ETV Bharat / city

ಜ.3 ರಂದೇ ರಾಮನಗರ ವೇದಿಕೆಯಲ್ಲಿ ಅಶ್ವತ್ಥ್ ನಾರಾಯಣ್​ಗೆ ಡಿಕೆಶಿ ಮುಹೂರ್ತ ಇಟ್ಟಿದ್ದರು: ಸಚಿವ ಮುನಿರತ್ನ

author img

By

Published : May 5, 2022, 3:19 PM IST

ರಾಜ್ಯದಲ್ಲಿ 8 ಸರ್ವೇಗಳನ್ನು ಕಾಂಗ್ರೆಸ್​ನಿಂದ ಮಾಡಿಸಿದ್ದಾರೆ. ಸಿದ್ದರಾಮಯ್ಯ 2 ಸರ್ವೇ ಮಾಡಿಸಿದ್ದಾರೆ. ಡಿಕೆಶಿ ಹಲವು‌ ಸರ್ವೇ ಮಾಡಿಸಿದ್ದಾರೆ. ಬಿಜೆಪಿಗೆ ಹೆಚ್ಚು ಸ್ಥಾನ ಬರುತ್ತೆ ಅನ್ನೋದು‌ ಅವರಿಗೆ ಗೊತ್ತಿದೆ. ಅದಕ್ಕೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ.

Minister Munirathna talked to Press
ಸಚಿವ ಮುನಿರತ್ನ ಸುದ್ದಿಗಾರರದೊಂದಿಗೆ ಮಾತನಾಡಿದರು.

ಬೆಂಗಳೂರು: ಜನವರಿ 3 ರಂದೇ ಸಚಿವ ಅಶ್ವತ್ಥ್ ನಾರಾಯಣ್​ಗೆ ಡಿಕೆಶಿ ರಾಮನಗರದ ವೇದಿಕೆಯಲ್ಲೇ ಮುಹೂರ್ತ ಇಟ್ಟಿದ್ರು ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ. ವಿಕಾಸಸೌಧಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಅಶ್ವತ್ಥ್​ ನಾರಾಯಣ್ ಎದೆ ಉಬ್ಬಿಸಿ ಮಾತನಾಡಿದ್ರು. ಆಗಲೇ ಇವರಿಗೆ ಏನಾದ್ರು ಮಾಡ್ತಾರೆ ಅಂದುಕೊಂಡಿದ್ದೆವು. ಅದು ಈಗ ಎಫೆಕ್ಟ್ ಆಗಿದೆ. ಯಾವುದೇ ದಾಖಲೆಗಳಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ. ಯಾರು ಡಿಕೆಶಿ ವಿರುದ್ಧ ಮಾತನಾಡುತ್ತಾರೋ ಅವರ ಹಿಂದೆ 10 ಜನ ಬಿಟ್ಟು ಏನಾದ್ರೂ ಇದ್ಯಾ ಹುಡುಕಿ ಅಂತಾರೆ ಎಂದು ಆರೋಪಿಸಿದರು.

ಸಚಿವ ಮುನಿರತ್ನ ಸುದ್ದಿಗಾರರದೊಂದಿಗೆ ಮಾತನಾಡಿದರು.

ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಕಾಂಗ್ರೆಸ್ ನಿರಂತರ ಆರೋಪ‌ ಮಾಡುತ್ತಿದೆ. ಯಾವುದೇ ಆಧಾರವಿಲ್ಲದೆ ಆರೋಪ ಮಾಡ್ತಿದ್ದಾರೆ. ಅನುಭವದ ಕೊರತೆ ಇರುವವರು ಹೇಳಿದ್ರೆ ಬಿಡಬಹುದು. ಆದರೆ ಸಿಎಂ ಆಗಿದ್ದವರೇ ಹೇಳಿದರೆ ಹೇಗೆ? ಸಿದ್ದರಾಮಯ್ಯ ಹೇಳಿದರೆ ರಾಜ್ಯ ಸೂಕ್ಷ್ಮವಾಗಿ ಗಮನಿಸುತ್ತದೆ. ಅಂತಹ ಹಿರಿಯರು ದಾಖಲೆ ಆಮೇಲೆ ಕೊಡ್ತೇವೆ ಅಂತಾರೆ. ಅಶ್ವತ್ಥ್​​ ನಾರಾಯಣ್​ಗೂ ಇದಕ್ಕೂ ಸಂಬಂಧವಿಲ್ಲ ಎಂದು ಮುನಿರತ್ನ ಸ್ಪಷ್ಟಪಡಿಸಿದರು.

ಸಿಐಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಯಾರು ಇನ್ವಾಲ್ವ್ ಇದ್ದಾರೋ ಅವರನ್ನು ವಿಚಾರಣೆ ಮಾಡ್ತಿದ್ದಾರೆ. ತನಿಖೆ ಮಾಡುವಂತೆ ಸರ್ಕಾರವೇ ಹೇಳ್ತಿದೆ. ಆದರೂ ಸಹ ಸಂಬಂಧ ಕಲ್ಪಿಸುವ ಕೆಲಸ ನಡೆದಿದೆ. ಊಹಾಪೋಹದ ಹೇಳಿಕೆ ನೀಡುತ್ತಿದ್ದಾರೆ. ಆಸ್ತಿ ಮಾರಿ ಸಾಲ ಮಾಡಿದರೆ ಅದನ್ನು ಇದಕ್ಕೆ ಕಲ್ಪಿಸ್ತಿದ್ದಾರೆ. ಚುನಾವಣೆ ಹತ್ತಿರವಿದೆ. ಅಧಿಕಾರಕ್ಕೆ‌ ಬರಲ್ಲ ಅನ್ನೋದು ಅವರಿಗೆ ಗೊತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ 8 ಸರ್ವೇಗಳನ್ನು ಕಾಂಗ್ರೆಸ್ ಮಾಡಿಸಿದ್ದಾರೆ. ಸಿದ್ದರಾಮಯ್ಯ 2 ಸರ್ವೇ ಮಾಡಿಸಿದ್ದಾರೆ. ಡಿಕೆಶಿ ಹಲವು‌ ಸರ್ವೇ ಮಾಡಿಸಿದ್ದಾರೆ. ಆಗ ಬಿಜೆಪಿಗೆ ಹೆಚ್ಚು ಸ್ಥಾನ ಬರುತ್ತೆ ಅನ್ನೋದು‌ ಅವರಿಗೆ ಗೊತ್ತಾಗಿದೆ. ಅದಕ್ಕೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿಗೆ 120 ಸ್ಥಾನ ಬರುತ್ತದೆ ಎಂದು ಸರ್ವೇಯಲ್ಲಿ ತಿಳಿದಿದೆ. ಆ ಸರ್ವೇಯ ಪ್ರತಿ ನನಗೂ ಬಂದಿದೆ ಎಂದು ಸಚಿವ ಮುನಿರತ್ನ ತಿಳಿಸಿದರು.

ರಾಜಕೀಯ ಕಾರಣಕ್ಕೆ ಈ ರೀತಿ ಮಾಡಬೇಡಿ. ವಿನಾಕಾರಣ ಗೊಂದಲದ ಹೇಳಿಕೆ ನೀಡಬೇಡಿ. ನಿಮ್ಮ‌ ಮೇಲಿನ ನಂಬಿಕೆ ಹೋಗಿದೆ. 125 ಸೀಟು ಸ್ಪಷ್ಟ ಬಹುಮತ ನಮಗಿದೆ. ದಯವಿಟ್ಟು ದಾಖಲೆ ಬಿಡುಗಡೆ ಮಾಡಿ. ದಾಖಲೆ ಇಲ್ಲದೆ ತೇಜೋವಧೆ ಮಾಡಬೇಡಿ. ಇವರು ಗೊಂದಲದ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿ ವಿರುದ್ಧ ಜನರಲ್ಲಿ ಗೊಂದಲ ಮೂಡಿಸುವುದು ಇವರ ಕೆಲಸವಾಗಿದೆ. ರಾಜಕೀಯ ದ್ವೇಷಕ್ಕಾಗಿ ಕುಟುಂಬಸ್ಥರನ್ನು ಹೊರತರುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಡಿಸೆಂಬರ್ 2023ಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್​ನಿಂದ ಸಸ್ಪೆಂಡ್ ಆಗ್ತಾರೆ: ಸಚಿವ ಮುನಿರತ್ನ ಭವಿಷ್ಯ

ಬೆಂಗಳೂರು: ಜನವರಿ 3 ರಂದೇ ಸಚಿವ ಅಶ್ವತ್ಥ್ ನಾರಾಯಣ್​ಗೆ ಡಿಕೆಶಿ ರಾಮನಗರದ ವೇದಿಕೆಯಲ್ಲೇ ಮುಹೂರ್ತ ಇಟ್ಟಿದ್ರು ಎಂದು ಸಚಿವ ಮುನಿರತ್ನ ತಿಳಿಸಿದ್ದಾರೆ. ವಿಕಾಸಸೌಧಲ್ಲಿ ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಅಂದು ಅಶ್ವತ್ಥ್​ ನಾರಾಯಣ್ ಎದೆ ಉಬ್ಬಿಸಿ ಮಾತನಾಡಿದ್ರು. ಆಗಲೇ ಇವರಿಗೆ ಏನಾದ್ರು ಮಾಡ್ತಾರೆ ಅಂದುಕೊಂಡಿದ್ದೆವು. ಅದು ಈಗ ಎಫೆಕ್ಟ್ ಆಗಿದೆ. ಯಾವುದೇ ದಾಖಲೆಗಳಿಲ್ಲದೆ ಆರೋಪಗಳನ್ನು ಮಾಡುತ್ತಿದ್ದಾರೆ. ಯಾರು ಡಿಕೆಶಿ ವಿರುದ್ಧ ಮಾತನಾಡುತ್ತಾರೋ ಅವರ ಹಿಂದೆ 10 ಜನ ಬಿಟ್ಟು ಏನಾದ್ರೂ ಇದ್ಯಾ ಹುಡುಕಿ ಅಂತಾರೆ ಎಂದು ಆರೋಪಿಸಿದರು.

ಸಚಿವ ಮುನಿರತ್ನ ಸುದ್ದಿಗಾರರದೊಂದಿಗೆ ಮಾತನಾಡಿದರು.

ಪಿಎಸ್​ಐ ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ಕಾಂಗ್ರೆಸ್ ನಿರಂತರ ಆರೋಪ‌ ಮಾಡುತ್ತಿದೆ. ಯಾವುದೇ ಆಧಾರವಿಲ್ಲದೆ ಆರೋಪ ಮಾಡ್ತಿದ್ದಾರೆ. ಅನುಭವದ ಕೊರತೆ ಇರುವವರು ಹೇಳಿದ್ರೆ ಬಿಡಬಹುದು. ಆದರೆ ಸಿಎಂ ಆಗಿದ್ದವರೇ ಹೇಳಿದರೆ ಹೇಗೆ? ಸಿದ್ದರಾಮಯ್ಯ ಹೇಳಿದರೆ ರಾಜ್ಯ ಸೂಕ್ಷ್ಮವಾಗಿ ಗಮನಿಸುತ್ತದೆ. ಅಂತಹ ಹಿರಿಯರು ದಾಖಲೆ ಆಮೇಲೆ ಕೊಡ್ತೇವೆ ಅಂತಾರೆ. ಅಶ್ವತ್ಥ್​​ ನಾರಾಯಣ್​ಗೂ ಇದಕ್ಕೂ ಸಂಬಂಧವಿಲ್ಲ ಎಂದು ಮುನಿರತ್ನ ಸ್ಪಷ್ಟಪಡಿಸಿದರು.

ಸಿಐಡಿ ಅಧಿಕಾರಿಗಳು ವಿಚಾರಣೆ ಮಾಡಿದ್ದಾರೆ. ಯಾರು ಇನ್ವಾಲ್ವ್ ಇದ್ದಾರೋ ಅವರನ್ನು ವಿಚಾರಣೆ ಮಾಡ್ತಿದ್ದಾರೆ. ತನಿಖೆ ಮಾಡುವಂತೆ ಸರ್ಕಾರವೇ ಹೇಳ್ತಿದೆ. ಆದರೂ ಸಹ ಸಂಬಂಧ ಕಲ್ಪಿಸುವ ಕೆಲಸ ನಡೆದಿದೆ. ಊಹಾಪೋಹದ ಹೇಳಿಕೆ ನೀಡುತ್ತಿದ್ದಾರೆ. ಆಸ್ತಿ ಮಾರಿ ಸಾಲ ಮಾಡಿದರೆ ಅದನ್ನು ಇದಕ್ಕೆ ಕಲ್ಪಿಸ್ತಿದ್ದಾರೆ. ಚುನಾವಣೆ ಹತ್ತಿರವಿದೆ. ಅಧಿಕಾರಕ್ಕೆ‌ ಬರಲ್ಲ ಅನ್ನೋದು ಅವರಿಗೆ ಗೊತ್ತಿದೆ ಎಂದು ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು.

ರಾಜ್ಯದಲ್ಲಿ 8 ಸರ್ವೇಗಳನ್ನು ಕಾಂಗ್ರೆಸ್ ಮಾಡಿಸಿದ್ದಾರೆ. ಸಿದ್ದರಾಮಯ್ಯ 2 ಸರ್ವೇ ಮಾಡಿಸಿದ್ದಾರೆ. ಡಿಕೆಶಿ ಹಲವು‌ ಸರ್ವೇ ಮಾಡಿಸಿದ್ದಾರೆ. ಆಗ ಬಿಜೆಪಿಗೆ ಹೆಚ್ಚು ಸ್ಥಾನ ಬರುತ್ತೆ ಅನ್ನೋದು‌ ಅವರಿಗೆ ಗೊತ್ತಾಗಿದೆ. ಅದಕ್ಕೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಬಿಜೆಪಿಗೆ 120 ಸ್ಥಾನ ಬರುತ್ತದೆ ಎಂದು ಸರ್ವೇಯಲ್ಲಿ ತಿಳಿದಿದೆ. ಆ ಸರ್ವೇಯ ಪ್ರತಿ ನನಗೂ ಬಂದಿದೆ ಎಂದು ಸಚಿವ ಮುನಿರತ್ನ ತಿಳಿಸಿದರು.

ರಾಜಕೀಯ ಕಾರಣಕ್ಕೆ ಈ ರೀತಿ ಮಾಡಬೇಡಿ. ವಿನಾಕಾರಣ ಗೊಂದಲದ ಹೇಳಿಕೆ ನೀಡಬೇಡಿ. ನಿಮ್ಮ‌ ಮೇಲಿನ ನಂಬಿಕೆ ಹೋಗಿದೆ. 125 ಸೀಟು ಸ್ಪಷ್ಟ ಬಹುಮತ ನಮಗಿದೆ. ದಯವಿಟ್ಟು ದಾಖಲೆ ಬಿಡುಗಡೆ ಮಾಡಿ. ದಾಖಲೆ ಇಲ್ಲದೆ ತೇಜೋವಧೆ ಮಾಡಬೇಡಿ. ಇವರು ಗೊಂದಲದ ಹೇಳಿಕೆ ಕೊಡುತ್ತಿದ್ದಾರೆ. ಬಿಜೆಪಿ ವಿರುದ್ಧ ಜನರಲ್ಲಿ ಗೊಂದಲ ಮೂಡಿಸುವುದು ಇವರ ಕೆಲಸವಾಗಿದೆ. ರಾಜಕೀಯ ದ್ವೇಷಕ್ಕಾಗಿ ಕುಟುಂಬಸ್ಥರನ್ನು ಹೊರತರುತ್ತಿದ್ದೀರಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಡಿಸೆಂಬರ್ 2023ಕ್ಕೆ ಸಿದ್ದರಾಮಯ್ಯ ಕಾಂಗ್ರೆಸ್​ನಿಂದ ಸಸ್ಪೆಂಡ್ ಆಗ್ತಾರೆ: ಸಚಿವ ಮುನಿರತ್ನ ಭವಿಷ್ಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.