ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಮದುವೆಯಾದ ಕೆಲವೇ ಗಂಟೆಗಳಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ. ಕೋಲಾರ ಮೂಲದ ಚೈತ್ರಾ ಕೋಟೂರ್ ತನ್ನ ಬರವಣಿಗೆ ಹಾಗೂ ಹಲವು ಚಿತ್ರಗಳಲ್ಲಿ ನಟನೆ ಮಾಡಿ, ಬಿಗ್ ಬಾಸ್ ಸೀನಸ್ 7 ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿ ಖ್ಯಾತಿ ಪಡೆದುಕೊಂಡಿದ್ದರು.
ನಿನ್ನೆ ಬೆಳಗ್ಗೆ ಬೆಂಗಳೂರಿನ ಬ್ಯಾಟರಾಯನಪುರ ಗಣಪತಿ ದೇವಾಲಯದಲ್ಲಿ, ಮಂಡ್ಯ ಮೂಲದ ನಾಗಾರ್ಜುನ ಎಂಬಾತನನ್ನ ಮದುವೆ ಮಾಡಿಕೊಂಡಿದ್ದರು. ಸಾಮಾಜಿಕ ಜಾಲಾತಣದಲ್ಲಿ ಮದುವೆ ಬಗ್ಗೆ ಸಂತಸ ಹಂಚಿಕೊಂಡಿದ್ದರು.
ಆದರೆ, ಚೈತ್ರಾ ಅವರು ಮದುವೆ ಮಾಡಿಕೊಂಡಿದ್ದ, ಗಂಡನ ಮನೆ ಕಡೆಯವರು, "ಕೆಲ ಸಂಘಟನೆಯವರು ಸೇರಿದಂತೆ ಚೈತ್ರಾ ಕೋಟೂರ್ ಕುಟುಂಬಸ್ಥರು ಬಲವಂತವಾಗಿ ನನ್ನ ಮಗನಿಗೆ ಮದುವೆ ಮಾಡಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಅದರಂತೆ ನಿನ್ನೆ ರಾತ್ರಿ ಕೋಲಾರ ನಗರದ ಕುರುಬರ ಪೇಟೆಯಲ್ಲಿರುವ ಚೈತ್ರ ಕೋಟೂರು ಮನೆ ಬಳಿ ಬಂದು ತಗಾದೆ ತೆಗೆದಿದ್ದಾರೆ. ಬಲವಂತವಾಗಿ ಸಂಘಟನೆಗಳ ಜೊತೆಗೂಡಿ ನನ್ನ ಮಗನನ್ನ ಕೂಡಿಹಾಕಿ ದೇಗುಲದಲ್ಲಿ ಮದುವೆ ಮಾಡಿಕೊಂಡಿರುವುದಾಗಿ ಕುಟುಂಬಸ್ಥರು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ."
ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್ಬಾಸ್ ಚೈತ್ರಾ ಕೋಟೂರ್
ಸದ್ಯ ಚೈತ್ರಾ ಕೋಟೂರ್ ಮದುವೆ ವಿಚಾರ ಕೋಲಾರದ ಮಹಿಳಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇಬ್ಬರು ಕುಟುಂಬಸ್ಥರಿಗೆ ಬುಧವಾರದವರೆಗೆ ಸಮಯಾವಕಾಶ ನೀಡಿದ್ದು, ಎರಡು ಕಡೆಯವರು ತೀರ್ಮಾನ ತೆಗೆದುಕೊಂಡು ಬನ್ನಿ ಎಂದು ಪೊಲೀಸರು ತಿಳಿಹೇಳಿ ಕಳುಹಿಸಿದ್ದಾರಂತೆ.