ETV Bharat / city

ಕಾಸರಗೋಡು-ಮಂಗಳೂರು ಪಾಸ್ ಗೊಂದಲ ನಿವಾರಣೆಗೆ ಗಡಿಯಲ್ಲಿ 3 ಹೆಲ್ಪ್​ ಡೆಸ್ಕ್​: ಕೋಟಾ ಶ್ರೀನಿವಾಸ ಪೂಜಾರಿ

ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಸಂಚಾರಕ್ಕೆ ಸಂಬಂಧಿಸಿದಂತೆ ಪಾಸ್​ನಲ್ಲಿ ಗೊಂದಲವಿರುವುದರಿಂದ ತಲಪಾಡಿ ಗಡಿಯಲ್ಲಿ ಮೂರು ಹೆಲ್ಪ್ ಡೆಸ್ಕ್​ಗಳನ್ನು ಸ್ಥಾಪಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಪ್ರಯಾಣಿಕರಿಗೆ ತಲಪಾಡಿ ಗಡಿಯಲ್ಲಿ ಪಾಸ್ ನೀಡಲಾಗುವುದು ಎಂದು ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

author img

By

Published : Jun 8, 2020, 7:06 PM IST

3 Help Desk at the border to relieve Kasargodu-Mangalore Pass
ಕಾಸರಗೋಡು-ಮಂಗಳೂರು ಪಾಸ್ ಗೊಂದಲ ನಿವಾರಣೆಗೆ ಗಡಿಯಲ್ಲಿ 3 ಹೆಲ್ಪ್​ ಡೆಸ್ಕ್​: ಕೋಟ ಶ್ರೀನಿವಾಸ ಪೂಜಾರಿ

ಮಂಗಳೂರು: ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾದ ಪಾಸ್ ಬಗ್ಗೆ ಗೊಂದಲಗಳಿರುವುದರಿಂದ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಮೂರು ಹೆಲ್ಪ್ ಡೆಸ್ಕ್​ಗಳನ್ನ ರಚಿಸಲಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕಾಸರಗೋಡು-ಮಂಗಳೂರು ಪಾಸ್ ಗೊಂದಲ ನಿವಾರಣೆಗೆ ಗಡಿಯಲ್ಲಿ 3 ಹೆಲ್ಪ್​ ಡೆಸ್ಕ್​: ಕೋಟಾ ಶ್ರೀನಿವಾಸ ಪೂಜಾರಿ

ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಸಂಚಾರಕ್ಕೆ ಸಂಬಂಧಿಸಿದಂತೆ ಪಾಸ್​ನಲ್ಲಿ ಗೊಂದಲವಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಕಾಸರಗೋಡು ಕಡೆಯಿಂದ 2 ಸಾವಿರಕ್ಕೂ ಅಧಿಕ ಅರ್ಜಿಗಳು ಪಾಸ್​ಗಾಗಿ ಬಂದಿದ್ದವು. ನಿನ್ನೆಯ ತನಕ 400 ಪಾಸ್ ವಿತರಣೆಯಾಗಿದೆ. ಉಳಿದ ಅರ್ಜಿಗಳಿಗೆ ಆಧಾರ್ ಕಾರ್ಡ್ ಸಹಿತ ಸಮರ್ಪಕ ದಾಖಲೆ ಇಲ್ಲವೆಂದು ದ.ಕ ಜಿಲ್ಲಾಡಳಿತ ಪಾಸ್ ವಿತರಣೆ ಸ್ಥಗಿತಗೊಳಿಸಿದೆ.

ಈ ಹಿನ್ನೆಲೆಯಲ್ಲಿ ತಲಪಾಡಿ ಗಡಿಯಲ್ಲಿ ಮೂರು ಹೆಲ್ಪ್ ಡೆಸ್ಕ್​ಗಳನ್ನು ಸ್ಥಾಪಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಪ್ರಯಾಣಿಕರಿಗೆ ತಲಪಾಡಿ ಗಡಿಯಲ್ಲಿ ಪಾಸ್ ನೀಡಲಾಗುವುದು ಎಂದರು.

ಮಂಗಳೂರು: ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಸಂಚಾರಕ್ಕೆ ವ್ಯವಸ್ಥೆ ಮಾಡಲಾದ ಪಾಸ್ ಬಗ್ಗೆ ಗೊಂದಲಗಳಿರುವುದರಿಂದ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಮೂರು ಹೆಲ್ಪ್ ಡೆಸ್ಕ್​ಗಳನ್ನ ರಚಿಸಲಾಗಿದೆ ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಕಾಸರಗೋಡು-ಮಂಗಳೂರು ಪಾಸ್ ಗೊಂದಲ ನಿವಾರಣೆಗೆ ಗಡಿಯಲ್ಲಿ 3 ಹೆಲ್ಪ್​ ಡೆಸ್ಕ್​: ಕೋಟಾ ಶ್ರೀನಿವಾಸ ಪೂಜಾರಿ

ಮಂಗಳೂರಿನಲ್ಲಿ ಮಾತನಾಡಿದ ಅವರು, ಕಾಸರಗೋಡು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ನಡುವೆ ಸಂಚಾರಕ್ಕೆ ಸಂಬಂಧಿಸಿದಂತೆ ಪಾಸ್​ನಲ್ಲಿ ಗೊಂದಲವಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ಕಾಸರಗೋಡು ಕಡೆಯಿಂದ 2 ಸಾವಿರಕ್ಕೂ ಅಧಿಕ ಅರ್ಜಿಗಳು ಪಾಸ್​ಗಾಗಿ ಬಂದಿದ್ದವು. ನಿನ್ನೆಯ ತನಕ 400 ಪಾಸ್ ವಿತರಣೆಯಾಗಿದೆ. ಉಳಿದ ಅರ್ಜಿಗಳಿಗೆ ಆಧಾರ್ ಕಾರ್ಡ್ ಸಹಿತ ಸಮರ್ಪಕ ದಾಖಲೆ ಇಲ್ಲವೆಂದು ದ.ಕ ಜಿಲ್ಲಾಡಳಿತ ಪಾಸ್ ವಿತರಣೆ ಸ್ಥಗಿತಗೊಳಿಸಿದೆ.

ಈ ಹಿನ್ನೆಲೆಯಲ್ಲಿ ತಲಪಾಡಿ ಗಡಿಯಲ್ಲಿ ಮೂರು ಹೆಲ್ಪ್ ಡೆಸ್ಕ್​ಗಳನ್ನು ಸ್ಥಾಪಿಸಿ, ದಕ್ಷಿಣ ಕನ್ನಡ ಜಿಲ್ಲೆಗೆ ಬರುವ ಪ್ರಯಾಣಿಕರಿಗೆ ತಲಪಾಡಿ ಗಡಿಯಲ್ಲಿ ಪಾಸ್ ನೀಡಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.