ETV Bharat / state

ಸಿ ಟಿ ರವಿ ಬಂಧನ, ಬಿಡುಗಡೆ ಬಗ್ಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯೆ ಹೀಗಿದೆ - PRATAP SIMHA REACTION

ಚುನಾವಣೆಯಲ್ಲಿ ಅಂಬೇಡ್ಕರ್​ ಅವರನ್ನು ಸೋಲಿಸಿದ್ದ ಕಾಂಗ್ರೆಸ್​ಗೆ ಅವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಂಸದ ಪ್ರತಾಪ್​ ಸಿಂಹ ವಾಗ್ದಾಳಿ ನಡೆಸಿದರು.

Former MP Pratap Simha
ಮಾಜಿ ಸಂಸದ ಪ್ರತಾಪ್​ ಸಿಂಹ (ETV Bharat)
author img

By ETV Bharat Karnataka Team

Published : Dec 21, 2024, 5:24 PM IST

Updated : Dec 21, 2024, 8:03 PM IST

ಮೈಸೂರು: "ರಾಜ್ಯದಲ್ಲಿ ಗೂಂಡಾರಾಜ್ ಬಂದಿದೆ ಅಥವಾ ಬರುವ ಸೂಚನೆ ಇದೆ ಅಂತ ನಮಗೆ ಅನಿಸ್ತಿದೆ. ಕರ್ನಾಟಕದಲ್ಲಿ ತಾಲಿಬಾನ್‌ ಸರ್ಕಾರದ ಲಕ್ಷಣ ಇದು" ಎಂದು ಸಿ. ಟಿ. ರವಿ ಬಂಧನದ ಬಗ್ಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆ ನೀಡಿದರು.

ನಗರದಲ್ಲಿಂದು ಇದೇ ತಿಂಗಳು 28ರಂದು, ಅದ್ಧೂರಿಯಾಗಿ ನಡೆಯಲಿರುವ ಹನುಮ ಜಯಂತಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು. ಇದೇ ವೇಳೆ ಸಿ ಟಿ ರವಿ ಬಂಧನ ಹಾಗೂ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಹುಣಸೂರಿನ ಹನುಮ ಜಯಂತಿ ವೇಳೆ ನನಗೂ ಈ ರೀತಿಯ ಅನುಭವ ಆಗಿದೆ. ಜನಪ್ರತಿನಿಧಿಗಳು ಎಷ್ಟೋ ಬಾರಿ ಸಭ್ಯತೆ ಮೀರಿ ಮಾತನಾಡುತ್ತಾರೆ. ಸದನದಲ್ಲಿ ಸಭಾಧ್ಯಕ್ಷರ ಸುಪರ್ದಿಯಲ್ಲಿ ಇರುತ್ತದೆ. ಅಲ್ಲಿಗೆ ಪೊಲೀಸರು ಹೇಗೆ ಹೋದರು? ವಿಧಾನಸಭೆಯಲ್ಲಿ ಕಾಂಗ್ರೆಸ್​ನವರು, ಪಾಕಿಸ್ತಾನ ಜಿಂದಾಬಾದ್‌ ಎಂದಾಗ ಇದೇ ಲಕ್ಷ್ಮೀ ಹೆಬಾಳ್ಕರ್‌ ಹೇಳಿದ್ದು ಏನು? ಈಗ ಈ ವಿಚಾರದಲ್ಲಿ ಫಾರೆನ್ಸಿಕ್‌ ರಿಪೋರ್ಟ್‌ ಬರಲಿ, ಯಾರದ್ದು ತಪ್ಪು ಎಂಬುದು ಗೊತ್ತಾಗಲಿದೆ. ಆ ನಂತರ ಸೂಕ್ತ ಕ್ರಮವಾಗಲಿ" ಎಂದು ಒತ್ತಾಯಿಸಿದರು.

ಮಾಜಿ ಸಂಸದ ಪ್ರತಾಪ್​ ಸಿಂಹ (ETV Bharat)

"ಪೊಲೀಸರನ್ನು ಛೂ ಬಿಟ್ಟು ಈ ಕೆಲಸ ಮಾಡಿಸಲಾಗುತ್ತಿದೆ. ಉತ್ತರ ಪ್ರದೇಶ ಹಾಗೂ ಬಿಹಾರಗಳೇ ಬದಲಾಗಿವೆ. ತಮಿಳುನಾಡಿನಲ್ಲಿ ಜಯಲಲಿತಾ ಕರುಣಾನಿಧಿ ನಡುವೆ ನಡೆದ ರೀತಿಯಲ್ಲಿ ಇಲ್ಲಿ ನಡೆದರೆ, ಗೌರವ ಬರುತ್ತದೆಯೇ?" ಎಂದು ಪ್ರಶ್ನಿಸಿದರು.

ಅಂಬೇಡ್ಕರ್‌ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ: "ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಬಗ್ಗೆ ಮಾತನಾಡುವ, ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಅವರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದ ಕಾಂಗ್ರೆಸ್​ನವರು ಈಗ ಅಂಬೇಡ್ಕರ್‌ ಬಗ್ಗೆ ಮಾತನಾಡುತ್ತಿದ್ದಾರೆ. ಆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ" ಎಂದರು.

"ಅಂಬೇಡ್ಕರ್‌ ತೀರಿಕೊಂಡಾಗ ಅವರಿಗೆ ದೆಹಲಿಯಲ್ಲಿ ಅಂಗೈಯಷ್ಟು ಜಾಗ ಕೊಡಲಿಲ್ಲ. ಈಗ ನೆಹರೂ - ಇಂದಿರಾಗಾಂಧಿ - ರಾಜೀವ್‌ ಗಾಂಧಿಗೆ ಎಕರೆಗಟ್ಟಲೇ ಜಾಗ ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಿದ್ದ ಕಾಂಗ್ರೆಸ್‌, ಈಗ ದಲಿತರನ್ನ ಓಲೈಕೆ ಮಾಡಲು ಮುಂದಾಗಿದೆ. ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಕೊಟ್ಟಿದ್ದು, ಬಿಜೆಪಿ ಸರ್ಕಾರ. ಅಂಬೇಡ್ಕರ್‌ ಹೋರಾಟ ಮಾಡಿ ಜಾಗವನ್ನು ಪಂಚಪೀಠ ಮಾಡಿದ್ದು ಬಿಜೆಪಿ ಸರ್ಕಾರ" ಎಂದು ಕಾಂಗ್ರೆಸ್‌ ವಿರುದ್ಧ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ: ಉನ್ನತಮಟ್ಟದ ತನಿಖೆಗೆ ಕೋರಿ ಮಹಿಳಾ ಆಯೋಗದಿಂದ ಸಭಾಪತಿಗೆ ಪತ್ರ

ಮೈಸೂರು: "ರಾಜ್ಯದಲ್ಲಿ ಗೂಂಡಾರಾಜ್ ಬಂದಿದೆ ಅಥವಾ ಬರುವ ಸೂಚನೆ ಇದೆ ಅಂತ ನಮಗೆ ಅನಿಸ್ತಿದೆ. ಕರ್ನಾಟಕದಲ್ಲಿ ತಾಲಿಬಾನ್‌ ಸರ್ಕಾರದ ಲಕ್ಷಣ ಇದು" ಎಂದು ಸಿ. ಟಿ. ರವಿ ಬಂಧನದ ಬಗ್ಗೆ ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆ ನೀಡಿದರು.

ನಗರದಲ್ಲಿಂದು ಇದೇ ತಿಂಗಳು 28ರಂದು, ಅದ್ಧೂರಿಯಾಗಿ ನಡೆಯಲಿರುವ ಹನುಮ ಜಯಂತಿ ಪ್ರಚಾರ ವಾಹನಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು. ಇದೇ ವೇಳೆ ಸಿ ಟಿ ರವಿ ಬಂಧನ ಹಾಗೂ ಬಿಡುಗಡೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಹುಣಸೂರಿನ ಹನುಮ ಜಯಂತಿ ವೇಳೆ ನನಗೂ ಈ ರೀತಿಯ ಅನುಭವ ಆಗಿದೆ. ಜನಪ್ರತಿನಿಧಿಗಳು ಎಷ್ಟೋ ಬಾರಿ ಸಭ್ಯತೆ ಮೀರಿ ಮಾತನಾಡುತ್ತಾರೆ. ಸದನದಲ್ಲಿ ಸಭಾಧ್ಯಕ್ಷರ ಸುಪರ್ದಿಯಲ್ಲಿ ಇರುತ್ತದೆ. ಅಲ್ಲಿಗೆ ಪೊಲೀಸರು ಹೇಗೆ ಹೋದರು? ವಿಧಾನಸಭೆಯಲ್ಲಿ ಕಾಂಗ್ರೆಸ್​ನವರು, ಪಾಕಿಸ್ತಾನ ಜಿಂದಾಬಾದ್‌ ಎಂದಾಗ ಇದೇ ಲಕ್ಷ್ಮೀ ಹೆಬಾಳ್ಕರ್‌ ಹೇಳಿದ್ದು ಏನು? ಈಗ ಈ ವಿಚಾರದಲ್ಲಿ ಫಾರೆನ್ಸಿಕ್‌ ರಿಪೋರ್ಟ್‌ ಬರಲಿ, ಯಾರದ್ದು ತಪ್ಪು ಎಂಬುದು ಗೊತ್ತಾಗಲಿದೆ. ಆ ನಂತರ ಸೂಕ್ತ ಕ್ರಮವಾಗಲಿ" ಎಂದು ಒತ್ತಾಯಿಸಿದರು.

ಮಾಜಿ ಸಂಸದ ಪ್ರತಾಪ್​ ಸಿಂಹ (ETV Bharat)

"ಪೊಲೀಸರನ್ನು ಛೂ ಬಿಟ್ಟು ಈ ಕೆಲಸ ಮಾಡಿಸಲಾಗುತ್ತಿದೆ. ಉತ್ತರ ಪ್ರದೇಶ ಹಾಗೂ ಬಿಹಾರಗಳೇ ಬದಲಾಗಿವೆ. ತಮಿಳುನಾಡಿನಲ್ಲಿ ಜಯಲಲಿತಾ ಕರುಣಾನಿಧಿ ನಡುವೆ ನಡೆದ ರೀತಿಯಲ್ಲಿ ಇಲ್ಲಿ ನಡೆದರೆ, ಗೌರವ ಬರುತ್ತದೆಯೇ?" ಎಂದು ಪ್ರಶ್ನಿಸಿದರು.

ಅಂಬೇಡ್ಕರ್‌ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್​ಗೆ ಇಲ್ಲ: "ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಬಗ್ಗೆ ಮಾತನಾಡುವ, ನೈತಿಕತೆ ಕಾಂಗ್ರೆಸ್‌ಗೆ ಇಲ್ಲ. ಅವರನ್ನು ಚುನಾವಣೆಗೆ ನಿಲ್ಲಿಸಿ ಸೋಲಿಸಿದ್ದ ಕಾಂಗ್ರೆಸ್​ನವರು ಈಗ ಅಂಬೇಡ್ಕರ್‌ ಬಗ್ಗೆ ಮಾತನಾಡುತ್ತಿದ್ದಾರೆ. ಆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ಗಿಲ್ಲ" ಎಂದರು.

"ಅಂಬೇಡ್ಕರ್‌ ತೀರಿಕೊಂಡಾಗ ಅವರಿಗೆ ದೆಹಲಿಯಲ್ಲಿ ಅಂಗೈಯಷ್ಟು ಜಾಗ ಕೊಡಲಿಲ್ಲ. ಈಗ ನೆಹರೂ - ಇಂದಿರಾಗಾಂಧಿ - ರಾಜೀವ್‌ ಗಾಂಧಿಗೆ ಎಕರೆಗಟ್ಟಲೇ ಜಾಗ ಕೊಟ್ಟಿದ್ದಾರೆ. ಮುಸ್ಲಿಂ ಸಮುದಾಯವನ್ನು ಓಲೈಕೆ ಮಾಡುತ್ತಿದ್ದ ಕಾಂಗ್ರೆಸ್‌, ಈಗ ದಲಿತರನ್ನ ಓಲೈಕೆ ಮಾಡಲು ಮುಂದಾಗಿದೆ. ಅಂಬೇಡ್ಕರ್‌ ಅವರಿಗೆ ಭಾರತ ರತ್ನ ಕೊಟ್ಟಿದ್ದು, ಬಿಜೆಪಿ ಸರ್ಕಾರ. ಅಂಬೇಡ್ಕರ್‌ ಹೋರಾಟ ಮಾಡಿ ಜಾಗವನ್ನು ಪಂಚಪೀಠ ಮಾಡಿದ್ದು ಬಿಜೆಪಿ ಸರ್ಕಾರ" ಎಂದು ಕಾಂಗ್ರೆಸ್‌ ವಿರುದ್ಧ ಪ್ರತಾಪ್‌ ಸಿಂಹ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಪದ ಬಳಕೆ ಪ್ರಕರಣ: ಉನ್ನತಮಟ್ಟದ ತನಿಖೆಗೆ ಕೋರಿ ಮಹಿಳಾ ಆಯೋಗದಿಂದ ಸಭಾಪತಿಗೆ ಪತ್ರ

Last Updated : Dec 21, 2024, 8:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.