ETV Bharat / science-and-technology

8 ವರ್ಷಗಳ ಕಾರ್ಯಾಚರಣೆ ಬಳಿಕ ಅಂತ್ಯ ಕಂಡ ಮಂಗಳಯಾನ: ಇಸ್ರೋ

author img

By

Published : Oct 4, 2022, 6:56 AM IST

ಅತಿ ಕಡಿಮೆ ವೆಚ್ಚದಲ್ಲಿ ನಿರ್ಮಿಸಿ ಉಡಾಯಿಸಲಾಗಿದ್ದ ಇಸ್ರೋದ ಮಹತ್ವಾಕಾಂಕ್ಷಿ ಮಂಗಳಯಾನ ಉಪಗ್ರಹ ಅಂತ್ಯ ಕಂಡಿದೆ. ಬ್ಯಾಟರಿ ದೃಢತೆ, ಇಂಧನ ಖಾಲಿಯಾಗಿದ್ದು ಅದು ಕಾರ್ಯಾಚರಣೆ ನಿಲ್ಲಿಸಿದೆ ಎಂದು ಇಸ್ರೋ ಅಧಿಕೃತವಾಗಿ ಘೋಷಿಸಿದೆ.

mangalyaan-reaches-end-of-life
ಅಂತ್ಯ ಕಂಡ ಮಂಗಳಯಾನ

ನವದೆಹಲಿ: ದೇಶದ ಚೊಚ್ಚಲ ಉಪಗ್ರಹ ಮಿಷನ್​ ಮಂಗಳಯಾನದ ಕಾರ್ಯಾಚರಣೆ ಕೊನೆಗೊಂಡಿದೆ. ಮಾರ್ಸ್​ ಆರ್ಬಿಟರ್​ ಮಿಷನ್​ ಮಂಗಳ ಗ್ರಹದ ಪರಿಭ್ರಮಣೆ ಆರಂಭಿಸಿದ 8 ವರ್ಷಗಳ ತರುವಾಯ ಅದರ ಬ್ಯಾಟರಿ ದೃಢತೆ, ಇಂಧನ ಖಾಲಿಯಾಗಿದ್ದು ಕಾರ್ಯಾಚರಣೆ ನಿಲ್ಲಿಸಿದೆ ಎಂದು ಇಸ್ರೋ ತಿಳಿಸಿದೆ.

ಮಂಗಳ ಗ್ರಹದ ಅಂಗಳದ ಅಧ್ಯಯನಕ್ಕಾಗಿ 2013 ರಲ್ಲಿ ಉಡಾವಣೆ ಮಾಡಲಾದ ಮಾರ್ಸ್​ ಆರ್ಬಿಟರ್​ ಉಪಗ್ರಹ ತನ್ನ ಕೆಲಸವನ್ನು ನಿಲ್ಲಿಸಿದೆ. ಮತ್ತೆ ಅದನ್ನು ಮರಳಿ ಸ್ಥಾಪಿಸಲಾಗದು ಎಂದು ಇಸ್ರೋ ಅಧಿಕೃತ ಪ್ರಕಟಣೆ ತಿಳಿಸಿದೆ.

ಮಾರ್ಸ್ ಆರ್ಬಿಟರ್ ಮಿಷನ್ ಸೆಪ್ಟೆಂಬರ್ 27 ರಂದು ಮಂಗಳನ ಕಕ್ಷೆಯಲ್ಲಿ 8 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥವಾಗಿ ಇಸ್ರೋ "ಒಂದು ದಿನದ ರಾಷ್ಟ್ರೀಯ ಸಭೆ"ಯನ್ನು ಆಯೋಜಿಸಿತ್ತು. ಸಭೆಯಲ್ಲಿ ಇಂಧನ ಖಾಲಿಯಾಗಿದ್ದು, ಬ್ಯಾಟರಿಯಲ್ಲಿ ವಿದ್ಯುತ್​ ಉತ್ಪಾದನೆ ದೃಢತೆ ಮುಗಿದ ಬಗ್ಗೆಯೂ ಪ್ರಸ್ತಾಪವಾಗಿತ್ತು.

ಮಂಗಳಯಾನ ಬಾಹ್ಯಾಕಾಶ ನೌಕೆ ಮತ್ತೆ ಪುನಃ ಸ್ಥಾಪಿಸಲು ಸಾಧ್ಯವಿಲ್ಲ. ಅದು ಅಂತ್ಯವನ್ನು ತಲುಪಿದೆ. ಈ ಮಿಷನ್ ಮಂಗಳಗ್ರಹದ ಪರಿಶೋಧನೆಯಲ್ಲಿ ಗಮನಾರ್ಹವಾದ ತಾಂತ್ರಿಕ ಮತ್ತು ವೈಜ್ಞಾನಿಕ ಸಾಧನೆ ಮಾಡಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಉಡಾವಣೆ ಆಗಿದ್ದು ಯಾವಾಗ: ಮಂಗಳನ ರಹಸ್ಯವನ್ನು ಬೇಧಿಸಲು ರೂಪಿಸಿದ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಮಾರ್ಸ್​ ಆರ್ಬಿಟರ್​ ಅನ್ನು ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಜೀವ ತಳೆದಿತ್ತು. 2013 ರ ನವೆಂಬರ್​ 5 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್​ಎಲ್​ವಿ ರಾಕೆಟ್​ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. 2014 ರ ಸೆಪ್ಟೆಂಬರ್​ 24 ರಂದು ಅದು ಮಂಗಳನ ಕಕ್ಷೆ ಸೇರಿತ್ತು.

ಮೊದಲು ಈ ಉಪಗ್ರಹವನ್ನು 6 ತಿಂಗಳ ಅವಧಿಗೆ ಕಾರ್ಯಾಚರಣೆ ನಡೆಸುವ ಗುರಿ ಹೊಂದಲಾಗಿತ್ತು. ಬಳಿಕ ಅದು 8 ವರ್ಷಗಳ ಕಾಲ ಮಂಗಳನ ಕಕ್ಷೆ ಸುತ್ತಿ ಹಲವು ಸಂಶೋಧನೆ ನಡೆಸಿದೆ. ಮಂಗಳ ಗ್ರಹದ ವಾತಾವರಣ, ಅದರ ಮೇಲ್ಮೈ ಲಕ್ಷಣ, ಅಲ್ಲಿರಬಹುದಾದ ಸೂಕ್ಷ್ಮ ಜೀವಕಣಗಳ ಅಧ್ಯಯನ ಸೇರಿದಂತೆ ಮತ್ತಿತರ ಮಹತ್ತರ ಮಾಹಿತಿಯನ್ನು ಕಲೆ ಹಾಕಿತ್ತು.

ಓದಿ: Nobel Prize for Medicine: ಸ್ವಾಂಟೆ ಪಾಬೊಗೆ ನೊಬೆಲ್​ ಪ್ರಶಸ್ತಿ

ನವದೆಹಲಿ: ದೇಶದ ಚೊಚ್ಚಲ ಉಪಗ್ರಹ ಮಿಷನ್​ ಮಂಗಳಯಾನದ ಕಾರ್ಯಾಚರಣೆ ಕೊನೆಗೊಂಡಿದೆ. ಮಾರ್ಸ್​ ಆರ್ಬಿಟರ್​ ಮಿಷನ್​ ಮಂಗಳ ಗ್ರಹದ ಪರಿಭ್ರಮಣೆ ಆರಂಭಿಸಿದ 8 ವರ್ಷಗಳ ತರುವಾಯ ಅದರ ಬ್ಯಾಟರಿ ದೃಢತೆ, ಇಂಧನ ಖಾಲಿಯಾಗಿದ್ದು ಕಾರ್ಯಾಚರಣೆ ನಿಲ್ಲಿಸಿದೆ ಎಂದು ಇಸ್ರೋ ತಿಳಿಸಿದೆ.

ಮಂಗಳ ಗ್ರಹದ ಅಂಗಳದ ಅಧ್ಯಯನಕ್ಕಾಗಿ 2013 ರಲ್ಲಿ ಉಡಾವಣೆ ಮಾಡಲಾದ ಮಾರ್ಸ್​ ಆರ್ಬಿಟರ್​ ಉಪಗ್ರಹ ತನ್ನ ಕೆಲಸವನ್ನು ನಿಲ್ಲಿಸಿದೆ. ಮತ್ತೆ ಅದನ್ನು ಮರಳಿ ಸ್ಥಾಪಿಸಲಾಗದು ಎಂದು ಇಸ್ರೋ ಅಧಿಕೃತ ಪ್ರಕಟಣೆ ತಿಳಿಸಿದೆ.

ಮಾರ್ಸ್ ಆರ್ಬಿಟರ್ ಮಿಷನ್ ಸೆಪ್ಟೆಂಬರ್ 27 ರಂದು ಮಂಗಳನ ಕಕ್ಷೆಯಲ್ಲಿ 8 ವರ್ಷಗಳನ್ನು ಪೂರೈಸಿದ ಸ್ಮರಣಾರ್ಥವಾಗಿ ಇಸ್ರೋ "ಒಂದು ದಿನದ ರಾಷ್ಟ್ರೀಯ ಸಭೆ"ಯನ್ನು ಆಯೋಜಿಸಿತ್ತು. ಸಭೆಯಲ್ಲಿ ಇಂಧನ ಖಾಲಿಯಾಗಿದ್ದು, ಬ್ಯಾಟರಿಯಲ್ಲಿ ವಿದ್ಯುತ್​ ಉತ್ಪಾದನೆ ದೃಢತೆ ಮುಗಿದ ಬಗ್ಗೆಯೂ ಪ್ರಸ್ತಾಪವಾಗಿತ್ತು.

ಮಂಗಳಯಾನ ಬಾಹ್ಯಾಕಾಶ ನೌಕೆ ಮತ್ತೆ ಪುನಃ ಸ್ಥಾಪಿಸಲು ಸಾಧ್ಯವಿಲ್ಲ. ಅದು ಅಂತ್ಯವನ್ನು ತಲುಪಿದೆ. ಈ ಮಿಷನ್ ಮಂಗಳಗ್ರಹದ ಪರಿಶೋಧನೆಯಲ್ಲಿ ಗಮನಾರ್ಹವಾದ ತಾಂತ್ರಿಕ ಮತ್ತು ವೈಜ್ಞಾನಿಕ ಸಾಧನೆ ಮಾಡಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.

ಉಡಾವಣೆ ಆಗಿದ್ದು ಯಾವಾಗ: ಮಂಗಳನ ರಹಸ್ಯವನ್ನು ಬೇಧಿಸಲು ರೂಪಿಸಿದ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಮಾರ್ಸ್​ ಆರ್ಬಿಟರ್​ ಅನ್ನು ಸುಮಾರು 450 ಕೋಟಿ ರೂಪಾಯಿ ವೆಚ್ಚದಲ್ಲಿ ಜೀವ ತಳೆದಿತ್ತು. 2013 ರ ನವೆಂಬರ್​ 5 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಪಿಎಸ್​ಎಲ್​ವಿ ರಾಕೆಟ್​ ಮೂಲಕ ಉಪಗ್ರಹವನ್ನು ಉಡಾವಣೆ ಮಾಡಲಾಯಿತು. 2014 ರ ಸೆಪ್ಟೆಂಬರ್​ 24 ರಂದು ಅದು ಮಂಗಳನ ಕಕ್ಷೆ ಸೇರಿತ್ತು.

ಮೊದಲು ಈ ಉಪಗ್ರಹವನ್ನು 6 ತಿಂಗಳ ಅವಧಿಗೆ ಕಾರ್ಯಾಚರಣೆ ನಡೆಸುವ ಗುರಿ ಹೊಂದಲಾಗಿತ್ತು. ಬಳಿಕ ಅದು 8 ವರ್ಷಗಳ ಕಾಲ ಮಂಗಳನ ಕಕ್ಷೆ ಸುತ್ತಿ ಹಲವು ಸಂಶೋಧನೆ ನಡೆಸಿದೆ. ಮಂಗಳ ಗ್ರಹದ ವಾತಾವರಣ, ಅದರ ಮೇಲ್ಮೈ ಲಕ್ಷಣ, ಅಲ್ಲಿರಬಹುದಾದ ಸೂಕ್ಷ್ಮ ಜೀವಕಣಗಳ ಅಧ್ಯಯನ ಸೇರಿದಂತೆ ಮತ್ತಿತರ ಮಹತ್ತರ ಮಾಹಿತಿಯನ್ನು ಕಲೆ ಹಾಕಿತ್ತು.

ಓದಿ: Nobel Prize for Medicine: ಸ್ವಾಂಟೆ ಪಾಬೊಗೆ ನೊಬೆಲ್​ ಪ್ರಶಸ್ತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.