ETV Bharat / city

ಭಾರಿ ಮಳೆಯಿಂದ ಬೆಂಗಳೂರು ಜಲಾವೃತ: ಟ್ರ್ಯಾಕ್ಟರ್​ ಏರಿ ಕಚೇರಿ​ ತಲುಪಿದ ಐಟಿ ಸಿಬ್ಬಂದಿ

author img

By

Published : Sep 6, 2022, 9:41 AM IST

ವರುಣಾರ್ಭಟಕ್ಕೆ ಬೆಂಗಳೂರು ಸಂಪೂರ್ಣವಾಗಿ ತತ್ತರಿಸಿದೆ. ಅನೇಕರು ಇನ್ನಿಲ್ಲದ ತೊಂದರೆಗೊಳಗಾಗಿದ್ದಾರೆ.

Heavy rain in Bengaluru
Heavy rain in Bengaluru

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ರಣಚಂಡಿ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಬಹುತೇಕ ಪ್ರಮುಖ ರಸ್ತೆಗಳು ನದಿ ರೀತಿಯಲ್ಲಿ ತುಂಬಿ ಹರಿಯುತ್ತಿವೆ. ಜನರಿಗೆ ಆಟೋ, ಕಾರು ಹಾಗೂ ಬೈಕ್​​​ನಲ್ಲಿ ಕಚೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ, ಬೆಂಗಳೂರಿನ ಐಟಿ ಸಿಬ್ಬಂದಿ ಕಚೇರಿ ತಲುಪಲು ಟ್ರ್ಯಾಕ್ಟರ್​ ಮೊರೆ ಹೋಗಿದ್ದಾರೆ. ಟ್ರ್ಯಾಕ್ಟರ್​​ಗಳಲ್ಲಿ ಪ್ರಯಾಣ ಬೆಳೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮುಖ್ಯವಾಗಿ ಎಚ್​​ಎಎಲ್​​ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಯಮಲೂರು ರಸ್ತೆ ನೀರಿನಲ್ಲಿ ಮುಳುಗಿದೆ. ಈ ಪ್ರದೇಶದಲ್ಲಿ ವಾಸಿಸುವ ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ತಮ್ಮ ಕಚೇರಿಗೆ ತೆರಳಲು ಟ್ರ್ಯಾಕ್ಟರ್ ಬಳಸುತ್ತಿದ್ದಾರೆ.

Heavy rain in Bengaluru
ಟ್ರ್ಯಾಕ್ಟರ್​ ಏರಿ ಆಫೀಸ್​ ತಲುಪಿದ ಐಟಿ ಸಿಬ್ಬಂದಿ

ಈ ಮೂಲಕ ಐಟಿ ವೃತ್ತಿಪರರಿಗೆ ಟ್ರ್ಯಾಕ್ಟರ್ ಸವಾರಿ ಹೊಸ ಅನುಭವವನ್ನೂ ನೀಡಿತು. ನಗರದ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, ಅನೇಕ ಕಂಪನಿಗಳು ವರ್ಕ್​ಫ್ರಮ್​ ಹೋಂ ಸಹ ಘೋಷಣೆ ಮಾಡಿವೆ.

ಐಟಿ ಉದ್ಯೋಗಿಯೊಬ್ಬರು ಮಾತನಾಡಿ, "ಹೆಚ್ಚು ರಜೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. 50 ರೂಪಾಯಿಗೆ ಟ್ರ್ಯಾಕ್ಟರ್​​ನಲ್ಲಿ ಡ್ರಾಪ್​ ತೆಗೆದುಕೊಂಡಿದ್ದೇವೆ" ಎಂದರು.

ಇನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ಮಳೆಯಿಂದ ಜಲಾವೃತಗೊಂಡ ಪ್ರದೇಶಗಳ ನಷ್ಟ ಪರಿಹಾರ ಘೋಷಣೆ ಮಾಡಿದ್ದು, 225 ಕೋಟಿ ರೂ. ಐಟಿ ಕಂಪನಿಗಳಿಗೆ ನೀಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮಹಾಮಳೆಗೆ ಮುಳುಗಿದ ಮಹಾನಗರಿ: ಭಾರಿ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆಗಳು

ಬೆಂಗಳೂರಿನಲ್ಲಿ ಆಗಸ್ಟ್​ 31ರಿಂದ ನಿರಂತರವಾಗಿ ಮಳೆಯಾಗ್ತಿದೆ. ಕಳೆದ ಭಾನುವಾರ ರಾತ್ರಿ ಧಾರಾಕಾರ ಪ್ರಮಾಣದಲ್ಲಿ ಮಳೆ ಸುರಿದಿದೆ. ಇಲ್ಲಿಯವರೆಗೆ ಸೆಪ್ಟೆಂಬರ್​ ತಿಂಗಳಲ್ಲಿ ದಾಖಲೆಯ 709 ಮಿ.ಮೀ ಮಳೆಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಬೆಳ್ಳಂದೂರು, ಸರ್ಜಾಪುರ, ದಾಸರಹಳ್ಳಿ, ರಾಜರಾಜೇಶ್ವರಿನಗರ, ಆರ್​ಆರ್ ನಗರಗಳ ಅನೇಕ ಭಾಗಗಳು ಹೊಳೆಯಂತೆ ಭಾಸವಾಗುತ್ತಿವೆ.

ಬೆಂಗಳೂರು: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ರಣಚಂಡಿ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಬಹುತೇಕ ಪ್ರಮುಖ ರಸ್ತೆಗಳು ನದಿ ರೀತಿಯಲ್ಲಿ ತುಂಬಿ ಹರಿಯುತ್ತಿವೆ. ಜನರಿಗೆ ಆಟೋ, ಕಾರು ಹಾಗೂ ಬೈಕ್​​​ನಲ್ಲಿ ಕಚೇರಿಗೆ ಹೋಗಲು ಸಾಧ್ಯವಾಗುತ್ತಿಲ್ಲ.

ಹೀಗಾಗಿ, ಬೆಂಗಳೂರಿನ ಐಟಿ ಸಿಬ್ಬಂದಿ ಕಚೇರಿ ತಲುಪಲು ಟ್ರ್ಯಾಕ್ಟರ್​ ಮೊರೆ ಹೋಗಿದ್ದಾರೆ. ಟ್ರ್ಯಾಕ್ಟರ್​​ಗಳಲ್ಲಿ ಪ್ರಯಾಣ ಬೆಳೆಸಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮುಖ್ಯವಾಗಿ ಎಚ್​​ಎಎಲ್​​ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಯಮಲೂರು ರಸ್ತೆ ನೀರಿನಲ್ಲಿ ಮುಳುಗಿದೆ. ಈ ಪ್ರದೇಶದಲ್ಲಿ ವಾಸಿಸುವ ಐಟಿ ಕಂಪನಿಗಳ ಅನೇಕ ಉದ್ಯೋಗಿಗಳು ತಮ್ಮ ಕಚೇರಿಗೆ ತೆರಳಲು ಟ್ರ್ಯಾಕ್ಟರ್ ಬಳಸುತ್ತಿದ್ದಾರೆ.

Heavy rain in Bengaluru
ಟ್ರ್ಯಾಕ್ಟರ್​ ಏರಿ ಆಫೀಸ್​ ತಲುಪಿದ ಐಟಿ ಸಿಬ್ಬಂದಿ

ಈ ಮೂಲಕ ಐಟಿ ವೃತ್ತಿಪರರಿಗೆ ಟ್ರ್ಯಾಕ್ಟರ್ ಸವಾರಿ ಹೊಸ ಅನುಭವವನ್ನೂ ನೀಡಿತು. ನಗರದ ಹೆಚ್ಚಿನ ಭಾಗಗಳಲ್ಲಿ ಭಾರಿ ಮಳೆ ಸುರಿಯುತ್ತಿರುವ ಕಾರಣ, ಅನೇಕ ಕಂಪನಿಗಳು ವರ್ಕ್​ಫ್ರಮ್​ ಹೋಂ ಸಹ ಘೋಷಣೆ ಮಾಡಿವೆ.

ಐಟಿ ಉದ್ಯೋಗಿಯೊಬ್ಬರು ಮಾತನಾಡಿ, "ಹೆಚ್ಚು ರಜೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅದು ನಮ್ಮ ಕೆಲಸದ ಮೇಲೆ ಪರಿಣಾಮ ಬೀರುತ್ತದೆ. 50 ರೂಪಾಯಿಗೆ ಟ್ರ್ಯಾಕ್ಟರ್​​ನಲ್ಲಿ ಡ್ರಾಪ್​ ತೆಗೆದುಕೊಂಡಿದ್ದೇವೆ" ಎಂದರು.

ಇನ್ನು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬೆಂಗಳೂರಿನಲ್ಲಿ ಮಳೆಯಿಂದ ಜಲಾವೃತಗೊಂಡ ಪ್ರದೇಶಗಳ ನಷ್ಟ ಪರಿಹಾರ ಘೋಷಣೆ ಮಾಡಿದ್ದು, 225 ಕೋಟಿ ರೂ. ಐಟಿ ಕಂಪನಿಗಳಿಗೆ ನೀಡುವ ಭರವಸೆ ನೀಡಿದ್ದಾರೆ.

ಇದನ್ನೂ ಓದಿ: ಮಹಾಮಳೆಗೆ ಮುಳುಗಿದ ಮಹಾನಗರಿ: ಭಾರಿ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆಗಳು

ಬೆಂಗಳೂರಿನಲ್ಲಿ ಆಗಸ್ಟ್​ 31ರಿಂದ ನಿರಂತರವಾಗಿ ಮಳೆಯಾಗ್ತಿದೆ. ಕಳೆದ ಭಾನುವಾರ ರಾತ್ರಿ ಧಾರಾಕಾರ ಪ್ರಮಾಣದಲ್ಲಿ ಮಳೆ ಸುರಿದಿದೆ. ಇಲ್ಲಿಯವರೆಗೆ ಸೆಪ್ಟೆಂಬರ್​ ತಿಂಗಳಲ್ಲಿ ದಾಖಲೆಯ 709 ಮಿ.ಮೀ ಮಳೆಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಬೆಳ್ಳಂದೂರು, ಸರ್ಜಾಪುರ, ದಾಸರಹಳ್ಳಿ, ರಾಜರಾಜೇಶ್ವರಿನಗರ, ಆರ್​ಆರ್ ನಗರಗಳ ಅನೇಕ ಭಾಗಗಳು ಹೊಳೆಯಂತೆ ಭಾಸವಾಗುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.