ETV Bharat / sitara

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ: ಕರೀನಾ ಕಪೂರ್ ವಿರುದ್ಧ ದೂರು!

ತಮ್ಮ ಗರ್ಭಾವಸ್ಥೆಯಲ್ಲಿನ ದೈಹಿಕ ಮತ್ತು ಮಾನಸಿಕ ತೊಳಲಾಟಗಳ ಕುರಿತಾಗಿ ನಟಿ ಕರೀನಾ ಕಪೂರ್ ಪುಸ್ತಕ ಬರೆದಿದ್ದು, ಅದಕ್ಕೆ 'ಪ್ರಗ್ನೆನ್ಸಿ ಬೈಬಲ್' ಎಂದು ಹೆಸರಿಟ್ಟಿದ್ದರು. ಪುಸ್ತಕದ ಟೈಟಲ್​ ಬಗ್ಗೆ ಈಗ ವಿವಾದ ಸೃಷ್ಟಿಯಾಗಿದ್ದು, ನಟಿ ವಿರುದ್ಧ ದೂರು ದಾಖಲಾಗಿದೆ.

author img

By

Published : Jul 15, 2021, 12:31 PM IST

Bebo's Pregnancy Bible book
Bebo's Pregnancy Bible book

ಮುಂಬೈ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ತಮ್ಮ ಗರ್ಭಾವಸ್ಥೆಯಲ್ಲಿನ ದೈಹಿಕ ಮತ್ತು ಮಾನಸಿಕ ತೊಳಲಾಟಗಳ ಕುರಿತಾಗಿ ನಟಿ ಕರೀನಾ ಕಪೂರ್ ಪುಸ್ತಕ ಬರೆದಿದ್ದು, ಅದಕ್ಕೆ 'ಪ್ರಗ್ನೆನ್ಸಿ ಬೈಬಲ್' ಎಂದು ಹೆಸರಿಟ್ಟಿದ್ದರು.

'ಪ್ರಗ್ನೆನ್ಸಿ ಬೈಬಲ್' ಪುಸ್ತಕ ಕುರಿತು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಕರೀನಾ ಕಪೂರ್ ಮಾತನಾಡಿದ್ದರು. ಇದೀಗ ಇದೇ ವಿಚಾರದ ಕುರಿತಾಗಿ ಕ್ರಿಶ್ಚಿಯನ್ ಸಮುದಾಯ ಮಹಾರಾಷ್ಟ್ರದಲ್ಲಿ ದೂರು ನೀಡಿದೆ. 'ಪ್ರಗ್ನೆನ್ಸಿ ಬೈಬಲ್' ಬುಕ್ ಬರೆದ ಕರೀನಾ ಕಪೂರ್, ಅದಿತಿ ಶಾ ಭೀಮ್‌ಜಾನಿ ಹಾಗೂ ಪುಸ್ತಕವನ್ನು ಪಬ್ಲಿಶ್ ಮಾಡಿದ ಜಗ್ಗರ್‌ನಾಟ್ ಬುಕ್ಸ್ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಆಲ್ಫಾ ಒಮೇಗಾ ಕ್ರಿಶ್ಚಿಯನ್ ಮಹಾಸಂಘದ ಅಧ್ಯಕ್ಷ ಆಶೀಶ್ ಶಿಂಧೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಕೆ ಮಾದೇಶ್‌ ನಿರ್ದೇಶನದಲ್ಲಿ ಭ್ರಷ್ಟಾಚಾರಕ್ಕೆ 'ಲಗಾಮ್​' ಹಾಕ್ತಾರಂತೆ ರಿಯಲ್​ ಸ್ಟಾರ್​ ಉಪೇಂದ್ರ..

ಶೀರ್ಷಿಕೆಯಲ್ಲಿ ಪವಿತ್ರವಾದ 'ಬೈಬಲ್' ಹೆಸರನ್ನು ಬಳಸಿರುವುದಕ್ಕೆ ನಮ್ಮ ಆಕ್ಷೇಪವಿದೆ. ಇದರಿಂದ ಕ್ರಿಶ್ಚಿಯನ್‌ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಆಶೀಶ್ ಶಿಂಧೆ ಹೇಳಿದ್ದಾರೆ.

ಆದರೆ, ಈ ಬಗ್ಗೆ ಕರೀನಾ ಕಪೂರ್ ಹಾಗೂ ಪ್ರಕಾಶಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮುಂಬೈ: ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಬಾಲಿವುಡ್ ನಟಿ ಕರೀನಾ ಕಪೂರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಾಗಿದೆ. ತಮ್ಮ ಗರ್ಭಾವಸ್ಥೆಯಲ್ಲಿನ ದೈಹಿಕ ಮತ್ತು ಮಾನಸಿಕ ತೊಳಲಾಟಗಳ ಕುರಿತಾಗಿ ನಟಿ ಕರೀನಾ ಕಪೂರ್ ಪುಸ್ತಕ ಬರೆದಿದ್ದು, ಅದಕ್ಕೆ 'ಪ್ರಗ್ನೆನ್ಸಿ ಬೈಬಲ್' ಎಂದು ಹೆಸರಿಟ್ಟಿದ್ದರು.

'ಪ್ರಗ್ನೆನ್ಸಿ ಬೈಬಲ್' ಪುಸ್ತಕ ಕುರಿತು ಇತ್ತೀಚೆಗಷ್ಟೇ ಸೋಷಿಯಲ್ ಮೀಡಿಯಾದಲ್ಲಿ ಕರೀನಾ ಕಪೂರ್ ಮಾತನಾಡಿದ್ದರು. ಇದೀಗ ಇದೇ ವಿಚಾರದ ಕುರಿತಾಗಿ ಕ್ರಿಶ್ಚಿಯನ್ ಸಮುದಾಯ ಮಹಾರಾಷ್ಟ್ರದಲ್ಲಿ ದೂರು ನೀಡಿದೆ. 'ಪ್ರಗ್ನೆನ್ಸಿ ಬೈಬಲ್' ಬುಕ್ ಬರೆದ ಕರೀನಾ ಕಪೂರ್, ಅದಿತಿ ಶಾ ಭೀಮ್‌ಜಾನಿ ಹಾಗೂ ಪುಸ್ತಕವನ್ನು ಪಬ್ಲಿಶ್ ಮಾಡಿದ ಜಗ್ಗರ್‌ನಾಟ್ ಬುಕ್ಸ್ ವಿರುದ್ಧ ಶಿವಾಜಿನಗರ ಪೊಲೀಸ್ ಠಾಣೆಯಲ್ಲಿ ಆಲ್ಫಾ ಒಮೇಗಾ ಕ್ರಿಶ್ಚಿಯನ್ ಮಹಾಸಂಘದ ಅಧ್ಯಕ್ಷ ಆಶೀಶ್ ಶಿಂಧೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಕೆ ಮಾದೇಶ್‌ ನಿರ್ದೇಶನದಲ್ಲಿ ಭ್ರಷ್ಟಾಚಾರಕ್ಕೆ 'ಲಗಾಮ್​' ಹಾಕ್ತಾರಂತೆ ರಿಯಲ್​ ಸ್ಟಾರ್​ ಉಪೇಂದ್ರ..

ಶೀರ್ಷಿಕೆಯಲ್ಲಿ ಪವಿತ್ರವಾದ 'ಬೈಬಲ್' ಹೆಸರನ್ನು ಬಳಸಿರುವುದಕ್ಕೆ ನಮ್ಮ ಆಕ್ಷೇಪವಿದೆ. ಇದರಿಂದ ಕ್ರಿಶ್ಚಿಯನ್‌ರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತದೆ ಎಂದು ಆಶೀಶ್ ಶಿಂಧೆ ಹೇಳಿದ್ದಾರೆ.

ಆದರೆ, ಈ ಬಗ್ಗೆ ಕರೀನಾ ಕಪೂರ್ ಹಾಗೂ ಪ್ರಕಾಶಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.