ETV Bharat / city

ಕರಾವಳಿಯಲ್ಲಿ ಒಣ ಮೀನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್​​!

ಮೀನಿಲ್ಲದ ಊಟ ಊಟವೇ ಅಲ್ಲ ಎಂದೇ ಭಾವಿಸುವ ಕರಾವಳಿ ಜನ ಇದೀಗ ಒಣ ಮೀನಿನ ದಾಸರಾಗಿದ್ದಾರೆ. ಹಸಿ ಮೀನಿನ ಕೊರತೆ ಎದುರಾಗಿರುವುದರಿಂದ ಇದೀಗ ಒಣ ಮೀನಿಗೆ ಡಿಮ್ಯಾಂಡ್​ ಹೆಚ್ಚಾಗಿದೆ.

author img

By

Published : Jun 12, 2019, 9:44 PM IST

Updated : Jun 13, 2019, 7:35 AM IST

ಒಣ ಮೀನು ಖರೀದಿಗೆ ಮುಗಿಬಿದ್ದ ಕರಾವಳಿ ಜನ

ಕಾರವಾರ: ಇದೀಗ ಮಳೆಗಾಲ ಆರಂಭವಾಗಿದ್ದು, ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವುದರಿಂದ ಈ ಸಮಯದಲ್ಲಿ ಕರಾವಳಿಯಾದ್ಯಂತ ಆಳ ಸಮುದ್ರದ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಇದರಿಂದ ತಾಜಾ ಮೀನಿನ ಕೊರತೆ ಎದುರಾಗಿದೆ. ಈ ಕಾರಣದಿಂದ ಕರಾವಳಿಯ ಜನ ಒಣ ಮೀನಿನ ಖರೀದಿಗೆ ಮುಂದಾಗಿದ್ದಾರೆ.

ಇನ್ನು ಆಳ ಸಮುದ್ರದ ಮೀನುಗಾರಿಕೆ ಬಂದ್ ಆಗುತ್ತಿದ್ದಂತೆ ಒಣ ಮೀನಿಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ಮೀನಿನ ದರ ಗಗನಕ್ಕೇರಿದೆ. ದೋಡಿ 100 ರೂ., ಬಂಗುಡೆ 100ಕ್ಕೆ 1500ರಿಂದ 1800 ರೂ., ಮೋರಿ 2 ಮೀನಿಗೆ 1400 ರೂ., ಪೇಡಿಬುಟ್ಟಿಗೆ 200 ರೂ., ಬೆಳ್ಳುಂಜಿ ಬುಟ್ಟಿಗೆ 500 ರೂ. ಹೀಗೆ ಮೀನಿನ ದರ ಇದೆ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಕೆಲ‌ ಮೀನಿನ ದರ 50 ರೂಪಾಯಿಯಿಂದ 200 ರೂ.ವರೆಗೂ ಹೆಚ್ಚಳವಾಗಿದೆ. ಇನ್ನು ಕಾರವಾರ ಮಾರುಕಟ್ಟೆಗೆ ಸ್ಥಳೀಯರಲ್ಲದೇ ದೂರದ ಗೋವಾ, ಮಹರಾಷ್ಟ್ರದ ಜನರು ಬಂದು ಒಣ ಮೀನು ಖರೀದಿ ಮಾಡುತ್ತಾರೆ. ಆದರೆ ಈ ಬಾರಿ ಮತ್ಸ್ಯ ಕ್ಷಾಮ ಕಾಣಿಸಿಕೊಂಡಿದ್ದು, ಹಸಿ ಮೀನಿನ ಕೊರತೆ ಎದುರಾಗಿತ್ತು. ಇದರಿಂದ ಒಣ ಮೀನಿಗೆ ಮೇ ತಿಂಗಳ ಆರಂಭದಿಂದಲೇ ಬೇಡಿಕೆ ಹೆಚ್ಚಾಗಿದೆ. ಅದರ ಜತೆಗೆ ದರ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಮೀನು ಮಾರಾಟಗಾರ ಮಹಿಳೆಯರು.

ಕರಾವಳಿಯ ಬಹುತೇಕರಿಗೆ ಮೀನು ಬೇಕೆ ಬೇಕು

ಕರಾವಳಿಯ ಬಹುತೇಕರಿಗೆ ಮೀನು ಬೇಕೆ ಬೇಕು. ಆದರೆ ಇದೀಗ ಮೀನುಗಾರಿಕೆ ಬಂದ್ ಆಗಿದ್ದರಿಂದ ಬಹುತೇಕರು ಒಣ ಮೀನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಮಳೆಗಾಲದ ಮೂರು ತಿಂಗಳೂ ಈ ಒಣ ಮೀನಿನ ಮೂಲಕವೇ ಖಾದ್ಯ ತಯಾರಿಸುತ್ತಾರೆ. ಈ ಕಾರಣದಿಂದಲೇ ಮೀನು ಖಾದ್ಯ ಪ್ರಿಯರು ಬೆಲೆ ಹೆಚ್ಚಾಗಿದ್ದರೂ ಲೆಕ್ಕಿಸದೇ ಒಣ ಮೀನು ಖರೀದಿಗೆ ಮುಂದಾಗಿದ್ದಾರೆ. ಏನೇ ಆಗ್ಲಿ ಮೀನಿಲ್ಲದೇ ಮಳೆಗಾಲ ಕಳೆಯುವುದು ಕಷ್ಟ ಮಾರಾಯ್​ರೆ ಎನ್ನುತ್ತಾರೆ ಸ್ಥಳೀಯರು.

ಕಾರವಾರ: ಇದೀಗ ಮಳೆಗಾಲ ಆರಂಭವಾಗಿದ್ದು, ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವುದರಿಂದ ಈ ಸಮಯದಲ್ಲಿ ಕರಾವಳಿಯಾದ್ಯಂತ ಆಳ ಸಮುದ್ರದ ಮೀನುಗಾರಿಕೆಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಇದರಿಂದ ತಾಜಾ ಮೀನಿನ ಕೊರತೆ ಎದುರಾಗಿದೆ. ಈ ಕಾರಣದಿಂದ ಕರಾವಳಿಯ ಜನ ಒಣ ಮೀನಿನ ಖರೀದಿಗೆ ಮುಂದಾಗಿದ್ದಾರೆ.

ಇನ್ನು ಆಳ ಸಮುದ್ರದ ಮೀನುಗಾರಿಕೆ ಬಂದ್ ಆಗುತ್ತಿದ್ದಂತೆ ಒಣ ಮೀನಿಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ಮೀನಿನ ದರ ಗಗನಕ್ಕೇರಿದೆ. ದೋಡಿ 100 ರೂ., ಬಂಗುಡೆ 100ಕ್ಕೆ 1500ರಿಂದ 1800 ರೂ., ಮೋರಿ 2 ಮೀನಿಗೆ 1400 ರೂ., ಪೇಡಿಬುಟ್ಟಿಗೆ 200 ರೂ., ಬೆಳ್ಳುಂಜಿ ಬುಟ್ಟಿಗೆ 500 ರೂ. ಹೀಗೆ ಮೀನಿನ ದರ ಇದೆ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಕೆಲ‌ ಮೀನಿನ ದರ 50 ರೂಪಾಯಿಯಿಂದ 200 ರೂ.ವರೆಗೂ ಹೆಚ್ಚಳವಾಗಿದೆ. ಇನ್ನು ಕಾರವಾರ ಮಾರುಕಟ್ಟೆಗೆ ಸ್ಥಳೀಯರಲ್ಲದೇ ದೂರದ ಗೋವಾ, ಮಹರಾಷ್ಟ್ರದ ಜನರು ಬಂದು ಒಣ ಮೀನು ಖರೀದಿ ಮಾಡುತ್ತಾರೆ. ಆದರೆ ಈ ಬಾರಿ ಮತ್ಸ್ಯ ಕ್ಷಾಮ ಕಾಣಿಸಿಕೊಂಡಿದ್ದು, ಹಸಿ ಮೀನಿನ ಕೊರತೆ ಎದುರಾಗಿತ್ತು. ಇದರಿಂದ ಒಣ ಮೀನಿಗೆ ಮೇ ತಿಂಗಳ ಆರಂಭದಿಂದಲೇ ಬೇಡಿಕೆ ಹೆಚ್ಚಾಗಿದೆ. ಅದರ ಜತೆಗೆ ದರ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಮೀನು ಮಾರಾಟಗಾರ ಮಹಿಳೆಯರು.

ಕರಾವಳಿಯ ಬಹುತೇಕರಿಗೆ ಮೀನು ಬೇಕೆ ಬೇಕು

ಕರಾವಳಿಯ ಬಹುತೇಕರಿಗೆ ಮೀನು ಬೇಕೆ ಬೇಕು. ಆದರೆ ಇದೀಗ ಮೀನುಗಾರಿಕೆ ಬಂದ್ ಆಗಿದ್ದರಿಂದ ಬಹುತೇಕರು ಒಣ ಮೀನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಮಳೆಗಾಲದ ಮೂರು ತಿಂಗಳೂ ಈ ಒಣ ಮೀನಿನ ಮೂಲಕವೇ ಖಾದ್ಯ ತಯಾರಿಸುತ್ತಾರೆ. ಈ ಕಾರಣದಿಂದಲೇ ಮೀನು ಖಾದ್ಯ ಪ್ರಿಯರು ಬೆಲೆ ಹೆಚ್ಚಾಗಿದ್ದರೂ ಲೆಕ್ಕಿಸದೇ ಒಣ ಮೀನು ಖರೀದಿಗೆ ಮುಂದಾಗಿದ್ದಾರೆ. ಏನೇ ಆಗ್ಲಿ ಮೀನಿಲ್ಲದೇ ಮಳೆಗಾಲ ಕಳೆಯುವುದು ಕಷ್ಟ ಮಾರಾಯ್​ರೆ ಎನ್ನುತ್ತಾರೆ ಸ್ಥಳೀಯರು.

Intro:ಕಾರವಾರ: ಆಳಸಮುದ್ರದ ಮೀನುಗಾರಿಕೆ‌ ನಿಷೇಧದಿಂದಾಗಿ ತಾಜಾ ಮೀನಿನ ಕೊರತೆ ಎದುರಾಗಿದೆ. ಆದರೆ ಮೀನಿಲ್ಲದೇ ಹೊತ್ತಿನ ಊಟಕ್ಕೂ ಚಡಪಡಿಸುವ ಕರಾವಳಿಗರು ಇದೀಗ ಒಣ ಮೀನಿನ ಖರೀದಿಗೆ ಮುಗ್ಗಿಬಿದ್ದಿದ್ದು, ಗಗನಕ್ಕೇರಿದ ದರವನ್ನು ಲೆಕ್ಕಿಸದೇ ಭರ್ಜರಿ ವ್ಯಾಪಾರ ನಡೆಸಿದ್ದಾರೆ.
ಹೌದು, ಕರಾವಳಿಯಲ್ಲಿ ಮೀನು ಪ್ರಮುಖ ಆಹಾರ. ಮೀನುಗಾರಿಕೆಯನ್ನೆ ಉದ್ಯೋಗವನ್ನಾಗಿಸಿಕೊಂಡು ಬದುಕು ಕಟ್ಟಿಕೊಂಡವರು ಒಂದು ಕಡೆಯಾದರೆ, ಇನ್ನೊಂದೆಡೆ ಎಲ್ಲಿಂದಲೋ ಬಂದು ಉದ್ಯೋಗ ಸೇರಿದಂತೆ ಇನ್ನಿತರ ಕಾರಣಗಳಿಗೆ ನೆಲಿಯೂರಿದ ಬಹುತೇಕರು ಮತ್ಸ್ಯವನ್ನು ಹೆಚ್ಚು ಇಷ್ಟಪಡುತ್ತಾರೆ. ಈ ಕಾರಣದಿಂದ ಕರಾವಳಿ ತಾಲ್ಲೂಕುಗಳಲ್ಲಿ ವರ್ಷದುದ್ದಕ್ಕೂ ಮೀನಿಗೆ ಬೇಡಿಕೆ ಇದ್ದೆ ಇರುತ್ತದೆ.
ಆದರೆ ಇದೀಗ ಮಳೆಗಾಲ ಆರಂಭವಾಗಿದ್ದು, ಮೀನುಗಳು ಸಂತಾನೋತ್ಪತ್ತಿಯಲ್ಲಿ ತೊಡಗುವುದರಿಂದ ಈ ಸಮಯದಲ್ಲಿ ಕರಾವಳಿಯಾದ್ಯಂತ ಆಳ ಸಮುದ್ರದ ಮೀನುಗಾರಿಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ಇದರಿಂದ ತಾಜಾ ಮೀನಿನ ಕೊರತೆ ಎದುರಾಗಿದೆ. ಐಸ್ ನಲ್ಲಿ ಇಟ್ಟ ಮೀನು ಮಾರುಕಟ್ಟೆಗಳ್ಲಿ ಸಿಗುತ್ತಿದೆಯಾದರೂ ಅದು ಕೂಡ ತುಟ್ಟಿಯಾಗಿದೆ. ಈ ಕಾರಣದಿಂದ ಕರಾವಳಿಯ ಜನತೆ ಒಣ ಮೀನಿನ ಖರೀದಿಗೆ ಮುಂದಾಗಿದೆ. ಮಳೆಗಾಲ ಮುಗಿಯುವವರೆಗೆ ಅವಶ್ಯವಿರುವಷ್ಟು ಮೀನುಗಳನ್ನು ಸಂಗ್ರಹಿಸಲು ಮುಂದಾಗಿದ್ದಾರೆ.
ಗಗನಕ್ಕೇರಿದ ಒಣ ಮೀನಿನ ದರ:
ಇನ್ನು ಆಳ ಸಮುದ್ರದ ಮೀನುಗಾರಿಕೆ ಬಂದ್ ಆಗುತ್ತಿದ್ದಂತೆ ಒಣ ಮೀನಿಗೆ ಬೇಡಿಕೆ ಹೆಚ್ಚಾಗಿದ್ದು, ಇದೀಗ ಮೀನಿನ ದರ ಗಗನಕ್ಕೇರಿದೆ. ದೋಡಿ ೧೦೦, ಬಂಗುಡೆ ೧೦೦ಕ್ಕೆ ೧೫೦೦ರಿಂದ ೧೮೦೦, ಮೋರಿ ೨ ಮೀನಿಗೆ ೧೪೦೦, ಪೇಡಿಬುಟ್ಟಿಗೆ ೨೦೦, ಬೆಳ್ಳುಂಜಿ ಬುಟ್ಟಿಗೆ ೫೦೦ ಹೀಗೆ ಮೀನಿನ ದರ ಇದೆ. ಆದರೆ ಈ ಬಾರಿ ಕಳೆದ ವರ್ಷಕ್ಕಿಂತ ಕೆಲ‌ ಮೀನಿನ ದರ ೫೦ ರಿಂದ ೨೦೦ ರೂ ವರೆಗೂ ಹೆಚ್ಚಳವಾಗಿದೆ ಎನ್ನುತ್ತಾರೆ ವ್ಯಾಪಾರಸ್ಥ ಮಹಿಳೆಯರು.
ಈ ಭಾರಿ ಬೇಡಿಕೆ ಹೆಚ್ಚು:
ಇನ್ನು ಕಾರವಾರ ಮಾರುಕಟ್ಟೆಗೆ ಸ್ಥಳಿಯರಲ್ಲದೇ ದೂರದ ಗೋವಾ, ಮಹರಾಷ್ಟ್ರದ ಜನರು ಬಂದು ಖರೀದಿ ಮಾಡುತ್ತಾರೆ. ಆದರೆ ಈ ಭಾರಿ ಮತ್ಸ್ಯ ಕ್ಷಾಮ ಮೂರು ತಿಂಗಳ ಹಿಂದೆ ಕಾಣಿಸಿಕೊಂಡಿದ್ದು, ಹಸಿ ಮೀನಿನ ಕೊರತೆ ಎದುರಾಗಿತ್ತು. ಇದರಿಂದ ಒಣ ಮೀನಿಗೆ ಮೇ ತಿಂಗಳ ಆರಂಭದಿಂದಲೇ ಬೇಡಿಕೆ ಹೆಚ್ಚಾಗಿದೆ. ಅದರ ಜತೆಗೆ ದರ ಕೂಡ ಹೆಚ್ಚಾಗಿದೆ ಎನ್ನುತ್ತಾರೆ ಮೀನುಮಾರಾಟಗಾರ ಮಹಿಳೆ ಸುಶೀಲಾ ಹರಿಕಂತ್ರ.
ಕರಾವಳಿಯ ಬಹುತೇಕರಿಗೆ ಮೀನು ಬೇಕೆ ಬೇಕು. ಆದರೆ ಇದೀಗ ಮೀನುಗಾರಿಕೆ ಬಂದ್ ಆಗಿದ್ದರಿಂದ ಬಹುತೇಕರು ಒಣಮೀನು ಸಂಗ್ರಹಿಸಿಕೊಳ್ಳುತ್ತಿದ್ದಾರೆ. ಮಳೆಗಾಲ ಮೂರು ತಿಂಗಳೂ ಈ ಒಣ ಮೀನಿನ ಮೂಲಕವೇ ಖಾದ್ಯ ತಯಾರಿಸುತ್ತಾರೆ. ಆದರೆ ಮೀನಿಲ್ಲದೇ ಮಳೆಗಾಲ ಕಳೆಯುವುದು ಕಷ್ಟ ಎನ್ನುತ್ತಾರೆ ಸ್ಥಳೀಯರಾದ ಅನಂತ್ ಹುಲಸ್ವಾರ್.
ಒಟ್ಟಿನಲ್ಲಿ ಮೀನುಗಾರಿಕೆ ನಿಷೇಧದಿಂದಾಗಿ ಮೀನಿನ ಕೊರತೆ ಎದುರಾಗಿದೆ. ಆದರೆ ಕರಾವಳಿಯ ಬಹುತೇಕ ಜನರು ಒಣ ಮೀನನ್ನು ಖರೀದಿಸುತ್ತಿದ್ದು, ಈ ಮೂಲಕ ಮಳೆಗಾಲದಲ್ಲಿ ಮತ್ಸ್ಯದ ಖಾದ್ಯಕ್ಕೆ ಸಂಗ್ರಹಿಸಿಕೊಂಡಿದ್ದಾರೆ.


Body:k


Conclusion:k
Last Updated : Jun 13, 2019, 7:35 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.