ಶಿವಮೊಗ್ಗ: ನಾನು ಬಚ್ಚಾ ಅಲ್ಲ, ಈ ಮೇಡಂ ಬಚ್ಚಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಶೋಭಾ ಕರದ್ಲಾಂಜೆಗೆ ಹೊಸನಗರದಲ್ಲಿ ಟಾಂಗ್ ಕೊಟ್ಟಿದ್ದಾರೆ.
ಶೋಭಾ ಕರದ್ಲಾಂಜೆ ಹೇಳಿದಂತೆ ನಾನು ಬಚ್ಚಾ ಅಲ್ಲ, ನನ್ನ ಬಗ್ಗೆ ಪ್ರಧಾನಮಂತ್ರಿ ಮೋದಿಯವರೇ ಮಾತನಾಡುತ್ತಾರೆ ಎಂದು ಬೇಳೂರು ಗೋಪಾಲಕೃಷ್ಣ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿದ್ದಾರೆ.
ಯಡಿಯೂರಪ್ಪ ಹಾಗೂ ಶೋಭಾ ಕೇರಳಕ್ಕೆ ಹೋಗಿ ನನ್ನ ಮೇಲೆ ವಾಮಾಚಾರ ಮಾಡಿಸುತ್ತಾರೆ. ನಾನು ಕೆಲ ದಿನಗಳ ಕಾಲ ಮಂಕಾಗಿದ್ದೆ. ಇದಕ್ಕೆ ಶೋಭಾ ಕರದ್ಲಾಂಜೆಯವರು ನನ್ನ ಮೇಲೆ ವಾಮಾಚಾರ ಮಾಡಿಸಿದ್ದರು ಎಂಬ ಗಂಭೀರ ಆರೋಪ ಮಾಡಿದ್ದರು. ಬೇಳೂರು ಗೋಪಾಲಕೃಷ್ಣರ ಈ ಆರೋಪದ ಬಗ್ಗೆ ಶೋಭಾ ಪ್ರತಿಕ್ರಿಯೆ ನೀಡುವಾಗ ಬೇಳೂರು ಓರ್ವ ಬಚ್ಚಾ ಅಂತ ಹೇಳಿದ್ದರು. ಇಂದು ಇದಕ್ಕೆ ಬೇಳೂರು ಟಾಂಗ್ ನೀಡಿದ್ದಾರೆ.