ETV Bharat / entertainment

ಬಿಗ್​ ಬಾಸ್ 'ಖಳನಾಯಕ'ನಾದ ರಜತ್​: ಚೈತ್ರಾ ಕುಂದಾಪುರಗೆ 'ಸುಳ್ಳಿ' ಪಟ್ಟ ಕೊಟ್ಟ ವೈಲ್ಡ್​ ಕಾರ್ಡ್​ ಸ್ಪರ್ಧಿ - BBK 11

ಚೈತ್ರಾ ಕುಂದಾಪುರ vs ರಜತ್​ ಕಿಶನ್​​ ವಾದ-ವಿವಾದದ ಒಂದು ಸುಳಿವು ''ಮನೆಯ ಖಳನಾಯಕ ಕೊಟ್ಟ ಟಿಕೆಟ್​ಗೆ ಉರುಳೋ ವಿಕೆಟ್ ಯಾವುದು?'' ಎಂಬ ಕ್ಯಾಪ್ಷನ್​ ಅಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಸಿಕ್ಕಿದೆ.

BBK 11
ಬಿಗ್​ ಬಾಸ್​ ಸ್ಪರ್ಧಿಗಳು (Photo: ETV Bharat)
author img

By ETV Bharat Entertainment Team

Published : Jan 6, 2025, 12:42 PM IST

'ಬಿಗ್​ ಬಾಸ್​ ಕನ್ನಡ ಸೀಸನ್​​ 11' ಫಿನಾಲೆಯ ಹೊಸ್ತಿಲಲ್ಲಿದೆ. ಜನವರಿ 26ರಂದು ಗ್ರ್ಯಾಂಡ್​ ಫಿನಾಲೆ ನಡೆಯೋದು ಖಚಿತ. ಬಿಗ್​ ಬಾಸ್​ ಮನೆಯ ವಾತಾವರಣ ಬಹುತೇಕ ಬದಲಾಗಿದೆ. ಇಂದಿನ ಸಂಚಿಕೆಯಲ್ಲಿ ಖಳನಾಯಕನಾಗಿ ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್​​ ಕಿಶನ್​​ ಅಬ್ಬರಿಸಲಿದ್ದು, ಮತ್ತೊಮ್ಮೆ ಚೈತ್ರಾ ಕುಂದಾಪುರ vs ರಜತ್​ ಮಾತಿನ ಚಕಮಕಿ ಜೋರಾಗಿರಲಿದೆ.

ಚೈತ್ರಾ ಕುಂದಾಪುರ vs ರಜತ್​ ಕಿಶನ್​​ ವಾದ-ವಿವಾದದ ಒಂದು ಸುಳಿವನ್ನು ಬಿಗ್​ ಬಾಸ್​ ಒದಗಿಸಿದ್ದಾರೆ. ''ಮನೆಯ ಖಳನಾಯಕ ಕೊಟ್ಟ ಟಿಕೆಟ್​ಗೆ ಉರುಳೋ ವಿಕೆಟ್ ಯಾವುದು?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ ಅಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಅವರನ್ನು ರಜತ್​ "ಸುಳ್ಳಿ, ಸುಳ್ಳಿ" ಎಂದು ಕರೆದಿರೋದನ್ನು ಕಾಣಬಹುದು.

ಬ್ಲ್ಯಾಕ್​ ಔಟ್​ಫಿಟ್​​, ಕ್ಯಾಪ್​ ಧರಿಸಿ ಥೇಟ್​ ಖಳನಾಯಕನಾಗಿ ರಜತ್​ ಕಿಶನ್ ಆಗಮನವಾಗಿದ್ದು, ತಮ್ಮ ಆಸನದ ಮೇಲೆ ಕುಳಿತಿದ್ದಾರೆ. ಮನೆಯ ಖಳನಾಯಕ ರಜತ್​​, ಫಿನಾಲೆ ತಲುಪಲು ಅರ್ಹತೆ ಇಲ್ಲದ ಐದು ಸದಸ್ಯರರಿಗೆ ಟಿಕೆಟ್​ ಟು ಹೋಮ್​ ಫಲಕಗಳನ್ನು ತೊಡಿಸಬೇಕು ಎಂದು ಬಿಗ್​ ಬಾಸ್​ ಸೂಚಿಸಿದ್ದಾರೆ. ಅದರಂತೆ ರಜತ್​ ಐದು ಮಂದಿಗೆ ಈ ಫಲಕವನ್ನು ತೊಡಿಸಿದ್ದಾರೆ. ಅದರಲ್ಲಿ ಚೈತ್ರಾ ಕುಂದಾಪುರ ಕೂಡಾ ಓರ್ವರು.

ಇದನ್ನೂ ಓದಿ: ಧನರಾಜ್​ ಆಚಾರ್​ ಮನೆಗೆ ಗೋಲ್ಡ್​ ಸುರೇಶ್​ ಭೇಟಿ:ಮಾವನಾಗಿ ಕಂದಮ್ಮನಿಗೆ ತೊಟ್ಟಿಲು ಉಡುಗೊರೆ ಕೊಟ್ಟ ಮಾಜಿ ಸ್ಪರ್ಧಿ

ನಮ್​ ಬಾಸ್​​ ಎಂದು ಮಾತು ಆರಂಭಿಸಿದ ರಜತ್​​​, ಟಾಸ್ಕ್​ ಅಲ್ಲಿ ಝೀರೋ. ಮಾತಾಡ್ಕೊಂಡೇ ಮನೆಗೋಗ್ರಿ. ಇಲ್ಲಿರೋರು ಆಡ್ಕೊಂಡ್ ಆದ್ರೂ ಗೆಲ್ಲಲಿ ಎಂದು ತಿಳಿಸಿದ್ದಾರೆ. ಅವರ ಮಾತಿಗೆ ತಿರುಗಿಸಿ ಕೊಟ್ಟ ಚೈತ್ರಾ, ಮೊದಲನೇ ದಿನ ಬಂದಿದ್ರೆ ಐದೇ ದಿನಕ್ಕೆ ಲಗೇಜ್​ ಇಡ್ಕೊಂಡು ಹೋಗ್ತಿದ್ರು. 50 ದಿನ ಕಳ್ದ್​​ಮೇಲೆ ಬಂದಿದ್ದೀರಿ, ಅದೃಷ್ಟ ಮಾಡಿದ್ದೀರಿ ಎಂದಿದ್ದಾರೆ. ಇತ್ತ ರಜತ್​​ ಕೂಡಾ ಸುಮ್ಮನೆ ಕೂರಲಿಲ್ಲ. 50 ದಿನಗಳಾದ ಮೇಲೆ ನಾನು ಬಂದಿದ್ದಕ್ಕೆ ನೀವು ಅದೃಷ್ಟ ಮಾಡಿದ್ದೀರಿ. ಶುರುವಲ್ಲೇ ಬಂದಿದ್ರೆ ನಾಲ್ಕನೇ ವಾರಕ್ಕೇನೆ ಕಳ್ಸ್ ಬಿಡ್ತಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್​: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ

ನಂತರ ಮಾತನಾಡಿದ ಚೈತ್ರಾ, ನೀವ್​ ಹೇಳ್ದಂಗೆ ಟಾಸ್ಕ್​​ ಆಡೋರ್​ ಮಾತ್ರ ಬರ್ಬೇಕು ಅಲ್ವಾ ಅಂತಾ ಪ್ರಶ್ನಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ರಜತ್​​, ಟಾಸ್ಕ್ ಆಡೋರ್​ ಮಾತ್ರ ಬರ್ಬೇಕು ಅಂತಾ ನಾನೆಲ್ಲೇಳ್ದೆ, ಸುಳ್ಳಿ ಎಂದು ಕಿರುಚಿದ್ದಾರೆ. ಯಾಕ್​ ಅಫೆಂಡ್​ ಆಗ್ತಿದ್ದೀರಾ ಎಂದು ಚೈತ್ರಾ ಪ್ರಶ್ನಿಸಿದ್ದಾರೆ. ಸುಳ್ಳಿ ನೀನ್​ ಅದಕ್ಕೇನೆ ಎಂದು ರಜತ್​ ಮತ್ತೆ ಮತ್ತೆ ತಿಳಿಸಿದ್ದಾರೆ. ನಿಜ ಮಾತಾಡು ಎಂದ ರಜತ್ ಚೈತ್ರಾ ವೇದಿಕೆಯಿಂದ ಹೊರಡುವಾಗ್ಲೂ ಸುಳ್ಳೀ ಸುಳ್ಳೀ ಎಂದು ತಿಳಿಸಿದ್ದಾರೆ. ಈ ಮಾತುಕತೆ ಕೇಳಿಸಿಕೊಂಡ ಇತರೆ ಕೆಲ ಸ್ಪರ್ಧಿಗಳು ನಗು ಬೀರಿದರು.

'ಬಿಗ್​ ಬಾಸ್​ ಕನ್ನಡ ಸೀಸನ್​​ 11' ಫಿನಾಲೆಯ ಹೊಸ್ತಿಲಲ್ಲಿದೆ. ಜನವರಿ 26ರಂದು ಗ್ರ್ಯಾಂಡ್​ ಫಿನಾಲೆ ನಡೆಯೋದು ಖಚಿತ. ಬಿಗ್​ ಬಾಸ್​ ಮನೆಯ ವಾತಾವರಣ ಬಹುತೇಕ ಬದಲಾಗಿದೆ. ಇಂದಿನ ಸಂಚಿಕೆಯಲ್ಲಿ ಖಳನಾಯಕನಾಗಿ ವೈಲ್ಡ್​ ಕಾರ್ಡ್​ ಸ್ಪರ್ಧಿ ರಜತ್​​ ಕಿಶನ್​​ ಅಬ್ಬರಿಸಲಿದ್ದು, ಮತ್ತೊಮ್ಮೆ ಚೈತ್ರಾ ಕುಂದಾಪುರ vs ರಜತ್​ ಮಾತಿನ ಚಕಮಕಿ ಜೋರಾಗಿರಲಿದೆ.

ಚೈತ್ರಾ ಕುಂದಾಪುರ vs ರಜತ್​ ಕಿಶನ್​​ ವಾದ-ವಿವಾದದ ಒಂದು ಸುಳಿವನ್ನು ಬಿಗ್​ ಬಾಸ್​ ಒದಗಿಸಿದ್ದಾರೆ. ''ಮನೆಯ ಖಳನಾಯಕ ಕೊಟ್ಟ ಟಿಕೆಟ್​ಗೆ ಉರುಳೋ ವಿಕೆಟ್ ಯಾವುದು?'' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​ ಅಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಚೈತ್ರಾ ಕುಂದಾಪುರ ಅವರನ್ನು ರಜತ್​ "ಸುಳ್ಳಿ, ಸುಳ್ಳಿ" ಎಂದು ಕರೆದಿರೋದನ್ನು ಕಾಣಬಹುದು.

ಬ್ಲ್ಯಾಕ್​ ಔಟ್​ಫಿಟ್​​, ಕ್ಯಾಪ್​ ಧರಿಸಿ ಥೇಟ್​ ಖಳನಾಯಕನಾಗಿ ರಜತ್​ ಕಿಶನ್ ಆಗಮನವಾಗಿದ್ದು, ತಮ್ಮ ಆಸನದ ಮೇಲೆ ಕುಳಿತಿದ್ದಾರೆ. ಮನೆಯ ಖಳನಾಯಕ ರಜತ್​​, ಫಿನಾಲೆ ತಲುಪಲು ಅರ್ಹತೆ ಇಲ್ಲದ ಐದು ಸದಸ್ಯರರಿಗೆ ಟಿಕೆಟ್​ ಟು ಹೋಮ್​ ಫಲಕಗಳನ್ನು ತೊಡಿಸಬೇಕು ಎಂದು ಬಿಗ್​ ಬಾಸ್​ ಸೂಚಿಸಿದ್ದಾರೆ. ಅದರಂತೆ ರಜತ್​ ಐದು ಮಂದಿಗೆ ಈ ಫಲಕವನ್ನು ತೊಡಿಸಿದ್ದಾರೆ. ಅದರಲ್ಲಿ ಚೈತ್ರಾ ಕುಂದಾಪುರ ಕೂಡಾ ಓರ್ವರು.

ಇದನ್ನೂ ಓದಿ: ಧನರಾಜ್​ ಆಚಾರ್​ ಮನೆಗೆ ಗೋಲ್ಡ್​ ಸುರೇಶ್​ ಭೇಟಿ:ಮಾವನಾಗಿ ಕಂದಮ್ಮನಿಗೆ ತೊಟ್ಟಿಲು ಉಡುಗೊರೆ ಕೊಟ್ಟ ಮಾಜಿ ಸ್ಪರ್ಧಿ

ನಮ್​ ಬಾಸ್​​ ಎಂದು ಮಾತು ಆರಂಭಿಸಿದ ರಜತ್​​​, ಟಾಸ್ಕ್​ ಅಲ್ಲಿ ಝೀರೋ. ಮಾತಾಡ್ಕೊಂಡೇ ಮನೆಗೋಗ್ರಿ. ಇಲ್ಲಿರೋರು ಆಡ್ಕೊಂಡ್ ಆದ್ರೂ ಗೆಲ್ಲಲಿ ಎಂದು ತಿಳಿಸಿದ್ದಾರೆ. ಅವರ ಮಾತಿಗೆ ತಿರುಗಿಸಿ ಕೊಟ್ಟ ಚೈತ್ರಾ, ಮೊದಲನೇ ದಿನ ಬಂದಿದ್ರೆ ಐದೇ ದಿನಕ್ಕೆ ಲಗೇಜ್​ ಇಡ್ಕೊಂಡು ಹೋಗ್ತಿದ್ರು. 50 ದಿನ ಕಳ್ದ್​​ಮೇಲೆ ಬಂದಿದ್ದೀರಿ, ಅದೃಷ್ಟ ಮಾಡಿದ್ದೀರಿ ಎಂದಿದ್ದಾರೆ. ಇತ್ತ ರಜತ್​​ ಕೂಡಾ ಸುಮ್ಮನೆ ಕೂರಲಿಲ್ಲ. 50 ದಿನಗಳಾದ ಮೇಲೆ ನಾನು ಬಂದಿದ್ದಕ್ಕೆ ನೀವು ಅದೃಷ್ಟ ಮಾಡಿದ್ದೀರಿ. ಶುರುವಲ್ಲೇ ಬಂದಿದ್ರೆ ನಾಲ್ಕನೇ ವಾರಕ್ಕೇನೆ ಕಳ್ಸ್ ಬಿಡ್ತಿದ್ದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ತನ್ನೂರಿನ ಶಾಲೆಗೆ ಹೊಸ ರೂಪ ಕೊಟ್ಟ ಡಾಲಿ ಧನಂಜಯ್​: ಮದುವೆ ಸಂದರ್ಭವನ್ನು ಸಾರ್ಥಕಗೊಳಿಸಿದ ನಟ

ನಂತರ ಮಾತನಾಡಿದ ಚೈತ್ರಾ, ನೀವ್​ ಹೇಳ್ದಂಗೆ ಟಾಸ್ಕ್​​ ಆಡೋರ್​ ಮಾತ್ರ ಬರ್ಬೇಕು ಅಲ್ವಾ ಅಂತಾ ಪ್ರಶ್ನಿಸಿದ್ದಾರೆ. ಇದರಿಂದ ಅಸಮಾಧಾನಗೊಂಡ ರಜತ್​​, ಟಾಸ್ಕ್ ಆಡೋರ್​ ಮಾತ್ರ ಬರ್ಬೇಕು ಅಂತಾ ನಾನೆಲ್ಲೇಳ್ದೆ, ಸುಳ್ಳಿ ಎಂದು ಕಿರುಚಿದ್ದಾರೆ. ಯಾಕ್​ ಅಫೆಂಡ್​ ಆಗ್ತಿದ್ದೀರಾ ಎಂದು ಚೈತ್ರಾ ಪ್ರಶ್ನಿಸಿದ್ದಾರೆ. ಸುಳ್ಳಿ ನೀನ್​ ಅದಕ್ಕೇನೆ ಎಂದು ರಜತ್​ ಮತ್ತೆ ಮತ್ತೆ ತಿಳಿಸಿದ್ದಾರೆ. ನಿಜ ಮಾತಾಡು ಎಂದ ರಜತ್ ಚೈತ್ರಾ ವೇದಿಕೆಯಿಂದ ಹೊರಡುವಾಗ್ಲೂ ಸುಳ್ಳೀ ಸುಳ್ಳೀ ಎಂದು ತಿಳಿಸಿದ್ದಾರೆ. ಈ ಮಾತುಕತೆ ಕೇಳಿಸಿಕೊಂಡ ಇತರೆ ಕೆಲ ಸ್ಪರ್ಧಿಗಳು ನಗು ಬೀರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.