ETV Bharat / city

7 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಗೃಹಿಣಿ ಆತ್ಮಹತ್ಯೆ: ಪೋಷಕರಿಂದ ಕೊಲೆ ಆರೋಪ - dowry case in hubli

7 ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿಯೊಬ್ಬಳು ಈಗ ಸಾವಿಗೀಡಾಗಿದ್ದು, ಗಂಡನ ಮನೆಯವರೇ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದು ಗೃಹಣಿಯ ಮನೆಯವರು ಆರೋಪಿಸಿದ್ದಾರೆ.

ಗೃಹಿಣಿ ಆತ್ಮಹತ್ಯೆ
author img

By

Published : Nov 22, 2019, 7:28 PM IST

ಹುಬ್ಬಳ್ಳಿ: ನಗರದ ಜನತಾ ಕಾಲೋನಿಯ ಶಿಲ್ಪಾ ಚಲವಾದಿ ಎಂಬುವರನ್ನು ಕಳೆದ ಏಳು ತಿಂಗಳ ಹಿಂದಷ್ಟೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಲಿಹಳ್ಳಿಯ ಅನಿಲ್ ಚಲವಾದಿ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.

ಮದುವೆಯಾದಾಗಿನಿಂದಲೂ ಅನಿಲ್ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಪೀಡಿಸುತ್ತಿದ್ದರು. ಆದರೆ ನ. 18 ರಂದು ಪತಿ ಅನಿಲ್ ಹಾಗೂ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಒತ್ತಾಯಿಸಿದ್ದಾರೆ. ಆಗ ಶಿಲ್ಪಾ ವರದಕ್ಷಿಣೆ ತರಲು ಆಗುವುದಿಲ್ಲ ಎಂದು ಹೇಳಿದ್ದಾಳೆ. ಅದಕ್ಕೆ ಗಂಡ ಹಾಗೂ ಆತನ ಮನೆಯವರು ಆಕೆಗೆ ವಿಷ ಕುಡಿಸಿದ್ದು, ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡುತ್ತಿದ್ದಾರೆ ಎಂದು ಶಿಲ್ಪಾ ಮನೆಯವರು ಆರೋಪಿಸಿದ್ದಾರೆ.

ಬೆಳಗಾವಿಯ ನಂದಗಡದಲ್ಲಿ ಘಟನೆ ನಡೆದಿದ್ದು, ಹುಬ್ಬಳ್ಳಿಯ ತಾಯಿ ಮನೆಗೆ ಪಾರ್ಥಿವ ಶರೀರವನ್ನು ತರಲಾಗಿದೆ. ಈ ವೇಳೆ ಮಗಳ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ. ಈ ಸಂಬಂಧ ಶಿಲ್ಪಾ ಪತಿ ಅನಿಲ್ ವಿರುದ್ಧ ಬೆಳಗಾವಿಯ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಶಿಲ್ಪಾ ಸಂಬಂಧಿಗಳು ಒತ್ತಾಯಿಸುತ್ತಿದ್ದಾರೆ.

ಹುಬ್ಬಳ್ಳಿ: ನಗರದ ಜನತಾ ಕಾಲೋನಿಯ ಶಿಲ್ಪಾ ಚಲವಾದಿ ಎಂಬುವರನ್ನು ಕಳೆದ ಏಳು ತಿಂಗಳ ಹಿಂದಷ್ಟೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಲಿಹಳ್ಳಿಯ ಅನಿಲ್ ಚಲವಾದಿ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು.

ಮದುವೆಯಾದಾಗಿನಿಂದಲೂ ಅನಿಲ್ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಪೀಡಿಸುತ್ತಿದ್ದರು. ಆದರೆ ನ. 18 ರಂದು ಪತಿ ಅನಿಲ್ ಹಾಗೂ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಒತ್ತಾಯಿಸಿದ್ದಾರೆ. ಆಗ ಶಿಲ್ಪಾ ವರದಕ್ಷಿಣೆ ತರಲು ಆಗುವುದಿಲ್ಲ ಎಂದು ಹೇಳಿದ್ದಾಳೆ. ಅದಕ್ಕೆ ಗಂಡ ಹಾಗೂ ಆತನ ಮನೆಯವರು ಆಕೆಗೆ ವಿಷ ಕುಡಿಸಿದ್ದು, ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟಕವಾಡುತ್ತಿದ್ದಾರೆ ಎಂದು ಶಿಲ್ಪಾ ಮನೆಯವರು ಆರೋಪಿಸಿದ್ದಾರೆ.

ಬೆಳಗಾವಿಯ ನಂದಗಡದಲ್ಲಿ ಘಟನೆ ನಡೆದಿದ್ದು, ಹುಬ್ಬಳ್ಳಿಯ ತಾಯಿ ಮನೆಗೆ ಪಾರ್ಥಿವ ಶರೀರವನ್ನು ತರಲಾಗಿದೆ. ಈ ವೇಳೆ ಮಗಳ ಸಾವಿನಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು‌ ಮುಟ್ಟಿದೆ. ಈ ಸಂಬಂಧ ಶಿಲ್ಪಾ ಪತಿ ಅನಿಲ್ ವಿರುದ್ಧ ಬೆಳಗಾವಿಯ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತಮ್ಮ ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಶಿಲ್ಪಾ ಸಂಬಂಧಿಗಳು ಒತ್ತಾಯಿಸುತ್ತಿದ್ದಾರೆ.

Intro:ಹುಬ್ಬಳ್ಳಿ -04
ವರದಕ್ಷಿಣೆ ತರಲು ಒಪ್ಪದಿದ್ದಾಗ ನಮ್ಮ ಮಗಳಿಗೆ ವಿಷ ಉಣಿಸಿ ಕೊಲೆ ಮಾಡಿ ಅತ್ಮಹತ್ಯೆ ನಾಟಕವಾಡುತ್ತಿದ್ದಾರೆ ಎಂದು ಗೃಹಿಣಿ ಮನೆಯವರು ಆರೋಪಿಸಿದ ಘಟನೆ ನಡೆದಿದೆ.‌
ನಗರದ ಜನತಾ ಕಾಲೋನಿಯ ಶಿಲ್ಪಾ ಚಲವಾದಿ ಎಂಬುವರನ್ನು ಕಳೆದ ಏಳು ತಿಂಗಳ ಹಿಂದಷ್ಟೇ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗೋಲಿಹಳ್ಳಿಯ ಅನಿಲ್ ಚಲವಾದಿ ಎಂಬುವವರಿಗೆ ಮದುವೆ ಮಾಡಿಕೊಡಲಾಗಿತ್ತು. ಆದ್ರೆ ಮದುವೆಯಾದಾಗಿನಿಂದಲೂ ಅನಿಲ್ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಪೀಡಿಸುತ್ತಿದ್ದರು. ಆದ್ರೆ ನ. 18 ರಂದು ಪತಿ ಅನಿಲ್ ಹಾಗೂ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಶಿಲ್ಪಾಳಿಗೆ ಒತ್ತಾಯಿಸಿದ್ದಾರೆ. ಆಗ ಶಿಲ್ಪಾ ವರದಕ್ಷಿಣೆ ತರಲು ಆಗುವದಿಲ್ಲ ಎಂದು ಹೇಳಿದಕ್ಕೆ ಗಂಡ ಹಾಗೂ ಆತನ ಮನೆಯವರು ತಾವೇ ವಿಷ ಕುಡಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ನಾಟವಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಸಂಬಂಧ
ಶಿಲ್ಪಾ ಪತಿ ಅನಿಲ್ ವಿರುದ್ಧ ಬೆಳಗಾವಿಯ ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಮ್ಮ ಮಗಳ ಸಾವಿಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು ಎಂದು ಸಂಬಂಧಿಗಳು ಒತ್ತಾಯಿಸುತ್ತಿದ್ದಾರೆ. ಮಗಳ ಸಾವಿನಿಂದಾಗಿ ಕುಟುಂಬಸ್ಥರು ಆಕ್ರಂಧನ ಮುಗಿಲು‌ಮುಟ್ಟಿದೆ.

ಬೈಟ್ -ಶೇಖಪ್ಪ ಚಲವಾದಿ, ಮೃತಳ‌ ತಂದೆ
ಬೈಟ್- ಮಂಜುಳಾ,‌ ಮೃತಳ ‌ತಾಯಿ
ಬೈಟ್- ಲಲೀತಾ, ಮೃತಳ ಅಕ್ಕBody:H B GaddadConclusion:Etv hubli
ETV Bharat Logo

Copyright © 2025 Ushodaya Enterprises Pvt. Ltd., All Rights Reserved.