ETV Bharat / crime

ಕೌಟುಂಬಿಕ ಕಲಹ.. ಮನೆಬಿಟ್ಟು ಹೋಗಿದ್ದ ವ್ಯಕ್ತಿ ಹೆಣವಾಗಿ ಪತ್ತೆ - ಕೌಟುಂಬಿಕ ಕಲಹ

ಅಪ್ಪ-ಅಮ್ಮನ ಜಗಳ ಕಂಡ ಮಗ ಈ ವಿಚಾರವನ್ನು ದೇವರಾಜ ತಂದೆ ನಾಗಪ್ಪ ಗೌಡರು ಅವರಿಗೆ ತಿಳಿಸಿದ್ದ. ಈ ಹಿನ್ನೆಲೆ ತಂದೆ ಮಗನಿಗೆ ಬುದ್ಧಿ ಹೇಳಿದ್ದರು.

ಕೌಟುಂಬಿಕ ಕಲಹದ ಹಿನ್ನಲೆ ಮನೆಬಿಟ್ಟು ಹೋದ ವ್ಯಕ್ತಿ ಹೆಣವಾಗಿ ಪತ್ತೆ
man-who-left-home-due-to-a-family-dispute-was-found-as-a-dead-in-kadaba
author img

By

Published : Dec 6, 2022, 10:15 AM IST

ಕಡಬ (ದಕ್ಷಿಣ ಕನ್ನಡ): ಕೌಟುಂಬಿಕ ಕಲಹ ಹಿನ್ನೆಲೆ ಮನೆಬಿಟ್ಟು ಹೋದ ವ್ಯಕ್ತಿ ಕೊಜಂಬಾಡಿ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಲಾರಿ ಚಾಲಕ ದೇವರಾಜ ಸಾವನ್ನಪ್ಪಿರುವ ವ್ಯಕ್ತಿ.

ಕುಡಿತದ ದಾಸನಾಗಿದ್ದ ದೇವರಾಜ್​ ಹೆಂಡತಿ ಜೊತೆ ಆಗ್ಗಿಂದಾಗ್ಗೆ ಜಗಳ ಆಡುತ್ತಿದ್ದರು. ಕಳೆದ ನ.28ರಂದು ಈತ ಹೆಂಡತಿ ಜೊತೆ ಜಗಳವಾಡಿದ್ದರು. ಅಪ್ಪ-ಅಮ್ಮನ ಜಗಳ ಕಂಡ ಮಗ ಈ ವಿಚಾರವನ್ನು ದೇವರಾಜ ತಮ್ಮ ತಂದೆ ನಾಗಪ್ಪ ಗೌಡ ಅವರಿಗೆ ತಿಳಿಸಿದ್ದರಂತೆ. ಆಗ ತಂದೆ ಮಗನಿಗೆ ಬುದ್ಧಿ ಹೇಳಿದ್ದರು. ಇದಾದ ಮರುದಿನ ನ.29 ರಂದು ದೇವರಾಜ ಮರಳಿ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಪತ್ನಿ ಈ ವಿಚಾರವನ್ನು ಮಾವನಿಗೆ ತಿಳಿಸಿ, ಮನೆ ಮಂದಿಯೊಂದಿಗೆ ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರು.

ಇದಾದ ಎರಡು ಮೂರು ದಿನಗಳ ಬಳಿಕ ದೇವರಾಜ ಮೃತದೇಹ ತಾಲೂಕಿನ ದೊಲ್ಪಾಡಿ ಗ್ರಾಮದ ಕೊಜಂಬಾಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಸಂಬಂಧ ದೇವರಾಜ ತಂದೆ ನಾಗಪ್ಪ ಗೌಡರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಮಗನ ಸಾವು ಅನುಮಾನಾಸ್ಪದವಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ 2 ಕೋಮಿನ ಯುವಕರ ನಡುವೆ ಗಲಾಟೆ: ಓರ್ವನಿಗೆ ಚಾಕು ಇರಿತ

ಕಡಬ (ದಕ್ಷಿಣ ಕನ್ನಡ): ಕೌಟುಂಬಿಕ ಕಲಹ ಹಿನ್ನೆಲೆ ಮನೆಬಿಟ್ಟು ಹೋದ ವ್ಯಕ್ತಿ ಕೊಜಂಬಾಡಿ ಅರಣ್ಯ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಲಾರಿ ಚಾಲಕ ದೇವರಾಜ ಸಾವನ್ನಪ್ಪಿರುವ ವ್ಯಕ್ತಿ.

ಕುಡಿತದ ದಾಸನಾಗಿದ್ದ ದೇವರಾಜ್​ ಹೆಂಡತಿ ಜೊತೆ ಆಗ್ಗಿಂದಾಗ್ಗೆ ಜಗಳ ಆಡುತ್ತಿದ್ದರು. ಕಳೆದ ನ.28ರಂದು ಈತ ಹೆಂಡತಿ ಜೊತೆ ಜಗಳವಾಡಿದ್ದರು. ಅಪ್ಪ-ಅಮ್ಮನ ಜಗಳ ಕಂಡ ಮಗ ಈ ವಿಚಾರವನ್ನು ದೇವರಾಜ ತಮ್ಮ ತಂದೆ ನಾಗಪ್ಪ ಗೌಡ ಅವರಿಗೆ ತಿಳಿಸಿದ್ದರಂತೆ. ಆಗ ತಂದೆ ಮಗನಿಗೆ ಬುದ್ಧಿ ಹೇಳಿದ್ದರು. ಇದಾದ ಮರುದಿನ ನ.29 ರಂದು ದೇವರಾಜ ಮರಳಿ ಮನೆಗೆ ಬಂದಿರಲಿಲ್ಲ. ಈ ಹಿನ್ನೆಲೆಯಲ್ಲಿ ಆತನ ಪತ್ನಿ ಈ ವಿಚಾರವನ್ನು ಮಾವನಿಗೆ ತಿಳಿಸಿ, ಮನೆ ಮಂದಿಯೊಂದಿಗೆ ವಿವಿಧ ಕಡೆಗಳಲ್ಲಿ ಹುಡುಕಾಟ ನಡೆಸಿದರು.

ಇದಾದ ಎರಡು ಮೂರು ದಿನಗಳ ಬಳಿಕ ದೇವರಾಜ ಮೃತದೇಹ ತಾಲೂಕಿನ ದೊಲ್ಪಾಡಿ ಗ್ರಾಮದ ಕೊಜಂಬಾಡಿ ಅರಣ್ಯ ಪ್ರದೇಶದಲ್ಲಿ ಪತ್ತೆಯಾಗಿದೆ. ಈ ಸಂಬಂಧ ದೇವರಾಜ ತಂದೆ ನಾಗಪ್ಪ ಗೌಡರು ಪೊಲೀಸರಿಗೆ ದೂರು ಸಲ್ಲಿಸಿದ್ದು, ಮಗನ ಸಾವು ಅನುಮಾನಾಸ್ಪದವಾಗಿದೆ ಎಂದು ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.

ಇದನ್ನೂ ಓದಿ: ಕ್ಷುಲ್ಲಕ ಕಾರಣಕ್ಕೆ 2 ಕೋಮಿನ ಯುವಕರ ನಡುವೆ ಗಲಾಟೆ: ಓರ್ವನಿಗೆ ಚಾಕು ಇರಿತ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.