ETV Bharat / sitara

ರಿಲೀಸ್​​ಗೂ ಮುಂಚೆಯೇ ಡಿಮ್ಯಾಂಡ್ ಕ್ರಿಯೇಟ್ ಮಾಡಿಕೊಂಡ ಬಿಚ್ಚುಗತ್ತಿ !!

ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಪೌರಾಣಿಕ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ವೆ... ಕುರುಕ್ಷೇತ್ರ ಸಿನಿಮಾ ನಂತರ ಐತಿಹಾಸಿಕ ಕಥೆ ಆಧರಿಸಿರೋ ಬರ್ತಾ ಇರೋ ಚಿತ್ರ ಬಿಚ್ಚುಗತ್ತಿ.. ಟೀಸರ್ ಹಾಗೂ ಹಾಡುಗಳಿಂದ ಸದ್ಯ ಗಾಂಧಿನಗರದಲ್ಲಿ ಟಾಕ್ ಆಗುತ್ತಿರುವ ಬಿಚ್ಚುಗತ್ತಿ ಚಾಪ್ಟರ್ 1 ಸಿನಿಮಾ, ರಿಲೀಸ್ ಗೂ ಮೊದ್ಲೇ ಕೋಟಿ ಕೋಟಿ ಬ್ಯುಸಿನೆಸ್ ಮಾಡಿದೆಯಂತೆ.

author img

By

Published : Feb 10, 2020, 10:39 AM IST

Bichhugathi_Movie_Dubbing_Rights_Sale
ಬಿಚ್ಚುಗತ್ತಿ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಪೌರಾಣಿಕ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ವೆ.. ಕುರುಕ್ಷೇತ್ರ ಸಿನಿಮಾ ನಂತ್ರ ಐತಿಹಾಸಿಕ ಕಥೆ ಆಧರಿಸಿರೋ ಬರ್ತಾ ಇರೋ ಚಿತ್ರ ಬಿಚ್ಚುಗತ್ತಿ.. ಟೀಸರ್ ಹಾಗೂ ಹಾಡುಗಳಿಂದ ಸದ್ಯ ಗಾಂಧಿನಗರದಲ್ಲಿ ಟಾಕ್ ಆಗುತ್ತಿರುವ ಬಿಚ್ಚುಗತ್ತಿ ಚಾಪ್ಟರ್ 1 ಸಿನಿಮಾ, ರಿಲೀಸ್ ಗೂ ಮೊದ್ಲೇ ಕೋಟಿ ಕೋಟಿ ಬ್ಯುಸಿನೆಸ್ ಆಗಿದೆಯಂತೆ.

Bichhugathi_Movie_Dubbing_Rights_Sale
ಬಿಚ್ಚುಗತ್ತಿ ಸಿನಿಮಾ

ಹೌದು ಐತಿಹಾಸಿಕ ಸಿನಿಮಾ ಜೊತೆಗೆ ಮೈ ಝುಮ್​​ ಎನಿಸುವ ಯುದ್ಧದ ಸೀನ್​​ಗಳು ಈ ಚಿತ್ರದಲ್ಲಿದೆ. ಹೀಗಾಗಿ ಚಿತ್ರದ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿದೆ.. ಗಾಂಧಿನಗರದಲ್ಲಿ ಪಂಡಿತರ ಪ್ರಕಾರ, ಬಿಚ್ಚುಗತ್ತಿ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಬರೊಬ್ಬರಿ 3 ಕೋಟಿ 20 ಲಕ್ಷಕ್ಕೆ ಮಾರಾಟದ ಮಾತುಕಥೆಯಾಗಿದೆ. ಮೂಲಗಳು ಹೇಳೋ ಪ್ರಕಾರ ಒಬ್ಬ ಯುವನಟನ ಸಿನಿಮಾ ಡಬ್ಬಿಂಗ್ ಇಷ್ಟು ದೊಡ್ಡ ಮಟ್ಟಕ್ಕೆ ಬಿಸಿನೆಸ್ ಆಗೋದಕ್ಕೆ ಕಾರಣ ಚಿತ್ರದ ಕಥೆ ಮತ್ತು ಮೇಕಿಂಗ್...ಇದ್ರ ಜೊತೆಗೆ ಈಗ ದುರ್ಗದ ಹೆಬ್ಬುಲಿ ಅನ್ನೋ ಹಾಡಿನ ಲಿರಿಕಲ್ ವಿಡಿಯೋ ಚಿತ್ರತಂಡ ರಿಲೀಸ್ ಮಾಡಿದ್ದು, ಈ ಹಾಡು ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿದೆ‌.

ಹಾಸ್ಯ ನಟ ಡಿಂಗ್ರಿ ನಾಗರಾಜ್ ಮಗ ರಾಜ್ ವರ್ಧನ್ ಭರಮಾಣ್ಣ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 6 ಅಡಿ ಎತ್ತರ, ಪರ್ಫೆಕ್ಟ್​​ ತೂಕ. 100 ಪರ್ಸೆಂಟ್ ಹೀರೋ ಮೆಟಿರಿಯಲ್ ಆಗಿರೋ ರಾಜ್ ವರ್ಧನ್, ಇಂತಹ ಐತಿಹಾಸಿಕ ಸಿನಿಮಾದೊಂದಿಗೆ ಗ್ರ್ಯಾಂಡ್ ಆಗಿ ಸಿನಿಮಾ ಉದ್ಯಮಕ್ಕೆ ಲಾಂಚ್ ಆಗ್ತಿದ್ದಾರೆ. ಈ ಚಿತ್ರದಲ್ಲಿ ರಾಜ್ ವರ್ಧನ್​ಗೆ ಹರಿಪ್ರಿಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹರಿಪ್ರಿಯ ಈ ಚಿತ್ರದ ಮೂಲಕ ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನ ಪರಿಚಯಿಸೋ ಸೂಚನೆ ಕೊಟ್ಟಿದ್ದಾರೆ.

Bichhugathi_Movie_Dubbing_Rights_Sale
ಬಿಚ್ಚುಗತ್ತಿ ಸಿನಿಮಾ

ಗುರುಪ್ರಶಾಂತ್ ಛಾಯಾಗ್ರಹಣ ರವಿ ವರ್ಮಾ, ವಿಕ್ರಮ್, ವಿನೋದ್ ಮತ್ತು ಸಣ್ಣಪ್ಪ ಸಾಹಸ ಸಂಯೋಜಿಸಿದ್ದಾರೆ. ನಾದ ಬ್ರಹ್ಮ ಡಾ. ಹಂಸಲೇಖ ಮತ್ತು ನಕುಲ್ ಅಭಯಂಕರ್ ಹಾಗು ವಿ. ನಾಗೇಂದ್ರ ಪ್ರಸಾದ್ ಸಂಗೀತ ಈ ಚಿತ್ರದ ಹೈಲೈಟ್ಸ್. ಬಿಚ್ಚುಗತ್ತಿ ಚಾಪ್ಟರ್ 1... ಚಿತ್ರದುರ್ಗದ ಇತಿಹಾಸ ಪುಟಗಳಲ್ಲಿ ಎಂದೂ ಅಳಿಯದ ಗುರುತಾಗಿ ಉಳಿದಿರೋ ದಳವಾಯಿ ದಂಗೆಯ ಭಾಗ1ರ ಚಿತ್ರಣ. ಬಿ.ಎಲ್ ವೇಣು ಅವ್ರ ಕಥೆ ಮತ್ತು ಸಂಭಾಷಣೆ ರಚಿಸಿರೋ ಈ ಐತಿಹಾಸಕ ಚಿತ್ರವನ್ನ ಸ್ಯಾಂಡಲ್​​ವುಡ್ ಅಂಗಳದಲ್ಲಿ ವೆರೈಟಿ ಸಿನಿಮಾಗಳಿಂದ ಜನಪ್ರಿಯರಾಗಿರೋ ನಿರ್ದೇಶಕ ಹರಿ ಸಂತು ನಿರ್ದೇಶನ ಮಾಡಿದ್ದಾರೆ. ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ತಯಾರಾಗಿರೋ ಅದ್ಧೂರಿ ಐತಿಹಾಸಿಕ ಸಿನಿಮಾ ಇದು.. ಸಾಕಷ್ಟು ವಿಶೇಷ ವಿಚಾರಗಳಿಂದ ಸುದ್ದಿಯಾಗ್ತಿರೋ ಬಿಚ್ಚುಗತ್ತಿಯನ್ನು ಇದೇ ತಿಂಗಳ 21 ಕ್ಕೆ ರಾಜ್ಯಾದ್ಯಂತ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ‌‌.. ಈ ಹಿಂದೆ ಬಂದ ಪೌರಾಣಿಕ ಚಿತ್ರಗಳಂತೆ ಬಿಚ್ಚುಗತ್ತಿ ಸಿನಿಮಾ ಸಿನಿ ಪ್ರಿಯರ ಪ್ರೇಕ್ಷಕರ ಮನ ಗೆಲ್ಲುತ್ತಾ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ಕನ್ನಡ ಚಿತ್ರರಂಗದಲ್ಲಿ ಕಮರ್ಷಿಯಲ್ ಸಿನಿಮಾಗಳ ಮಧ್ಯೆ ಪೌರಾಣಿಕ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸೌಂಡ್ ಮಾಡುತ್ವೆ.. ಕುರುಕ್ಷೇತ್ರ ಸಿನಿಮಾ ನಂತ್ರ ಐತಿಹಾಸಿಕ ಕಥೆ ಆಧರಿಸಿರೋ ಬರ್ತಾ ಇರೋ ಚಿತ್ರ ಬಿಚ್ಚುಗತ್ತಿ.. ಟೀಸರ್ ಹಾಗೂ ಹಾಡುಗಳಿಂದ ಸದ್ಯ ಗಾಂಧಿನಗರದಲ್ಲಿ ಟಾಕ್ ಆಗುತ್ತಿರುವ ಬಿಚ್ಚುಗತ್ತಿ ಚಾಪ್ಟರ್ 1 ಸಿನಿಮಾ, ರಿಲೀಸ್ ಗೂ ಮೊದ್ಲೇ ಕೋಟಿ ಕೋಟಿ ಬ್ಯುಸಿನೆಸ್ ಆಗಿದೆಯಂತೆ.

Bichhugathi_Movie_Dubbing_Rights_Sale
ಬಿಚ್ಚುಗತ್ತಿ ಸಿನಿಮಾ

ಹೌದು ಐತಿಹಾಸಿಕ ಸಿನಿಮಾ ಜೊತೆಗೆ ಮೈ ಝುಮ್​​ ಎನಿಸುವ ಯುದ್ಧದ ಸೀನ್​​ಗಳು ಈ ಚಿತ್ರದಲ್ಲಿದೆ. ಹೀಗಾಗಿ ಚಿತ್ರದ ಡಬ್ಬಿಂಗ್ ರೈಟ್ಸ್ ಭಾರಿ ಮೊತ್ತಕ್ಕೆ ಸೇಲ್ ಆಗಿದೆ.. ಗಾಂಧಿನಗರದಲ್ಲಿ ಪಂಡಿತರ ಪ್ರಕಾರ, ಬಿಚ್ಚುಗತ್ತಿ ಚಿತ್ರದ ಹಿಂದಿ ಡಬ್ಬಿಂಗ್ ರೈಟ್ಸ್ ಬರೊಬ್ಬರಿ 3 ಕೋಟಿ 20 ಲಕ್ಷಕ್ಕೆ ಮಾರಾಟದ ಮಾತುಕಥೆಯಾಗಿದೆ. ಮೂಲಗಳು ಹೇಳೋ ಪ್ರಕಾರ ಒಬ್ಬ ಯುವನಟನ ಸಿನಿಮಾ ಡಬ್ಬಿಂಗ್ ಇಷ್ಟು ದೊಡ್ಡ ಮಟ್ಟಕ್ಕೆ ಬಿಸಿನೆಸ್ ಆಗೋದಕ್ಕೆ ಕಾರಣ ಚಿತ್ರದ ಕಥೆ ಮತ್ತು ಮೇಕಿಂಗ್...ಇದ್ರ ಜೊತೆಗೆ ಈಗ ದುರ್ಗದ ಹೆಬ್ಬುಲಿ ಅನ್ನೋ ಹಾಡಿನ ಲಿರಿಕಲ್ ವಿಡಿಯೋ ಚಿತ್ರತಂಡ ರಿಲೀಸ್ ಮಾಡಿದ್ದು, ಈ ಹಾಡು ಚಿತ್ರದ ಹೈಲೈಟ್ ಗಳಲ್ಲಿ ಒಂದಾಗಿದೆ‌.

ಹಾಸ್ಯ ನಟ ಡಿಂಗ್ರಿ ನಾಗರಾಜ್ ಮಗ ರಾಜ್ ವರ್ಧನ್ ಭರಮಾಣ್ಣ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. 6 ಅಡಿ ಎತ್ತರ, ಪರ್ಫೆಕ್ಟ್​​ ತೂಕ. 100 ಪರ್ಸೆಂಟ್ ಹೀರೋ ಮೆಟಿರಿಯಲ್ ಆಗಿರೋ ರಾಜ್ ವರ್ಧನ್, ಇಂತಹ ಐತಿಹಾಸಿಕ ಸಿನಿಮಾದೊಂದಿಗೆ ಗ್ರ್ಯಾಂಡ್ ಆಗಿ ಸಿನಿಮಾ ಉದ್ಯಮಕ್ಕೆ ಲಾಂಚ್ ಆಗ್ತಿದ್ದಾರೆ. ಈ ಚಿತ್ರದಲ್ಲಿ ರಾಜ್ ವರ್ಧನ್​ಗೆ ಹರಿಪ್ರಿಯ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಹರಿಪ್ರಿಯ ಈ ಚಿತ್ರದ ಮೂಲಕ ತಮ್ಮ ಪ್ರತಿಭೆಯ ಮತ್ತೊಂದು ಮುಖವನ್ನ ಪರಿಚಯಿಸೋ ಸೂಚನೆ ಕೊಟ್ಟಿದ್ದಾರೆ.

Bichhugathi_Movie_Dubbing_Rights_Sale
ಬಿಚ್ಚುಗತ್ತಿ ಸಿನಿಮಾ

ಗುರುಪ್ರಶಾಂತ್ ಛಾಯಾಗ್ರಹಣ ರವಿ ವರ್ಮಾ, ವಿಕ್ರಮ್, ವಿನೋದ್ ಮತ್ತು ಸಣ್ಣಪ್ಪ ಸಾಹಸ ಸಂಯೋಜಿಸಿದ್ದಾರೆ. ನಾದ ಬ್ರಹ್ಮ ಡಾ. ಹಂಸಲೇಖ ಮತ್ತು ನಕುಲ್ ಅಭಯಂಕರ್ ಹಾಗು ವಿ. ನಾಗೇಂದ್ರ ಪ್ರಸಾದ್ ಸಂಗೀತ ಈ ಚಿತ್ರದ ಹೈಲೈಟ್ಸ್. ಬಿಚ್ಚುಗತ್ತಿ ಚಾಪ್ಟರ್ 1... ಚಿತ್ರದುರ್ಗದ ಇತಿಹಾಸ ಪುಟಗಳಲ್ಲಿ ಎಂದೂ ಅಳಿಯದ ಗುರುತಾಗಿ ಉಳಿದಿರೋ ದಳವಾಯಿ ದಂಗೆಯ ಭಾಗ1ರ ಚಿತ್ರಣ. ಬಿ.ಎಲ್ ವೇಣು ಅವ್ರ ಕಥೆ ಮತ್ತು ಸಂಭಾಷಣೆ ರಚಿಸಿರೋ ಈ ಐತಿಹಾಸಕ ಚಿತ್ರವನ್ನ ಸ್ಯಾಂಡಲ್​​ವುಡ್ ಅಂಗಳದಲ್ಲಿ ವೆರೈಟಿ ಸಿನಿಮಾಗಳಿಂದ ಜನಪ್ರಿಯರಾಗಿರೋ ನಿರ್ದೇಶಕ ಹರಿ ಸಂತು ನಿರ್ದೇಶನ ಮಾಡಿದ್ದಾರೆ. ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ತಯಾರಾಗಿರೋ ಅದ್ಧೂರಿ ಐತಿಹಾಸಿಕ ಸಿನಿಮಾ ಇದು.. ಸಾಕಷ್ಟು ವಿಶೇಷ ವಿಚಾರಗಳಿಂದ ಸುದ್ದಿಯಾಗ್ತಿರೋ ಬಿಚ್ಚುಗತ್ತಿಯನ್ನು ಇದೇ ತಿಂಗಳ 21 ಕ್ಕೆ ರಾಜ್ಯಾದ್ಯಂತ ರಿಲೀಸ್ ಮಾಡಲು ಚಿತ್ರತಂಡ ಪ್ಲಾನ್ ಮಾಡುತ್ತಿದೆ‌‌.. ಈ ಹಿಂದೆ ಬಂದ ಪೌರಾಣಿಕ ಚಿತ್ರಗಳಂತೆ ಬಿಚ್ಚುಗತ್ತಿ ಸಿನಿಮಾ ಸಿನಿ ಪ್ರಿಯರ ಪ್ರೇಕ್ಷಕರ ಮನ ಗೆಲ್ಲುತ್ತಾ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.