ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಪರವಾಗಿ ನಟಿ ಪೂಜಾ ಬೇಡಿ ಬ್ಯಾಟ್ ಬೀಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಪೂಜಾ ಬೇಡಿ, "ಆರ್ಯನ್ ಖಾನ್ ಬಳಿ ಯಾವುದೇ ಮಾದಕ ವಸ್ತು ಪತ್ತೆಯಾಗದಿದ್ದರೂ ಕೂಡ ಮುಗ್ಧ ಮಗುವನ್ನು ಲಾಕಪ್ನಲ್ಲಿ ದಿನಗಳನ್ನು ಕಳೆಯುವಂತೆ ಮಾಡುವುದು ಸರಿಯೇ? ಯಾವುದೇ ಕಾರಣವಿಲ್ಲದೆ ಜೈಲಿಗೆ ನೂಕುವುದು ಮಾನಸಿಕವಾಗಿ ಹಾನಿಕಾರಕವಾಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾರೀ ಸುಧಾರಣೆ ಮಾಡುವ ಅಗತ್ಯವಿದೆ. ಇಂತಹ ವ್ಯವಸ್ಥೆಗಳು ಅಮಾಯಕರನ್ನು ಶಿಕ್ಷಿಸುವ ಮೂಲಕ ಅಪರಾಧಿಗಳನ್ನು ಸೃಷ್ಟಿಸುತ್ತವೆ" ಎಂದು ಹೇಳಿದ್ದಾರೆ.
-
If no drugs were found on #AryanKhan isn't it appalling that an innocent kid is made to spend days & days in lockup?
— Pooja Bedi (@poojabeditweets) October 16, 2021 " class="align-text-top noRightClick twitterSection" data="
Its psychologically damaging to be put in jail for no reason.
The judicial system needs a major revamp... such systems create criminals by punishing innocents.
">If no drugs were found on #AryanKhan isn't it appalling that an innocent kid is made to spend days & days in lockup?
— Pooja Bedi (@poojabeditweets) October 16, 2021
Its psychologically damaging to be put in jail for no reason.
The judicial system needs a major revamp... such systems create criminals by punishing innocents.If no drugs were found on #AryanKhan isn't it appalling that an innocent kid is made to spend days & days in lockup?
— Pooja Bedi (@poojabeditweets) October 16, 2021
Its psychologically damaging to be put in jail for no reason.
The judicial system needs a major revamp... such systems create criminals by punishing innocents.
ಇದನ್ನೂ ಓದಿ: ಜೈಲಿನಲ್ಲಿರುವ ಆರ್ಯನ್ ಖಾನ್ಗೆ ₹4,500 ಮನಿ ಆರ್ಡರ್, ಪೋಷಕರೊಂದಿಗೆ ವಿಡಿಯೋ ಕಾಲ್!
ಈ ಹಿಂದೆ, ಫರಾ ಖಾನ್, ಸ್ವರಾ ಭಾಸ್ಕರ್, ಸಯಾನಿ ಗುಪ್ತಾ, ಸುಸೇನ್ ಖಾನ್, ಸುನಿಲ್ ಶೆಟ್ಟಿ ಮತ್ತು ಹೃತಿಕ್ ರೋಷನ್ ಸೇರಿದಂತೆ ಇತರ ಬಾಲಿವುಡ್ ಸೆಲೆಬ್ರಿಟಿಗಳು ಆರ್ಯನ್ ಖಾನ್ನನ್ನು ಬೆಂಬಲಿಸಿದ್ದರು.
ಹಡಗಿನಲ್ಲಿ ರೇವ್ ಪಾರ್ಟಿ ಆಯೋಜನೆ ಮಾಡಿದ ಆರೋಪದಡಿ ಅಕ್ಟೋಬರ್ 2 ರಂದು ಪುತ್ರ ಆರ್ಯನ್ ಖಾನ್ ಸೇರಿದಂತೆ ಒಟ್ಟು 11 ಮಂದಿಯನ್ನು ಮಾದಕ ವಸ್ತು ನಿಯಂತ್ರಣ ದಳ (ಎನ್ಸಿಬಿ) ಬಂಧಿಸಿತ್ತು. ಆರ್ಯನ್ ಖಾನ್ ಸಲ್ಲಿಸಿದ್ದ ಜಾಮೀನು ಕೋರಿ ಅರ್ಜಿ ಆದೇಶ ತೀರ್ಪು ಅಕ್ಟೋಬರ್ 20ಕ್ಕೆ ಮುಂದೂಡಿಕೆಯಾಗಿದ್ದು, ಅಲ್ಲಿಯವರೆಗೂ ಆತ ಜೈಲಿನಲ್ಲೇ ಕಾಲ ಕಳೆಯಬೇಕಿದೆ.
ಇದನ್ನೂ ಓದಿ: ಆರ್ಯನ್ ಒಳ್ಳೆಯ ಹುಡುಗ; ಕಾಗೆ ಕೂರುವುದಕ್ಕೂ ಕೊಂಬೆ ಮುರಿಯುವುದಕ್ಕೂ ಸರಿಯಾದಂತಿದೆ ಎಂದ ಸುಸೇನ್ ಖಾನ್