ETV Bharat / city

ಸದ್ದಿಲ್ಲದೇ  25 ದಿನ ಸೇವಾ ಕಾರ್ಯ ಮಾಡಿದ ಮಾಜಿ ಶಾಸಕ

author img

By

Published : Apr 28, 2020, 6:04 PM IST

ಜನತಾ ಕರ್ಫ್ಯೂ ದಿನದಿಂದ ಹಿಡಿದು ಇಲ್ಲಿಯ ವರಗೂ ಮೈಸೂರು ಅರಮನೆಯ ಸುತ್ತಮುತ್ತ, ದೇವರಾಜು ಅರಸು ರಸ್ತೆ, ಜೆಕೆ ಮೈದಾನ, ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಊಟ ಇಲ್ಲದೇ ಪರದಾಡುತ್ತಿದ್ದ ನಿರ್ಗತಿಕರಿಗೆ ಆಹಾರ ಸಾಮಗ್ರಿ ಕಿಟ್​ ನೀಡುವ ಮೂಲಕ ಕೆ. ಆರ್​. ಕ್ಷೇತ್ರದ ಮಾಜಿ ಶಾಸಕ ಎಂ. ಕೆ. ಸೊಮಶೇಖರ್​ ಮಾನವೀಯತೆ ಮೆರೆಯುತ್ತಿದ್ದಾರೆ.

mk-somashekhar-providing-food-kit-in-mysore
ಶಾಸಕ ಎಂ. ಕೆ. ಸೋಮಶೇಖರ್​

ಮೈಸೂರು: ಬಲಗೈಲಿ ದಾನ ಮಾಡಿದರೆ ಎಡಗೈಗೆ ತಿಳಿಯಬಾರದು ಎಂಬಂತೆ ಲಾಕ್​ಡೌನ್​ ಜಾರಿಯಾದಾಗಿನಿಂದಲೂ ಪ್ರತಿದಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರ ಹಸಿವು ನೀಗಿಸುವ ಮೂಲಕ ಕೆ. ಆರ್​. ಕ್ಷೇತ್ರದ ಮಾಜಿ ಶಾಸಕ ಎಂ. ಕೆ. ಸೊಮಶೇಖರ್​ ಸುಮಾರು 25 ದಿನಗಳಿಂದ ಸೇವಾ ಕಾರ್ಯ ಮಾಡುತ್ತಿದ್ದಾರೆ.

ಮಾರ್ಚ್​ 22 ರಂದು ಘೋಷಣೆಯಾದ ಜನತಾ ಕರ್ಫ್ಯೂ ದಿನದಿಂದ ಹಿಡಿದು ಇಲ್ಲಿಯ ವರಗೂ ಮೈಸೂರು ನಗರದ ಅರಮನೆ ಸುತ್ತಮುತ್ತ, ದೇವರಾಜು ಅರಸು ರಸ್ತೆ, ಜೆಕೆ ಮೈದಾನ, ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಊಟ ಇಲ್ಲದೇ ಪರದಾಡುತ್ತಿದ್ದ ನಿರ್ಗತಿಕರಿಗೆ ಆಹಾರ ಸಾಮಗ್ರಿ ಕಿಟ್​​ಗಳನ್ನು ವಿತರಿಸುತ್ತಿದ್ದಾರೆ.

ರಾಜಸ್ಥಾನ, ಗುಜರಾತ್, ಕಾಶ್ಮೀರ ಸೇರಿದಂತೆ ಮುಂತಾದ ಕಡೆಗಳಿಂದ ಬಂದು ಸಂಕಷ್ಟಕ್ಕೆ ಸಿಲುಕಿರುವ ಬೀದಿ ಬದಿ ವ್ಯಾಪಾರಿಗಳಿಗೆ ದಿನ ಬಳಕೆ ವಸ್ತುಗಳ ಕಿಟ್​​ಗಳನ್ನು ಸದ್ದಿಲ್ಲದೆ ತಮ್ಮ ಬೆಂಬಲಿಗರ ಜೊತೆ ಹೋಗಿ ನಿತ್ಯ ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ಮೈಸೂರು: ಬಲಗೈಲಿ ದಾನ ಮಾಡಿದರೆ ಎಡಗೈಗೆ ತಿಳಿಯಬಾರದು ಎಂಬಂತೆ ಲಾಕ್​ಡೌನ್​ ಜಾರಿಯಾದಾಗಿನಿಂದಲೂ ಪ್ರತಿದಿನ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರ ಹಸಿವು ನೀಗಿಸುವ ಮೂಲಕ ಕೆ. ಆರ್​. ಕ್ಷೇತ್ರದ ಮಾಜಿ ಶಾಸಕ ಎಂ. ಕೆ. ಸೊಮಶೇಖರ್​ ಸುಮಾರು 25 ದಿನಗಳಿಂದ ಸೇವಾ ಕಾರ್ಯ ಮಾಡುತ್ತಿದ್ದಾರೆ.

ಮಾರ್ಚ್​ 22 ರಂದು ಘೋಷಣೆಯಾದ ಜನತಾ ಕರ್ಫ್ಯೂ ದಿನದಿಂದ ಹಿಡಿದು ಇಲ್ಲಿಯ ವರಗೂ ಮೈಸೂರು ನಗರದ ಅರಮನೆ ಸುತ್ತಮುತ್ತ, ದೇವರಾಜು ಅರಸು ರಸ್ತೆ, ಜೆಕೆ ಮೈದಾನ, ರೈಲ್ವೆ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಊಟ ಇಲ್ಲದೇ ಪರದಾಡುತ್ತಿದ್ದ ನಿರ್ಗತಿಕರಿಗೆ ಆಹಾರ ಸಾಮಗ್ರಿ ಕಿಟ್​​ಗಳನ್ನು ವಿತರಿಸುತ್ತಿದ್ದಾರೆ.

ರಾಜಸ್ಥಾನ, ಗುಜರಾತ್, ಕಾಶ್ಮೀರ ಸೇರಿದಂತೆ ಮುಂತಾದ ಕಡೆಗಳಿಂದ ಬಂದು ಸಂಕಷ್ಟಕ್ಕೆ ಸಿಲುಕಿರುವ ಬೀದಿ ಬದಿ ವ್ಯಾಪಾರಿಗಳಿಗೆ ದಿನ ಬಳಕೆ ವಸ್ತುಗಳ ಕಿಟ್​​ಗಳನ್ನು ಸದ್ದಿಲ್ಲದೆ ತಮ್ಮ ಬೆಂಬಲಿಗರ ಜೊತೆ ಹೋಗಿ ನಿತ್ಯ ವಿತರಿಸುವ ಮೂಲಕ ಸಹಾಯ ಹಸ್ತ ಚಾಚಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.