚಿತ್ರತಂಡ ಇತ್ತೀಚೆಗೆ ಸಕ್ಸಸ್ ಮೀಟ್ ಕರೆದು ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡಿತು. ದರ್ಶನ್ ಅಭಿನಯದ 'ಸಂಗೊಳ್ಳಿ ರಾಯಣ್ಣ' ಚಿತ್ರದ ನಂತರ ಹಿರಿಯ ನಟಿ ಜಯಪ್ರದ ಈ ಸಿನಿಮಾ ಮೂಲಕ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಿದ್ದಾರೆ. ಅಲ್ಲದೆ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರ ನಟನೆ​​ಗೆ ಸಿನಿ ಪ್ರಿಯರು ಫಿದಾ ಆಗಿದ್ದು, ಥಿಯೇಟರ್​​​​ಗೆ ಜನರನ್ನು ಸೆಳೆಯುವಲ್ಲಿ ಸುವರ್ಣ ಸುಂದರಿ ಯಶಸ್ವಿಯಾಗಿದ್ದಾಳೆ. ಇನ್ನು ಈ ಚಿತ್ರವನ್ನು ಆಂಧ್ರ ಮೂಲದ ಎಂ​​​​​.ಎಸ್​​​​​​.ಎನ್ ಸೂರ್ಯ ನಿರ್ದೇಶಿಸಿದ್ದು, ಮೊದಲ ಚಿತ್ರದಲ್ಲೇ ಯಶಸ್ಸನ್ನು ಕಂಡಿದ್ದಾರೆ.

ಆಂಧ್ರ ಮೂಲದ ಎಂ​​​.ಎಲ್​​. ಲಕ್ಷ್ಮಿ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಚಿತ್ರದ ಸಕ್ಸಸ್​​​​​​​ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರದ ಪ್ರಮೋಷನ್ ಇನ್ನೂ ಚೆನ್ನಾಗಿ ಆಗಿದ್ದರೆ ನಮ್ಮ ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ತಿತ್ತು. ಆದ್ರೆ ಚಿತ್ರವನ್ನು ಪ್ರಮೋಷನ್ ಮಾಡುವುದಾಗಿ ಕೆಲವರು ಹಣ ಪಡೆದು ವಂಚಿಸಿದ್ದಾರೆ ಎಂದು ಲಕ್ಷ್ಮಿ ಬೇಸರ ವ್ಯಕ್ತಪಡಿಸಿದರು. ಅಲ್ಲದೆ, ವಂಚಕರ ವಿರುದ್ಧ ಫಿಲ್ಮ್​ ಚೇಂಬರ್ ಹಾಗೂ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿರುವುದಾಗಿ ಲಕ್ಷ್ಮಿ ಹಾಗೂ ನಿರ್ದೇಶಕ ಸೂರ್ಯ ಇದೇ ವೇಳೆ ತಿಳಿಸಿದರು.

Intro:ಕಳೆದವಾರ ರಾಜ್ಯಾದ್ಯಂತ ಬಿಡುಗಡೆಯಾದ " ಸುವರ್ಣ ಸುಂದರಿ" ಚಿತ್ರ ಮಲ್ಟಿಪ್ಲೆಕ್ಸ್ ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣ್ತಿದ್ದು, ದಿನದಿಂದ ದಿನಕ್ಕೆ ಸಿನಿಮಾ ಕಲೆಕ್ಷನ್ ಇಂಪ್ರೂ ಆಗಿದ್ದು ಚಿತ್ರತಂಡ ಪುಲ್ ಖುಷ್ ಆಗಿದೆ.ಇನ್ನೂ ಇದೇ ಖುಷಿ ಯಲ್ಲಿ ಚಿತ್ರತಂಡ ಸಕ್ಸಸ್ ಮೀಟ್ ಕರೆದು ಮಾಧ್ಯಮಗಳ ಜೊತೆ ಖುಷಿ ಹಂಚಿಕೊಂಡ್ರು.


Body:ಸುವರ್ಣ ಸುಂದರಿ ಚಿತ್ರದಲ್ಲಿ ಸಂಗೊಳ್ಳಿ ರಾಯಣ್ಣ ಚಿತ್ರದ ನಂತ್ರ ಜಯಪ್ರದ ಮತ್ತೆ ಕನ್ನಡದಲ್ಲಿ ಬಣ್ಣ ಹಚ್ಚಿದ್ದಾರೆ.ಅಲ್ಲದೆ ಡೈಲಾಗ್ ಕಿಂಗ್ ಸಾಯಿ ಕುಮಾರ್ ಅವರ ಆಕ್ಟಿಂಗ್ ಗೆ ಸಿನಿ ಪ್ರಿಯರು ಫಿದಾ ಆಗಿದ್ದು, ಥಿಯೇಟರ್ ಗೆ ಜನರನ್ನು ಸೆಳೆಯುವಲ್ಲಿ ಸುವರ್ಣ ಸುಂದರಿ ಯಶಸ್ವಿಯಾಗಿದ್ದಾಳೆ.ಇನ್ನೂ ಈ ಚಿತ್ರವನ್ನು ಆಂದ್ರ ಮೂಲದ ಎಮ್ ಎಸ್ ಎನ್ ಸೂರ್ಯ ನಿರ್ದೇಶನ ಮಾಡಿದ್ದು ಮೊದಲ ಚಿತ್ರದಲ್ಲೇ ಯಶಸ್ಸನ್ನು ಕಂಡಿದ್ದಾರೆ. ಇನ್ನೂ ಈ ಚಿತ್ರವನ್ನು ಆಂಧ್ರ ಮೂಲದ ಎಮ್ ಎಲ್ ಲಕ್ಷ್ಮೀ ನಿರ್ಮಾಣ ಮಾಡಿದ್ದು ಚಿತ್ರದ ಸಕ್ಸಸ್ ಗೆ ಹರ್ಷವ್ಯಕ್ತ ಪಡಿಸಿದ್ರು.ಅಲ್ಲದೆ ಚಿತ್ರದ ಪ್ರಮೋಷನ್ ಇನ್ನೂ ಚೆನ್ನಾಗಿ ಆಗಿದ್ರೆ ನಮ್ಮ ಚಿತ್ರಕ್ಕೆ ಉತ್ತಮ ಒಪನಿಂಗ್ ಸಿಕ್ತಿತ್ತು.ಅದ್ರೆ ನಮ್ಮ ಚಿತ್ರದ ಪ್ರಮೋಷನ್ ಮಾಡ್ತಿನಿ ಎಂದು ನಮ್ಮಿಂದ. ಸುಮಾರು ೧೩ ಲಕ್ಷ ರೂ ಪಡೆದು ರಾವಣ ಅಸೋಸಿಯೇಟ್ಸ್ ನ ರಾವಣ ಎಂಬ ವ್ಯಕ್ತಿ ಪಬ್ಲಿಸಿಟಿ ಮಾಡಲದೆ ನಮಗೆ ವಂಚಿಸಿದ್ದಾರೆ.ಇನ್ನೂ ಈ ವಿಚಾರವಾಗಿ ನಾವು ಫಿಲ್ಮ್ ಚೇಂಬರ್ ಹಾಗೂ ಪೊಲೀಸ್ ಕಂಪ್ಲೈಂಟ್ ನೀಡಲು ನಿರ್ಧರಿಸುವುದಾಗಿ ನಿರ್ಮಾಪಕಿ ಲಕ್ಷ್ಮೀ ಹಾಗೂ ನಿರ್ದೇಶಕ ಸೂರ್ಯ ಅವರು ಅಸಹಾಯಕತೆ ಇಂದ ತಿಳಿಸಿದ್ರು...

ಸತೀಶ ಎಂಬಿ


Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.