ETV Bharat / jagte-raho

ಸಂಸಾರಕ್ಕೆ ಪತಿ ಕರೆದ್ರೇ ಹೋಗದ ಪತ್ನಿ... ಪ್ರೀತಿಸಿ ಮದ್ವೆ ಆದವಳ ರುಂಡ ಚೆಂಡಾಡಿದ ಗಂಡ!

author img

By

Published : Jun 19, 2019, 4:43 PM IST

Updated : Jun 19, 2019, 5:15 PM IST

ಆಕೆಯನ್ನು ಲವ್​ ಮಾಡಿ ಮದುವೆಯಾದ. ಇಬ್ಬರು ಐದು ವರ್ಷ ಅನ್ಯೋನ್ಯತೆಯಿಂದ ಜೀವನ ನಡೆಸಿದ್ರು. ಇವರ ಪ್ರೀತಿಗೆ ಸಾಕ್ಷಿಯೆಂಬಂತೆ ಇಬ್ಬರು ಮಕ್ಕಳು ಸಹ ಇದ್ದಾರೆ. ಸಂಸಾರ ಅಂದ್ಮೇಲೆ ಗಂಡ-ಹೆಂಡ್ತಿರ ಮಧ್ಯೆ ಜಗಳವಾಗುವುದು ಕಾಮನ್​. ಆದ್ರೆ ಗಂಡನಿಗೆ ಏನಾಯ್ತೋ ಏನೋ ಗೊತ್ತಿಲ್ಲ. ಹೆಂಡ್ತಿಯ ರುಂಡವನ್ನೇ ಚೆಂಡಾಡಿ ಪೊಲೀಸರಿಗೆ ಶರಣಾಗಿದ್ದಾನೆ.

ಪ್ರೀತಿಸಿ ಮದ್ವೆ ಆದವಳ ರುಂಡ ಚೆಂಡಾಡಿದ ಗಂಡ

ಈ ಘಟನೆ ನಡೆದಿದ್ದು ಬೇರೆ ಎಲ್ಲೂ ಅಲ್ಲ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಲಕಡ ತಾಲೂಕಿನಲ್ಲಿ. ಕಡಪ ಜಿಲ್ಲೆಯ ದೇವಪಟ್ಲ ಗ್ರಾಮದ ಹುಸೇನ್​ ನಾಯಕ ಲಾರಿ ಡ್ರೈವರ್​. ಚಿತ್ತೂರು ಜಿಲ್ಲೆಯ ಗುರ್ರಂಕೊಂಡ ತಾಲೂಕಿನ ಅಮ್ಮಾಜಿಯನ್ನು ಐದು ವರ್ಷದ ಹಿಂದೆ ಹುಸೇನ್​ ಲವ್​ ಮಾಡಿ ಮದುವೆ ಆಗಿದ್ದ. ಇವರ ಪ್ರೀತಿಗೆ ಸಾಕ್ಷಿಯೆಂಬಂತೆ ಇಬ್ಬರು ಮಕ್ಕಳೂ ಇವೆ.

ಗಂಡ, ಹೆಂಡ್ತಿ ಅಂದ್ಮೇಲೆ ಜಗಳ ಸಹಜ. ಹೀಗೆ ಇಬ್ಬರು ಜಗಳವಾಡಿದ್ದಾರೆ. ಕಿತ್ತಾಟದ ಬಳಿಕ ಅಮ್ಮಾಜಿ ತವರು ಮನೆಗೆ ಹೋಗಿದ್ದಾಳೆ. ಇನ್ನು ಹುಸೇನ್​ ಕೋಪ ತಣ್ಣಗಾಗಿದೆ. ಹುಸೇನ್​ ನಾಯಕ​ ನೇರ ಅತ್ತೆ-ಮಾವನ ಮನೆಗೆ ತೆರಳಿ ಅಮ್ಮಾಜಿಯನ್ನು ಕರೆದಿದ್ದಾನೆ. ಅಮ್ಮಾಜಿ ಇದಕ್ಕೆ ನಿರಾಕರಿಸಿದ್ದಾಳೆ. ಹುಸೇನ್​ ಆಗಾಗ ಅಮ್ಮಾಜಿ ನೋಡಲು ಅತ್ತೆ-ಮಾವನ ಮನೆಗೆ ಹೋಗಿ ಬರುತ್ತಿದ್ದ.

ಪ್ರೀತಿಸಿ ಮದ್ವೆ ಆದವಳ ರುಂಡ ಚೆಂಡಾಡಿದ ಗಂಡ

ಇನ್ನು ಅಮ್ಮಾಜಿ ಜೀವನಕ್ಕಾಗಿ ಆಶಾ ಕಾರ್ಯಕರ್ತೆಯಾಗಿ ಕೆಲಸಕ್ಕೆ ಸೇರಿಕೊಂಡಳು. ಡ್ರೈವರ್​ ಹುಸೇನ್​ ಸಹ ದುಡಿದ ಹಣವೆಲ್ಲ ಹೆಂಡ್ತಿ ಅಮ್ಮಾಜಿಗೆ ನೀಡುತ್ತಿದ್ದ. ಬಳಿಕ ಸಾಕಷ್ಟು ಬಾರಿ ಅಮ್ಮಾಜಿಯನ್ನು ಸಂಸಾರ ನಡೆಸಲು ಹುಸೇನ್​ ಕರೆದಿದ್ದ. ಆದ್ರೆ ಆಕೆ ತವರು ಮನೆ ಬಿಟ್ಟು ಬರಲು ಪದೇ ಪದೆ ನಿರಾಕರಿಸುತ್ತಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡಿದ್ದ ಹುಸೇನ್.

ಬಳಿಕ ಸಂಸಾರ ನಡೆಸಲು ಹಿಂದೇಟು ಹಾಕುತ್ತಿದ್ದ ಪತ್ನಿ ಅಮ್ಮಾಜಿ ಮೇಲೆ ಹುಸೇನ್​ ಅನುಮಾನ ಪಡಲು ಶುರು ಮಾಡಿದ. ಹೆಂಡ್ತಿ ಮೇಲೆ ಕೋಪಗೊಂಡಿದ್ದ ಹುಸೇನ್​ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ. ‘ಮನೆಯಲ್ಲಿ ಹಣವಿದೆ... ತೆಗೆದುಕೊಂಡು ಬರೋಣ ಬಾ...’ ಎಂದು ಅಮ್ಮಾಜಿಯನ್ನು ಪ್ರೀತಿಯಿಂದ ಬೈಕ್​ ಮೇಲೆ ಕರೆದುಕೊಂಡು ಹೋಗಿದ್ದ ಹುಸೇನ್​.

ಸ್ವಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆದಲ್ಲೇ ಅಮ್ಮಾಜಿಯನ್ನು ಕೆಳಗಿಳಿಸಿದ್ದ ಹುಸೇನ್​. ಯಾರು ಇಲ್ಲದ ಸಮಯ ನೋಡಿ​ ತನ್ನ ಬಳಿ ತಂದಿದ್ದ ಕೊಡಲಿಯನ್ನು ಹೊರ ತೆಗೆದಿದ್ದಾನೆ. ಬಳಿಕ ಅಮ್ಮಾಜಿ ರುಂಡವನ್ನು ಕತ್ತರಿಸಿ ಪ್ಲಾಸ್ಟಿಕ್​ ಕವರ್​ನಲ್ಲಿ ತುಂಬಿ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.

etv bharat, husband kill, wife, Andhra Pradesh,
ಪ್ರೀತಿಸಿ ಮದ್ವೆ ಆದವಳ ರುಂಡ ಚೆಂಡಾಡಿದ ಗಂಡ

ಕೇವಲ ಹೆಂಡ್ತಿ ಸಂಸಾರ ನಡೆಸಲು ಜೊತೆಗೆ ಬರಲಿಲ್ಲವೆಂದು ಗಂಡ ಆಕೆಯ ರುಂಡವನ್ನೇ ಚೆಂಡಾಡಿದ ಘಟನೆ ಆಂಧ್ರ ಪ್ರದೇಶ ಜನತೆಯನ್ನು ಬೆಚ್ಚಿಬೀಳಿಸಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಈ ಘಟನೆ ನಡೆದಿದ್ದು ಬೇರೆ ಎಲ್ಲೂ ಅಲ್ಲ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕಲಕಡ ತಾಲೂಕಿನಲ್ಲಿ. ಕಡಪ ಜಿಲ್ಲೆಯ ದೇವಪಟ್ಲ ಗ್ರಾಮದ ಹುಸೇನ್​ ನಾಯಕ ಲಾರಿ ಡ್ರೈವರ್​. ಚಿತ್ತೂರು ಜಿಲ್ಲೆಯ ಗುರ್ರಂಕೊಂಡ ತಾಲೂಕಿನ ಅಮ್ಮಾಜಿಯನ್ನು ಐದು ವರ್ಷದ ಹಿಂದೆ ಹುಸೇನ್​ ಲವ್​ ಮಾಡಿ ಮದುವೆ ಆಗಿದ್ದ. ಇವರ ಪ್ರೀತಿಗೆ ಸಾಕ್ಷಿಯೆಂಬಂತೆ ಇಬ್ಬರು ಮಕ್ಕಳೂ ಇವೆ.

ಗಂಡ, ಹೆಂಡ್ತಿ ಅಂದ್ಮೇಲೆ ಜಗಳ ಸಹಜ. ಹೀಗೆ ಇಬ್ಬರು ಜಗಳವಾಡಿದ್ದಾರೆ. ಕಿತ್ತಾಟದ ಬಳಿಕ ಅಮ್ಮಾಜಿ ತವರು ಮನೆಗೆ ಹೋಗಿದ್ದಾಳೆ. ಇನ್ನು ಹುಸೇನ್​ ಕೋಪ ತಣ್ಣಗಾಗಿದೆ. ಹುಸೇನ್​ ನಾಯಕ​ ನೇರ ಅತ್ತೆ-ಮಾವನ ಮನೆಗೆ ತೆರಳಿ ಅಮ್ಮಾಜಿಯನ್ನು ಕರೆದಿದ್ದಾನೆ. ಅಮ್ಮಾಜಿ ಇದಕ್ಕೆ ನಿರಾಕರಿಸಿದ್ದಾಳೆ. ಹುಸೇನ್​ ಆಗಾಗ ಅಮ್ಮಾಜಿ ನೋಡಲು ಅತ್ತೆ-ಮಾವನ ಮನೆಗೆ ಹೋಗಿ ಬರುತ್ತಿದ್ದ.

ಪ್ರೀತಿಸಿ ಮದ್ವೆ ಆದವಳ ರುಂಡ ಚೆಂಡಾಡಿದ ಗಂಡ

ಇನ್ನು ಅಮ್ಮಾಜಿ ಜೀವನಕ್ಕಾಗಿ ಆಶಾ ಕಾರ್ಯಕರ್ತೆಯಾಗಿ ಕೆಲಸಕ್ಕೆ ಸೇರಿಕೊಂಡಳು. ಡ್ರೈವರ್​ ಹುಸೇನ್​ ಸಹ ದುಡಿದ ಹಣವೆಲ್ಲ ಹೆಂಡ್ತಿ ಅಮ್ಮಾಜಿಗೆ ನೀಡುತ್ತಿದ್ದ. ಬಳಿಕ ಸಾಕಷ್ಟು ಬಾರಿ ಅಮ್ಮಾಜಿಯನ್ನು ಸಂಸಾರ ನಡೆಸಲು ಹುಸೇನ್​ ಕರೆದಿದ್ದ. ಆದ್ರೆ ಆಕೆ ತವರು ಮನೆ ಬಿಟ್ಟು ಬರಲು ಪದೇ ಪದೆ ನಿರಾಕರಿಸುತ್ತಿದ್ದಳು. ಇದರಿಂದ ಮತ್ತಷ್ಟು ಕೋಪಗೊಂಡಿದ್ದ ಹುಸೇನ್.

ಬಳಿಕ ಸಂಸಾರ ನಡೆಸಲು ಹಿಂದೇಟು ಹಾಕುತ್ತಿದ್ದ ಪತ್ನಿ ಅಮ್ಮಾಜಿ ಮೇಲೆ ಹುಸೇನ್​ ಅನುಮಾನ ಪಡಲು ಶುರು ಮಾಡಿದ. ಹೆಂಡ್ತಿ ಮೇಲೆ ಕೋಪಗೊಂಡಿದ್ದ ಹುಸೇನ್​ ಆಕೆಯನ್ನು ಕೊಲ್ಲಲು ನಿರ್ಧರಿಸಿದ್ದ. ‘ಮನೆಯಲ್ಲಿ ಹಣವಿದೆ... ತೆಗೆದುಕೊಂಡು ಬರೋಣ ಬಾ...’ ಎಂದು ಅಮ್ಮಾಜಿಯನ್ನು ಪ್ರೀತಿಯಿಂದ ಬೈಕ್​ ಮೇಲೆ ಕರೆದುಕೊಂಡು ಹೋಗಿದ್ದ ಹುಸೇನ್​.

ಸ್ವಗ್ರಾಮಕ್ಕೆ ತೆರಳುವ ಮಾರ್ಗ ಮಧ್ಯೆದಲ್ಲೇ ಅಮ್ಮಾಜಿಯನ್ನು ಕೆಳಗಿಳಿಸಿದ್ದ ಹುಸೇನ್​. ಯಾರು ಇಲ್ಲದ ಸಮಯ ನೋಡಿ​ ತನ್ನ ಬಳಿ ತಂದಿದ್ದ ಕೊಡಲಿಯನ್ನು ಹೊರ ತೆಗೆದಿದ್ದಾನೆ. ಬಳಿಕ ಅಮ್ಮಾಜಿ ರುಂಡವನ್ನು ಕತ್ತರಿಸಿ ಪ್ಲಾಸ್ಟಿಕ್​ ಕವರ್​ನಲ್ಲಿ ತುಂಬಿ ನೇರ ಪೊಲೀಸ್​ ಠಾಣೆಗೆ ತೆರಳಿ ಶರಣಾಗಿದ್ದಾನೆ.

etv bharat, husband kill, wife, Andhra Pradesh,
ಪ್ರೀತಿಸಿ ಮದ್ವೆ ಆದವಳ ರುಂಡ ಚೆಂಡಾಡಿದ ಗಂಡ

ಕೇವಲ ಹೆಂಡ್ತಿ ಸಂಸಾರ ನಡೆಸಲು ಜೊತೆಗೆ ಬರಲಿಲ್ಲವೆಂದು ಗಂಡ ಆಕೆಯ ರುಂಡವನ್ನೇ ಚೆಂಡಾಡಿದ ಘಟನೆ ಆಂಧ್ರ ಪ್ರದೇಶ ಜನತೆಯನ್ನು ಬೆಚ್ಚಿಬೀಳಿಸಿದೆ. ಈ ಘಟನೆ ಕುರಿತು ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

A boy died in accident at Andhra Pradesh's Guntur

ಬೇರೆಯವರ ಮಗುವನ್ನು ಕಾಪಾಡಿ, ತನ್ನ ಮಗುವನ್ನು ಕಳೆದುಕೊಂಡು ಬಿಕ್ಕಿ ಬಿಕ್ಕಿ ಅತ್ತ ತಾಯಿ! 

kannada newspaper, etv bharat, boy died, accident, Andhra Pradesh, Guntur, ಕಾಪಾಡಿ, ಮಗು, ಕಳೆದು, ಅತ್ತ ತಾಯಿ,





ತಾಯಿಯೊಬ್ಬಳು ಬೇರೆಯವರ ಮಗು ರಕ್ಷಿಸಿ ತನ್ನ ಹೆತ್ತ ಮಗು ಕಳೆದುಕೊಂಡಿದ್ದಾಳೆ. ಮೃತ ಮಗುವನ್ನು ತನ್ನ ಮಡಿಲಲ್ಲಿ ಎತ್ತುಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ನೆರೆದಿದ್ದವರ ಕಣ್ಣಲ್ಲಿ ನೀರು ತರಿಸಿತು. ಈ ಮನಕಲಕುವ ಘಟನೆ ನಡೆದಿದ್ದು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ತೆನಾಲಿಯಲ್ಲಿ.


Conclusion:
Last Updated : Jun 19, 2019, 5:15 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.