ETV Bharat / city

ಮಳೆಯ ನಡುವೆಯೂ ಮಾನಸ ಗಂಗೋತ್ರಿಯಲ್ಲಿ ರಂಗೇರಿದ 'ಯುವ ದಸರಾ' ಸಂಭ್ರಮ - ಮಾನಸಗಂಗೋತ್ರಿ

ಮೈಸೂರಿನ ಮಾನ ಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವ ದಸರಾದಲ್ಲಿ ಆರನೇ ದಿನವೂ ಯುವ ಪ್ರತಿಭೆಗಳು ವಿವಿಧ ಕಲಾ ಪ್ರದರ್ಶನಗಳ ಮೂಲಕ ಸಭಿಕರನ್ನು ರಂಜಿಸಿದರು. ಈ ವೇಳೆ ಮಳೆ ಕೆಲಕಾಲ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿತು.

ಮಾನಸಗಂಗೋತ್ರಿಯಲ್ಲಿನ 'ಯುವಸಂಭ್ರಮ'ದ ರಂಗು
author img

By

Published : Sep 23, 2019, 4:38 AM IST

ಮೈಸೂರು: ಯುವ ಸಮೂಹದ ನೃತ್ಯವನ್ನು ನೋಡಬೇಕು ಎಂದು ಕಾತುರಗೊಂಡಿದ್ದ ವರುಣ ಕೂಡ ಭಾನುವಾರ ಕುಣಿದು ಕುಪ್ಪಳಿಸಿದ. ಆದರೆ ಯುವಕರ ಕಲಾಸಕ್ತಿಯ ಮುಂದೆ ಮಳೆ ಗೆಲ್ಲಲಿಲ್ಲ.

Yuvasambhrama in Mysore Manasagangothri
ಸಭಿಕರ ಮನಗೆದ್ದ ಕಲಾಪ್ರದರ್ಶನ

ಹೌದು, ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವ ದಸರಾದ ಆರನೇ ದಿನ ಮಳೆಗೂ ಕೂಡ ಯುವಕರೊಂದಿಗೆ ನೃತ್ಯ ಮಾಡುವ ಆಸೆಯಾಯ್ತು. ಒಂದೆಡೆ ಯುವಪಡೆಯನ್ನು ತಂಪು ಮಾಡಿದ ವರುಣ ಅವರ ಸಂತಸವನ್ನು ಕಸಿಯಲು ಯತ್ನಿಸಿದ. ಆದರೆ ಮಳೆಗೆ ಸೆಡ್ಡು ಹೊಡೆದ ಯುವಪಡೆ, ಗಂಗೋತ್ರಿಯಲ್ಲಿ ನೃತ್ಯದ ಝೇಂಕಾರ ಮೊಳಗಿಸಿತು. ಮಳೆಯ ನಡುವೆಯೂ ರೈತ ಗೀತೆ, ಕನ್ನಡ ಡಿಂಡಿಮ, ನಾಡು-ನುಡಿ ಪ್ರೇಮ ಎಲ್ಲರೆದೆಯಲ್ಲಿ ರಿಂಗಣಿಸಿತು.

Yuvasambhrama in Mysore Manasagangothri
ಮಾನಸ ಗಂಗೋತ್ರಿಯಲ್ಲಿನ 'ಯುವ ದಸರಾ' ರಂಗು
Yuvasambhrama in Mysore Manasagangothri
ಯುವ ಸಂಭ್ರಮ

ಕನ್ನಡ ಕುರಿತ ಚಲನಚಿತ್ರ ಗೀತೆಗಳಿಗೆ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಹೆಚ್.ಡಿ ಕೋಟೆಯ ಏಕಲವ್ಯ ಮಾದರಿ ವಸತಿ ಪದವಿ ಪೂರ್ವ ಕಾಲೇಜಿನ ಹಳ್ಳಿ ಪ್ರತಿಭೆಗಳು ಜಾನಪದ ನೃತ್ಯ ವೈಭವ ತೋರಿದರು. ಹಬ್ಬಗಳ ಕುರಿತ ಹಾಡುಗಳಿಗೆ ತಿ. ನರಸೀಪುರದ ವಿದ್ಯೋದಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಜಾನಪದೀಯ ಪಟ ಕುಣಿತ ಮಾಡಿ ಸಭಿಕರ ಮನ ಗೆದ್ದರು.

ಮಂಡ್ಯದ ಸದ್ವಿದ್ಯಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು. ಮಂಡ್ಯದ ಗ್ಲೋಬಲ್ ಎಕ್ಸಲೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳು ನೃತ್ಯದ ಮೂಲಕ ನಾಡು-ನುಡಿಯ ವೈಭವ ಪಸರಿಸಿದರು.

ಮೈಸೂರು: ಯುವ ಸಮೂಹದ ನೃತ್ಯವನ್ನು ನೋಡಬೇಕು ಎಂದು ಕಾತುರಗೊಂಡಿದ್ದ ವರುಣ ಕೂಡ ಭಾನುವಾರ ಕುಣಿದು ಕುಪ್ಪಳಿಸಿದ. ಆದರೆ ಯುವಕರ ಕಲಾಸಕ್ತಿಯ ಮುಂದೆ ಮಳೆ ಗೆಲ್ಲಲಿಲ್ಲ.

Yuvasambhrama in Mysore Manasagangothri
ಸಭಿಕರ ಮನಗೆದ್ದ ಕಲಾಪ್ರದರ್ಶನ

ಹೌದು, ಮಾನಸ ಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವ ದಸರಾದ ಆರನೇ ದಿನ ಮಳೆಗೂ ಕೂಡ ಯುವಕರೊಂದಿಗೆ ನೃತ್ಯ ಮಾಡುವ ಆಸೆಯಾಯ್ತು. ಒಂದೆಡೆ ಯುವಪಡೆಯನ್ನು ತಂಪು ಮಾಡಿದ ವರುಣ ಅವರ ಸಂತಸವನ್ನು ಕಸಿಯಲು ಯತ್ನಿಸಿದ. ಆದರೆ ಮಳೆಗೆ ಸೆಡ್ಡು ಹೊಡೆದ ಯುವಪಡೆ, ಗಂಗೋತ್ರಿಯಲ್ಲಿ ನೃತ್ಯದ ಝೇಂಕಾರ ಮೊಳಗಿಸಿತು. ಮಳೆಯ ನಡುವೆಯೂ ರೈತ ಗೀತೆ, ಕನ್ನಡ ಡಿಂಡಿಮ, ನಾಡು-ನುಡಿ ಪ್ರೇಮ ಎಲ್ಲರೆದೆಯಲ್ಲಿ ರಿಂಗಣಿಸಿತು.

Yuvasambhrama in Mysore Manasagangothri
ಮಾನಸ ಗಂಗೋತ್ರಿಯಲ್ಲಿನ 'ಯುವ ದಸರಾ' ರಂಗು
Yuvasambhrama in Mysore Manasagangothri
ಯುವ ಸಂಭ್ರಮ

ಕನ್ನಡ ಕುರಿತ ಚಲನಚಿತ್ರ ಗೀತೆಗಳಿಗೆ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ಹೆಚ್.ಡಿ ಕೋಟೆಯ ಏಕಲವ್ಯ ಮಾದರಿ ವಸತಿ ಪದವಿ ಪೂರ್ವ ಕಾಲೇಜಿನ ಹಳ್ಳಿ ಪ್ರತಿಭೆಗಳು ಜಾನಪದ ನೃತ್ಯ ವೈಭವ ತೋರಿದರು. ಹಬ್ಬಗಳ ಕುರಿತ ಹಾಡುಗಳಿಗೆ ತಿ. ನರಸೀಪುರದ ವಿದ್ಯೋದಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಜಾನಪದೀಯ ಪಟ ಕುಣಿತ ಮಾಡಿ ಸಭಿಕರ ಮನ ಗೆದ್ದರು.

ಮಂಡ್ಯದ ಸದ್ವಿದ್ಯಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ನೃತ್ಯ ರೂಪಕ ಎಲ್ಲರ ಗಮನ ಸೆಳೆಯಿತು. ಮಂಡ್ಯದ ಗ್ಲೋಬಲ್ ಎಕ್ಸಲೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳು ನೃತ್ಯದ ಮೂಲಕ ನಾಡು-ನುಡಿಯ ವೈಭವ ಪಸರಿಸಿದರು.

Intro:ಯುವಸಂಭ್ರಮBody:ಮೈಸೂರು: ಯುವ ಸಮೂಹದ ನೃತ್ಯವನ್ನು ನೋಡಬೇಕು ಎಂದು ಕಾತುರಗೊಂಡಿದ್ದ ವರುಣ ಕೂಡ ಭಾನುವಾರ ಕುಣಿದು ಕುಪ್ಪಳಿಸಿದ.ಆದರೆ ಯುವಕರ ಮುಂದೆ ಮಳೆ ಗೆಲ್ಲಲಿಲ್ಲ...
ಹೌದು, ಮಾನಸಗಂಗೋತ್ರಿಯ ಬಯಲು ರಂಗಮಂದಿರದಲ್ಲಿ ನಡೆಯುತ್ತಿರುವ ಯುವಸಂಭ್ರಮದ ಆರನೇ ದಿನ ಮಳೆಗೂ ಕೂಡ, ಯುವಕರೊಂದಿಗೆ ನೃತ್ಯ ಮಾಡುವ ಆಸೆ ಆಯಿತು.ಆದರೆ ಯುವಪಡೆಯನ್ನು ಒಂದು ಕಡೆ ತಂಪು ಮಾಡಿ, ಸಂತಸವನ್ನು ಕಸಿದು ಯತ್ನಿಸಿದ ಆದರೆ ಮಳೆಗೆ ಸಡ್ಡು ಹೊಡೆದ ಯುವಪಡೆ, ಗಂಗೋತ್ರಿಯಲ್ಲಿ ನೃತ್ಯದ ಝೇಂಕಾರದ ಮೊಳಗಿಸಿದರು. ಮಳೆಯ ನಡುವೆಯೂ ರೈತಗೀತೆ, ಕನ್ನಡದ ಡಿಂಡಿಮ, ನಾಡು-ನುಡಿ ಪ್ರೇಮ ಎಲ್ಲರೆದೆಯಲ್ಲಿ ರಿಂಗಣಿಸಿತು. ಕನ್ನಡ ಕುರಿತ ಚಲನಚಿತ್ರ ಗೀತೆಗಳಿಗೆ ನಂಜನಗೂಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.
ಎಚ್.ಡಿ.ಕೋಟೆಯ ಏಕಲವ್ಯ ಮಾದರಿ ವಸತಿ ಪದವಿ ಪೂರ್ವ ಕಾಲೇಜಿನ ಹಳ್ಳಿ ಪ್ರತಿಭೆಗಳು ಜಾನಪದ ನೃತ್ಯ ವೈಭವ ಮೆರೆದವು. ಹಬ್ಬಗಳನ್ನು ಕುರಿತ ಹಾಡುಗಳಿಗೆ ತಿ.ನರಸೀಪುರದ ವಿದ್ಯೋದಯ ಕಲಾ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಜಾನಪದೀಯ ಪಟ ಕುಣಿತ ಮಾಡಿ ಸಭಿಕರ ಮನಗೆದ್ದರು.ಮಂಡ್ಯದ ಸದ್ವಿದ್ಯಾ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ನೃತ್ಯರೂಪಕ ಎಲ್ಲರ ಸಂಭ್ರಮವನ್ನು ಅರೆಕ್ಷಣ ಇಲ್ಲವಾಗಿಸಿತು. ಮಂಡ್ಯದ ಗ್ಲೋಬಲ್ ಎಕ್ಸಲೆಂಟ್ ಪಿಯು ಕಾಲೇಜು ವಿದ್ಯಾರ್ಥಿಗಳು ನೃತ್ಯದ ಮೂಲಕ ನಾಡು-ನುಡಿಯನ್ನು ಪಸರಿಸಿದರು.Conclusion:ಯುವಸಂಭ್ರಮ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.