ETV Bharat / crime

ಓರ್ವ ಯುವತಿಗೋಸ್ಕರ ಇಬ್ಬರು ಆತ್ಮಹತ್ಯೆ, ಆಸ್ಪತ್ರೆ ಸೇರಿದ ಮತ್ತಿಬ್ಬರು... ಏನಿದು ಲವ್​ ಕಹಾನಿ?

author img

By

Published : Jul 13, 2021, 3:39 AM IST

Updated : Jul 13, 2021, 5:52 AM IST

ವಿವಾಹಿತ ಯುವತಿಯೋರ್ವಳು ತಾನು ಪ್ರೀತಿಸುತ್ತಿದ್ದ ಯುವಕನ ಮನೆಯಲ್ಲಿ ಹೋಗಿ ಉಳಿದುಕೊಂಡಿರುವ ಪರಿಣಾಮ ಮೂರು ಕುಟುಂಬದಲ್ಲಿ ಬಿರುಗಾಳಿ ಎದ್ದಿದೆ. ಪರಿಣಾಮ ಇಬ್ಬರು ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ.

Maheshwari
Maheshwari

ಗುಂಟೂರು(ಆಂಧ್ರಪ್ರದೇಶ): ಯೆಡ್ಲಪಾಡ ಮಂಡಲದ ಚಾಂಗಿಸ್ಖಾನ್​ ಪೆಟಾದಲ್ಲಿ ವಿವಾಹಿತ ಯುವತಿಗೋಸ್ಕರ ಮೂರು ಕುಟುಂಬದಲ್ಲಿ ಬಿರುಗಾಳಿ ಎದ್ದಿದ್ದು,ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 21 ವರ್ಷದ ಮಹೇಶ್ವರಿ ಅದೇ ಗ್ರಾಮದ ಯೋಧ ಶಿವಶಂಕರ್ ಜೊತೆ ಕಳೆದ 11 ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದಳು. ವಿವಾಹವಾದ ಬಳಿಕ ಶಿವಶಂಕರ್​ ಕೆಲಸಕ್ಕೆ ಹೋಗುತ್ತಾನೆ. ಮಹೇಶ್ವರಿಗೆ ಈ ಮ್ಯಾರೇಜ್​ ಇಷ್ಟವಿಲ್ಲದ ಕಾರಣ ತಾನು ಪ್ರೀತಿಸುತ್ತಿದ್ದ ಗೋಪಿ ಮನೆಗೆ ಹೋಗಿ ಉಳಿದುಕೊಳ್ಳುತ್ತಾಳೆ. ಗೋಪಿ ಪ್ರಕಾಶಂ ಜಿಲ್ಲೆಯಲ್ಲಿ ವಾಸವಾಗಿದ್ದನು. ಈ ವೇಳೆ ಮಹೇಶ್ವರಿ ಹಾಗೂ ಶಿವಶಂಕರ್​ನ ಮನೆಯವರು ಅಲ್ಲಿಗೆ ತೆರಳಿ ಮರಳಿ ಬರುವಂತೆ ಬೇಡಿಕೊಳ್ಳುತ್ತಾರೆ. ಆದರೆ ಮಹೇಶ್ವರಿ ವಾಪಸ್​ ಬರದೇ, ಗೋಪಿ ಮನೆಯಲ್ಲಿ ಉಳಿದುಕೊಂಡಿದ್ದಳು. ಇದರ ಬೆನ್ನಲ್ಲೇ ಶಿವಶಂಕರ್​ ರಜಾದಿನಕ್ಕಾಗಿ ಮತ್ತೆ ವಾಪಸ್​ ಊರಿಗೆ ಬಂದಿದ್ದಾನೆ. ಆತನಿಗೆ ಮಾಹಿತಿ ಗೊತ್ತಾಗಿದ್ದು, ಮನೆಗೆ ಬರುವಂತೆ ಮಹೇಶ್ವರಿ ಬಳಿ ಮನವಿ ಮಾಡಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ.

Maheshwari
ಆತ್ಮಹತ್ಯೆಗೆ ಶರಣಾಗಿರುವ ಮಹೇಶ್ವರಿ

ಇದನ್ನೂ ಓದಿರಿ: ಬುದ್ಧಿವಾದ ಹೇಳಿದ ತಮ್ಮನನ್ನೇ ಕೊಚ್ಚಿ ಕೊಂದ ಅಣ್ಣ... ಎಸ್ಕೇಪ್​ ಆಗಲು ಹೋಗಿ ಅಂದರ್​

ಆತ್ಮಹತ್ಯೆಗೆ ಯತ್ನಿಸಿದ ಶಿವಶಂಕರ್: ಘಟನೆ ಬಗ್ಗೆ ಅಸಮಾಧಾನಗೊಂಡ ಯೋಧ ಶಿವಶಂಕರ್​ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಕೆಲವರು ಆತನನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆಂದು ತಿಳಿದು ಬಂದಿದೆ.

ನೇಣಿಗೆ ಶರಣಾದ ಮಹೇಶ್ವರಿ: ಗಂಡನ ಸ್ಥಿತಿ ಬಗ್ಗೆ ಗೊತ್ತಾಗುತ್ತಿದ್ದಂತೆ ಆತಂಕಗೊಂಡ ಮಹೇಶ್ವರಿ ತಾನೇ ತಪ್ಪಿತಸ್ಥಳೆಂದು ಭಾವಿಸಿದ್ದಾಳೆ. ಎಲ್ಲದ್ದಕ್ಕೂ ತಾನೇ ಹೊಣೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗೋಪಿ ಮನೆಯ ಬಾತ್​ರೂಂನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.

ಗೋಪಿ ತಂದೆ ಆತ್ಮಹತ್ಯೆ: ನನ್ನ ಮಗ ವಿವಾಹಿತ ಮಹಿಳೆಯೋರ್ವಳನ್ನ ಮನೆಯಲ್ಲಿ ತಂದಿಟ್ಟುಕೊಂಡಿದ್ದು, ಇದು ನನ್ನ ಮಾರ್ಯಾದೆಗೆ ವಿರುದ್ಧವಾಗಿದೆ ಎಂದು ಗೋಪಿ ತಂದೆ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಶಿವಶಂಕರ್ ತಂದೆಗೆ ಹೃದಯಾಘಾತ: ಮಗನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಯುತ್ತಿದ್ದಂತೆ ಶಿವಶಂಕರ್​ ತಂದೆಗೆ ಹೃದಯಾಘಾತವಾಗಿದೆ. ಸದ್ಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಓರ್ವ ಯುವತಿಗೋಸ್ಕರ ಮೂರು ಕುಟುಂಬದಲ್ಲಿ ಸಮಸ್ಯೆ ಏರ್ಪಟ್ಟಿದೆ. ಈ ಎಲ್ಲ ಪ್ರಕರಣಗಳಿಗೂ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ಗುಂಟೂರು(ಆಂಧ್ರಪ್ರದೇಶ): ಯೆಡ್ಲಪಾಡ ಮಂಡಲದ ಚಾಂಗಿಸ್ಖಾನ್​ ಪೆಟಾದಲ್ಲಿ ವಿವಾಹಿತ ಯುವತಿಗೋಸ್ಕರ ಮೂರು ಕುಟುಂಬದಲ್ಲಿ ಬಿರುಗಾಳಿ ಎದ್ದಿದ್ದು,ಇಬ್ಬರು ಸಾವನ್ನಪ್ಪಿ, ಮತ್ತಿಬ್ಬರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಘಟನೆ ನಡೆದಿದೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. 21 ವರ್ಷದ ಮಹೇಶ್ವರಿ ಅದೇ ಗ್ರಾಮದ ಯೋಧ ಶಿವಶಂಕರ್ ಜೊತೆ ಕಳೆದ 11 ತಿಂಗಳ ಹಿಂದೆ ಮದುವೆ ಮಾಡಿಕೊಂಡಿದ್ದಳು. ವಿವಾಹವಾದ ಬಳಿಕ ಶಿವಶಂಕರ್​ ಕೆಲಸಕ್ಕೆ ಹೋಗುತ್ತಾನೆ. ಮಹೇಶ್ವರಿಗೆ ಈ ಮ್ಯಾರೇಜ್​ ಇಷ್ಟವಿಲ್ಲದ ಕಾರಣ ತಾನು ಪ್ರೀತಿಸುತ್ತಿದ್ದ ಗೋಪಿ ಮನೆಗೆ ಹೋಗಿ ಉಳಿದುಕೊಳ್ಳುತ್ತಾಳೆ. ಗೋಪಿ ಪ್ರಕಾಶಂ ಜಿಲ್ಲೆಯಲ್ಲಿ ವಾಸವಾಗಿದ್ದನು. ಈ ವೇಳೆ ಮಹೇಶ್ವರಿ ಹಾಗೂ ಶಿವಶಂಕರ್​ನ ಮನೆಯವರು ಅಲ್ಲಿಗೆ ತೆರಳಿ ಮರಳಿ ಬರುವಂತೆ ಬೇಡಿಕೊಳ್ಳುತ್ತಾರೆ. ಆದರೆ ಮಹೇಶ್ವರಿ ವಾಪಸ್​ ಬರದೇ, ಗೋಪಿ ಮನೆಯಲ್ಲಿ ಉಳಿದುಕೊಂಡಿದ್ದಳು. ಇದರ ಬೆನ್ನಲ್ಲೇ ಶಿವಶಂಕರ್​ ರಜಾದಿನಕ್ಕಾಗಿ ಮತ್ತೆ ವಾಪಸ್​ ಊರಿಗೆ ಬಂದಿದ್ದಾನೆ. ಆತನಿಗೆ ಮಾಹಿತಿ ಗೊತ್ತಾಗಿದ್ದು, ಮನೆಗೆ ಬರುವಂತೆ ಮಹೇಶ್ವರಿ ಬಳಿ ಮನವಿ ಮಾಡಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದ್ದಾಳೆ.

Maheshwari
ಆತ್ಮಹತ್ಯೆಗೆ ಶರಣಾಗಿರುವ ಮಹೇಶ್ವರಿ

ಇದನ್ನೂ ಓದಿರಿ: ಬುದ್ಧಿವಾದ ಹೇಳಿದ ತಮ್ಮನನ್ನೇ ಕೊಚ್ಚಿ ಕೊಂದ ಅಣ್ಣ... ಎಸ್ಕೇಪ್​ ಆಗಲು ಹೋಗಿ ಅಂದರ್​

ಆತ್ಮಹತ್ಯೆಗೆ ಯತ್ನಿಸಿದ ಶಿವಶಂಕರ್: ಘಟನೆ ಬಗ್ಗೆ ಅಸಮಾಧಾನಗೊಂಡ ಯೋಧ ಶಿವಶಂಕರ್​ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಕೆಲವರು ಆತನನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆತನ ಸ್ಥಿತಿ ಗಂಭೀರವಾಗಿದ್ದು, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆಂದು ತಿಳಿದು ಬಂದಿದೆ.

ನೇಣಿಗೆ ಶರಣಾದ ಮಹೇಶ್ವರಿ: ಗಂಡನ ಸ್ಥಿತಿ ಬಗ್ಗೆ ಗೊತ್ತಾಗುತ್ತಿದ್ದಂತೆ ಆತಂಕಗೊಂಡ ಮಹೇಶ್ವರಿ ತಾನೇ ತಪ್ಪಿತಸ್ಥಳೆಂದು ಭಾವಿಸಿದ್ದಾಳೆ. ಎಲ್ಲದ್ದಕ್ಕೂ ತಾನೇ ಹೊಣೆ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗೋಪಿ ಮನೆಯ ಬಾತ್​ರೂಂನಲ್ಲಿ ನೇಣು ಬಿಗಿದುಕೊಂಡು ಪ್ರಾಣ ಕಳೆದುಕೊಂಡಿದ್ದಾಳೆ.

ಗೋಪಿ ತಂದೆ ಆತ್ಮಹತ್ಯೆ: ನನ್ನ ಮಗ ವಿವಾಹಿತ ಮಹಿಳೆಯೋರ್ವಳನ್ನ ಮನೆಯಲ್ಲಿ ತಂದಿಟ್ಟುಕೊಂಡಿದ್ದು, ಇದು ನನ್ನ ಮಾರ್ಯಾದೆಗೆ ವಿರುದ್ಧವಾಗಿದೆ ಎಂದು ಗೋಪಿ ತಂದೆ ಅತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

ಶಿವಶಂಕರ್ ತಂದೆಗೆ ಹೃದಯಾಘಾತ: ಮಗನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿಯುತ್ತಿದ್ದಂತೆ ಶಿವಶಂಕರ್​ ತಂದೆಗೆ ಹೃದಯಾಘಾತವಾಗಿದೆ. ಸದ್ಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಒಟ್ಟಿನಲ್ಲಿ ಓರ್ವ ಯುವತಿಗೋಸ್ಕರ ಮೂರು ಕುಟುಂಬದಲ್ಲಿ ಸಮಸ್ಯೆ ಏರ್ಪಟ್ಟಿದೆ. ಈ ಎಲ್ಲ ಪ್ರಕರಣಗಳಿಗೂ ಸಂಬಂಧಿಸಿದಂತೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸುತ್ತಿರುವುದಾಗಿ ಹೇಳಿದ್ದಾರೆ.

Last Updated : Jul 13, 2021, 5:52 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.