ETV Bharat / jagte-raho

ಡ್ರಾಪ್‌ ನೆಪದಲ್ಲಿ ಟೆಕ್ಕಿಗೆ ಚಾಕುವಿನಿಂದ ಇರಿದು ಹಲ್ಲೆ: ನಗದು-ಚಿನ್ನಾಭರಣ ಕಿತ್ತುಕೊಂಡು ಖದೀಮರು ಪರಾರಿ

author img

By

Published : Jan 14, 2020, 6:58 AM IST

ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಡ್ರಾಪ್‌ ಕೊಡುವ ನೆಪದಲ್ಲಿ ಟೆಕ್ಕಿ ಮೇಲೆ ಹಲ್ಲೆ ನಡೆಸಿದ ಖದೀಮರು, ನಗದು-ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

Cash grabbers escaped
ಡ್ರಾಪ್‌ ನೆಪದಲ್ಲಿ ಟೆಕ್ಕಿಗೆ ಚಾಕುವಿನಿಂದ ಹಲ್ಲೆ

ಮೈಸೂರು: ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಡ್ರಾಪ್‌ ಕೊಡುವ ನೆಪದಲ್ಲಿ ಟೆಕ್ಕಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಖದೀಮರು, ನಗದು-ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮೈಸೂರಿನ ಗೌರಿ ಶಂಕರದ ನಿವಾಸಿ ಮಧು ವಿಕಾಸ್ (34) ಹಲ್ಲೆಗೊಳಗಾದವರು. ಮೈಸೂರಿನಿಂದ ಬೆಂಗಳೂರಿಗೆ ತೆರಳಲು ಸೋಮವಾರ ಬೆಳಗ್ಗೆ 5ಗಂಟೆಗೆ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಬಿಳಿ ಬಣ್ಣದ ಕಾರೊಂದು ನಿಲ್ದಾಣದ ಹೊರಗೆ ನಿಲ್ಲಿಸಿಕೊಂಡಿದ್ದ ವ್ಯಕ್ತಿಯೊಬ್ಬ ಬೆಂಗಳೂರು..ಬೆಂಗಳೂರು ಎಂದು ಕೂಗಿದ್ದಾನೆ. ಬೆಂಗಳೂರು ಬೇಗ ತಲುಪಬಹುದು ಎಂದು ವಿಕಾಸ್ ಕಾರು ಹತ್ತಿದ್ದಾರೆ.

ಕಾರಿನಲ್ಲಿ ಚಾಲಕನೊಂದಿಗೆ ಮತ್ತಿಬ್ಬರಿದ್ದರು. ವಿಕಾಸ್ ಕಾರಿನಲ್ಲಿ ಕುಳಿತ ಕೂಡಲೇ ಬೆಂಗಳೂರಿನತ್ತ ಚಾಲಕ ತೆರಳಿದರು. ರಿಂಗ್ ರಸ್ತೆಯ ಕೊಲಂಬಿಯಾ ಆಸ್ಪತ್ರೆ ಸಮೀಪ ಬರುತ್ತಿದ್ದಂತೆ ಕಾರನ್ನು ಕೆ.ಆರ್.ರಸ್ತೆ ಕಡೆಗೆ ತಿರುಗಿಸಿದ್ದ. ಈ ಕಡೆ ಕಾರು ಏಕೆ ತೆರಳುತ್ತಿದ್ದಿಯಾ ಎಂದು ವಿಕಾಸ್​​​ ಪ್ರಶ್ನಿಸಿದ.

ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ, ವಿಕಾಸ್‌ ಕುತ್ತಿಗೆ ಹಿಡಿದುಕೊಂಡು 5 ಗ್ರಾಂ. ಚಿನ್ನದ ಉಂಗುರ ಮತ್ತು 10 ಗ್ರಾಂ. ಚಿನ್ನದ ಸರ ಕಿತ್ತುಕೊಂಡ. ಬಳಿಕ ಪರ್ಸ್ ಕಿತ್ತುಕೊಂಡು ಎಟಿಎಂ ಕಾರ್ಡ್‌ ಪಡೆದು ಪಿನ್‌ಕೋಡ್ ಹೇಳುವಂತೆ ಬೆದರಿಸಿದ್ದಾನೆ. ವಿಕಾಸ್ ಪಿನ್‌ಕೋಡ್ ಹೇಳದ ಕಾರಣ ಚಾಕುವಿನಿಂದ ತೊಡೆಗೆ ಇರಿದಿದ್ದಾರೆ.

ಗಾಬರಿಗೊಂಡ ವಿಕಾಸ್, ತಕ್ಷಣ ಪಿನ್‌ಕೋಡ್ ಹೇಳಿದ್ದಾನೆ. ಅಲ್ಲಿಂದ ಒಂಟಿಕೊಪ್ಪಿನ ಎಂಟಿಎಂನಲ್ಲಿ ₹ 20 ಸಾವಿರ ಹಾಗೂ ಅಶೋಕ್​ ರಸ್ತೆಯಲ್ಲಿರುವ ಎಟಿಎಂನಲ್ಲಿ ₹ 22 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ವಿಕಾಸ್‌ನನ್ನು ಕೆ.ಆರ್.ಆಸ್ಪತ್ರೆಯ ಎದುರು ಕಾರಿನಿಂದ ಹೊರ ತಳ್ಳಿ ಪರಾರಿಯಾಗಿದ್ದಾರೆ.

ವಿಕಾಸ್​ ನೀಡಿದ ದೂರನ್ನು ಪ್ರಕರಣ ದಾಖಲಿಸಿಕೊಂಡ ಲಷ್ಕರ್​​ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಬಳಿಕ ಪೊಲೀಸರು ಗಾಯಗೊಂಡಿದ್ದ ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.

ಮೈಸೂರು: ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿ ಡ್ರಾಪ್‌ ಕೊಡುವ ನೆಪದಲ್ಲಿ ಟೆಕ್ಕಿಗೆ ಚಾಕುವಿನಿಂದ ಹಲ್ಲೆ ನಡೆಸಿದ ಖದೀಮರು, ನಗದು-ಚಿನ್ನಾಭರಣ ಕಿತ್ತುಕೊಂಡು ಪರಾರಿಯಾಗಿದ್ದಾರೆ.

ಮೈಸೂರಿನ ಗೌರಿ ಶಂಕರದ ನಿವಾಸಿ ಮಧು ವಿಕಾಸ್ (34) ಹಲ್ಲೆಗೊಳಗಾದವರು. ಮೈಸೂರಿನಿಂದ ಬೆಂಗಳೂರಿಗೆ ತೆರಳಲು ಸೋಮವಾರ ಬೆಳಗ್ಗೆ 5ಗಂಟೆಗೆ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಬಿಳಿ ಬಣ್ಣದ ಕಾರೊಂದು ನಿಲ್ದಾಣದ ಹೊರಗೆ ನಿಲ್ಲಿಸಿಕೊಂಡಿದ್ದ ವ್ಯಕ್ತಿಯೊಬ್ಬ ಬೆಂಗಳೂರು..ಬೆಂಗಳೂರು ಎಂದು ಕೂಗಿದ್ದಾನೆ. ಬೆಂಗಳೂರು ಬೇಗ ತಲುಪಬಹುದು ಎಂದು ವಿಕಾಸ್ ಕಾರು ಹತ್ತಿದ್ದಾರೆ.

ಕಾರಿನಲ್ಲಿ ಚಾಲಕನೊಂದಿಗೆ ಮತ್ತಿಬ್ಬರಿದ್ದರು. ವಿಕಾಸ್ ಕಾರಿನಲ್ಲಿ ಕುಳಿತ ಕೂಡಲೇ ಬೆಂಗಳೂರಿನತ್ತ ಚಾಲಕ ತೆರಳಿದರು. ರಿಂಗ್ ರಸ್ತೆಯ ಕೊಲಂಬಿಯಾ ಆಸ್ಪತ್ರೆ ಸಮೀಪ ಬರುತ್ತಿದ್ದಂತೆ ಕಾರನ್ನು ಕೆ.ಆರ್.ರಸ್ತೆ ಕಡೆಗೆ ತಿರುಗಿಸಿದ್ದ. ಈ ಕಡೆ ಕಾರು ಏಕೆ ತೆರಳುತ್ತಿದ್ದಿಯಾ ಎಂದು ವಿಕಾಸ್​​​ ಪ್ರಶ್ನಿಸಿದ.

ಪಕ್ಕದಲ್ಲಿ ಕುಳಿತಿದ್ದ ಮತ್ತೊಬ್ಬ, ವಿಕಾಸ್‌ ಕುತ್ತಿಗೆ ಹಿಡಿದುಕೊಂಡು 5 ಗ್ರಾಂ. ಚಿನ್ನದ ಉಂಗುರ ಮತ್ತು 10 ಗ್ರಾಂ. ಚಿನ್ನದ ಸರ ಕಿತ್ತುಕೊಂಡ. ಬಳಿಕ ಪರ್ಸ್ ಕಿತ್ತುಕೊಂಡು ಎಟಿಎಂ ಕಾರ್ಡ್‌ ಪಡೆದು ಪಿನ್‌ಕೋಡ್ ಹೇಳುವಂತೆ ಬೆದರಿಸಿದ್ದಾನೆ. ವಿಕಾಸ್ ಪಿನ್‌ಕೋಡ್ ಹೇಳದ ಕಾರಣ ಚಾಕುವಿನಿಂದ ತೊಡೆಗೆ ಇರಿದಿದ್ದಾರೆ.

ಗಾಬರಿಗೊಂಡ ವಿಕಾಸ್, ತಕ್ಷಣ ಪಿನ್‌ಕೋಡ್ ಹೇಳಿದ್ದಾನೆ. ಅಲ್ಲಿಂದ ಒಂಟಿಕೊಪ್ಪಿನ ಎಂಟಿಎಂನಲ್ಲಿ ₹ 20 ಸಾವಿರ ಹಾಗೂ ಅಶೋಕ್​ ರಸ್ತೆಯಲ್ಲಿರುವ ಎಟಿಎಂನಲ್ಲಿ ₹ 22 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ವಿಕಾಸ್‌ನನ್ನು ಕೆ.ಆರ್.ಆಸ್ಪತ್ರೆಯ ಎದುರು ಕಾರಿನಿಂದ ಹೊರ ತಳ್ಳಿ ಪರಾರಿಯಾಗಿದ್ದಾರೆ.

ವಿಕಾಸ್​ ನೀಡಿದ ದೂರನ್ನು ಪ್ರಕರಣ ದಾಖಲಿಸಿಕೊಂಡ ಲಷ್ಕರ್​​ ಠಾಣೆ ಪೊಲೀಸರು, ತನಿಖೆ ಕೈಗೊಂಡಿದ್ದಾರೆ. ಬಳಿಕ ಪೊಲೀಸರು ಗಾಯಗೊಂಡಿದ್ದ ಆತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಿದ್ದಾರೆ.

Intro:ಕ್ರೈಮ್Body:ಮೈಸೂರು: ಡ್ರಾಪ್‌ಕೊಡುವ ನೆಪದಲ್ಲಿ ಟೆಕ್ಕೆ ಮೇಲೆ ಹಲ್ಲೆ ನಡೆಸಿ, ನಗದು, ಚಿನ್ನಾಭರಣ ದೋಚಿರುವ ಘಟನೆ ನಗರದಲ್ಲಿ ನಡೆದಿದೆ.
ಮೈಸೂರಿನ ಗೌರಿ ಶಂಕರದ ನಿವಾಸಿ ಮಧು ವಿಕಾಸ್(೩೪) ಹಣ,ಚಿನ್ನಾಭರಣ ಕಳೆದುಕೊಂಡವರು. ಸೋಮವಾರ ಬೆಳಗ್ಗೆ  ೫ರ ಮೈಸೂರಿನಿಂದ ಬೆಂಗಳೂರಿಗೆ ತೆರಳಲು ಮೈಸೂರಿನ ಸಾರಿಗೆ ಗ್ರಾಮಾಂತರ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ  ಬಿಳಿ ಬಣ್ಣದ ಕಾರನ್ನು ನಿಲ್ದಾಣದ ಹೊರಗೆ ನಿಲ್ಲಿಸಿಕೊಂಡಿದ್ದ ವ್ಯಕ್ಯಿಯೊಬ್ಬ, ಬೆಂಗಳೂರು ಎಂದು  ಕೂಗಿಕೊಂಡಿದ್ದಾರೆ. ಬೆಂಗಳೂರಿಗೆ ಬೇಗ ತಲುಪಬಹುದು ಎಂದು ಕಾರನ್ನು ಮಧು ವಿಕಾಸ್ ಹತ್ತಿದ್ದಾರೆ.
ಆದರೆ ಕಾರಿನಲ್ಲಿ ಆಗಲೇ ಚಾಲಕನೊಂದಿಗೆ ಮತ್ತಿಬ್ಬರು ಇದ್ದರು.  ಮಧು ವಿಕಾಸ್ ಕಾರಿನಲ್ಲಿ ಕುಳಿತ ಕೂಡಲೇ ಬೆಂಗಳೂರಿನತ್ತ ತೆರಳಿದ ಕಾರು ಚಾಲಕ, ರಿಂಗ್ ರಸ್ತೆಯ ಕೊಲಂಬಿಯಾ ಆಸ್ಪತ್ರೆ ಬಳಿ ಬರುತ್ತಿದ್ದಂತೆ ಕಾರನ್ನು ಎಡಕ್ಕೆ ಕೆ.ಆರ್. ರಸ್ತೆ ಕಡೆ ತಿರುಗಿಸಿದ್ದಾನೆ. ಇದನ್ನು ಗಮನಿಸಿದ ಮಧು ವಿಕಾಸ್, ಈ ಕಡೆ ಕಾರು ಏಕೆ ತೆರಳುತ್ತಿದೆ ಎಂದು ಪ್ರಶ್ನಿಸುತ್ತಿದ್ದಂತೆ ಪಕ್ಕದಲ್ಲಿ ಕುಳಿತಿದ್ದ ದುಷ್ಕರ್ಮಿ, ಮಧುವಿಕಾಸ್‌ನ ಕುತ್ತಿಗೆಯನ್ನು ಹಿಡಿದುಕೊಂಡಿದ್ದು, ಕೈಯಲ್ಲಿದ್ದ ಐದು ಗ್ರಾಂ ಚಿನ್ನದ ಉಂಗುರ ಮತ್ತು ಕತ್ತಿನಲ್ಲಿದ್ದ ೧೦ ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ.  ಬಳಿಕ ಪರ್ಸ್ ಅನ್ನು ಕಿತ್ತುಕೊಂಡು ಪರ್ಸ್‌ನಲ್ಲಿನ ಎಟಿಎಂ ಕಾರ್ಡ್‌ಗಳನ್ನು ಎತ್ತಿಕೊಂಡು ಪಿನ್‌ಕೋಡ್ ಹೇಳುವಂತೆ  ಬೆದರಿಕೆ ಹಾಕಿದ್ದಾರೆ. ಆಗ ಮಧುವಿಕಾಸ್ ಪಿನ್‌ಕೋಡ್ ಹೇಳದೇ ಇದ್ದುದ್ದಕ್ಕೆ ಚಾಕುವಿನಿಂದ ತೊಡೆಗೆ ಇರಿದಿದ್ದಾರೆ. ಇದರಿಂದ ಗಾಬರಿಗೊಂಡ ಮಧು ವಿಕಾಸ್, ತಕ್ಷಣ ಪಿನ್‌ಕೋಡ್ ಹೇಳಿದ್ದಾನೆ. ಅಲ್ಲಿಂದ ಒಂಟಿ ಕೊಪ್ಪಿನಲ್ಲಿರುವ ಎಂಟಿಎಂ ಕೇಂದ್ರಕ್ಕೆ ತೆರಳಿದ ಖದೀಮರು, ಅಲ್ಲಿ ೨೦ ಸಾವಿರ ರೂ. ಡ್ರಾ ಮಾಡಿದ್ದಾರೆ. ಮತ್ತೆ ಅಶೋಕ ರಸ್ತೆಯಲ್ಲಿ ನ ಮತ್ತೊಂದು ಎಟಿಎಂ ಕೇಂದ್ರದಲ್ಲಿ  ೨೨ ಸಾವಿರ ರೂ. ಹಣ ಡ್ರಾ ಮಾಡಿಕೊಂಡಿದ್ದಾರೆ. ಬಳಿಕ ಮಧು ವಿಕಾಸ್‌ನನ್ನು  ಕೆ.ಆರ್. ಆಸ್ಪತ್ರೆಯ ಎದುರು ಕಾರಿನಿಂದ ಹೊರ ತಳ್ಳಿ ಪರಾರಿಯಾಗಿದ್ದಾರೆ.
ಘಟನೆಯಿಂದ ಗಾಬರಿಗೊಂಡ ಮಧು ವಿಕಾಸ್ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ.  ಸ್ಥಳಕ್ಕಾಗಮಿಸಿದ ಪೊಲೀಸರು ಮಧು ವಿಕಾಸ್‌ನನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.   ಗಾಯಾಳು ನೀಡಿದ ದೂರಿನ ಮೇರೆಗೆ ಲಷ್ಕರ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ
 
 
Conclusion:ಕ್ರೈಮ್
ETV Bharat Logo

Copyright © 2024 Ushodaya Enterprises Pvt. Ltd., All Rights Reserved.