ಬೆಂಗಳೂರು : ಮೊದಲ ವರ್ಷದ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಪರೀಕ್ಷೆಯಲ್ಲಿ ಫೇಲಾಗಿದ್ದಕ್ಕೆ ಪೋಷಕರು ಬೈದಿದ್ದು, ಬೇಸತ್ತ ಮಗ ಮನೆಯಿಂದ ಕಾಣೆಯಾಗಿದ್ದಾನೆ.
ಎಂಎನ್ಎಂ ಕನ್ಸ್ಟ್ರಕ್ಷನ್ಸ್ ಮಾಲೀಕ ಉಲ್ಲಾಳದ ಮಂಜುನಾಥ್ ಎಂಬುವರ ಪುತ್ರ ನಿಹಾಲ್ ಎಂಬಾತ ಸ್ನೇಹಿತನ ಪುಸ್ತಕದಲ್ಲಿ, ನಾನು ನನ್ನ ಸ್ವತಂತ್ರ ಜೀವನ ಮಾಡಬೇಕು. ನನ್ನನ್ನು ಹುಡುಕಬೇಡಿ ಎಂದು ಲೆಟರ್ ಬರೆದು ನಿನ್ನೆ ಸಂಜೆಯಿಂದ ನಾಪತ್ತೆಯಾಗಿದ್ದಾನೆ.
ನಾಪತ್ತೆಯಾದ ಬಾಲಕನ ಸ್ನೇಹಿತ ಲೆಟರ್ ಅನ್ನು ತಕ್ಷಣ ನಿಹಾಲ್ ಪೋಷಕರಿಗೆ ತೋರಿಸಿದ್ದಾನೆ. ಅಲ್ಲದೇ ಅಕ್ಕಪಕ್ಕದ ಸಿಸಿಟಿವಿಯಲ್ಲಿಯೂ ಪೋಷಕರು ಪರಿಶೀಲಿಸಿದಾಗ ಅಪರಿಚಿತ ವ್ಯಕ್ತಿಯೊಂದಿಗೆ ನಿಹಾಲ್ ಬೈಕ್ನಲ್ಲಿ ಹೋಗುತ್ತಿರುವುದು ಗೊತ್ತಾಗಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಬೀದಿ ನಾಯಿ ಮೇಲೆ ಹರಿದ ಕಾರು: ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಫಸ್ಟ್ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ನಿಹಾಲ್ ಪರೀಕ್ಷೆಯಲ್ಲಿ 2 ಸಬ್ಜೆಕ್ಟ್ನಲ್ಲಿ ಫೇಲ್ ಆಗಿದ್ದಕ್ಕೆ ನಿನ್ನೆ ನಿಹಾಲ್ ಪೋಷಕರ ಬಳಿ ಕಾಲೇಜಿನವರು ಮಾತನಾಡಿದ್ದರು. ಈ ಬಗ್ಗೆ ನಿಹಾಲ್ನೊಂದಿಗೆ ಪೋಷಕರು ಮಾತನಾಡಿ, ಬೈದು ಬುದ್ಧಿ ಹೇಳಿದ್ದರು. ಇದೀಗ ನಿಹಾಲ್ ನಾಪತ್ತೆಯಾಗಿದ್ದಾನೆ. ಈ ಕುರಿತು ಸದ್ಯ ಜ್ಞಾನಭಾರತಿ ಪೊಲೀಸ್ಸ್ ಠಾಣೆ ಪೋಷಕರು ದೂರು ನೀಡಿದ್ದಾರೆ.