ETV Bharat / sitara

'ತುರ್ತು ನಿರ್ಗಮನ'ದ ಮೂಲಕ ಸ್ಯಾಂಡಲ್​​​ವುಡ್​​​ಗೆ ಸುನಿಲ್ ರಾವ್ ಪುನರಾಗಮನ - ಎರಡನೇ ಇನ್ನಿಂಗ್ಸ್ ಆರಂಭಿಸಿದ ಸುನಿಲ್ ರಾವ್

'ತುರ್ತು ನಿರ್ಗಮನ' ಚಿತ್ರದಿಂದ ಸುನಿಲ್ ರಾವ್ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸುಮಾರು 10 ವರ್ಷಗಳ ನಂತರ ಸುನಿಲ್ ಮತ್ತೆ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕುಮಾರ್ ಅಂಡ್ ಕುಮಾರ್ ಫಿಲ್ಮ್ಸ್​​​ ಬ್ಯಾನರ್, ಶೈಲಜಾ ಪಿಕ್ಚರ್ಸ್ ಬ್ಯಾನರ್ ಅಡಿ ಭರತ್ ಕುಮಾರ್ ಮತ್ತು ಹೇಮಂತ್ ಕುಮಾರ್ ನಿರ್ಮಿಸುತ್ತಿರುವ 'ತುರ್ತು ನಿರ್ಗಮನ' ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ.

Sunil rao
ಸುನಿಲ್ ರಾವ್
author img

By

Published : Jan 30, 2020, 12:15 PM IST

ಹಿರಿಯ ಗಾಯಕಿ ಬಿ.ಕೆ. ಸುಮಿತ್ರ ಅವರ ಪುತ್ರ ಸುನಿಲ್ ರಾವ್ ಬಾಲನಟನಾಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಮುಂದೆ ನಾಯಕನಾಗಿ ಕೂಡಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ ನಡುವೆ ಕೆಲವು ವರ್ಷಗಳ ಕಾಲ ಸುನಿಲ್ ರಾವ್ ಆ್ಯಕ್ಟಿಂಗ್​​​​​ನಿಂದ ದೂರವಿದ್ದರು. ಇದೀಗ ಸುನಿಲ್ ಮತ್ತೆ ಚಂದನವನಕ್ಕೆ ಕಾಲಿಟ್ಟಿದ್ದಾರೆ.

Sudharani, Achyut rao
'ತುರ್ತುನಿರ್ಗಮನ' ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ರಾವ್

'ತುರ್ತು ನಿರ್ಗಮನ' ಚಿತ್ರದಿಂದ ಸುನಿಲ್ ರಾವ್ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸುಮಾರು 10 ವರ್ಷಗಳ ನಂತರ ಸುನಿಲ್ ಮತ್ತೆ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕುಮಾರ್ ಅಂಡ್ ಕುಮಾರ್ ಫಿಲ್ಮ್ಸ್​​​ ಬ್ಯಾನರ್, ಶೈಲಜಾ ಪಿಕ್ಚರ್ಸ್ ಬ್ಯಾನರ್ ಅಡಿ ಭರತ್ ಕುಮಾರ್ ಮತ್ತು ಹೇಮಂತ್ ಕುಮಾರ್ ನಿರ್ಮಿಸುತ್ತಿರುವ 'ತುರ್ತು ನಿರ್ಗಮನ' ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಸದ್ಯಕ್ಕೆ ಚಿತ್ರತಂಡ ಕೇರಳದ ಕೊಚ್ಚಿನ್​​ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ. ವಿಶ್ಯುಯಲ್ ಎಫೆಕ್ಟ್​​​ಗಳು ಕೊಚ್ಚಿನ್ ಸೂತ್ರ ಸ್ಟುಡಿಯೋದಲ್ಲಿ ಹಾಗೂ ಸೌಂಡ್ ಡಿಸೈನ್​​​​​​​ ಮುಂಬೈನ ಔರಲ್ ಮೇಹಮ್ ಸ್ಟುಡಿಯೋನಲ್ಲಿ ನಡೆಯುತ್ತಿದೆ. ಇದೊಂದು ಫ್ಯಾಂಟಸಿ ಹಾಗೂ ಕಾಲ್ಪನಿಕ ಕಥಾಹಂದರ ಇರುವ ಚಿತ್ರವಾಗಿದ್ದು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

Sunil rao, Samyukta hegde
ಸುನಿಲ್ ರಾವ್, ಸಂಯುಕ್ತ ಹೆಗ್ಡೆ

‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ಹೇಮಂತ್ ಕುಮಾರ್ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಧೀರೇಂದ್ರ ದಾಸ್ ಸಂಗೀತ ನೀಡಿದ್ದಾರೆ. ಪ್ರಯಾಗ್ ಮುಕುಂದನ್ ಛಾಯಾಗ್ರಹಣ, ಅಜಿತ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಸುನಿಲ್ ರಾವ್ ಜೊತೆ ರಾಜ್ ಬಿ. ಶೆಟ್ಟಿ, ಸಂಯುಕ್ತ ಹೆಗ್ಡೆ ,ಅಚ್ಯುತ್ ಕುಮಾರ್, ಸುಧಾರಾಣಿ, ಹಿತ ಚಂದ್ರಶೇಖರ್, ಅಮೃತ ರಾಮ ಮೂರ್ತಿ, ನಾಗೇಂದ್ರ ಷಾ, ಅರುಣಾ ಬಾಲರಾಜ್ ಹಾಗೂ ಇನ್ನಿತರರು ನಟಿಸಿದ್ದಾರೆ.

ಹಿರಿಯ ಗಾಯಕಿ ಬಿ.ಕೆ. ಸುಮಿತ್ರ ಅವರ ಪುತ್ರ ಸುನಿಲ್ ರಾವ್ ಬಾಲನಟನಾಗಿ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟು ಮುಂದೆ ನಾಯಕನಾಗಿ ಕೂಡಾ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದರು. ಆದರೆ ನಡುವೆ ಕೆಲವು ವರ್ಷಗಳ ಕಾಲ ಸುನಿಲ್ ರಾವ್ ಆ್ಯಕ್ಟಿಂಗ್​​​​​ನಿಂದ ದೂರವಿದ್ದರು. ಇದೀಗ ಸುನಿಲ್ ಮತ್ತೆ ಚಂದನವನಕ್ಕೆ ಕಾಲಿಟ್ಟಿದ್ದಾರೆ.

Sudharani, Achyut rao
'ತುರ್ತುನಿರ್ಗಮನ' ಚಿತ್ರದಲ್ಲಿ ಸುಧಾರಾಣಿ, ಅಚ್ಯುತ್ ರಾವ್

'ತುರ್ತು ನಿರ್ಗಮನ' ಚಿತ್ರದಿಂದ ಸುನಿಲ್ ರಾವ್ ತಮ್ಮ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸುಮಾರು 10 ವರ್ಷಗಳ ನಂತರ ಸುನಿಲ್ ಮತ್ತೆ ನಾಯಕನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕುಮಾರ್ ಅಂಡ್ ಕುಮಾರ್ ಫಿಲ್ಮ್ಸ್​​​ ಬ್ಯಾನರ್, ಶೈಲಜಾ ಪಿಕ್ಚರ್ಸ್ ಬ್ಯಾನರ್ ಅಡಿ ಭರತ್ ಕುಮಾರ್ ಮತ್ತು ಹೇಮಂತ್ ಕುಮಾರ್ ನಿರ್ಮಿಸುತ್ತಿರುವ 'ತುರ್ತು ನಿರ್ಗಮನ' ಚಿತ್ರದ ಶೂಟಿಂಗ್ ಮುಕ್ತಾಯವಾಗಿದೆ. ಸದ್ಯಕ್ಕೆ ಚಿತ್ರತಂಡ ಕೇರಳದ ಕೊಚ್ಚಿನ್​​ನಲ್ಲಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಇದೆ. ವಿಶ್ಯುಯಲ್ ಎಫೆಕ್ಟ್​​​ಗಳು ಕೊಚ್ಚಿನ್ ಸೂತ್ರ ಸ್ಟುಡಿಯೋದಲ್ಲಿ ಹಾಗೂ ಸೌಂಡ್ ಡಿಸೈನ್​​​​​​​ ಮುಂಬೈನ ಔರಲ್ ಮೇಹಮ್ ಸ್ಟುಡಿಯೋನಲ್ಲಿ ನಡೆಯುತ್ತಿದೆ. ಇದೊಂದು ಫ್ಯಾಂಟಸಿ ಹಾಗೂ ಕಾಲ್ಪನಿಕ ಕಥಾಹಂದರ ಇರುವ ಚಿತ್ರವಾಗಿದ್ದು ಮಾರ್ಚ್ ತಿಂಗಳಲ್ಲಿ ಬಿಡುಗಡೆಯಾಗಲಿದೆ.

Sunil rao, Samyukta hegde
ಸುನಿಲ್ ರಾವ್, ಸಂಯುಕ್ತ ಹೆಗ್ಡೆ

‘ಗೋಧಿಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದ್ದ ಹೇಮಂತ್ ಕುಮಾರ್ ಈ ಸಿನಿಮಾಗೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿದ್ದು ಧೀರೇಂದ್ರ ದಾಸ್ ಸಂಗೀತ ನೀಡಿದ್ದಾರೆ. ಪ್ರಯಾಗ್ ಮುಕುಂದನ್ ಛಾಯಾಗ್ರಹಣ, ಅಜಿತ್ ಕುಮಾರ್ ಸಂಕಲನ ಈ ಚಿತ್ರಕ್ಕಿದೆ. ಸುನಿಲ್ ರಾವ್ ಜೊತೆ ರಾಜ್ ಬಿ. ಶೆಟ್ಟಿ, ಸಂಯುಕ್ತ ಹೆಗ್ಡೆ ,ಅಚ್ಯುತ್ ಕುಮಾರ್, ಸುಧಾರಾಣಿ, ಹಿತ ಚಂದ್ರಶೇಖರ್, ಅಮೃತ ರಾಮ ಮೂರ್ತಿ, ನಾಗೇಂದ್ರ ಷಾ, ಅರುಣಾ ಬಾಲರಾಜ್ ಹಾಗೂ ಇನ್ನಿತರರು ನಟಿಸಿದ್ದಾರೆ.

ತುರ್ತು ನಿರ್ಗಮನ ಸುನಿಲ್ ರಾವ್ ಪುನರಾಗಮನ

ಹಿರಿಯ ಹಾಗೂ ಜನಪ್ರಿಯ ಗಾಯಕಿ ಬಿ ಕೆ ಸುಮಿತ್ರಾ ಅವರ ಪುತ್ರ ಸುನಿಲ್ ರಾವ್ ಮೊದಲ ಇನ್ನಿಂಗ್ಸ್ ಅಲ್ಲಿ ಕನ್ನಡದಲ್ಲಿ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದವರು, ಈಗ 10 ವರ್ಷಗಳ ನಂತರ ಮತ್ತೆ ನಾಯಕ ನಟ ಪಾತ್ರ ಮಾಡುತ್ತಿದ್ದಾರೆ. ಎಕ್ಸ್ಕ್ಯೂಸ್ ಮೀ ಕನ್ನಡ ಚಿತ್ರ ರಮ್ಯ ಹಾಗೂ ಅಜಯ್ ರಾವ್ ಜೊತೆ ಅತಿ ಹೆಚ್ಚು ಜನಪ್ರಿಯತೆ ಪಡೆಯಿತು. ಕೆಲವು ವರ್ಷಗಳ ನಂತರ ಸುನಿಲ್ ರಾವ್ ವೆಬ್ ಸೀರೀಸ್ ಅಲ್ಲಿ ಕಾಣಿಸಿಕೊಂಡರು.

ಈಗ ತುರ್ತು ನಿರ್ಗಮನ ಇಂದ ಮತ್ತೆ ಆಗಮಿಸಿದ್ದಾರೆ. ಅವರ ಈ ಆಗಮನ ತುರ್ತಾಗಿ ನಿರ್ಗಮನ ಆಗದೆ ಇರಲಿ ಎಂದು ಹಲವರು ಆಶಿಸುತ್ತಿದ್ದಾರೆ. ಬಾಲ ಕಲಾವಿದ ಆಗಿ 1987 ಎಂಟ್ರಿ ಕೊಟ್ಟ ಸುನಿಲ್ ರಾವ್ ನಾಯಕ ಆದ ಮೇಲೆ ಚಿತ್ರ, ಚಪ್ಪಾಳೆ, ಪ್ರೀತಿ ಪ್ರೇಮ ಪ್ರಣಯ, ಬಾ ಬಾರೋ ರಸಿಕ, ಮಸಾಲ, ಸಖ ಸಖಿ, ಬೆಳ್ಳಿ ಬೆಟ್ಟ, ಜಾಕ್ ಪಾಟ್, ಮಿನುಗು, ತಾಜ್ ಮಹಲ್, ಪ್ರೇಮಿಸಂ ಅಲ್ಲದೆ ಫ್ರೀಕಿ ಚಕ್ರ ಎಂಬ ಇಂಗ್ಲಿಷ್ ಸಿನಿಮಾದಲ್ಲಿ ಸಹ ಅಭಿನಯಿಸಿದ್ದರು. ಈಗ 2010 ರ ಪ್ರೇಮಿಸಂ ನಂತರ ಮತ್ತೆ ಆಗಮನ.

ಕುಮಾರ್ ಅಂಡ್ ಕುಮಾರ್ ಫಿಲ್ಮ್ಸ್ ಅಡಿಯಲ್ಲಿ ಶೈಲಜಾ ಪಿಕ್ಚರ್ಸ್ ಜೊತೆಯಾಗಿ ಭರತ್ ಕುಮಾರ್ ಮತ್ತು ಹೇಮಂತ್ ಕುಮಾರ್ ನಿರ್ಮಾಣ ಮಾಡಿರುವ ಚಿತ್ರ ಮುಖ್ತಾಯವಾಗಿದೆ. ಈಗ ವಿಶ್ಯುಯಲ್ ಎಫೆಕ್ಟ್ ಕೊಚ್ಚಿನ್ ಸೂತ್ರ ಸ್ಟುಡಿಯೋ ಅಲ್ಲಿ ನಡೆಯುತ್ತಿದೆ. ಸೌಂಡ್ ಡಿಸೈನ್ ಅನ್ನು ಮುಂಬಯಿಯ ಔರಲ್ ಮೇಹಮ್ ಸ್ಟುಡಿಯೋ ಅಲ್ಲಿ ನಡೆಸಲಾಗುತ್ತಿದೆ. ಇದೊಂದು ಫ್ಯಾಂಟಸಿ ಹಾಗೂ ಕಾಲ್ಪನಿಕ ಕಥೆ ಹಂದರ ಇರುವ ಚಿತ್ರ ಮಾರ್ಚ್ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ.

ಗೋದಿಬಣ್ಣ ಸಾದರಣ ಮೈಕಟ್ಟು ಚಿತ್ರದಲ್ಲಿ ಸಹಾಯಕರಾಗಿ ಕೆಲಸ ಮಾಡಿದ ಹೇಮಂತ್ ಕುಮಾರ್ ರಚನೆ ಹಾಗೂ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಆರು ಹಾಡುಗಳಿವೆ, ಧೀರೇಂದ್ರ ದಾಸ್ ಸಂಗೀತ, ಪ್ರಯಾಗ್ ಮುಕುಂದನ್ ಛಾಯಾಗ್ರಹಣ, ಅಜಿತ್ ಕುಮಾರ್ ಸಂಕಲನ ಈ ಚಿತ್ರಕ್ಕೆ ದೊರಕಿದೆ.

ಸುನಿಲ್ ರಾವ್ ಜೊತೆ, ರಾಜ್ ಬಿ ಶೆಟ್ಟಿ, ಸಂಯುಕ್ತ ಹೆಗ್ಡೆ (ಕಿರಿಕ್ ಪಾರ್ಟಿ, ಕಾಲೇಜು ಕುಮಾರ ನಾಯಕಿ), ಅಚ್ಯುತ್ ಕುಮಾರ್, ಸುಧಾರಾಣಿ, ಹಿತ ಚಂದ್ರಶೇಖರ್, ಅಮೃತ ರಾಮ ಮೂರ್ತಿ, ನಾಗೇಂದ್ರ ಷಾ, ಅರುಣ ಬಲರಾಜ್ ಹಾಗೂ ಇತರರು ತಾರಗಣದಲ್ಲಿದ್ದಾರೆ. 

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.