ETV Bharat / city

ನಾನು ಪ್ರತಿಪಕ್ಷದ ನಾಯಕ, ನೊಂದವರಿಗೆ ಸಾಂತ್ವನ ಹೇಳೋಕೂ ಅವಕಾಶವಿಲ್ವೇ: ಸಿದ್ದರಾಮಯ್ಯ ಕಿಡಿ

author img

By

Published : Dec 21, 2019, 3:06 PM IST

ಗೋಲಿಬಾರ್​​ನಲ್ಲಿ ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ಹೇಳಲು ತೆರಳಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಿರ್ಬಂಧ ಹೇರಲಾಗಿದ್ದರ ಪರಿಣಾಮ ಪತ್ರಿಕಾಗೋಷ್ಠಿ ನಡೆಸಿ ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದರು.

Former cm siddaramaiah fire on bjp government
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು: ನಾನೊಬ್ಬ ಪ್ರತಿಪಕ್ಷ ನಾಯಕ. ನಾನು ನೊಂದವರಿಗೆ ಸಾಂತ್ವನ ಹೇಳಲೂ ಅವಕಾಶ ಇಲ್ಲವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಮಂಗಳೂರಿಗೆ ಹೊರಟಿದ್ದೆ. ನಮ್ಮ‌ ವಿಮಾನಕ್ಕೆ ಅವಕಾಶ ಕೊಡಲಿಲ್ಲ. ಇಂದೂ ಕೂಡ ಅದಕ್ಕೆ ತಡೆ ನೀಡಿದ್ದಾರೆ. ಡಿ. 22ರವರೆಗೆ ರೈಲು, ಬಸ್ಸು, ಕಾರಿನಲ್ಲಿ ಮಂಗಳೂರಿಗೆ ಬರದಂತೆ ನನಗೆ ನೋಟಿಸ್ ನೀಡಿದ್ದಾರೆ. ಪ್ರತಿಪಕ್ಷ ಇರುವುದು ಏಕೆ? ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ನಾನು ಪ್ರತಿಪಕ್ಷ ನಾಯಕ. ಎಲ್ಲಿಗೆ ಬೇಕಾದರೂ ಭೇಟಿ ನೀಡಬಹುದು. ನನ್ನ ಹಕ್ಕನ್ನೇ ಹತ್ತಿಕ್ಕಿದ್ದಾರೆ. ಇದನ್ನ ಜನ ಯಾವತ್ತೂ ಸಹಿಸುವುದಿಲ್ಲ. ಸೋಮವಾರ ಹೋಗ್ತೇನೆ. ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ನಿರ್ಧರಿಸುತ್ತೇನೆ ಎಂದರು.

ಇಬ್ಬರು ಗೋಲಿಬಾರ್​​ಗೆ ಮೃತರಾಗಿದ್ದಾರೆ. ಪೊಲೀಸರೇ ಗುಂಡು ಹೊಡೆದ್ರೂ ಸಾಯಲಿಲ್ಲ ಅಂತಾರೆ. ಇದೆಲ್ಲವನ್ನೂ ಗಮನಿಸಿದಾಗ ಏನು ಅರ್ಥ ಕೊಡುತ್ತದೆ. ಗೋಲಿಬಾರ್ ಮಾಡುವ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾನೂನು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಲು ಹಲವು ದಾರಿಗಳಿದ್ದವು. ಅವರ ತಪ್ಪು ಮುಚ್ಚಿಕೊಳ್ಳಲು ಅಲ್ಲಿಗೆ ಹೋಗಲು ನನಗೆ ಅವಕಾಶ ನೀಡಿಲ್ಲ. ಇವತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಹೋಗಿದ್ದಾರೆ. ಆಡಳಿತ ಪಕ್ಷದವರಿಗೆ ಪೊಲೀಸರು ಅವಕಾಶ ಕೊಟ್ಟಿದ್ಯಾಕೆ? ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಸರ್ಕಾರದ ವಿರುದ್ಧ ಹರಿದಾಯ್ದರು.

ಲಾಠಿ ಚಾರ್ಜ್ ಮಾಡಿಸಿರಲಿಲ್ಲ: ನಾನು ಮುಖ್ಯಮಂತ್ರಿಯಾಗಿದ್ದಾಗ ಲಾಠಿ ಚಾರ್ಜ್​ ಮಾಡಿಸಿರಲಿಲ್ಲ. ಕಾವೇರಿ ಗಲಾಟೆ ಸಂದರ್ಭದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದೆವು. ಅದೂ 24 ಗಂಟೆ ಮಾತ್ರ. ಅವರು ಪ್ರತಿಪಕ್ಷದಲ್ಲಿದ್ದಾಗ ಈ ರೀತಿಯ ನಿರ್ಬಂಧಗಳನ್ನು ಹೇರಿರಲಿಲ್ಲ. ಎಲ್ಲರಿಗೂ ಭೇಟಿಗೆ ಅವಕಾಶ ಕೊಟ್ಟಿದ್ದೆವು. ಕೇಂದ್ರ ಸಚಿವ ಸುರೇಶ್ ಅಂಗಡಿ ಗುಂಡು ಹಾರಿಸಲಿ ಅಂತಾರೆ. ಈ ಬಗ್ಗೆ ನಿಮ್ಮ ಕ್ರಮ ಏನು ಎಂದು ಪ್ರಶ್ನಿಸಿದರು.

ದೇಶದಲ್ಲಿ ನೂರಾರು ಕಾಡುವ ಸಮಸ್ಯೆಗಳಿವೆ. ಅವುಗಳ ಬಗ್ಗೆ ಬಿಜೆಪಿ ಮಾತನಾಡಲ್ಲ. ಪರಿಹರಿಸುವತ್ತ ಗಮನ ಕೊಟ್ಟಿಲ್ಲ. ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ಕಾರಣ. ಅವರಿಬ್ಬರೇ ನೇರ ಹೊಣೆ ಹೊರಬೇಕು. ಯುಪಿಯಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಅಮಾಯಕರ ಬಲಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಕ್ಕಾಗಿ ಇವರು ಹೋರಾಡಿದವರಲ್ಲ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಪೊಲೀಸರೇ ಗೋಲಿಬಾರ್ ಮಾಡ್ತಾರೆ. ಮತ್ತೆ ಗೃಹ ಸಚಿವರು ಇರೋದು ಯಾಕೆ. ಸದನದಲ್ಲಿ ಉತ್ತರ ಕೊಡೋದು ಪೊಲೀಸರಾ? ಸಚಿವರೇ ಸದನದಲ್ಲಿ ಉತ್ತರ ಕೊಡಬೇಕು. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದ ಸಮಿತಿಯೇ ಆಗಬೇಕು ಎಂದು ಒತ್ತಾಯಿಸಿದರು.

ಅನಗತ್ಯವಾಗಿ 144 ಹೇರಿಕೆ: 144 ಸೆಕ್ಷನ್ ಜಾರಿ ಹಾಕಬೇಕಾದ ಅಗತ್ಯವಿರಲಿಲ್ಲ. ತುಮಕೂರಿನಲ್ಲಿ ಏನಾದ್ರೂ ಗಲಾಟೆಯಾಗ್ತಿದೆಯೇ? ಅಲ್ಲೇಕೆ 144 ಸೆಕ್ಷನ್ ಹಾಕಿದ್ದಾರೆ. ಕೊಪ್ಪಳ, ಬೀದರ್​​ನಲ್ಲಿ ಪ್ರತಿಭಟನೆ ನಡೆಯುತ್ತಿದ್ಯಾ? ಅಲ್ಲೂ 144 ಸೆಕ್ಷನ್ ಜಾರಿ ಅಂದ್ರೆ ನಾಚಿಕೆಯಾಗಲ್ವೇ ಎಂದರು. ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾತನಾಡಿ, ರಾಜೀನಾಮೆ ಇನ್ನೂ ಅಂಗೀಕರಿಸಿಲ್ಲ. ಅದಿನ್ನೂ ಮುಂದುವರೆಯುತ್ತಿದೆ. ಅದನ್ನ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಥಾನದಲ್ಲಿ ಮುಂದುವರಿಯುವ ಸುಳಿವು ನೀಡಿದರು.

ಬೆಂಗಳೂರು: ನಾನೊಬ್ಬ ಪ್ರತಿಪಕ್ಷ ನಾಯಕ. ನಾನು ನೊಂದವರಿಗೆ ಸಾಂತ್ವನ ಹೇಳಲೂ ಅವಕಾಶ ಇಲ್ಲವೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿನ್ನೆ ಮಂಗಳೂರಿಗೆ ಹೊರಟಿದ್ದೆ. ನಮ್ಮ‌ ವಿಮಾನಕ್ಕೆ ಅವಕಾಶ ಕೊಡಲಿಲ್ಲ. ಇಂದೂ ಕೂಡ ಅದಕ್ಕೆ ತಡೆ ನೀಡಿದ್ದಾರೆ. ಡಿ. 22ರವರೆಗೆ ರೈಲು, ಬಸ್ಸು, ಕಾರಿನಲ್ಲಿ ಮಂಗಳೂರಿಗೆ ಬರದಂತೆ ನನಗೆ ನೋಟಿಸ್ ನೀಡಿದ್ದಾರೆ. ಪ್ರತಿಪಕ್ಷ ಇರುವುದು ಏಕೆ? ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ನಾನು ಪ್ರತಿಪಕ್ಷ ನಾಯಕ. ಎಲ್ಲಿಗೆ ಬೇಕಾದರೂ ಭೇಟಿ ನೀಡಬಹುದು. ನನ್ನ ಹಕ್ಕನ್ನೇ ಹತ್ತಿಕ್ಕಿದ್ದಾರೆ. ಇದನ್ನ ಜನ ಯಾವತ್ತೂ ಸಹಿಸುವುದಿಲ್ಲ. ಸೋಮವಾರ ಹೋಗ್ತೇನೆ. ಸದನದಲ್ಲಿ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ನಿರ್ಧರಿಸುತ್ತೇನೆ ಎಂದರು.

ಇಬ್ಬರು ಗೋಲಿಬಾರ್​​ಗೆ ಮೃತರಾಗಿದ್ದಾರೆ. ಪೊಲೀಸರೇ ಗುಂಡು ಹೊಡೆದ್ರೂ ಸಾಯಲಿಲ್ಲ ಅಂತಾರೆ. ಇದೆಲ್ಲವನ್ನೂ ಗಮನಿಸಿದಾಗ ಏನು ಅರ್ಥ ಕೊಡುತ್ತದೆ. ಗೋಲಿಬಾರ್ ಮಾಡುವ ಅವಶ್ಯಕತೆ ಇತ್ತೇ ಎಂದು ಪ್ರಶ್ನಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಕಾನೂನು ಸುವ್ಯವಸ್ಥೆಯನ್ನು ಸರಿ ದಾರಿಗೆ ತರಲು ಹಲವು ದಾರಿಗಳಿದ್ದವು. ಅವರ ತಪ್ಪು ಮುಚ್ಚಿಕೊಳ್ಳಲು ಅಲ್ಲಿಗೆ ಹೋಗಲು ನನಗೆ ಅವಕಾಶ ನೀಡಿಲ್ಲ. ಇವತ್ತು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರು ಹೋಗಿದ್ದಾರೆ. ಆಡಳಿತ ಪಕ್ಷದವರಿಗೆ ಪೊಲೀಸರು ಅವಕಾಶ ಕೊಟ್ಟಿದ್ಯಾಕೆ? ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಎಂದು ಸರ್ಕಾರದ ವಿರುದ್ಧ ಹರಿದಾಯ್ದರು.

ಲಾಠಿ ಚಾರ್ಜ್ ಮಾಡಿಸಿರಲಿಲ್ಲ: ನಾನು ಮುಖ್ಯಮಂತ್ರಿಯಾಗಿದ್ದಾಗ ಲಾಠಿ ಚಾರ್ಜ್​ ಮಾಡಿಸಿರಲಿಲ್ಲ. ಕಾವೇರಿ ಗಲಾಟೆ ಸಂದರ್ಭದಲ್ಲಿ 144 ಸೆಕ್ಷನ್ ಜಾರಿ ಮಾಡಿದ್ದೆವು. ಅದೂ 24 ಗಂಟೆ ಮಾತ್ರ. ಅವರು ಪ್ರತಿಪಕ್ಷದಲ್ಲಿದ್ದಾಗ ಈ ರೀತಿಯ ನಿರ್ಬಂಧಗಳನ್ನು ಹೇರಿರಲಿಲ್ಲ. ಎಲ್ಲರಿಗೂ ಭೇಟಿಗೆ ಅವಕಾಶ ಕೊಟ್ಟಿದ್ದೆವು. ಕೇಂದ್ರ ಸಚಿವ ಸುರೇಶ್ ಅಂಗಡಿ ಗುಂಡು ಹಾರಿಸಲಿ ಅಂತಾರೆ. ಈ ಬಗ್ಗೆ ನಿಮ್ಮ ಕ್ರಮ ಏನು ಎಂದು ಪ್ರಶ್ನಿಸಿದರು.

ದೇಶದಲ್ಲಿ ನೂರಾರು ಕಾಡುವ ಸಮಸ್ಯೆಗಳಿವೆ. ಅವುಗಳ ಬಗ್ಗೆ ಬಿಜೆಪಿ ಮಾತನಾಡಲ್ಲ. ಪರಿಹರಿಸುವತ್ತ ಗಮನ ಕೊಟ್ಟಿಲ್ಲ. ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್​ ಶಾ ಕಾರಣ. ಅವರಿಬ್ಬರೇ ನೇರ ಹೊಣೆ ಹೊರಬೇಕು. ಯುಪಿಯಲ್ಲಿ 11 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಅಮಾಯಕರ ಬಲಿಯಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸ್ವಾತಂತ್ರ್ಯಕ್ಕಾಗಿ ಇವರು ಹೋರಾಡಿದವರಲ್ಲ. ರಾಜ್ಯದಲ್ಲಿ ಗೃಹ ಸಚಿವರು ಇದ್ದಾರೋ ಇಲ್ಲವೋ ಗೊತ್ತಿಲ್ಲ. ಪೊಲೀಸರೇ ಗೋಲಿಬಾರ್ ಮಾಡ್ತಾರೆ. ಮತ್ತೆ ಗೃಹ ಸಚಿವರು ಇರೋದು ಯಾಕೆ. ಸದನದಲ್ಲಿ ಉತ್ತರ ಕೊಡೋದು ಪೊಲೀಸರಾ? ಸಚಿವರೇ ಸದನದಲ್ಲಿ ಉತ್ತರ ಕೊಡಬೇಕು. ಈ ಬಗ್ಗೆ ನ್ಯಾಯಾಂಗ ತನಿಖೆ ನಡೆಯಬೇಕು. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದ ಸಮಿತಿಯೇ ಆಗಬೇಕು ಎಂದು ಒತ್ತಾಯಿಸಿದರು.

ಅನಗತ್ಯವಾಗಿ 144 ಹೇರಿಕೆ: 144 ಸೆಕ್ಷನ್ ಜಾರಿ ಹಾಕಬೇಕಾದ ಅಗತ್ಯವಿರಲಿಲ್ಲ. ತುಮಕೂರಿನಲ್ಲಿ ಏನಾದ್ರೂ ಗಲಾಟೆಯಾಗ್ತಿದೆಯೇ? ಅಲ್ಲೇಕೆ 144 ಸೆಕ್ಷನ್ ಹಾಕಿದ್ದಾರೆ. ಕೊಪ್ಪಳ, ಬೀದರ್​​ನಲ್ಲಿ ಪ್ರತಿಭಟನೆ ನಡೆಯುತ್ತಿದ್ಯಾ? ಅಲ್ಲೂ 144 ಸೆಕ್ಷನ್ ಜಾರಿ ಅಂದ್ರೆ ನಾಚಿಕೆಯಾಗಲ್ವೇ ಎಂದರು. ಶಾಸಕಾಂಗ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾತನಾಡಿ, ರಾಜೀನಾಮೆ ಇನ್ನೂ ಅಂಗೀಕರಿಸಿಲ್ಲ. ಅದಿನ್ನೂ ಮುಂದುವರೆಯುತ್ತಿದೆ. ಅದನ್ನ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಥಾನದಲ್ಲಿ ಮುಂದುವರಿಯುವ ಸುಳಿವು ನೀಡಿದರು.

Intro:newsBody:ನಾನು ನೊಂದವರಿಗೆ ಸಾಂತ್ವನ ಹೇಳೋಕೆ ಅವಕಾಶವಿಲ್ವೇ?: ಸಿದ್ದರಾಮಯ್ಯ ಪ್ರಶ್ನೆ


ಬೆಂಗಳೂರು: ನಾನೊಬ್ಬ ಪ್ರತಿಪಕ್ಷ ನಾಯಕ. ನಾನು ನೊಂದವರಿಗೆ ಸಾಂತ್ವನ ಹೇಳೋಕೆ ಅವಕಾಶವಿಲ್ವೇ ಮಾಜಿ ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ನಿವಾಸ ಕಾವೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಾನು ನಿನ್ನೆ ಮಂಗಳೂರಿಗೆ ಹೊರಟಿದ್ದೆ. ನಿನ್ನೆಯೂ ನಮ್ಮ‌ಫ್ಲೈಟ್ ಗೆ ಅವಕಾಶ ಕೊಡಲಿಲ್ಲ. ಇವತ್ತು ನಾನು ಮಂಗಳೂರಿಗೆ ಹೊರಟಿದ್ದೆ. ಇವತ್ತು ಪೊಲೀಸರು ನೊಟೀಸ್ ಕೊಟ್ಟಿದ್ದಾರೆ. ಡಿ.22ರವರೆಗೆ ಮಂಗಳೂರಿಗೆ ಬರದಂತೆ ಸೂಚಿಸಿದ್ದಾರೆ. ಇಬ್ಬರು ಗೋಲಿಬಾರ್ ಗೆ ಮೃತರಾಗಿದ್ದಾರೆ. ಪೊಲೀಸರೇ ಗುಂಡು ಹೊಡೆದ್ರೂ ಸಾಯಲಿಲ್ಲ ಅಂತಾರೆ. ಇದೆಲ್ಲವನ್ನೂ ಗಮನಿಸಿದಾಗ ಏನು ಅರ್ಥ ಕೊಡುತ್ತೆ. ಗೋಲಿಬಾರ್ ಮಾಡುವ ಅವಶ್ಯಕತೆಯಿತ್ತೇ ಎಂದು ಪ್ರಶ್ನಿಸಿದರು.
ಕಾನೂನು ಸುವ್ಯವಸ್ಥೆಗೆ ಹಲವು ದಾರಿಗಳಿದ್ದವು. ಅವರ ತಪ್ಪು ಮುಚ್ಚಿಕೊಳ್ಳೋಕೆ ನನಗೆ ಅವಕಾಶ ಕೊಟ್ಟಿಲ್ಲ. ಇವತ್ತು ಸಿಎಂ, ಡಿಸಿಎಂ, ಹೋಂ ಮಿನಿಸ್ಟರ್ ಹೋಗಿದ್ದಾರೆ. ಅವರಿಗೆ ಹೇಗೆ ಅವಕಾಶ ನೀಡಿದ್ರು ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಲರಿಗೂ ಅವಕಾಶ ನೀಡಲಿ
ಆಡಳಿತ ಪಕ್ಷದವರಿಗೆ ಯಾಕೆ ಪೊಲೀಸರು ಅವಕಾಶ ಕೊಟ್ಟಿದ್ದು? ಪರಿಸ್ಥಿತಿ ಸರಿಯಿಲ್ಲದಿದ್ದರೆ ಅವರಿಗೆ ಯಾಕೆ ಅವಕಾಶ ಕೊಟ್ಟಿದ್ದು? ಸಿಎಂ, ಡಿಸಿಎಂ, ಹೋಂಗೆ ಅವಕಾಶ ನೀಡಿದ್ದೇಕೆ? ಇದು ಸಂವಿಧಾನದ ಸ್ಪಚ್ಟ ಉಲ್ಲಂಘನೆಯಾಗಿದೆ ಎಂದರು.
ಮಂಗಳೂರಿಗೆ ಬರದಂತೆ ನನಗೆ ನೊಟೀಸ್ ನೀಡಿದ್ದಾರೆ. ರೈಲು, ಬಸ್ಸು, ಕಾರಿನಲ್ಲಿ ಬರದಂತೆಯೂ ಸೂಚಿಸಿದ್ದಾರೆ. ನಾನು ಕೇಳ್ತೇನೆ ದೇಶದಲ್ಲಿ ಪ್ರಜಾಪ್ರಭುತ್ವ ಇದೆಯೇ?ವಿರೋಧ ಪಕ್ಷ ಇರೋದು ಯಾಕೆ? ತಪ್ಪು ಮಾಡಿದ್ದರೆ ತಪ್ಪು ಮಾಡಿದ್ದೇವೆ ಅಂತ ಹೇಳೋಕೆ ಇರೋದು. ನಮಗೆ ಅವಕಾಶ ಕೊಡಲಿಲ್ಲ ಅಂದರೆ ಹೇಗೆ? ಎಂದು ಪ್ರಶ್ನಿಸಿದರು.
ಲಾಟಿಚಾರ್ಜ್ ಮಾಡಿಸಿರಲಿಲ್ಲ.
ನಾನು ಸಿಎಂ ಇದ್ದಾಗ ಲಾಟಿಚಾರ್ಚ್ ಮಾಡಿಸಿರಲಿಲ್ಲ. ಕೇಂದ್ರದ ಮಂತ್ರಿ ಗುಂಡು ಹಾರಿಸ್ರಿ ಅಂತಾರೆ. ಕೇಂದ್ರ ಸಚಿವರು ಇಂತ ಹೇಳಿಕೆ ಕೊಡುವುದು ತಪ್ಪು. ಕೇಂದ್ರ ಸಚಿವ ಸುರೇಶ್ ಅಂಗಡಿ ಮೇಲೆ ಕ್ರಮ ಏನು ತೆಗೆದುಕೊಳ್ತೀರ. ಇದು ಪ್ರಜಾಪ್ರಭುತ್ವ, ಸಂವಿಧಾನಕ್ಕನ್ನುಗುಣವಾಗಿ ಎಲ್ಲರೂ ನಡೆದುಕೊಳ್ಳಬೇಕು. ಅವರು ವಿರೋಧ ಪಕ್ಷದಲ್ಲಿದ್ದಾಗ ನಾವು ನಿರ್ಭಂದ ಹೇರಿರಲಿಲ್ಲ. ಎಲ್ಲರಿಗೂ ಭೇಟಿಗೆ ಅವಕಾಶ ಕೊಟ್ಟಿದ್ದೆವು. ಕಾವೇರಿ ಗಲಾಟೆಯಲ್ಲಿ ಮಾತ್ರ 144 ಸೆಕ್ಷನ್ ಹಾಕಿದ್ದೆವು. ಅದೂ 24 ಗಂಟೆಯಲ್ಲಿ ತೆಗೆದಿದ್ದೆವು ಎಂದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ. ದಕ್ಷ ಆಡಳಿತ ಇಲ್ಲವಾದ್ರೆ ಹೀಗೇ ಆಗುವುದು. ಸರ್ಕಾರ ಸಂಪೂರ್ಣ ಪೇಲ್ಯೂರ್ ಆಗಿದೆ. ನಾನು ಪ್ರತಿಪಕ್ಷ ನಾಯಕ. ನಾನು ಎಲ್ಲಿಗೆ ಬೇಕಾದರೂ ಭೇಟಿ ನೀಡಬಹುದು. ನನ್ನ ಹಕ್ಕನ್ನೇ ಇವರು ಹತ್ತಿಕ್ಕಿದ್ದಾರೆ. ಇದನ್ನ ಜನ ಯಾವತ್ತೂ ಸಹಿಸುವುದಿಲ್ಲ. ನನಗೆ ಭೇಟಿ ನೀಡುವುದಕ್ಕೆ ಅವಕಾಶ ನೀಡಬೇಕಿತ್ತು. ಸೋಮವಾರ ನಾನು ಹೋಗ್ತೇನೆ. ಸದನದಲ್ಲಿ ಹಕ್ಕು ಚ್ಯುತಿ ಮಂಡಿಸುವ ಬಗ್ಗೆ ನಿರ್ಧರಿಸುತ್ತೇನೆ ಎಂದರು.

ದೇಶದಲ್ಲಿ ಹಲವು ಬರ್ನಿಂಗ್ ವಿಷಯಗಳಿವೆ. ಅದರ ಬಗ್ಗೆ ಬಿಜೆಪಿಯವರು ಮಾತನಾಡ್ತಿಲ್ಲ. ಸಮಸ್ಯೆಗಳನ್ನ ಪರಿಹರಿಸುವ ಕೆಲಸ ಮಾಡ್ತಿಲ್ಲ. ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರಕ್ಕೆ ಮೋದಿ, ಶಾ ಕಾರಣ. ಅವರಿಬ್ಬರೇ ನೇರ ಹೊಣೆ ಹೊರಬೇಕು. ಯುಪಿಯಲ್ಲಿ 11 ಜನ ಪ್ರಾಣ ತೆತ್ತಿದ್ದಾರೆ. ಪಶ್ಚಿಮ ಬಂಗಾಳದಲ್ಲೂ ಅಮಾಯಕರ ಬಲಿಯಾಗಿದೆ. ಸ್ವಾತಂತ್ರ್ಯಕ್ಕಾಗಿ ಇವರು ಹೋರಾಡಿದವರಲ್ಲ. ರಾಜ್ಯದಲ್ಲಿ ಹೋಂಮಿನಿಸ್ಟರ್ ಇದ್ದಾರೋ ಇಲ್ವೋ ಗೊತ್ತಿಲ್ಲ. ಪೊಲೀಸರೇ ಗೋಲಿಬಾರ್ ಮಾಡ್ತಾರೆ. ಮತ್ತೆ ಗೃಹ ಸಚಿವರು ಇರೋದು ಯಾಕೆ. ಸದನದಲ್ಲಿ ಉತ್ತರ ಕೊಡೋದು ಪೊಲೀಸರಾ? ಗೃಹ ಸಚಿವರೇ ಸದನದಲ್ಲಿ ಉತ್ತರ ಕೊಡಬೇಕು. ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಸಂಪೂರ್ಣ ವಿಫಲರಾಗಿದ್ದಾರೆ. ಈ ಬಗ್ಗೆ ನ್ಯಾಯಾಂಗ ತನಿಖೆಯೇ ನಡೆಯಬೇಕು. ಹೈಕೋರ್ಟ್ ಸಿಟ್ಟಿಂಗ್ ಜಡ್ಜ್ ನೇತೃತ್ವದ ಸಮಿತಿಯೇ ಆಗಬೇಕು ಎಂದು ಒತ್ತಾಯಿಸಿದರು.
ಅನಗತ್ಯವಾಗಿ 144 ಹೇರಿಕೆ
144ನೇ ಸೆಕ್ಷನ್ ಹಾಕಬೇಕಾದ ಅವಶ್ಯಕತೆಯಿರಲಿಲ್ಲ. ತುಮಕೂರಿನಲ್ಲಿ ಏನಾದ್ರೂ ಗಲಾಟೆಯಾಗ್ತಿದೆಯೇ? ಅಲ್ಲೇಕೆ 144 ನೇಸೆಕ್ಷನ್ ಹಾಕಿದ್ದಾರೆ. ಕೊಪ್ಪಳ, ಬೀದರ್ ನಲ್ಲಿ ಪ್ರತಿಭಟನೆ ನಡೆಯುತ್ತಿದ್ಯಾ? ಅಲ್ಲೂ 144 ನೇ ಸೆಕ್ಷನ್ ಜಾರಿ ಅಂದ್ರೆ ನಾಚಿಕೆಯಾಗಲ್ವೇ? ಎಂದರು.
ಪ್ರತಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ವಿಚಾರ ಮಾತನಾಡಿ, ರಾಜೀನಾಮೆ ಇನ್ನೂ ಕಂಟಿನ್ಯೂ ಇದೆ. ಅದನ್ನ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಪ್ರತಿಪಕ್ಷ ನಾಯಕ ಸ್ಥಾನದಲ್ಲಿ ಮುಂದುವರಿಕೆ ಸುಳಿವು ನೀಡಿದರು.Conclusion:news
ETV Bharat Logo

Copyright © 2024 Ushodaya Enterprises Pvt. Ltd., All Rights Reserved.