ಚಿತ್ರದುರ್ಗ: ನಗರದ ಹೊರವಲಯದ ಕ್ಯಾದಿಗೆರೆ ಬಳಿ ತಡರಾತ್ರಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾರೆ. ಆದರೆ, ಇದು ಅಪಘಾತವಲ್ಲ ಕೊಲೆ ಎಂದು ಮೃತನ ಕುಟುಂಬ ಗಂಭೀರ ಆರೋಪ ಮಾಡಿದೆ.
ಅಲ್ಪಸಂಖ್ಯಾತ ಇಲಾಖೆಯ ಕಾರು ಚಾಲಕ ಉಮೇಶ್ ಮೃತ ವ್ಯಕ್ತಿ.
![Minority Department car driver killed in an accident](https://etvbharatimages.akamaized.net/etvbharat/prod-images/kn-ctd-04-12-accident-aroopa-av-7204336_12022020153541_1202f_1581501941_294.jpg)
ಕಳೆದಿನ ರಾತ್ರಿ ಊಟಕ್ಕೆಂದು ಹೋರಗೆ ಹೋಗಿದ್ದ ಉಮೇಶ್ನಿಗೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೋಲಿಸರು ತನಿಖೆ ನಡೆಸುತ್ತಿದ್ದಾರೆ.