ಬೊಗೊಟಾ, ಕೊಲಂಬಿಯಾ: ತಾವು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಹೆಲಿಕಾಪ್ಟರ್ನಲ್ಲಿ ಇದ್ದ ಯಾರಿಗೂ ಯಾವುದೇ ಪ್ರಾಣಾಪಾಯವಾಗಿಲ್ಲ ಎಂದು ಕೊಲಂಬಿಯಾ ಅಧ್ಯಕ್ಷರಾದ ಐವಾನ್ ಡ್ಯೂಕ್ ವಿಡಿಯೋ ಸಂದೇಶವೊಂದರಲ್ಲಿ ಹೇಳಿದ್ದಾರೆ.
ಕೊಲಂಬಿಯಾದ ಕಟಟುಂಬೋ ಪ್ರದೇಶದಿಂದ ನಾರ್ಟೆ ಡಿ ಸ್ಯಾಂಟಂಡರ್ ಪ್ರಾಂತ್ಯದ ಕುಕುಟಾ ನಗರಕ್ಕೆ ತೆರಳಬೇಕಾದರೆ ದಾಳಿ ನಡೆಸಲಾಗಿದೆ ಎಂದು ಐವಾನ್ ಡ್ಯೂಕ್ ಮಾಹಿತಿ ನೀಡಿದ್ದಾರೆ.
ಇದು ಹೇಡಿಗಳ ದಾಳಿಯಾಗಿದ್ದು, ನಾವು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಮೇಲೆ ಗುಂಡುಗಳು ಮಾರ್ಕ್ ಬಿದ್ದಿರುವುದನ್ನು ಕಾಣಬಹುದಾಗಿದೆ ಎಂದು ಐವಾನ್ ಡ್ಯೂಕ್ ಹೇಳಿಕೆ ನೀಡಿದ್ದಾರೆ.
ಡ್ಯೂಕ್ ಜೊತೆಯೆಲ್ಲಿ ಹಲವು ಅಧಿಕಾರಿಗಳು ಹೆಲಿಕಾಪ್ಟರ್ನಲ್ಲಿದ್ದರು. ರಕ್ಷಣಾ ಸಚಿವ ಡಿಯಾಗೋ ಮಲಾನೋ, ಗೃಹ ಸಚಿವ ಡೇನಿಯಲ್ ಪಲಾಸಿಯೋಸ್, ನಾರ್ಟೆ ಡಿ ಸ್ಯಾಂಟಂಡರ್ನ ಗವರ್ನರ್ ಸಿಲ್ವಾನೋ ಸೆರ್ರಾನೋ ಹೆಲಿಕಾಪ್ಟರ್ನಲ್ಲಿ ಇದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಅಥಣಿಯಲ್ಲಿ ಆರ್ಎಸ್ಎಸ್ ಹಿರಿಯ ಮುಖಂಡರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ
ಎಡಪಂಥೀಯ ನ್ಯಾಷನಲ್ ಲಿಬರೇಷನ್ ಆರ್ಮಿ (ಇಎಲ್ಎನ್) ದಾಳಿ ನಡೆಸಿರಬಹುದು ಎಂದು ಊಹಿಸಲಾಗಿದ್ದು, ಹೆಲಿಕಾಪ್ಟರ್ ಮೇಲೆ ನಡೆದ ದಾಳಿಯ ತನಿಖೆ ನಡೆಸಲು ಅಲ್ಲಿನ ಪೊಲೀಸರು ಮುಂದಾಗಿದ್ದಾರೆ.