ETV Bharat / sitara

'ಹಗಲು ಕನಸು' ಕಾಣುತ್ತಿದ್ದಾರೆ ಮಾಸ್ಟರ್​​ ಆನಂದ್​​​​​​... ಯಾವ ವಿಷಯದಲ್ಲಿ ಗೊತ್ತಾ?

author img

By

Published : Dec 2, 2019, 7:36 PM IST

'ಹಗಲು ಕನಸು' ಚಿತ್ರಕ್ಕೆ ದಿನೇಶ್ ಬಾಬು ನಿರ್ದೇಶನದ ಜೊತೆಗೆ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಕೂಡಾ ಮಾಡಿದ್ದಾರೆ. ಡಿಸೆಂಬರ್​​​​ 6ರಂದು ಈ ಸಿನಿಮಾ ಬಿಡುಗಡೆಯಾಗುತ್ತಿದೆ.

Hagalu kanasu
'ಹಗಲು ಕನಸು'

ಕನ್ನಡ ಚಿತ್ರರಂಗಕ್ಕೆ 'ಸುಪ್ರಭಾತ', 'ಅಮೃತವರ್ಷಿಣಿ'ಯಂತಹ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ದಿನೇಶ್ ಬಾಬು ಇದೀಗ 'ಹಗಲು ಕನಸು' ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ದಿನೇಶ್ ಬಾಬು ಹಾಗೂ ಮಾಸ್ಟರ್ ಆನಂದ್ ಕಾಂಬಿನೇಷನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದು.

ಡಿಸೆಂಬರ್​​​ 6ರಂದು ಬಿಡುಗಡೆಯಾಗುತ್ತಿರುವ 'ಹಗಲು ಕನಸು'

ಸದ್ಯಕ್ಕೆ ಈ ಸಿನಿಮಾ ಟ್ರೇಲರ್​​​ನಿಂದ ಗಮನ ಸೆಳೆಯುತ್ತಿದೆ. ಈ ಸಿನಿಮಾ ಸೆಪ್ಟೆಂಬರ್​​​​​ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಥಿಯೇಟರ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆಯಾಗುವುದು ತಡವಾಗಿದ್ದು, ಡಿಸೆಂಬರ್​​​​ 6ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಮಾತನಾಡಲು ಮಾಸ್ಟರ್ ಆನಂದ್, ನಿರ್ದೇಶಕ ದಿನೇಶ್ ಬಾಬು, ನಾಯಕಿ ಸನಿಹ ಯಾದವ್, ನಿರ್ಮಾಪಕರಾದ ಪದ್ಮನಾಭ, ಅಚ್ಯುತ್ ರಾಜ್, ರೆಹಮಾನ್ ಹಾಗೂ ಇನ್ನಿತರರು ಇಂದು ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ಮಾಸ್ಟರ್ ಆನಂದ್ ಹೇಳುವ ಪ್ರಕಾರ ಇದೊಂದು ಕಾಮಿಡಿ ಹಾಗೂ ಸಸ್ಪೆನ್ಸ್ ಸಿನಿಮಾವಾಗಿದ್ದು, ವೀಕೆಂಡ್​​ನಲ್ಲಿ ಒಂದು ಮನೆಯಲ್ಲಿ ನಡೆಯುವ ಕಥೆಯಂತೆ.

Dinesh babu direction Hagalu kanasu movie
ದಿನೇಶ್​ ಬಾಬು ನಿರ್ದೇಶನದ 'ಹಗಲು ಕನಸು' ಸಿನಿಮಾ

ಈ ಚಿತ್ರದಲ್ಲಿ ಸನಿಹ ಯಾದವ್ ಆನಂದ್​​​​​​ಗೆ ಜೋಡಿಯಾಗಿದ್ದು, ವಿಭಿನ್ನ ರೋಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಹಾಸ್ಯ ಕಲಾವಿದ ಮನದೀಪ್ ರಾಯ್ ಈ ಚಿತ್ರದಲ್ಲಿ ದೆವ್ವದ ಪಾತ್ರ ಮಾಡಿದ್ದಾರಂತೆ. ಇನ್ನು ಚಿತ್ರದಲ್ಲಿ ನೀನಾಸಂ ಅಶ್ವಥ್, ಅಶ್ವಿನ್ ಹಾಸನ್, ಮನದೀಪ್ ರಾಯ್, ವಾಣಿಶ್ರೀ, ಚೀತ್ಕಾಲ ಬಿರಾದರ್, ಅರುಣ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ದಿನೇಶ್ ಬಾಬು, ನಿರ್ದೇಶನದ ಜೊತೆಗೆ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಕೂಡಾ ಮಾಡಿದ್ದಾರೆ. ಪದ್ಮನಾಭ, ಅಚ್ಯುತ್ ರಾಜ್, ರೆಹಮಾನ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಸದ್ಯಕ್ಕೆ ಮಾಸ್ಟರ್ ಆನಂದ್ 'ಹಗಲು ಕನಸು' ಕಾಣುತ್ತಿದ್ದು, ಇದೇ ವಾರ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

Hagalu kanasu movie team
'ಹಗಲು ಕನಸು' ಚಿತ್ರತಂಡ

ಕನ್ನಡ ಚಿತ್ರರಂಗಕ್ಕೆ 'ಸುಪ್ರಭಾತ', 'ಅಮೃತವರ್ಷಿಣಿ'ಯಂತಹ ಹಲವಾರು ಹಿಟ್ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ದಿನೇಶ್ ಬಾಬು ಇದೀಗ 'ಹಗಲು ಕನಸು' ಎಂಬ ಸಿನಿಮಾ ನಿರ್ದೇಶಿಸಿದ್ದಾರೆ. ದಿನೇಶ್ ಬಾಬು ಹಾಗೂ ಮಾಸ್ಟರ್ ಆನಂದ್ ಕಾಂಬಿನೇಷನಲ್ಲಿ ಮೂಡಿಬರುತ್ತಿರುವ ಸಿನಿಮಾ ಇದು.

ಡಿಸೆಂಬರ್​​​ 6ರಂದು ಬಿಡುಗಡೆಯಾಗುತ್ತಿರುವ 'ಹಗಲು ಕನಸು'

ಸದ್ಯಕ್ಕೆ ಈ ಸಿನಿಮಾ ಟ್ರೇಲರ್​​​ನಿಂದ ಗಮನ ಸೆಳೆಯುತ್ತಿದೆ. ಈ ಸಿನಿಮಾ ಸೆಪ್ಟೆಂಬರ್​​​​​ನಲ್ಲೇ ರಿಲೀಸ್ ಆಗಬೇಕಿತ್ತು. ಆದರೆ ಥಿಯೇಟರ್ ಸಮಸ್ಯೆಯಿಂದ ಸಿನಿಮಾ ಬಿಡುಗಡೆಯಾಗುವುದು ತಡವಾಗಿದ್ದು, ಡಿಸೆಂಬರ್​​​​ 6ರಂದು ಬಿಡುಗಡೆಯಾಗುತ್ತಿದೆ. ಈ ಬಗ್ಗೆ ಮಾತನಾಡಲು ಮಾಸ್ಟರ್ ಆನಂದ್, ನಿರ್ದೇಶಕ ದಿನೇಶ್ ಬಾಬು, ನಾಯಕಿ ಸನಿಹ ಯಾದವ್, ನಿರ್ಮಾಪಕರಾದ ಪದ್ಮನಾಭ, ಅಚ್ಯುತ್ ರಾಜ್, ರೆಹಮಾನ್ ಹಾಗೂ ಇನ್ನಿತರರು ಇಂದು ಸುದ್ದಿಗೋಷ್ಠಿಗೆ ಹಾಜರಾಗಿದ್ದರು. ಮಾಸ್ಟರ್ ಆನಂದ್ ಹೇಳುವ ಪ್ರಕಾರ ಇದೊಂದು ಕಾಮಿಡಿ ಹಾಗೂ ಸಸ್ಪೆನ್ಸ್ ಸಿನಿಮಾವಾಗಿದ್ದು, ವೀಕೆಂಡ್​​ನಲ್ಲಿ ಒಂದು ಮನೆಯಲ್ಲಿ ನಡೆಯುವ ಕಥೆಯಂತೆ.

Dinesh babu direction Hagalu kanasu movie
ದಿನೇಶ್​ ಬಾಬು ನಿರ್ದೇಶನದ 'ಹಗಲು ಕನಸು' ಸಿನಿಮಾ

ಈ ಚಿತ್ರದಲ್ಲಿ ಸನಿಹ ಯಾದವ್ ಆನಂದ್​​​​​​ಗೆ ಜೋಡಿಯಾಗಿದ್ದು, ವಿಭಿನ್ನ ರೋಲ್​​ನಲ್ಲಿ ಕಾಣಿಸಿಕೊಂಡಿದ್ದಾರೆ. ಹಿರಿಯ ಹಾಸ್ಯ ಕಲಾವಿದ ಮನದೀಪ್ ರಾಯ್ ಈ ಚಿತ್ರದಲ್ಲಿ ದೆವ್ವದ ಪಾತ್ರ ಮಾಡಿದ್ದಾರಂತೆ. ಇನ್ನು ಚಿತ್ರದಲ್ಲಿ ನೀನಾಸಂ ಅಶ್ವಥ್, ಅಶ್ವಿನ್ ಹಾಸನ್, ಮನದೀಪ್ ರಾಯ್, ವಾಣಿಶ್ರೀ, ಚೀತ್ಕಾಲ ಬಿರಾದರ್, ಅರುಣ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ದಿನೇಶ್ ಬಾಬು, ನಿರ್ದೇಶನದ ಜೊತೆಗೆ ಈ ಚಿತ್ರಕ್ಕೆ ಕ್ಯಾಮರಾ ವರ್ಕ್ ಕೂಡಾ ಮಾಡಿದ್ದಾರೆ. ಪದ್ಮನಾಭ, ಅಚ್ಯುತ್ ರಾಜ್, ರೆಹಮಾನ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ಸದ್ಯಕ್ಕೆ ಮಾಸ್ಟರ್ ಆನಂದ್ 'ಹಗಲು ಕನಸು' ಕಾಣುತ್ತಿದ್ದು, ಇದೇ ವಾರ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ.

Hagalu kanasu movie team
'ಹಗಲು ಕನಸು' ಚಿತ್ರತಂಡ
Intro:Body:ಹಗಲು ಕನಸು ಕಾಣುತ್ತಿದ್ದಾರೆ ಮಾಸ್ಟರ್ ಆನಂದ್ ಯಾವ ವಿಷ್ಯದಲ್ಲಿ ಗೊತ್ತಾ!!

ಹಗಲು ಕನಸು..ಕನ್ನಡ ಚಿತ್ರರಂಗದಲ್ಲಿ ಸುಪ್ರಭಾತ, ಅಮೃತವರ್ಷಿಣಿ ಹೀಗೆ ಹಲವಾರು ಹಿಟ್ ಸಿನಿಮಾಗಳನ್ನ ಕೊಟ್ಟಿರುವ ನಿರ್ದೇಶಕ ದಿನೇಶ್ ಬಾಬು ಹಾಗು ಮಾಸ್ಟರ್ ಆನಂದ್ ಕಾಂಬಿನೇಷನಲ್ಲಿ ಮೂಡಿ ಬರ್ತೀರೋ ಸಿನಿಮಾ..ಸದ್ಯ ಟ್ರೈಲರ್ ನಿಂದಲೇ ಗಮನ‌ ಸೆಳೆಯುತ್ತಿರೋ ಹಗಲು ಕನಸು ಸಿನಿಮಾಗೆ ಸೆಪ್ಟೆಂಬರ್ ತಿಂಗಳಲ್ಲಿ ರಿಲೀಸ್ ಆಗಬೇಕಿತ್ತು..ಆದ್ರೆ ಥಿಯೇಟರ್ ಸಮಸ್ಯೆಯಾದ ಕಾರಣ,‌ಇದೇ ತಿಂಗಳು 6ಕ್ಕೆ ರಿಲೀಸ್ ಆಗ್ತಾದಿದೆ..ಈ ಬಗ್ಗೆ ಮಾತನಾಡೋದಿಕ್ಕೆ ಮಾಸ್ಟರ್ ಆನಂದ್, ನಿರ್ದೇಶಕ ದಿನೇಶ್ ಬಾಬ,ನಾಯಕಿ ಸನಿಹ ಯಾದವ್, ದಿನೇಶ್ ಬಾಬು ಸ್ನೇಹಿತರಾದ ನಿರ್ಮಾಪಕಕರಾದ ಪದ್ಮನಾಭ, ಅಚ್ಯುತ್ ರಾಜ್, ರೆಹಮಾನ್, ತಮ್ಮ ಚಿತ್ರದ ಸ್ಪೆಷಾಲಿಟಿ ಬಗ್ಗೆ ಹಂಚಿಕೊಂಡ್ರು..ಮಾಸ್ಟರ್ ಆನಂದ್ ಹೇಳುವ ಇದೊಂದು ಕಾಮಿಡಿ ವಿತ್ ಸಸ್ಪೆನ್ಸ್ ಸಿನಿಮಾವಂತೆ..ವೀಕೆಂಡ್ ನಲ್ಲಿ ಒಂದು ಮನೆಯಲ್ಲಿ ನಡೆಯುವ ಕಥೆಯಂತೆ... ಸನಿಹ ಯಾದವ್ ಆನಂದ್ ಗೆ ಜೋಡಿಯಾಗಿದ್ದು, ಡಿಫ್ರೆಂಟ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ .ಹಿರಿಯ ಹಾಸ್ಯ ಕಲಾವಿದ ಮನದೀಪ್ ರಾಯ್ ಈ ಚಿತ್ರದಲ್ಲಿ ದೇವ್ವದ ಪಾತ್ರ ಮಾಡಲಿದ್ದಾರಂತೆ.. ಇನ್ನು ಚಿತ್ರದಲ್ಲಿ ನೀನಾಸಂ ಅಶ್ವಥ್, ಅಶ್ವಿನ್ ಹಾಸನ್, ಮನದೀಪ್ ರಾಯ್, ವಾಣಿಶ್ರೀ, ಚೀತ್ಕಾಲ ಬಿರಾದರ್, ಅರುಣ್ ಹಾಗೂ ಇನ್ನಿತರರು ತಾರಾಗಣದಲ್ಲಿದ್ದಾರೆ. ಕಾರ್ತಿಕ್ ವೆಂಕಟೇಶ್ ಸಂಗೀತ ಸಂಯೋಜನೆ ಮಾಡಿದ್ದಾರೆ. ದಿನೇಶ್ ಬಾಬು ನಿರ್ದೇಶನದ ಜೊತೆಗೆ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದು ನಿರ್ಮಾಪಕರಾದ ಪದ್ಮನಾಭ, ಅಚ್ಯುತ್ ರಾಜ್, ರೆಹಮಾನ್ ಈ ಚಿತ್ರಕ್ಕೆ ಹಣ ಹೂಡಿದ್ದಾರೆ.ಸದ್ಯ ಮಾಸ್ಟರ್ ಆನಂದ್ ಹಗಲು ಕನಸು ಕಾಣುತ್ತಿದ್ದು ಇದೇ ವಾರ ಪ್ರೇಕ್ಷಕರ ಮುಂದೆ ಬರಲಿದೆ..Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.