ETV Bharat / city

‘ಪಾಪು’ ಹೋರಾಟದ ಬದುಕು ಹೀಗಿತ್ತು..

ನಾಡೋಜ ಡಾ. ಪಾಟೀಲ ಪುಟ್ಟಪ್ಪನವರ ಬದುಕು ಹೋರಾಟದಿಂದ‌ ಕೂಡಿತ್ತು. ಅವರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿ ಸೈ ಎನಿಸಿಕೊಂಡವರು.

author img

By

Published : Mar 16, 2020, 11:01 PM IST

Updated : Mar 17, 2020, 7:02 AM IST

puttappa-life-and-fight
puttappa-life-and-fight

ಕನ್ನಡಕ್ಕಾಗಿ ಹೋರಾಟ ನಡೆಸಿದ ನಾಡಿನ ಹಿರಿಯ ಪತ್ರಕರ್ತ, ಸಾಹಿತಿ ನಾಡೋಜ ಡಾ. ಪಾಟೀಲ್​ ಪುಟ್ಟಪ್ಪ ಇನ್ನಿಲ್ಲ. ಪಾಟೀಲ ಪುಟ್ಟಪ್ಪನವರ ಬದುಕು ಹೋರಾಟದಿಂದ‌ ಕೂಡಿತ್ತು. ಅವರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿ ಸೈ ಎನಿಸಿಕೊಂಡವರು.

ರಾಷ್ಟ್ರೀಯ ಪ್ರಭಾವ:

1930 ರಲ್ಲಿ `ನಹಿ ರಖನಾ ನಹಿ ರಖನಾ ಅಂಗ್ರೇಜ್ ಸರಕಾರ’ ಎಂದು ಹೇಳುತ್ತಾ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡಿದ್ದು, ಜವಾಹರಲಾಲ್ ನೆಹರೂ ಹುಬ್ಬಳ್ಳಿಗೆ ಬಂದಾಗ ಅವರನ್ನು ನೋಡಿ ಪ್ರಭಾವಿತರಾದದ್ದು. 1930 ರಿಂದ ಸಂಪೂರ್ಣ ಖಾದಿ ಧಾರಣೆ. 1934 ರಲ್ಲಿ ಮಹಾತ್ಮ ಗಾಂಧೀಜಿ ಹರಿಜನ ಪ್ರವಾಸ ಕೈಕೊಂಡು ಬ್ಯಾಡಗಿಗೆ ಬಂದಾಗ ಸ್ವಯಂ ಸೇವಕನಾಗಿದ್ದಾಗ ಅವರಿಂದ ಬೆನ್ನು ತಟ್ಟಿಸಿಕೊಂಡ ಅನುಭವ ಪಾಟೀಲ್​ ಪುಟ್ಟಪ್ಪ ಅವರಿಗಿದೆ. 1937 ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.

Patil puttappa
ಪಾಟೀಲ ಪುಟ್ಟಪ್ಪ

ಕಾಲೇಜು ಜೀವನ:

ಕಾಲೇಜು ಶಿಕ್ಷಣ ಧಾರವಾಡದಲ್ಲಿ 1939 ರಲ್ಲಿ ಆರಂಭವಾಯ್ತು. ಅದೇ ವರ್ಷ ಉಡುಪಿಯ `ಅಂತರಂಗ’ ಪತ್ರಿಕೆಯಲ್ಲಿ ಶ್ರೀರಂಗ, ಕುವೆಂಪು, ಬೇಂದ್ರೆಯವರ ಮೇಲೆ ಲೇಖನ ಬರೆದರು. 1941 ರಲ್ಲಿ `ನಾನು ಮಾಸ್ತಿಯವರನ್ನು ಕಂಡೆ’ ಎಂಬ ಲೇಖನ, ಮಾಸ್ತಿಯವರಿಂದ ಮೆಚ್ಚುಗೆ ಪಡೆಯಿತು. ಸಿ. ಕೆ. ವೆಂಕಟರಾಮಯ್ಯನವರ `ಅಬ್ರಹಾಂ ಲಿಂಕನ್’ ಕುರಿತು `ಜೀವನ’ ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಪ್ರತಿಯಾಗಿ ವಿ. ಕೃ. ಗೋಕಾಕರು ಪ್ರತಿ ವಿಮರ್ಶೆ ಬರೆದವರು ಇದೇ ಪಾಟೀಲ್​ ಪುಟ್ಟಪ್ಪ. ಬೇಂದ್ರೆಯವರ ನಿಸರ್ಗ ಕವಿತೆಗಳು-ಜೀವನದಲ್ಲಿ ಸುದೀರ್ಘ ಲೇಖನ ಬರೆದು ಪ್ರಸಿದ್ಧರಾದವರು. 1942ರಲ್ಲಿ ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆಯನ್ನೂ ಮಾಡಿದ್ದರು..

ಚಲೇಜಾವ್ ಚಳವಳಿ:

1942 ರಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಸಂಘಟನೆ ಮಾಡಿದ `ಆಪಾದನೆಗಾಗಿ’ ಅವರನ್ನು ಕರ್ನಾಟಕ ಕಾಲೇಜಿನಿಂದ ಹೊರಹಾಕಲಾಗಿತ್ತು. ಒಂದು ವರ್ಷ ಕಾಲ ಭೂಗತ ಕಾರ್ಯಕರ್ತರಾಗಿ ಕೆಲಸ ಮಾಡಿ ತಮ್ಮ ಹೋರಾಟ ಎಂತಹದ್ದು ಎಂಬುದನ್ನು ಪಾಟೀಲ​ ಪುಟ್ಟಪ್ಪನವರು ತೋರಿಸಿಕೊಟ್ಟಿದ್ದರು.

ಕಾನೂನು ಕಾಲೇಜು:

1943 ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಸೇರ್ಪಡೆಯಾದ ಇವರು, 1945 ರಲ್ಲಿ ಕಾನೂನು ಪದವೀಧರರಾಗಿ ಹೊರ ಬಂದರು.

ಮದುವೆ: 1945 ರಲ್ಲಿ ನವೆಂಬರ್ 11 ರಂದು ವಿಜಾಪುರದ ಡಾ. ಬಿ. ಎಂ. ಪಾಟೀಲರ ಮಗಳು ಇಂದುಮತಿಯವರೊಡನೆ ಹೊಸ ಜೀವನಕ್ಕೆ ಕಾಲಿಟ್ಟರು. ಇವರಿಗೆ ಮಂಜುಳಾ, ಶೈಲಜಾ, ಅಶೋಕ ಎಂಬ ಮೂವರು ಮಕ್ಕಳಿದ್ದಾರೆ.

ಮುಂಬಯಿ ವಾಸ್ತವ್ಯ:

1945 ರಲ್ಲಿ ಆರಂಭಕ್ಕೆ ಹೈಕೋರ್ಟಿನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಮುಂಬಯಿಗೆ ಪ್ರಯಾಣ ಮಾಡಿದ ಪಾಟೀಲ್​ ಪುಟ್ಟಪ್ಪ, ಅಲ್ಲಿ ನಿವೃತ್ತ ಜಸ್ಟೀಸ್ ಜಹಗೀರದಾರರ ಛೇಂಬರಿನಲ್ಲಿ, ಡಾ. ತೆಂಡೂಲಕರರು ಸರದಾರ ಪಟೇಲರ ಭೇಟಿ ಮಾಡಿಸಿದರು. ಈ ವೇಳೆ ಅವರು, ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದನ್ನು ತಿಳಿಸಿದರು. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರದಾರ ಪಟೇಲರು ಪುಟ್ಟಪ್ಪಗೆ ಹೇಳಿದರು. ಫ್ರೀಪ್ರೆಸ್ ಜರ್ನಲ್. ಬಾಂಬೈ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ ಬರೆದರು. ಕೆ. ಸದಾನಂದರು `ಫ್ರೀ ಪ್ರೆಸ್’ ಸೇರುವಂತೆ ಒತ್ತಾಯಪಡಿಸಿದರು. ಕೆ. ಎಫ್. ಪಾಟೀಲ ಮೊದಲಾದ ಸ್ನೇಹಿತರು ಹುಬ್ಬಳ್ಳಿಯಲ್ಲಿ ತಾವು ಆರಂಭಿಸಬೇಕೆಂದ ಪತ್ರಿಕೆಗೆ ಸಂಪಾದಕರಾಗಬೇಕೆಂದು ಹೇಳಿದರು.

ಕನ್ನಡಿಗರ ಮಹಾಧಿವೇಶನ:

ದಾವಣಗೆರೆಯಲ್ಲಿ ಕನ್ನಡಿಗರ ಪ್ರಥಮ ಮಹಾಧಿವೇಶನ ಕೂಡಿಸುವ ಕಾರ್ಯ ಮಾಡಿದ ಇವರು, ಕಾರ್ಯದರ್ಶಿಯಾಗಿ ಮಹಾಧಿವೇಶನ ಕೆಲಸ ಮಾಡಿದ್ದರು. 1946 ಆಗಸ್ಟ್​ನಲ್ಲಿ ಮುಂಬಯಿ ಮಂತ್ರಿ ಎಂ. ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಮಂತ್ರಿ ಕೆ. ಆರ್. ಕಾರಂತರು ಉದ್ಘಾಟಕರಾಗಿದ್ದರು.

ಪತ್ರಿಕೋದ್ಯಮ:

1936ರಲ್ಲಿ ಹಾವೇರಿಯಲ್ಲಿ ಓದುತ್ತಿರುವಾಗ `ನಮ್ಮ ನಾಡು’ ಕೈ ಬರಹದ ಪತ್ರಿಕೆಯ ಪ್ರಕಟಣೆ ಮಾಡಿದ್ದರು. ವಾರ ಪತ್ರಿಕೆ `ವಿಶಾಲ ಕರ್ನಾಟಕ’ದ ಸಂಪಾದಕತ್ವ ವಹಿಸಿದ ಇವರು ಇದೇ ಪತ್ರಿಕೆಯನ್ನು ಅಗಸ್ಟ್ 9, 1947 ರಂದು ದಿನಪತ್ರಿಕೆಯನ್ನಾಗಿಸಿದರು.

ಏಕೀಕರಣ:

1949ರ ಆರಂಭದಲ್ಲಿ ಕಲ್ಬುರ್ಗಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು ಮೈಸೂರು ಸಹಿತ ಕರ್ನಾಟಕವಾಗಬೇಕೆಂದು ಪಾಟೀಲ ಪುಟ್ಟಪ್ಪ ಮಂಡಿಸಿದ ಗೊತ್ತುವಳಿ ಕೋ. ಚೆನ್ನಬಸಪ್ಪನವರ ಅನುಮೋದನೆ ಪಡೆದು ಸ್ವೀಕೃತವಾಯಿತು.

ಅಮೆರಿಕೆಗೆ ಪ್ರಯಾಣ:

1949 ರ ಕೊನೆಯಲ್ಲಿ ಪತ್ರಿಕೋದ್ಯಮ ಅಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಮಾಡಿದ ಪಾಟೀಲರು, ಅಮೆರಿಕದಲ್ಲಿ ವಿಲ್ ಡುರ್ಯಾಂಟ್, ರಾಬರ್ಟ್​ ಹಚಿನ್ಸ್, ಜಸ್ಟೀಸ್ ಫ್ರ್ಯಾಂಕ್ ಫರ್ಟರ್, ಐನ್‍ಸ್ಟಾಯಿನ್ ಮೊದಲಾದವರನ್ನು ಭೇಟಿ ಮಾಡಿ ಪತ್ರಿಕೋದ್ಯಮದ ಆಳ ಅಗಲವನ್ನು ತಿಳಿದರು. ಅಧ್ಯಯನ ಮುಗಿಸಿ ಹೊರ ಬರುವಾಗ ಹಡಗಿನಲ್ಲಿ ಸರ್ ಎಂಥನೀ ಈಡನ್‍ರ ಸಂದರ್ಶನ ಮಾಡಿ ಗಮನ ಸೆಳೆದರು.

ನವಯುಗ ಪತ್ರಿಕೆ ಸಂಪಾದಕತ್ವ: 1953 ರಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ `ನವಯುಗ’ ದಿನಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು. ಈ ಮೂಲಕ ಏಕೀಕರಣ ವಿಚಾರಕ್ಕೆ ಬಹುದೊಡ್ಡ ಚಾಲನೆ ಒದಗಿಸಿದರು. ಅದರಗುಂಚಿ ಶಂಕರಗೌಡರ ಉಪವಾಸ, ಹುಬ್ಬಳ್ಳಿಯಲ್ಲಿ ಗೋಲಿಬಾರ್ ಸುದ್ದಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್​ನಲ್ಲಿ ಬರುವಂತೆ ನೋಡಿಕೊಂಡು, ಇಲ್ಲಿನ ವಿಷಯವನ್ನ ವಿದೇಶದಲ್ಲೂ ಸುದ್ದಿಯಾಗುವಂತೆ ಮಾಡಿದ್ದರು.

‘ಪ್ರಪಂಚ’ದ ಆರಂಭ: 1954 ಮಾರ್ಚ 10 ರಂದು ಬಂಡವಾಳ ಯಾವುದೂ ಇಲ್ಲದೇ ಕೇವಲ ಲೆಕ್ಕಣಿಕೆಯಿಂದ `ಪ್ರಪಂಚ’ ವಾರ ಪತ್ರಿಕೆಯ ಆರಂಭ ಮಾಡಿ ಪಾಟೀಲ್​ ಪುಟ್ಟಪ್ಪ ಪತ್ರಿಕಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದರು. ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ಡಿವಿಜಿ, ಆಗ ಕಳಿಸಿದ ಸಂದೇಶದಲ್ಲಿ ಹೀಗೆ ಹೇಳಿದ್ದರು. ‘ನೀವು ಜೀವಂತ ತಂತಿ ಯಾವುದನ್ನಾದರೂ ಆಕರ್ಷಕವಾಗಿ ಬರೆಯಬಲ್ಲಿರಿ’ ಎಂದು ಗುಣಗಾನ ಮಾಡಿದ್ದರು.

ಪ್ರಥಮ ಕನ್ನಡ ಡೈಜೆಸ್ಟ್: 1956ರ ಆಗಸ್ಟ್​ನಲ್ಲಿ ನೂತನ ಪ್ರಥಮ ಡೈಜೆಸ್ಟ್ `ಸಂಗಮ’ ಪ್ರಕಟಿಸಿದ ಹೆಗ್ಗಳಿಕೆ ಪಾಟೀಲರಿಗಿದೆ. ಜನರಲ್ ಕಾರಿಯಪ್ಪ ಅವರಿಂದ ಡೈಜೆಸ್ಟ್​ ಬಿಡುಗಡೆ ಮಾಡಿಸಿದ್ದರು ಪುಟ್ಟಪ್ಪ.

ಮೆಡಿಕಲ್: ಹುಬ್ಬಳ್ಳಿ ಸರಕಾರಿ ವೈದ್ಯಕೀಯ ಕಾಲೇಜಿಗೆ `ಕರ್ನಾಟಕ ಮೆಡಿಕಲ್ ಕಾಲೇಜು’ ಎಂದು ಹೆಸರು ಕೊಡಿಸಿದ್ದು ಇದೇ ಪಾಟೀಲರು ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. 1958ರಲ್ಲಿ ಅವರು ವಿಶ್ವವಾಣಿ ದಿನಪತ್ರಿಕೆ ಆರಂಭಿಸಿದರು. `

ಕ.ವಿ.ವಿ. ಸಿಂಡಿಕೇಟ್ ಸದಸ್ಯರು: 1961ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿದ್ದ ಪಾಟೀಲ​ ಪುಟ್ಟಪ್ಪ, 1962ರ ಮಾರ್ಚ್​ನಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.1974ರವರೆಗೆ ಅವರು ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕದ ಪ್ರಥಮ ಹಾಗೂ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಧಾರವಾಡದ ಕರ್ನಾಟಕ ಅಧ್ಯಕ್ಷತೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 1967 ರಲ್ಲಿ ಆಯ್ಕೆಯಾದವರು ಮತ್ತೆ ಹಿಂದಿರುಗಿ ನೋಡಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಸತತವಾಗಿ ಅಧ್ಯಕ್ಷರಾಗಿದ್ದರು.

ವಿದೇಶ ಯಾತ್ರೆ: ಪಶ್ಚಿಮ ಜರ್ಮನಿ, ಬ್ರಿಟಿಷ್ ಸರಕಾರಗಳ ಆಮಂತ್ರಣದ ಮೇರೆಗೆ 1965 ರಲ್ಲಿ ಆ ದೇಶಗಳಿಗೆ ಸಂದರ್ಶನ ಮಾಡಿದ್ದರು. 1988 ರಲ್ಲಿ ಸೋವಿಯತ್ ಸರಕಾರದ ಆಮಂತ್ರಣದ ಮೇರೆಗೆ ರಷ್ಯಾಕ್ಕೂ ಭೇಟಿ ನೀಡಿದ್ದರು.

ಗೋಕಾಕ್ ವರದಿ: 1982 ರಲ್ಲಿ ಗೋಕಾಕ್​ ವರದಿಯ ಬಗ್ಗೆ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ ಮಾಡಿದ್ದರು. ಆಂದೋಲನ, ಸಂಘಟನೆ ಮೂಲಕ ಗೋಕಾಕ್ ವರದಿಯನ್ನು ಸರ್ಕಾರ ಒಪ್ಪುವಂತೆ ಮಾಡಿದ್ದರು.

ಕನ್ನಡ ಕಾವಲು: 1985 ರಲ್ಲಿ ಕರ್ನಾಟಕ ಸರಕಾರವು ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿಯನ್ನು ಸಮಿತಿ ರಚಿಸಿ, ಇವರನ್ನೇ ಅಧ್ಯಕ್ಷರನ್ನಾಗಿ ಮಾಡಿತ್ತು. ಈ ಸಂದರ್ಭದಲ್ಲಿ ಅವರು ಕಚೇರಿಗಳಲ್ಲಿ ಕನ್ನಡ ತರುವ ಪ್ರಯತ್ನ ಮಾಡಿ ಭಾರೀ ಯಶಸ್ಸು ಕಂಡಿದ್ದರು ಎಂಬುದು ಗಮನಾರ್ಹ.

ಬರೆದ ಪುಸ್ತಕಗಳು ಪುಸ್ತಕಗಳು: `ನನ್ನದು ಈ ಕನ್ನಡ ನಾಡು’ `ನಮ್ಮದು ಈ ಭರತ ಭೂಮಿ’ `ಕರ್ನಾಟಕದ ಕಥೆ’ `ಸೋವಿಯತ್ ದೇಶ ಕಂಡೆ’ `ಸಾವಿನ ಮೇಜವಾನಿ’ ` ಗವಾಕ್ಷ ತೆರೆಯಿತು’ ` ಶಿಲಾಬಾಲಿಕೆ ನುಡಿದಳು’ `ಕಲಾ ಸಂಗಮ’ `ಬೆಳೆದ ಬದುಕು’ ` ಭಾರತದ ಬೆಳಕು’ `ನೆಲದ ನಕ್ಷತ್ರಗಳು’ `ಸರ್ ಸಾಹೇಬರು’ `ಹೊಸಮನಿ ಸಿದ್ದಪ್ಪ’ `ಪ್ರಪಂಚ ಪಟುಗಳು’ `ನಮ್ಮ ಜನ ನಮ್ಮ ದೇಶ’ `ಈಗ ಹೊಸದನ್ನು ಕಟ್ಟೋಣ’ `ಪಾಪು ಪ್ರಪಂಚ’ `ಬದುಕುವ ಮಾತು’ `ಅಮೃತವಾಹಿನಿ’ `ವ್ಯಕ್ತಿ ಪ್ರಪಂಚ’ `ಸುವರ್ಣ ಕರ್ನಾಟಕ’ ಮುಂತಾದ 50 ಕ್ಕಿಂತ ಹೆಚ್ಚು ಕೃತಿಗಳನ್ನು ಪಾಟೀಲ​ ಪುಟ್ಟಪ್ಪ ಅವರು ಬರೆದಿದ್ದಾರೆ.

ಸಂದ ಪ್ರಶಸ್ತಿಗಳು: ರಾಜ್ಯೋತ್ಸವ ಪ್ರಶಸ್ತಿ, ಟಿ.ಎಸ್.ಆರ್. ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್ ಗೌರವ, ಹಂಪಿ ವಿಶ್ವವಿದ್ಯಾಲಯದ `ನಾಡೋಜ’ ಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ವಜ್ರಕುಮಾರ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಆದಿಚುಂಚನಗಿರಿ ಪ್ರಶಸ್ತಿ, ಭಾಲ್ಕಿ ಚೆನ್ನಬಸವೇಶ್ವರ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ ಹಾಗೂ ನೃಪತುಂಗ ಪ್ರಶಸ್ತಿಗಳು ನಾಡೋಜ ಪಾಟೀಲ ಪುಟ್ಟಪ್ಪ ಅವರನ್ನು ಹುಡುಕಿಕೊಂಡು ಬಂದಿದ್ದವು.

ಕನ್ನಡಕ್ಕಾಗಿ ಹೋರಾಟ ನಡೆಸಿದ ನಾಡಿನ ಹಿರಿಯ ಪತ್ರಕರ್ತ, ಸಾಹಿತಿ ನಾಡೋಜ ಡಾ. ಪಾಟೀಲ್​ ಪುಟ್ಟಪ್ಪ ಇನ್ನಿಲ್ಲ. ಪಾಟೀಲ ಪುಟ್ಟಪ್ಪನವರ ಬದುಕು ಹೋರಾಟದಿಂದ‌ ಕೂಡಿತ್ತು. ಅವರು ಎಲ್ಲ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿ ಸೈ ಎನಿಸಿಕೊಂಡವರು.

ರಾಷ್ಟ್ರೀಯ ಪ್ರಭಾವ:

1930 ರಲ್ಲಿ `ನಹಿ ರಖನಾ ನಹಿ ರಖನಾ ಅಂಗ್ರೇಜ್ ಸರಕಾರ’ ಎಂದು ಹೇಳುತ್ತಾ ಮದ್ಯದ ಅಂಗಡಿಗಳ ಮುಂದೆ ಪಿಕೆಟಿಂಗ್ ಮಾಡಿದ್ದು, ಜವಾಹರಲಾಲ್ ನೆಹರೂ ಹುಬ್ಬಳ್ಳಿಗೆ ಬಂದಾಗ ಅವರನ್ನು ನೋಡಿ ಪ್ರಭಾವಿತರಾದದ್ದು. 1930 ರಿಂದ ಸಂಪೂರ್ಣ ಖಾದಿ ಧಾರಣೆ. 1934 ರಲ್ಲಿ ಮಹಾತ್ಮ ಗಾಂಧೀಜಿ ಹರಿಜನ ಪ್ರವಾಸ ಕೈಕೊಂಡು ಬ್ಯಾಡಗಿಗೆ ಬಂದಾಗ ಸ್ವಯಂ ಸೇವಕನಾಗಿದ್ದಾಗ ಅವರಿಂದ ಬೆನ್ನು ತಟ್ಟಿಸಿಕೊಂಡ ಅನುಭವ ಪಾಟೀಲ್​ ಪುಟ್ಟಪ್ಪ ಅವರಿಗಿದೆ. 1937 ರಲ್ಲಿ ಪ್ರಥಮ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ ಹೆಗ್ಗಳಿಕೆಯನ್ನೂ ಹೊಂದಿದ್ದಾರೆ.

Patil puttappa
ಪಾಟೀಲ ಪುಟ್ಟಪ್ಪ

ಕಾಲೇಜು ಜೀವನ:

ಕಾಲೇಜು ಶಿಕ್ಷಣ ಧಾರವಾಡದಲ್ಲಿ 1939 ರಲ್ಲಿ ಆರಂಭವಾಯ್ತು. ಅದೇ ವರ್ಷ ಉಡುಪಿಯ `ಅಂತರಂಗ’ ಪತ್ರಿಕೆಯಲ್ಲಿ ಶ್ರೀರಂಗ, ಕುವೆಂಪು, ಬೇಂದ್ರೆಯವರ ಮೇಲೆ ಲೇಖನ ಬರೆದರು. 1941 ರಲ್ಲಿ `ನಾನು ಮಾಸ್ತಿಯವರನ್ನು ಕಂಡೆ’ ಎಂಬ ಲೇಖನ, ಮಾಸ್ತಿಯವರಿಂದ ಮೆಚ್ಚುಗೆ ಪಡೆಯಿತು. ಸಿ. ಕೆ. ವೆಂಕಟರಾಮಯ್ಯನವರ `ಅಬ್ರಹಾಂ ಲಿಂಕನ್’ ಕುರಿತು `ಜೀವನ’ ಪತ್ರಿಕೆಯಲ್ಲಿ ಬರೆದ ಲೇಖನಕ್ಕೆ ಪ್ರತಿಯಾಗಿ ವಿ. ಕೃ. ಗೋಕಾಕರು ಪ್ರತಿ ವಿಮರ್ಶೆ ಬರೆದವರು ಇದೇ ಪಾಟೀಲ್​ ಪುಟ್ಟಪ್ಪ. ಬೇಂದ್ರೆಯವರ ನಿಸರ್ಗ ಕವಿತೆಗಳು-ಜೀವನದಲ್ಲಿ ಸುದೀರ್ಘ ಲೇಖನ ಬರೆದು ಪ್ರಸಿದ್ಧರಾದವರು. 1942ರಲ್ಲಿ ಕರ್ನಾಟಕ ಕಾಲೇಜಿನ ಕರ್ನಾಟಕ ಸಂಘದ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಣೆಯನ್ನೂ ಮಾಡಿದ್ದರು..

ಚಲೇಜಾವ್ ಚಳವಳಿ:

1942 ರಲ್ಲಿ ರಾಷ್ಟ್ರೀಯ ಹೋರಾಟದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳ ಸಂಘಟನೆ ಮಾಡಿದ `ಆಪಾದನೆಗಾಗಿ’ ಅವರನ್ನು ಕರ್ನಾಟಕ ಕಾಲೇಜಿನಿಂದ ಹೊರಹಾಕಲಾಗಿತ್ತು. ಒಂದು ವರ್ಷ ಕಾಲ ಭೂಗತ ಕಾರ್ಯಕರ್ತರಾಗಿ ಕೆಲಸ ಮಾಡಿ ತಮ್ಮ ಹೋರಾಟ ಎಂತಹದ್ದು ಎಂಬುದನ್ನು ಪಾಟೀಲ​ ಪುಟ್ಟಪ್ಪನವರು ತೋರಿಸಿಕೊಟ್ಟಿದ್ದರು.

ಕಾನೂನು ಕಾಲೇಜು:

1943 ರಲ್ಲಿ ಬೆಳಗಾವಿ ಕಾನೂನು ಕಾಲೇಜಿಗೆ ಸೇರ್ಪಡೆಯಾದ ಇವರು, 1945 ರಲ್ಲಿ ಕಾನೂನು ಪದವೀಧರರಾಗಿ ಹೊರ ಬಂದರು.

ಮದುವೆ: 1945 ರಲ್ಲಿ ನವೆಂಬರ್ 11 ರಂದು ವಿಜಾಪುರದ ಡಾ. ಬಿ. ಎಂ. ಪಾಟೀಲರ ಮಗಳು ಇಂದುಮತಿಯವರೊಡನೆ ಹೊಸ ಜೀವನಕ್ಕೆ ಕಾಲಿಟ್ಟರು. ಇವರಿಗೆ ಮಂಜುಳಾ, ಶೈಲಜಾ, ಅಶೋಕ ಎಂಬ ಮೂವರು ಮಕ್ಕಳಿದ್ದಾರೆ.

ಮುಂಬಯಿ ವಾಸ್ತವ್ಯ:

1945 ರಲ್ಲಿ ಆರಂಭಕ್ಕೆ ಹೈಕೋರ್ಟಿನಲ್ಲಿ ವಕಾಲತ್ತು ಮಾಡುವ ಉದ್ದೇಶದಿಂದ ಮುಂಬಯಿಗೆ ಪ್ರಯಾಣ ಮಾಡಿದ ಪಾಟೀಲ್​ ಪುಟ್ಟಪ್ಪ, ಅಲ್ಲಿ ನಿವೃತ್ತ ಜಸ್ಟೀಸ್ ಜಹಗೀರದಾರರ ಛೇಂಬರಿನಲ್ಲಿ, ಡಾ. ತೆಂಡೂಲಕರರು ಸರದಾರ ಪಟೇಲರ ಭೇಟಿ ಮಾಡಿಸಿದರು. ಈ ವೇಳೆ ಅವರು, ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವುದನ್ನು ತಿಳಿಸಿದರು. ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಳ್ಳಬೇಕೆಂದು ಸರದಾರ ಪಟೇಲರು ಪುಟ್ಟಪ್ಪಗೆ ಹೇಳಿದರು. ಫ್ರೀಪ್ರೆಸ್ ಜರ್ನಲ್. ಬಾಂಬೈ ಕ್ರಾನಿಕಲ್ ಪತ್ರಿಕೆಗಳಿಗೆ ಕರ್ನಾಟಕ ಏಕೀಕರಣ ಕುರಿತು ಲೇಖನ ಬರೆದರು. ಕೆ. ಸದಾನಂದರು `ಫ್ರೀ ಪ್ರೆಸ್’ ಸೇರುವಂತೆ ಒತ್ತಾಯಪಡಿಸಿದರು. ಕೆ. ಎಫ್. ಪಾಟೀಲ ಮೊದಲಾದ ಸ್ನೇಹಿತರು ಹುಬ್ಬಳ್ಳಿಯಲ್ಲಿ ತಾವು ಆರಂಭಿಸಬೇಕೆಂದ ಪತ್ರಿಕೆಗೆ ಸಂಪಾದಕರಾಗಬೇಕೆಂದು ಹೇಳಿದರು.

ಕನ್ನಡಿಗರ ಮಹಾಧಿವೇಶನ:

ದಾವಣಗೆರೆಯಲ್ಲಿ ಕನ್ನಡಿಗರ ಪ್ರಥಮ ಮಹಾಧಿವೇಶನ ಕೂಡಿಸುವ ಕಾರ್ಯ ಮಾಡಿದ ಇವರು, ಕಾರ್ಯದರ್ಶಿಯಾಗಿ ಮಹಾಧಿವೇಶನ ಕೆಲಸ ಮಾಡಿದ್ದರು. 1946 ಆಗಸ್ಟ್​ನಲ್ಲಿ ಮುಂಬಯಿ ಮಂತ್ರಿ ಎಂ. ಪಿ. ಪಾಟೀಲರು ಅಧ್ಯಕ್ಷರಾಗಿದ್ದರು. ಮದ್ರಾಸ್ ಮಂತ್ರಿ ಕೆ. ಆರ್. ಕಾರಂತರು ಉದ್ಘಾಟಕರಾಗಿದ್ದರು.

ಪತ್ರಿಕೋದ್ಯಮ:

1936ರಲ್ಲಿ ಹಾವೇರಿಯಲ್ಲಿ ಓದುತ್ತಿರುವಾಗ `ನಮ್ಮ ನಾಡು’ ಕೈ ಬರಹದ ಪತ್ರಿಕೆಯ ಪ್ರಕಟಣೆ ಮಾಡಿದ್ದರು. ವಾರ ಪತ್ರಿಕೆ `ವಿಶಾಲ ಕರ್ನಾಟಕ’ದ ಸಂಪಾದಕತ್ವ ವಹಿಸಿದ ಇವರು ಇದೇ ಪತ್ರಿಕೆಯನ್ನು ಅಗಸ್ಟ್ 9, 1947 ರಂದು ದಿನಪತ್ರಿಕೆಯನ್ನಾಗಿಸಿದರು.

ಏಕೀಕರಣ:

1949ರ ಆರಂಭದಲ್ಲಿ ಕಲ್ಬುರ್ಗಿಯಲ್ಲಿ ಕರ್ನಾಟಕ ಏಕೀಕರಣ ಪರಿಷತ್ತು ಮೈಸೂರು ಸಹಿತ ಕರ್ನಾಟಕವಾಗಬೇಕೆಂದು ಪಾಟೀಲ ಪುಟ್ಟಪ್ಪ ಮಂಡಿಸಿದ ಗೊತ್ತುವಳಿ ಕೋ. ಚೆನ್ನಬಸಪ್ಪನವರ ಅನುಮೋದನೆ ಪಡೆದು ಸ್ವೀಕೃತವಾಯಿತು.

ಅಮೆರಿಕೆಗೆ ಪ್ರಯಾಣ:

1949 ರ ಕೊನೆಯಲ್ಲಿ ಪತ್ರಿಕೋದ್ಯಮ ಅಭ್ಯಾಸಕ್ಕಾಗಿ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯಕ್ಕೆ ಪ್ರಯಾಣ ಮಾಡಿದ ಪಾಟೀಲರು, ಅಮೆರಿಕದಲ್ಲಿ ವಿಲ್ ಡುರ್ಯಾಂಟ್, ರಾಬರ್ಟ್​ ಹಚಿನ್ಸ್, ಜಸ್ಟೀಸ್ ಫ್ರ್ಯಾಂಕ್ ಫರ್ಟರ್, ಐನ್‍ಸ್ಟಾಯಿನ್ ಮೊದಲಾದವರನ್ನು ಭೇಟಿ ಮಾಡಿ ಪತ್ರಿಕೋದ್ಯಮದ ಆಳ ಅಗಲವನ್ನು ತಿಳಿದರು. ಅಧ್ಯಯನ ಮುಗಿಸಿ ಹೊರ ಬರುವಾಗ ಹಡಗಿನಲ್ಲಿ ಸರ್ ಎಂಥನೀ ಈಡನ್‍ರ ಸಂದರ್ಶನ ಮಾಡಿ ಗಮನ ಸೆಳೆದರು.

ನವಯುಗ ಪತ್ರಿಕೆ ಸಂಪಾದಕತ್ವ: 1953 ರಲ್ಲಿ ಹುಬ್ಬಳ್ಳಿಯಿಂದ ಪ್ರಕಟವಾಗುತ್ತಿದ್ದ `ನವಯುಗ’ ದಿನಪತ್ರಿಕೆಯ ಸಂಪಾದಕತ್ವ ವಹಿಸಿಕೊಂಡರು. ಈ ಮೂಲಕ ಏಕೀಕರಣ ವಿಚಾರಕ್ಕೆ ಬಹುದೊಡ್ಡ ಚಾಲನೆ ಒದಗಿಸಿದರು. ಅದರಗುಂಚಿ ಶಂಕರಗೌಡರ ಉಪವಾಸ, ಹುಬ್ಬಳ್ಳಿಯಲ್ಲಿ ಗೋಲಿಬಾರ್ ಸುದ್ದಿ ಅಮೆರಿಕದ ನ್ಯೂಯಾರ್ಕ್ ಟೈಮ್ಸ್​ನಲ್ಲಿ ಬರುವಂತೆ ನೋಡಿಕೊಂಡು, ಇಲ್ಲಿನ ವಿಷಯವನ್ನ ವಿದೇಶದಲ್ಲೂ ಸುದ್ದಿಯಾಗುವಂತೆ ಮಾಡಿದ್ದರು.

‘ಪ್ರಪಂಚ’ದ ಆರಂಭ: 1954 ಮಾರ್ಚ 10 ರಂದು ಬಂಡವಾಳ ಯಾವುದೂ ಇಲ್ಲದೇ ಕೇವಲ ಲೆಕ್ಕಣಿಕೆಯಿಂದ `ಪ್ರಪಂಚ’ ವಾರ ಪತ್ರಿಕೆಯ ಆರಂಭ ಮಾಡಿ ಪಾಟೀಲ್​ ಪುಟ್ಟಪ್ಪ ಪತ್ರಿಕಾ ರಂಗದಲ್ಲಿ ತಮ್ಮದೇ ಛಾಪು ಮೂಡಿಸಿದರು. ಈ ಸಂದರ್ಭದಲ್ಲಿ ಖ್ಯಾತ ಸಾಹಿತಿ ಡಿವಿಜಿ, ಆಗ ಕಳಿಸಿದ ಸಂದೇಶದಲ್ಲಿ ಹೀಗೆ ಹೇಳಿದ್ದರು. ‘ನೀವು ಜೀವಂತ ತಂತಿ ಯಾವುದನ್ನಾದರೂ ಆಕರ್ಷಕವಾಗಿ ಬರೆಯಬಲ್ಲಿರಿ’ ಎಂದು ಗುಣಗಾನ ಮಾಡಿದ್ದರು.

ಪ್ರಥಮ ಕನ್ನಡ ಡೈಜೆಸ್ಟ್: 1956ರ ಆಗಸ್ಟ್​ನಲ್ಲಿ ನೂತನ ಪ್ರಥಮ ಡೈಜೆಸ್ಟ್ `ಸಂಗಮ’ ಪ್ರಕಟಿಸಿದ ಹೆಗ್ಗಳಿಕೆ ಪಾಟೀಲರಿಗಿದೆ. ಜನರಲ್ ಕಾರಿಯಪ್ಪ ಅವರಿಂದ ಡೈಜೆಸ್ಟ್​ ಬಿಡುಗಡೆ ಮಾಡಿಸಿದ್ದರು ಪುಟ್ಟಪ್ಪ.

ಮೆಡಿಕಲ್: ಹುಬ್ಬಳ್ಳಿ ಸರಕಾರಿ ವೈದ್ಯಕೀಯ ಕಾಲೇಜಿಗೆ `ಕರ್ನಾಟಕ ಮೆಡಿಕಲ್ ಕಾಲೇಜು’ ಎಂದು ಹೆಸರು ಕೊಡಿಸಿದ್ದು ಇದೇ ಪಾಟೀಲರು ಎನ್ನುವುದು ಬಹಳಷ್ಟು ಮಂದಿಗೆ ಗೊತ್ತಿರಲಿಕ್ಕಿಲ್ಲ. 1958ರಲ್ಲಿ ಅವರು ವಿಶ್ವವಾಣಿ ದಿನಪತ್ರಿಕೆ ಆರಂಭಿಸಿದರು. `

ಕ.ವಿ.ವಿ. ಸಿಂಡಿಕೇಟ್ ಸದಸ್ಯರು: 1961ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸಿನೇಟ್ ಸಿಂಡಿಕೇಟ್ ಸದಸ್ಯರಾಗಿ ಆಯ್ಕೆಯಾಗಿದ್ದ ಪಾಟೀಲ​ ಪುಟ್ಟಪ್ಪ, 1962ರ ಮಾರ್ಚ್​ನಲ್ಲಿ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು.1974ರವರೆಗೆ ಅವರು ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕದ ಪ್ರಥಮ ಹಾಗೂ ಪ್ರಮುಖ ಸಾಂಸ್ಕೃತಿಕ ಸಂಸ್ಥೆ ಧಾರವಾಡದ ಕರ್ನಾಟಕ ಅಧ್ಯಕ್ಷತೆ. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ 1967 ರಲ್ಲಿ ಆಯ್ಕೆಯಾದವರು ಮತ್ತೆ ಹಿಂದಿರುಗಿ ನೋಡಿಲ್ಲ. ಅಲ್ಲಿಂದ ಇಲ್ಲಿಯವರೆಗೆ ಸತತವಾಗಿ ಅಧ್ಯಕ್ಷರಾಗಿದ್ದರು.

ವಿದೇಶ ಯಾತ್ರೆ: ಪಶ್ಚಿಮ ಜರ್ಮನಿ, ಬ್ರಿಟಿಷ್ ಸರಕಾರಗಳ ಆಮಂತ್ರಣದ ಮೇರೆಗೆ 1965 ರಲ್ಲಿ ಆ ದೇಶಗಳಿಗೆ ಸಂದರ್ಶನ ಮಾಡಿದ್ದರು. 1988 ರಲ್ಲಿ ಸೋವಿಯತ್ ಸರಕಾರದ ಆಮಂತ್ರಣದ ಮೇರೆಗೆ ರಷ್ಯಾಕ್ಕೂ ಭೇಟಿ ನೀಡಿದ್ದರು.

ಗೋಕಾಕ್ ವರದಿ: 1982 ರಲ್ಲಿ ಗೋಕಾಕ್​ ವರದಿಯ ಬಗ್ಗೆ ನಡೆದ ಹೋರಾಟದಲ್ಲಿ ನಾಯಕತ್ವ ವಹಿಸಿ ರಾಜ್ಯವ್ಯಾಪಿ ಹೋರಾಟ ಮಾಡಿದ್ದರು. ಆಂದೋಲನ, ಸಂಘಟನೆ ಮೂಲಕ ಗೋಕಾಕ್ ವರದಿಯನ್ನು ಸರ್ಕಾರ ಒಪ್ಪುವಂತೆ ಮಾಡಿದ್ದರು.

ಕನ್ನಡ ಕಾವಲು: 1985 ರಲ್ಲಿ ಕರ್ನಾಟಕ ಸರಕಾರವು ಕನ್ನಡ ಕಾವಲು ಹಾಗೂ ಗಡಿ ಸಲಹಾ ಸಮಿತಿಯನ್ನು ಸಮಿತಿ ರಚಿಸಿ, ಇವರನ್ನೇ ಅಧ್ಯಕ್ಷರನ್ನಾಗಿ ಮಾಡಿತ್ತು. ಈ ಸಂದರ್ಭದಲ್ಲಿ ಅವರು ಕಚೇರಿಗಳಲ್ಲಿ ಕನ್ನಡ ತರುವ ಪ್ರಯತ್ನ ಮಾಡಿ ಭಾರೀ ಯಶಸ್ಸು ಕಂಡಿದ್ದರು ಎಂಬುದು ಗಮನಾರ್ಹ.

ಬರೆದ ಪುಸ್ತಕಗಳು ಪುಸ್ತಕಗಳು: `ನನ್ನದು ಈ ಕನ್ನಡ ನಾಡು’ `ನಮ್ಮದು ಈ ಭರತ ಭೂಮಿ’ `ಕರ್ನಾಟಕದ ಕಥೆ’ `ಸೋವಿಯತ್ ದೇಶ ಕಂಡೆ’ `ಸಾವಿನ ಮೇಜವಾನಿ’ ` ಗವಾಕ್ಷ ತೆರೆಯಿತು’ ` ಶಿಲಾಬಾಲಿಕೆ ನುಡಿದಳು’ `ಕಲಾ ಸಂಗಮ’ `ಬೆಳೆದ ಬದುಕು’ ` ಭಾರತದ ಬೆಳಕು’ `ನೆಲದ ನಕ್ಷತ್ರಗಳು’ `ಸರ್ ಸಾಹೇಬರು’ `ಹೊಸಮನಿ ಸಿದ್ದಪ್ಪ’ `ಪ್ರಪಂಚ ಪಟುಗಳು’ `ನಮ್ಮ ಜನ ನಮ್ಮ ದೇಶ’ `ಈಗ ಹೊಸದನ್ನು ಕಟ್ಟೋಣ’ `ಪಾಪು ಪ್ರಪಂಚ’ `ಬದುಕುವ ಮಾತು’ `ಅಮೃತವಾಹಿನಿ’ `ವ್ಯಕ್ತಿ ಪ್ರಪಂಚ’ `ಸುವರ್ಣ ಕರ್ನಾಟಕ’ ಮುಂತಾದ 50 ಕ್ಕಿಂತ ಹೆಚ್ಚು ಕೃತಿಗಳನ್ನು ಪಾಟೀಲ​ ಪುಟ್ಟಪ್ಪ ಅವರು ಬರೆದಿದ್ದಾರೆ.

ಸಂದ ಪ್ರಶಸ್ತಿಗಳು: ರಾಜ್ಯೋತ್ಸವ ಪ್ರಶಸ್ತಿ, ಟಿ.ಎಸ್.ಆರ್. ಪತ್ರಿಕೋದ್ಯಮ ಪ್ರಶಸ್ತಿ, ಕರ್ನಾಟಕ ವಿಶ್ವವಿದ್ಯಾಲಯದ ಡಿ.ಲಿಟ್ ಗೌರವ, ಹಂಪಿ ವಿಶ್ವವಿದ್ಯಾಲಯದ `ನಾಡೋಜ’ ಪ್ರಶಸ್ತಿ, ಟಿಳಕ ಮೊಹರೆ ಪ್ರಶಸ್ತಿ, ಮಾಳವಾಡ ಪ್ರಶಸ್ತಿ, ವಜ್ರಕುಮಾರ ಪ್ರಶಸ್ತಿ, ವಿಶ್ವೇಶ್ವರಯ್ಯ ಪ್ರಶಸ್ತಿ, ಆದಿಚುಂಚನಗಿರಿ ಪ್ರಶಸ್ತಿ, ಭಾಲ್ಕಿ ಚೆನ್ನಬಸವೇಶ್ವರ ಪ್ರಶಸ್ತಿ, ಬಸವಶ್ರೀ ಪ್ರಶಸ್ತಿ, ಕರ್ನಾಟಕ ಚೂಡಾಮಣಿ ಪ್ರಶಸ್ತಿ ಹಾಗೂ ನೃಪತುಂಗ ಪ್ರಶಸ್ತಿಗಳು ನಾಡೋಜ ಪಾಟೀಲ ಪುಟ್ಟಪ್ಪ ಅವರನ್ನು ಹುಡುಕಿಕೊಂಡು ಬಂದಿದ್ದವು.

Last Updated : Mar 17, 2020, 7:02 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.