ETV Bharat / sitara

ಮಾಸ್ಟರ್ ಆನಂದ್ ಜೊತೆ 'ಹಗಲು ಕನಸು' ಕಾಣುತ್ತಿರುವ ನಿರ್ದೇಶಕ ದಿನೇಶ್ ಬಾಬು

author img

By

Published : Sep 1, 2019, 10:21 AM IST

'ಅಮೃತವರ್ಷಿಣಿ', 'ಲಾಲಿಹಾಡು' ಸಿನಿಮಾಗಳ ನಿರ್ದೇಶಕ ದಿನೇಶ್ ಬಾಬು ಈಗ 'ಹಗಲು ಕನಸು' ಎಂಬ ಸಿನಿಮಾ ನಿರ್ದೇಶಿಸಿದ್ದು, ಇದು ಬಿಡುಗಡೆಗೆ ಸಿದ್ಧವಿದೆ. ಚಿತ್ರದಲ್ಲಿ ಮಾಸ್ಟರ್ ಆನಂದ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ನಿನ್ನೆ ಚಿತ್ರದ ಆಡಿಯೋ ಬಿಡುಗಡೆಯಾಗಿದೆ.

'ಹಗಲು ಕನಸು'

ಸ್ಯಾಂಡಲ್​​ವುಡ್​​​ನಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಿರ್ದೇಶಕ ಹಾಗೂ ಛಾಯಾಗ್ರಾಹಕನಾಗಿ ಕೆಲಸ ಮಾಡಿ 'ಅಮೃತವರ್ಷಿಣಿ', 'ಲಾಲಿಹಾಡು'ಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ದಿನೇಶ್ ಬಾಬು ಈಗ 'ಹಗಲು ಕನಸು' ಕಾಣುತ್ತಿದ್ದಾರೆ.

'ಹಗಲು ಕನಸು' ಆಡಿಯೋ ಬಿಡುಗಡೆ

ಇದೇನಪ್ಪ ದಿನೇಶ್​​ ಬಾಬು ಅವರಿಗೆ ಏನಾಯ್ತು ಅಂತ ಕನ್ಫ್ಯೂಸ್ ಆಗಬೇಡಿ. ದಿನೇಶ್ ಬಾಬು ಹಾಗೂ ಆನಂದ್ ಇಬ್ಬರೂ ಜೊತೆಗೂಡಿ 'ಹಗಲು ಕನಸು' ಎಂಬ ಸಿನಿಮಾ ಮಾಡಿದ್ದು, ನಿನ್ನೆ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ದಿನೇಶ್ ಬಾಬು ಅವಿಭಕ್ತ ಕುಟುಂಬದಲ್ಲಿ ನಡೆಯುವ ಕೆಲವು ಸನ್ನಿವೇಶಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಆನಂದ್​​ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಸಸ್ಪೆನ್ಸ್ ಕೂಡಾ ಇದ್ದು, ನೋಡುಗರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ನಟ ಮಾಸ್ಟರ್ ಆನಂದ್ ಹೇಳಿದ್ದಾರೆ. ಮನ್​​​ದೀಪ್ ರಾಯ್, ನಾರಾಯಣಸ್ವಾಮಿ, ನೀನಾಸಂ ಅಶ್ವಥ್​​​​​​ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ಈಗಾಗಲೇ ಸೆನ್ಸಾರ್​​​​ನಿಂದ ಗ್ರೀನ್ ಸಿಗ್ನಲ್ ಪಡೆದಿರುವ ಸಿನಿಮಾ ಸೆಪ್ಟೆಂಬರ್ 6ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

Dinesh babu
ನಿರ್ದೇಶಕ ದಿನೇಶ್ ಬಾಬು

ಸ್ಯಾಂಡಲ್​​ವುಡ್​​​ನಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಿರ್ದೇಶಕ ಹಾಗೂ ಛಾಯಾಗ್ರಾಹಕನಾಗಿ ಕೆಲಸ ಮಾಡಿ 'ಅಮೃತವರ್ಷಿಣಿ', 'ಲಾಲಿಹಾಡು'ಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ದಿನೇಶ್ ಬಾಬು ಈಗ 'ಹಗಲು ಕನಸು' ಕಾಣುತ್ತಿದ್ದಾರೆ.

'ಹಗಲು ಕನಸು' ಆಡಿಯೋ ಬಿಡುಗಡೆ

ಇದೇನಪ್ಪ ದಿನೇಶ್​​ ಬಾಬು ಅವರಿಗೆ ಏನಾಯ್ತು ಅಂತ ಕನ್ಫ್ಯೂಸ್ ಆಗಬೇಡಿ. ದಿನೇಶ್ ಬಾಬು ಹಾಗೂ ಆನಂದ್ ಇಬ್ಬರೂ ಜೊತೆಗೂಡಿ 'ಹಗಲು ಕನಸು' ಎಂಬ ಸಿನಿಮಾ ಮಾಡಿದ್ದು, ನಿನ್ನೆ ಚಿತ್ರದ ಆಡಿಯೋ ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ದಿನೇಶ್ ಬಾಬು ಅವಿಭಕ್ತ ಕುಟುಂಬದಲ್ಲಿ ನಡೆಯುವ ಕೆಲವು ಸನ್ನಿವೇಶಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದಾರೆ. ಚಿತ್ರದ ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಆನಂದ್​​ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಸಸ್ಪೆನ್ಸ್ ಕೂಡಾ ಇದ್ದು, ನೋಡುಗರಿಗೆ ಖಂಡಿತ ಇಷ್ಟವಾಗುತ್ತದೆ ಎಂದು ನಟ ಮಾಸ್ಟರ್ ಆನಂದ್ ಹೇಳಿದ್ದಾರೆ. ಮನ್​​​ದೀಪ್ ರಾಯ್, ನಾರಾಯಣಸ್ವಾಮಿ, ನೀನಾಸಂ ಅಶ್ವಥ್​​​​​​ ಹಾಗೂ ಇನ್ನಿತರರು ಸಿನಿಮಾದಲ್ಲಿ ನಟಿಸಿದ್ದಾರೆ. ಚಿತ್ರದ ಹಾಡುಗಳಿಗೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದಾರೆ. ಈಗಾಗಲೇ ಸೆನ್ಸಾರ್​​​​ನಿಂದ ಗ್ರೀನ್ ಸಿಗ್ನಲ್ ಪಡೆದಿರುವ ಸಿನಿಮಾ ಸೆಪ್ಟೆಂಬರ್ 6ರಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

Dinesh babu
ನಿರ್ದೇಶಕ ದಿನೇಶ್ ಬಾಬು
Intro:ಸ್ಯಾಂಡಲ್ವುಡ್ನಲ್ಲಿ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಿರ್ದೇಶಕ ಹಾಗೂ ಛಾಯಾಗ್ರಾಹಕನಾಗಿ ಕೆಲಸಮಾಡಿ ಅಮೃತವರ್ಷಿಣಿ ಲಾಲಿಹಾಡು ಗಳಂತಹ ಸೂಪರ್ ಹಿಟ್ ಚಿತ್ರಗಳನ್ನು ನೀಡಿದ ,ದಿನೇಶ್ ಬಾಬು" ಹಗಲು ಕನಸು" ಕಾಣುತ್ತಿದ್ದಾರೆ. ಇದೇನಪ್ಪಾ ದೇಶ ಬಾಬಾರಿಗೆ ಏನಾಯ್ತು ಅಂತ ಕನ್ಫ್ಯೂಸ್ ಆಗ್ಬೇಡಿ ಅನಂತರ ಮತ್ತೆ ದಿನೇಶ್ ಬಾಬು ಆನಂದ್ ಅವರ ಜೊತೆ ಗೂಡಿ "ಹಗಲು ಕನಸು " ಎಂಬ ಚಿತ್ರ ನಿರ್ದೇಶನ ಮಾಡಿದ್ದು ಇಂದು ಚಿತ್ರದ ಆಡಿಯೋ ಬಿಡುಗಡೆಯಾಗಿದೆ.


Body:ನಿರ್ದೇಶಕ ದಿನೇಶ್ ಬಾಬು ಅವಿಭಕ್ತ ಕುಟುಂಬದಲ್ಲಿ ನಡೆಯುವ ಕೆಲವು ಸನ್ನಿವೇಶಗಳನ್ನು ಇಟ್ಟುಕೊಂಡು ಹಗಲು ಕನಸು ಚಿತ್ರ ಮಾಡಿದ್ದು, ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಮಾಸ್ಟರ್ ಆನಂದ ಅಭಿನಯಿಸಿದ್ದಾರೆ. ನಿರ್ದೇಶಕ ದಿನೇಶ್ ಬಾಬು ಅವರು ಒಂದು ಅವಿಭಕ್ತ ಕುಟುಂಬದಲ್ಲಿ ನಡೆಯುವ ಸನ್ನಿವೇಶಗಳನ್ನು ಹ್ಯೂಮರಸ್ ಮೂಲಕ ಹೇಳಲು ಹೊರಟಿದ್ದಾರೆ. ಅಲ್ಲದೆ ಚಿತ್ರದಲ್ಲಿ ಸಸ್ಪೆನ್ಸ್ ಸಹ ಇದ್ದು ನೋಡುಗರಿಗೆ ಚಿತ್ರ ಖಂಡಿತ ಇಷ್ಟವಾಗುತ್ತದೆ ಎಂದು ನಟ ಮಾಸ್ಟರ್ ಆನಂದ್ ತಿಳಿಸಿದರು. ಇನ್ನು ಈ ಚಿತ್ರಕ್ಕೆ ಕಾರ್ತಿಕ್ ವೆಂಕಟೇಶ್ ಸಂಗೀತ ನೀಡಿದ್ದು ಚಿತ್ರದಲ್ಲಿ ಐದು ಹಾಡುಗಳಿದ್ದು ಪೂರಕವಾದ ಹಾಡುಗಳನ್ನು ಮಾಡಿದ್ದೇವೆ ಎಂದು ಸಂಗೀತ ನಿರ್ದೇಶಕರು ತಿಳಿಸಿದರು


Conclusion:ಇನ್ನು ಈ ಚಿತ್ರದಲ್ಲಿ ಮಾಸ್ಟರ್ ಆನಂದ್ ಹಿರಿಯನಟ ಮನ್ದೀಪ್ ರಾಯ್ ಸೇರಿದಂತೆ ಬಹು ದೊಡ್ಡ ತಾರಾ ಬಳಗವೇ ಚಿತ್ರದಲ್ಲಿದು, ಈಗಾಗಲೇ ಸೆನ್ಸಾರ್ ಬೋರ್ಡ್ ನಿಂದ ಸಿಗ್ನಲ್ ಪಡೆದಿರುವ ಹಗಲು ಕನಸು ಚಿತ್ರ ಸೆಪ್ಟೆಂಬರ್ 6ರಂದು ರಾಜ್ಯಾದ್ಯಂತ ಬಿಡುಗಡೆಗೆ ಸಿದ್ಧವಾಗಿದೆ.

ಸತೀಶ‌ ಎಂಬಿ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.