ETV Bharat / entertainment

'ಸಲಾರ್​' ಮುಂದುವರಿದ ಭಾಗ ಮತ್ತಷ್ಟು ಅದ್ಭುತ: ನಟ ಪ್ರಭಾಸ್​

author img

By ETV Bharat Karnataka Team

Published : Dec 25, 2023, 10:51 PM IST

'ಸಲಾರ್​' ಮೊದಲ ಭಾಗಕ್ಕೆ ಹೋಲಿಸಿದರೆ ಪಾರ್ಟ್​ 2 ಇನ್ನಷ್ಟು ಅದ್ಭುತವಾಗಿರಲಿದೆ ಎಂದು ನಟ ಪ್ರಭಾಸ್​ ಹೇಳಿದ್ದಾರೆ.

Pan India Star Prabhas talks about salaar movie
ನಟ ಪ್ರಭಾಸ್​

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಮತ್ತು ಮಾಲಿವುಡ್​ ನಟ ಪೃಥ್ವಿರಾಜ್​ ಸುಕುಮಾರನ್​ ನಟನೆಯ ಪ್ರಶಾಂತ್​ ನೀಲ್​ ನಿರ್ದೇಶಿಸಿದ 'ಸಲಾರ್​' ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಧೂಳೆಬ್ಬಿಸುತ್ತಿದೆ. ಡಿಸೆಂಬರ್​ 22ರಂದು ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. 'ಬಾಹುಬಲಿ 2' ನಂತರ ಪ್ರಭಾಸ್​ ವೃತ್ತಿಜೀವನದ ಅತಿದೊಡ್ಡ ಹಿಟ್​ ಸಿನಿಮಾ ಲಿಸ್ಟ್​ಗೆ 'ಸಲಾರ್​' ಸೇರಿಕೊಂಡಿದೆ. ಇತ್ತೀಚೆಗೆ ಹಾಲಿವುಡ್​ ಮಾಧ್ಯಮದೊಂದಿಗೆ ಮಾತನಾಡಿರುವ ಡಾರ್ಲಿಂಗ್​ ಸಿನಿಮಾ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

"ನನಗೆ 'ಸಲಾರ್​' ಕಥೆ ತುಂಬಾ ಇಷ್ಟವಾಯಿತು. ಅದನ್ನು ಕೇಳಿದ ತಕ್ಷಣ ಒಪ್ಪಿಕೊಂಡೆ. ನನ್ನ ವೃತ್ತಿಜೀವನದಲ್ಲಿ ನಾನು ಮಾಡಿದ ವಿಭಿನ್ನ ಪಾತ್ರಗಳಲ್ಲಿ ಇದೂ ಒಂದು. ಈ ಪಾತ್ರ ತುಂಬಾ ಚಾಲೆಂಜಿಂಗ್​ ಆಗಿತ್ತು. 'ಬಾಹುಬಲಿ' ನನ್ನ ವೃತ್ತಿಜೀವನದ ಆಯಾಮವನ್ನೇ ಬದಲಾಯಿಸಿತು. ಆ ನಂತರ ಆಯ್ಕೆಯಾದ ಸಿನಿಮಾಗಳೆಲ್ಲ ಹೊಸಬರೇ ಇರುವಂತೆ ನೋಡಿಕೊಂಡೆ. ಅದರ ಭಾಗವಾಗಿ ನಾನು 'ಸಲಾರ್​'ಗೆ ಓಕೆ ಹೇಳಿದೆ. ಅಲ್ಲದೇ, ಪ್ರೇಕ್ಷಕರು ಕೂಡ ವೈವಿಧ್ಯಮಯ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಸದ್ಯ ಇಡೀ ವಿಶ್ವವೇ ಭಾರತೀಯ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದೆ. ಅವರು ನಮ್ಮ ಸಿನಿಮಾಗಳನ್ನು ಗುರುತಿಸುತ್ತಿದ್ದಾರೆ. ರಾಜಮೌಳಿ, ಪ್ರಶಾಂತ್​ ನೀಲ್​ರಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ. ಸಲಾರ್​ ಪಾರ್ಟ್​ ಕೊನೆಯಲ್ಲಿ ನಾವು ಮುಂದುವರೆದ ಭಾಗವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ಮೊದಲ ಭಾಗಕ್ಕೆ ಹೋಲಿಸಿದರೆ ಪಾರ್ಟ್​ 2 ಇನ್ನಷ್ಟು ಅದ್ಭುತವಾಗಿರಲಿದೆ" ಎಂದು ಪ್ರಭಾಸ್​ ತಿಳಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ 'ಅನಿಮಲ್​' ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಯಶಸ್ಸು ಗಳಿಸಿದೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣ್​ಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. 'ಸಲಾರ್'​ ಮತ್ತು 'ಅನಿಮಲ್'​ ಸಿನಿಮಾಗಳಲ್ಲಿ ಹಿಂಸೆ ಕೊಂಚ ಹೆಚ್ಚೇ ಇದೆ ಅನ್ನೋದು ನೆಟ್ಟಿಗರ ಅಭಿಪ್ರಾಯ. ಇದಕ್ಕೆ ನಟ ಪೃಥ್ವಿರಾಜ್​ ಸುಕುಮಾರನ್​ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ.

"ಎಲ್ಲಾ ಚಿತ್ರಗಳು ಬಿಡುಗಡೆಗೂ ಮುನ್ನ ಸೆನ್ಸಾರ್​ ಮಂಡಳಿಗೆ ಹೋಗುತ್ತವೆ. ಸೆನ್ಸಾರ್​ಗಳು ನೀಡುವ ಪ್ರಮಾಣಪತ್ರವನ್ನು ಅವಲಂಬಿಸಿ ಚಿತ್ರದ ವಿಷಯವು ಪ್ರೇಕ್ಷಕರಿಗೆ ಬಹುತೇಕ ಅರ್ಥವಾಗುತ್ತದೆ. ಸಿನಿಮಾ ಮಾಡುವಾಗ ನಿರ್ದೇಶಕರಿಗೆ ಸ್ವಾತಂತ್ರ್ಯ ಕೊಡುವುದು ಮುಖ್ಯ. ಇತ್ತೀಚೆಗೆ ಬಿಡುಗಡೆಯಾದ 'ಅನಿಮಲ್​' ಚಿತ್ರದಲ್ಲಿ ಹೆಚ್ಚಿನ ಹಿಂಸೆಯ ದೃಶ್ಯಗಳು ಇದೆ ಎನ್ನಲಾಗಿದೆ. ಆದರೆ ನಾನು ಈ ಸಿನಿಮಾ ನೋಡಿಲ್ಲ. ನಮ್ಮ ಚಿತ್ರ ಸಲಾರ್​ ವಿಷಯಕ್ಕೆ ಬಂದರೆ ಕೆಲವು ದೃಶ್ಯಗಳಲ್ಲಿ ಹಿಂಸೆ ಇದೆ. ಅದು ಅಗತ್ಯ. ಅದಕ್ಕೆ ನಿರ್ದೇಶಕರು ಹಾಗೆ ಮಾಡಿದ್ದಾರೆ. ಈ ದೃಶ್ಯಗಳು ಕಥೆಯನ್ನು ಮುನ್ನಡೆಸುತ್ತದೆ. ಈ ಸಿನಿಮಾದಲ್ಲಿ ಹಿಂಸೆಗಿಂತ ಭಾವನೆಗಳೇ ಹೆಚ್ಚು. ಅವು ಹೃದಯವನ್ನು ಸ್ಪರ್ಶಿಸುತ್ತದೆ. ಹಾಗಾಗಿಯೇ ಈ ಸಿನಿಮಾವನ್ನು ‘ಗೇಮ್ ಆಫ್ ಥ್ರೋನ್ಸ್’ಗೆ ಹೋಲಿಸಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ವಿಶ್ವದಾದ್ಯಂತ 'ಸಲಾರ್' ಅಲೆ: ಮೂರು ದಿನಗಳಲ್ಲಿ ₹400 ಕೋಟಿ ಗಳಿಕೆ

ಪ್ಯಾನ್​ ಇಂಡಿಯಾ ಸ್ಟಾರ್​ ಪ್ರಭಾಸ್​ ಮತ್ತು ಮಾಲಿವುಡ್​ ನಟ ಪೃಥ್ವಿರಾಜ್​ ಸುಕುಮಾರನ್​ ನಟನೆಯ ಪ್ರಶಾಂತ್​ ನೀಲ್​ ನಿರ್ದೇಶಿಸಿದ 'ಸಲಾರ್​' ಸಿನಿಮಾ ಗಲ್ಲಾಪೆಟ್ಟಿಯಲ್ಲಿ ಧೂಳೆಬ್ಬಿಸುತ್ತಿದೆ. ಡಿಸೆಂಬರ್​ 22ರಂದು ಪ್ರೇಕ್ಷಕರ ಮುಂದೆ ಬಂದಿರುವ ಚಿತ್ರ ಭರ್ಜರಿ ಯಶಸ್ಸು ಕಂಡಿದೆ. 'ಬಾಹುಬಲಿ 2' ನಂತರ ಪ್ರಭಾಸ್​ ವೃತ್ತಿಜೀವನದ ಅತಿದೊಡ್ಡ ಹಿಟ್​ ಸಿನಿಮಾ ಲಿಸ್ಟ್​ಗೆ 'ಸಲಾರ್​' ಸೇರಿಕೊಂಡಿದೆ. ಇತ್ತೀಚೆಗೆ ಹಾಲಿವುಡ್​ ಮಾಧ್ಯಮದೊಂದಿಗೆ ಮಾತನಾಡಿರುವ ಡಾರ್ಲಿಂಗ್​ ಸಿನಿಮಾ ಬಗ್ಗೆ ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.

"ನನಗೆ 'ಸಲಾರ್​' ಕಥೆ ತುಂಬಾ ಇಷ್ಟವಾಯಿತು. ಅದನ್ನು ಕೇಳಿದ ತಕ್ಷಣ ಒಪ್ಪಿಕೊಂಡೆ. ನನ್ನ ವೃತ್ತಿಜೀವನದಲ್ಲಿ ನಾನು ಮಾಡಿದ ವಿಭಿನ್ನ ಪಾತ್ರಗಳಲ್ಲಿ ಇದೂ ಒಂದು. ಈ ಪಾತ್ರ ತುಂಬಾ ಚಾಲೆಂಜಿಂಗ್​ ಆಗಿತ್ತು. 'ಬಾಹುಬಲಿ' ನನ್ನ ವೃತ್ತಿಜೀವನದ ಆಯಾಮವನ್ನೇ ಬದಲಾಯಿಸಿತು. ಆ ನಂತರ ಆಯ್ಕೆಯಾದ ಸಿನಿಮಾಗಳೆಲ್ಲ ಹೊಸಬರೇ ಇರುವಂತೆ ನೋಡಿಕೊಂಡೆ. ಅದರ ಭಾಗವಾಗಿ ನಾನು 'ಸಲಾರ್​'ಗೆ ಓಕೆ ಹೇಳಿದೆ. ಅಲ್ಲದೇ, ಪ್ರೇಕ್ಷಕರು ಕೂಡ ವೈವಿಧ್ಯಮಯ ವಿಚಾರಗಳಲ್ಲಿ ಆಸಕ್ತಿ ಹೊಂದಿದ್ದಾರೆ. ಸದ್ಯ ಇಡೀ ವಿಶ್ವವೇ ಭಾರತೀಯ ಸಿನಿಮಾಗಳ ಬಗ್ಗೆ ಚರ್ಚಿಸುತ್ತಿದೆ. ಅವರು ನಮ್ಮ ಸಿನಿಮಾಗಳನ್ನು ಗುರುತಿಸುತ್ತಿದ್ದಾರೆ. ರಾಜಮೌಳಿ, ಪ್ರಶಾಂತ್​ ನೀಲ್​ರಂತಹ ನಿರ್ದೇಶಕರ ಜೊತೆ ಕೆಲಸ ಮಾಡುವುದು ಒಂದು ಅದ್ಭುತ ಅನುಭವ. ಸಲಾರ್​ ಪಾರ್ಟ್​ ಕೊನೆಯಲ್ಲಿ ನಾವು ಮುಂದುವರೆದ ಭಾಗವಿದೆ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ಮೊದಲ ಭಾಗಕ್ಕೆ ಹೋಲಿಸಿದರೆ ಪಾರ್ಟ್​ 2 ಇನ್ನಷ್ಟು ಅದ್ಭುತವಾಗಿರಲಿದೆ" ಎಂದು ಪ್ರಭಾಸ್​ ತಿಳಿಸಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ 'ಅನಿಮಲ್​' ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ಉತ್ತಮ ಯಶಸ್ಸು ಗಳಿಸಿದೆ. ಸಂದೀಪ್​ ರೆಡ್ಡಿ ವಂಗಾ ನಿರ್ದೇಶನದ ಈ ಚಿತ್ರದಲ್ಲಿ ರಣ್​ಬೀರ್​ ಕಪೂರ್​ ಮತ್ತು ರಶ್ಮಿಕಾ ಮಂದಣ್ಣ ತೆರೆ ಹಂಚಿಕೊಂಡಿದ್ದಾರೆ. 'ಸಲಾರ್'​ ಮತ್ತು 'ಅನಿಮಲ್'​ ಸಿನಿಮಾಗಳಲ್ಲಿ ಹಿಂಸೆ ಕೊಂಚ ಹೆಚ್ಚೇ ಇದೆ ಅನ್ನೋದು ನೆಟ್ಟಿಗರ ಅಭಿಪ್ರಾಯ. ಇದಕ್ಕೆ ನಟ ಪೃಥ್ವಿರಾಜ್​ ಸುಕುಮಾರನ್​ ಇತ್ತೀಚೆಗೆ ಪ್ರತಿಕ್ರಿಯಿಸಿದ್ದಾರೆ.

"ಎಲ್ಲಾ ಚಿತ್ರಗಳು ಬಿಡುಗಡೆಗೂ ಮುನ್ನ ಸೆನ್ಸಾರ್​ ಮಂಡಳಿಗೆ ಹೋಗುತ್ತವೆ. ಸೆನ್ಸಾರ್​ಗಳು ನೀಡುವ ಪ್ರಮಾಣಪತ್ರವನ್ನು ಅವಲಂಬಿಸಿ ಚಿತ್ರದ ವಿಷಯವು ಪ್ರೇಕ್ಷಕರಿಗೆ ಬಹುತೇಕ ಅರ್ಥವಾಗುತ್ತದೆ. ಸಿನಿಮಾ ಮಾಡುವಾಗ ನಿರ್ದೇಶಕರಿಗೆ ಸ್ವಾತಂತ್ರ್ಯ ಕೊಡುವುದು ಮುಖ್ಯ. ಇತ್ತೀಚೆಗೆ ಬಿಡುಗಡೆಯಾದ 'ಅನಿಮಲ್​' ಚಿತ್ರದಲ್ಲಿ ಹೆಚ್ಚಿನ ಹಿಂಸೆಯ ದೃಶ್ಯಗಳು ಇದೆ ಎನ್ನಲಾಗಿದೆ. ಆದರೆ ನಾನು ಈ ಸಿನಿಮಾ ನೋಡಿಲ್ಲ. ನಮ್ಮ ಚಿತ್ರ ಸಲಾರ್​ ವಿಷಯಕ್ಕೆ ಬಂದರೆ ಕೆಲವು ದೃಶ್ಯಗಳಲ್ಲಿ ಹಿಂಸೆ ಇದೆ. ಅದು ಅಗತ್ಯ. ಅದಕ್ಕೆ ನಿರ್ದೇಶಕರು ಹಾಗೆ ಮಾಡಿದ್ದಾರೆ. ಈ ದೃಶ್ಯಗಳು ಕಥೆಯನ್ನು ಮುನ್ನಡೆಸುತ್ತದೆ. ಈ ಸಿನಿಮಾದಲ್ಲಿ ಹಿಂಸೆಗಿಂತ ಭಾವನೆಗಳೇ ಹೆಚ್ಚು. ಅವು ಹೃದಯವನ್ನು ಸ್ಪರ್ಶಿಸುತ್ತದೆ. ಹಾಗಾಗಿಯೇ ಈ ಸಿನಿಮಾವನ್ನು ‘ಗೇಮ್ ಆಫ್ ಥ್ರೋನ್ಸ್’ಗೆ ಹೋಲಿಸಲಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ವಿಶ್ವದಾದ್ಯಂತ 'ಸಲಾರ್' ಅಲೆ: ಮೂರು ದಿನಗಳಲ್ಲಿ ₹400 ಕೋಟಿ ಗಳಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.