ETV Bharat / sitara

ಅಪ್ಪು ಇಲ್ಲ, ರಾಘುಗೂ ಹುಷಾರಿಲ್ಲ.. ಇದನ್ನೆಲ್ಲ ನೋಡ್ಕೊಂಡು ನಾನಿರಬೇಕಲ್ಲ.. ​

author img

By

Published : Mar 13, 2022, 11:07 PM IST

ರಾಘವೇಂದ್ರ ರಾಜ್ ಕುಮಾರ್​ಗೆ ಹುಷಾರಿಲ್ಲದಂತಾಗಿದೆ. ಅಪ್ಪು ನಮ್ಮನ್ನು ಅಗಲಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ನಾನು ಇರಬೇಕಲ್ಲ. ಏನ್ ಮಾಡೋದು ಹೇಳಿ, ನಾವೆಲ್ಲಾ ಒಟ್ಟಿಗೆ ಬೆಳೆದವರು ಎಂದು ನಟ, ಸಹೋದರ ಶಿವರಾಜ್​ ಕುಮಾರ್ ಭಾವುಕರಾದರು.

shivarajkumar-talk-about-puneeth-rajkumar-in-james-pre-release-event
shivarajkumar-talk-about-puneeth-rajkumar-in-james-pre-release-event

ಈ ಹಿಂದೆಯೇ ಅಪ್ಪುವಿಗಾಗಿ ನಾನು ಒಂದು ಕಥೆ ಕೇಳಿದ್ದೆ. ಆ ಕಥೆಯಲ್ಲಿ ನನ್ನನ್ನ ಹಾಗು ಅಪ್ಪು ಅವರನ್ನ ಒಟ್ಟಿಗೆ ನೀವು ನೋಡ್ತೀರಿ. ಅದೊಂದು ಎಮೋಷನಲ್ ಸ್ಕ್ರಿಪ್ಟ್​. ಇದೊಂದು ಡೆಡಿಕೇಷನ್ ಎಂದು ನಟ ಶಿವರಾಜ್​ ಕುಮಾರ್ ಹೇಳಿದರು. ​

ನಟ ಶಿವರಾಜ್​ಕುಮಾರ್​

ನಟ ಪುನೀತ್ ರಾಜ್​ಕುಮಾರ್ ಅಭಿನಯದ ಜೇಮ್ಸ್​ ಚಿತ್ರತಂಡ ಪ್ರೀ ರಿಲೀಸ್​ ಇವೆಂಟ್​ ಅನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಸೇರಿದಂತೆ ವಿವಿಧ ತಾರೆಯರು ಭಾಗಿಯಾಗಿದ್ದರು.

ಈ ವೇಳೆ ನಟ ಶಿವರಾಜ್​ ಕುಮಾರ್ ಮಾತನಾಡಿ, ರಾಘವೇಂದ್ರ ರಾಜ್ ಕುಮಾರ್​ಗೆ ಹುಷಾರಿಲ್ಲದಂತಾಗಿದೆ. ಅಪ್ಪು ನಮ್ಮನ್ನು ಅಗಲಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ನಾನು ಇರಬೇಕಲ್ಲ. ಏನ್ ಮಾಡೋದು ಹೇಳಿ, ನಾವೆಲ್ಲಾ ಒಟ್ಟಿಗೆ ಬೆಳೆದವರು ಎಂದು ಭಾವುಕರಾದರು.

ನಾವು ಐದು ಜನ ಮಕ್ಕಳು. ಆದ್ರೆ ಒಬ್ಬ ಇಲ್ಲವಾದ. ಇದನ್ನ ಹೇಳಿಕೊಳ್ಳೋಕೆ ಒಂಥರಾ ಬೇಸರ. ಈ ಟೈಮ್ ಬರುತ್ತೆ ಅಂತಾ ನಾನು ಅಂದುಕೊಂಡಿರಲಿಲ್ಲ. ಅಪ್ಪ-ಅಮ್ಮ 100 ವರ್ಷ ಇರಬೇಕು ಅಂತ ಆಸೆ ಇತ್ತು. ಆದ್ರೆ ಅವರು ಹೋದ್ರು. ಆದ್ರೆ ಅಪ್ಪುವಿಗೆ ತುಂಬಾ ಚಿಕ್ಕ ವಯಸ್ಸು. ನಟನೆಗೂ ಮೀರಿ ಅವನ್ನಲ್ಲಿ ಮಾನವೀಯತೆ ಇವತ್ತು ಎಂದು ನೆನೆದರು.

ಓದಿ: ನಾನು ಅಪ್ಪು ಹುಡುಕಿಕೊಂಡು ಹೋಗುತ್ತೇನೆ, ಇಲ್ಲಿರೋದಕ್ಕೆ ಆಗಲ್ಲ ಎಂದು ಭಾವುಕರಾದ ರಾಘಣ್ಣ; ಗಳಗಳನೆ ಅತ್ತ ಶಿವಣ್ಣ

ಈ ಹಿಂದೆಯೇ ಅಪ್ಪುವಿಗಾಗಿ ನಾನು ಒಂದು ಕಥೆ ಕೇಳಿದ್ದೆ. ಆ ಕಥೆಯಲ್ಲಿ ನನ್ನನ್ನ ಹಾಗು ಅಪ್ಪು ಅವರನ್ನ ಒಟ್ಟಿಗೆ ನೀವು ನೋಡ್ತೀರಿ. ಅದೊಂದು ಎಮೋಷನಲ್ ಸ್ಕ್ರಿಪ್ಟ್​. ಇದೊಂದು ಡೆಡಿಕೇಷನ್ ಎಂದು ನಟ ಶಿವರಾಜ್​ ಕುಮಾರ್ ಹೇಳಿದರು. ​

ನಟ ಶಿವರಾಜ್​ಕುಮಾರ್​

ನಟ ಪುನೀತ್ ರಾಜ್​ಕುಮಾರ್ ಅಭಿನಯದ ಜೇಮ್ಸ್​ ಚಿತ್ರತಂಡ ಪ್ರೀ ರಿಲೀಸ್​ ಇವೆಂಟ್​ ಅನ್ನು ನಗರದ ಅರಮನೆ ಮೈದಾನದಲ್ಲಿ ಆಯೋಜಿಸಿತ್ತು. ಈ ಕಾರ್ಯಕ್ರಮದಲ್ಲಿ ದೊಡ್ಮನೆ ಕುಟುಂಬ ಸೇರಿದಂತೆ ವಿವಿಧ ತಾರೆಯರು ಭಾಗಿಯಾಗಿದ್ದರು.

ಈ ವೇಳೆ ನಟ ಶಿವರಾಜ್​ ಕುಮಾರ್ ಮಾತನಾಡಿ, ರಾಘವೇಂದ್ರ ರಾಜ್ ಕುಮಾರ್​ಗೆ ಹುಷಾರಿಲ್ಲದಂತಾಗಿದೆ. ಅಪ್ಪು ನಮ್ಮನ್ನು ಅಗಲಿದ್ದಾರೆ. ಇದನ್ನೆಲ್ಲಾ ನೋಡಿಕೊಂಡು ನಾನು ಇರಬೇಕಲ್ಲ. ಏನ್ ಮಾಡೋದು ಹೇಳಿ, ನಾವೆಲ್ಲಾ ಒಟ್ಟಿಗೆ ಬೆಳೆದವರು ಎಂದು ಭಾವುಕರಾದರು.

ನಾವು ಐದು ಜನ ಮಕ್ಕಳು. ಆದ್ರೆ ಒಬ್ಬ ಇಲ್ಲವಾದ. ಇದನ್ನ ಹೇಳಿಕೊಳ್ಳೋಕೆ ಒಂಥರಾ ಬೇಸರ. ಈ ಟೈಮ್ ಬರುತ್ತೆ ಅಂತಾ ನಾನು ಅಂದುಕೊಂಡಿರಲಿಲ್ಲ. ಅಪ್ಪ-ಅಮ್ಮ 100 ವರ್ಷ ಇರಬೇಕು ಅಂತ ಆಸೆ ಇತ್ತು. ಆದ್ರೆ ಅವರು ಹೋದ್ರು. ಆದ್ರೆ ಅಪ್ಪುವಿಗೆ ತುಂಬಾ ಚಿಕ್ಕ ವಯಸ್ಸು. ನಟನೆಗೂ ಮೀರಿ ಅವನ್ನಲ್ಲಿ ಮಾನವೀಯತೆ ಇವತ್ತು ಎಂದು ನೆನೆದರು.

ಓದಿ: ನಾನು ಅಪ್ಪು ಹುಡುಕಿಕೊಂಡು ಹೋಗುತ್ತೇನೆ, ಇಲ್ಲಿರೋದಕ್ಕೆ ಆಗಲ್ಲ ಎಂದು ಭಾವುಕರಾದ ರಾಘಣ್ಣ; ಗಳಗಳನೆ ಅತ್ತ ಶಿವಣ್ಣ

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.