ETV Bharat / city

ಮುಚ್ಚಿದ ಅಂಗಡಿ ತೆರೆಸಿ ಗ್ರಾಮದ ಜನರಿಗೆ ಸಹಕಾರ ನೀಡಿದ ಎಸಿ

author img

By

Published : Mar 31, 2020, 8:00 PM IST

ರಾಜ್ಯದಲ್ಲಿ ಲಾಕ್​​ಡೌನ್​ ಮುಂದುವರೆದಿದ್ದು ಜನ ದಿನ ಬಳಕೆ ವಸ್ತುಗಳ ಖರೀದಿಗೆ ಈಗಾಗಲೇ ಸರ್ಕಾರ ಸಮ್ಮತಿ ನೀಡಿದೆ. ಇದರ ನಡುವೆ ಕಡಬದಲ್ಲಿ ಸರ್ಕಾರ ನಿಯಮಕ್ಕೆ ವಿರುದ್ಧವಾಗಿ ಮುಚ್ಚಿಸಿದ ದಿನಸಿ ಅಂಗಡಿಗಳನ್ನು ಪುತ್ತೂರು ಎಸಿ ಯತೀಶ್​ ಉಳ್ಳಾಲ ತೆರೆಸಿ ಸಾರ್ವಜನಿಕರ ಉಪಯೋಗಕ್ಕೆ ದಾರಿ ಮಾಡಿಕೊಟ್ಟರು.

putturu-ac-opened-need-shops-for-people-in-kadaba
ಗ್ರಾಮ ಪಂಚಾಯತಿ ಮುಚ್ಚಿದ ಅಂಗಡಿ ಸಾರ್ವಜನಿಕರ ಸಹಾಯಕವಾದ ಪುತ್ತೂರು ಎಸಿ

ಸುಳ್ಯ: ದಿನಸಿ ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಖರೀದಿಸಲು ಸಡಿಲಿಕೆ ನೀಡಿದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಉಪ್ಪಿನಂಗಡಿ, ನೆಲ್ಯಾಡಿಯಲ್ಲಿ ಅಂಗಡಿ, ಪೆಟ್ರೋಲ್​​​​ ಪಂಪ್​​ಗಳಲ್ಲಿ ಭಾರೀ ಜನಜಂಗುಳಿ ಕಂಡು ಬಂತು.

ಗ್ರಾಮ ಪಂಚಾಯತಿ ಮುಚ್ಚಿದ ಅಂಗಡಿ ಸಾರ್ವಜನಿಕರ ಸಹಾಯಕವಾದ ಪುತ್ತೂರು ಎಸಿ

ಈ ಮಧ್ಯ ಕಡಬ ಗ್ರಾಮ ಪಂಚಾಯತ್​​​ ಎಲ್ಲ ಅಂಗಡಿಗಳನ್ನು ಮುಚ್ಚುವಂತೆ ನಿಯಮ ಜಾರಿಮಾಡಿದ್ದು, ಸ್ಥಳೀಯರ ಆಕ್ರೋಶ ಕಾರಣವಾಯಿತು. ಇನ್ನು ಸ್ಥಳಕ್ಕೆ ಪುತ್ತೂರು ಸಹಾಯಕ ಆಯುಕ್ತ ಯತೀಶ್​ ಉಳ್ಳಾಲ ಭೇಟಿ ನೀಡಿ ಮುಚ್ಚಿದ್ದ ಅಂಗಡಿಗಳನ್ನು ತೆರೆಸಿದರು.

ಅಲ್ಲದೆ ನಾಳೆಯಿಂದ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಜನರಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ಸುಳ್ಯ: ದಿನಸಿ ಅಂಗಡಿಗಳಲ್ಲಿ ಸಾಮಗ್ರಿಗಳನ್ನು ಖರೀದಿಸಲು ಸಡಿಲಿಕೆ ನೀಡಿದ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಕಡಬ, ಉಪ್ಪಿನಂಗಡಿ, ನೆಲ್ಯಾಡಿಯಲ್ಲಿ ಅಂಗಡಿ, ಪೆಟ್ರೋಲ್​​​​ ಪಂಪ್​​ಗಳಲ್ಲಿ ಭಾರೀ ಜನಜಂಗುಳಿ ಕಂಡು ಬಂತು.

ಗ್ರಾಮ ಪಂಚಾಯತಿ ಮುಚ್ಚಿದ ಅಂಗಡಿ ಸಾರ್ವಜನಿಕರ ಸಹಾಯಕವಾದ ಪುತ್ತೂರು ಎಸಿ

ಈ ಮಧ್ಯ ಕಡಬ ಗ್ರಾಮ ಪಂಚಾಯತ್​​​ ಎಲ್ಲ ಅಂಗಡಿಗಳನ್ನು ಮುಚ್ಚುವಂತೆ ನಿಯಮ ಜಾರಿಮಾಡಿದ್ದು, ಸ್ಥಳೀಯರ ಆಕ್ರೋಶ ಕಾರಣವಾಯಿತು. ಇನ್ನು ಸ್ಥಳಕ್ಕೆ ಪುತ್ತೂರು ಸಹಾಯಕ ಆಯುಕ್ತ ಯತೀಶ್​ ಉಳ್ಳಾಲ ಭೇಟಿ ನೀಡಿ ಮುಚ್ಚಿದ್ದ ಅಂಗಡಿಗಳನ್ನು ತೆರೆಸಿದರು.

ಅಲ್ಲದೆ ನಾಳೆಯಿಂದ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಜನರಿಗೆ ಆಹಾರ ಸಾಮಗ್ರಿಗಳನ್ನು ತಲುಪಿಸಲಾಗುವುದು ಎಂದು ಭರವಸೆ ನೀಡಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.