ಬೆಂಗಳೂರು: ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೆಸರಲ್ಲಿ ನಕಲಿ ಫೇಸ್ಬುಕ್ ಖಾತೆ ತೆರೆಯಲಾಗಿದ್ದು, ಸಚಿವರಿಗೆ ಐದು ಸಾವಿರ ರೂ. ಹಣದ ಅವಶ್ಯಕತೆ ಇದೆ ಎಂದು ಬೇಡಿಕೆಯಿಟ್ಟಿರುವ ಘಟನೆ ಬೆಳಕಿಗೆ ಬಂದಿದೆ.
ಮೆಸೆಂಜರ್ ಮೂಲಕ ಸಾಕಷ್ಟು ಜನರ ಬಳಿ ಐದು ಸಾವಿರ ರೂ. ಹಣ ಹಾಕಿ ಸಂಜೆ ಕೊಡುತ್ತೇನೆ. ಗೂಗಲ್ ಪೇ ಮಾಡಿ ಎಂದು ಖದೀಮರು ಸಂದೇಶ ಕಳುಹಿಸುತ್ತಾರೆ. ಇದನ್ನು ನಂಬಿ ಹಣ ಹಾಕಿದ್ರೆ ನೀವು ಮೋಸಕ್ಕೆ ಒಳಗಾಗುವುದು ಗ್ಯಾರಂಟಿ.
ಇನ್ನು ಈ ಕುರಿತು ಸಚಿವರ ಪರ್ಸನಲ್ ಸೆಕ್ರೆಟರಿ ಡಿಜಿ ಗೆ ದೂರು ನೀಡಿದ್ದು, ಸಿಐಡಿ ಸೈಬರ್ ಸೆಲ್ನಲ್ಲಿ ಎಫ್.ಐ.ಆರ್ ದಾಖಲಾಗಿದೆ.