ETV Bharat / city

ಆರ್​​ಟಿಒ ಕಚೇರಿಯಲ್ಲಿ ಮಧ್ಯವರ್ತಿ ಹಾವಳಿ: ಅಧಿಕಾರಿಗಳು, ಹೋರಾಟಗಾರರ ಪ್ರತಿಕ್ರಿಯೆ ಏನು?

author img

By

Published : Jul 20, 2020, 6:16 PM IST

ಮಧ್ಯವರ್ತಿಗಳು ಅತಿ ಹೆಚ್ಚು ಹಣ ಪಡೆದುಕೊಂಡು ಡಿ ಎಲ್​ ಹಾಗೂ ಎಲ್​ ಎಲ್​ ಮಾಡಿಸಿಕೊಡುತ್ತಾರೆ ಎಂಬ ಆರೋಪಗಳು ದಟ್ಟವಾಗಿದ್ದು, ಆರ್​​ಟಿಒ ಇನ್ಸ್​ಪೆಕ್ಟರ್ ಹಾಗೂ ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿ ಈ ಕುರಿತು ಪ್ರತಿಕ್ರಿಯೆ ನೀಡಿದ್ದಾರೆ.

rto corruption
ಆರ್​​ಟಿಒ ಭ್ರಷ್ಟಾಚಾರ

ಬೆಂಗಳೂರು: ಪ್ರತಿಯೊಬ್ಬರ ಮನೆಯಲ್ಲಿ ಯಾವುದಾದರೂ ಒಂದು ವಾಹನ ಇದ್ದೇ ಇರುತ್ತದೆ. ಅದರ ಜೊತೆಗೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುವುದು ಅನಿವಾರ್ಯವಾಗಿರುತ್ತದೆ. ಅವುಗಳಲ್ಲಿ ಡ್ರೈವಿಂಗ್​ ಲೈಸನ್ಸ್ ಅತಿ ಮುಖ್ಯವಾಗಿರುತ್ತದೆ. ಇವುಗಳನ್ನು ಆರ್​​ಟಿಒ ಕಚೇರಿಯಲ್ಲಿ ಪಡೆಯಬೇಕು.

ರಾಜ್ಯದಲ್ಲಿ 67 ಆರ್​ಟಿಒ ಕಚೇರಿಗಳಿದ್ದು, ಡಿ ಎಲ್​ ಅಥವಾ ಎಲ್​ ಎಲ್​ ಪಡೆಯೋದಕ್ಕೆ ಕೆಲವರು ಮಧ್ಯವರ್ತಿಗಳ ಮೊರೆ ಹೋಗುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲವರಿಗಂತೂ ಸದ್ಯ ಜಾರಿಯಲ್ಲಿರುವ ಆನ್​ಲೈನ್​ ಅರ್ಜಿಯ ಬಗ್ಗೆ ಮಾಹಿತಿ ಇಲ್ಲ. ಮಧ್ಯವರ್ತಿಗಳು ಅತಿ ಹೆಚ್ಚು ಹಣ ಪಡೆದುಕೊಂಡು ಡಿ ಎಲ್​ ಹಾಗೂ ಎಲ್​ಎಲ್​ ಮಾಡಿಸಿಕೊಡುತ್ತಾರೆ ಎಂಬ ಆರೋಪಗಳು ದಟ್ಟವಾಗಿವೆ.

ಆರ್​​ಟಿಒ ಕಚೇರಿಗಳಲ್ಲಿ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯೆ
ಮಧ್ಯವರ್ತಿಗಳು ಯಾವ ರೀತಿ ಹಣ ಲೂಟಿ ಮಾಡುತ್ತಾರೆ..?

ಸದ್ಯ ದ್ವಿಚಕ್ರ ವಾಹನ ಕಲಿಯಲು ನೀಡುವ ಎಲ್ಎಲ್ ಪತ್ರಕ್ಕೆ 150 ರೂಪಾಯಿ, ಹಾಗೆ ಚಾಲನಾ ಪರವಾನಿಗೆಯ ಪರೀಕ್ಷಾ ಶುಲ್ಕಕ್ಕೆ 50 ರೂಪಾಯಿ, ಚಾಲನಾ ಪತ್ರಕ್ಕೆ 300 ರೂಪಾಯಿ ಶುಲ್ಕವನ್ನು ಸರ್ಕಾರ ವಿಧಿಸಿದೆ.

ಆದರೆ 2,500 ಅಥವಾ 3000 ರೂಪಾಯಿ ನೀಡಿದರೆ ಅತಿ ಬೇಗನೆ ಲೈಸೆನ್ಸ್ ಮಾಡಿ ಕೊಡುವುದಾಗಿ ಬ್ರೋಕರ್​ಗಳು ನಂಬಿಸಿ ಲೂಟಿ ಸಾರ್ವಜನಿಕರಿಂದ ಹಣ ಲೂಟಿ ‌ಮಾಡುತ್ತಿದ್ದಾರೆ. ಹಾಗೆಯೇ ಕಾರಿನ ಪರವಾನಿಗೆ ಸರ್ಕಾರಿ ಶುಲ್ಕ 1000 ರೂಪಾಯಿ ಇದ್ದರೆ, ಬ್ರೋಕರ್​ಗಳು ಆರೇಳು ಸಾವಿರ ರೂಪಾಯಿಯಲ್ಲಿ ಬೇಗನೇ ಪರವಾನಿಗೆ ಸಿಗುವಂತೆ ಮಾಡುತ್ತೇವೆ ಎಂದು ನಂಬಿಸುತ್ತಾರೆ.

ಆನ್​​ಲೈನ್​ನಲ್ಲಿ ಸುಲಭವಾಗಿ ಪಡೆಯಬಹುದು ಲೈಸೆನ್ಸ್..!

ಮಧ್ಯವರ್ತಿಗಳ‌ ಬಳಿ‌ಹೋಗದೆ ನಾವು ಆನ್​ಲೈನ್‌ ಮುಖಾಂತರ ಎಲ್ ಎಲ್, ಡಿಎಲ್ ಅಥವಾ ಇತರೆ ಸೇವೆಗಳನ್ನ ಪಡೆಯಬಹುದು. ಸದ್ಯ ಸಾರಥಿ ವೆಬ್ ಹಾಗೂ ಮೊಬೈಲ್ ಆಧಾರಿತ ಅಪ್ಲಿಕೇಷನ್​ ಇದ್ದು, ಇದರಲ್ಲಿ ಎಲ್ಎಲ್ ಅರ್ಜಿ ಸಲ್ಲಿಕೆ ಮಾಡಬಹುದು. ತದನಂತರ ಸ್ಲಾಟ್ ಆಧಾರದ ಮೇರೆಗೆ ಆರ್‌ಟಿಓ ಕಚೇರಿಗೆ ತೆರಳಿ ಪರೀಕ್ಷೆಯನ್ನು ಬರೆದು, ಸ್ಮಾರ್ಟ್ ಕಾರ್ಡ್ ಪಡೆದು ಮೂವತ್ತು ದಿನದ ಬಳಿಕ ಡಿಎಲ್​ ಟೆಸ್ಟ್​ಗೆ ತೆರಳಬಹುದು.

ಆನ್​ಲೈನ್​ನಲ್ಲೇ ಎಲ್ಲಾ ತಾಳ್ಮೆಯಿಂದ ಕೆಲಸ ಮುಗಿಸಿದರೆ ಮಧ್ಯವರ್ತಿಗಳ ಕಾಟ ಇರಲ್ಲ. ಹಾಗೆಯೇ ಪ್ರತಿನಿತ್ಯ ಆರ್‌ಟಿಒ ಕಚೇರಿಗೆ ಅಲೆದಾಡುವುದನ್ನ ತಪ್ಪಿಸಬಹುದು. ಸದ್ಯ ಆರ್​ಟಿಒಗೆ ಸಂಬಂಧಿಸಿದ ಎಲ್ಲಾ ವಹಿವಾಟು ಆನ್​ಲೈನ್​ನಲ್ಲಿ ನಡೆಯುತ್ತದೆ. ಉದಾಹರಣಗೆ ಮಾಲೀಕತ್ವ ವರ್ಗಾವಣೆ, ವಾಹನದ ಫಿಟ್​ನೆಸ್ ಪ್ರಮಾಣಪತ್ರ, ವಾಹನಗಳ ನೋಂದಣಿ ನವೀಕರಣ, ವಾಹನಗಳ ಮಾರ್ಪಾಡು ಹೀಗೆ ಪ್ರತಿಯೊಂದು ಕೂಡ ಆನ್​ಲೈನ್ ನಲ್ಲಿಯೇ ನಡೆಯುತ್ತದೆ‌.

ಮಧ್ಯವರ್ತಿಗಳಿಂದ ಮೋಸ ಹೋಗಿ, ಆರ್​ಟಿಒ ಅಧಿಕಾರಿಗಳನ್ನು ದೂರುತ್ತಾರೆ..!

ಇದೇ ವಿಚಾರವಾಗಿ ಆರ್​ಟಿಒ ಇನ್ಸ್​ಪೆಕ್ಟರ್ ರಾಜಣ್ಣ ಮಾತನಾಡಿ, ಲಾಕ್​ಡೌನ್​ ಆದ ಕಾರಣ ಆರ್​ಟಿಒ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಆದರೆ ಲಾಕ್​ಡೌನ್ ರಿಲೀಫ್ ದಿನದಂದು ಸುಮಾರು 70-80 ಅಪ್ಲಿಕೇಷನ್​ಗಳು ಬರುತ್ತವೆ. ನಾವು ಕೂಡ ಪರೀಕ್ಷೆಗೆ ದಿನಕ್ಕೆ ನೂರು ಮಂದಿಯನ್ನು ಫಿಕ್ಸ್ ಮಾಡುತ್ತೇವೆ. ಕೊರೊನಾ ಬರುವ ಮುಂಚೆ ಸಾರ್ವಜನಿಕರು ಬಹಳ ಮಂದಿ ರಿಜಿಸ್ಟರ್ ಲೈಸೆನ್ಸ್, ಲರ್ನಿಂಗ್ ಲೈಸೆನ್ಸ್ , ವಾಹನದ ಫಿಟ್ನೆಸ್, ಡ್ರೈವಿಂಗ್ ಲೈಸೆನ್ಸ್​​ಗಳಿಗೆ ಬರುತ್ತಿದ್ದರು. ಈಗ ಕೊರೊನಾ ಇರುವ ಕಾರಣದಿಂದ ಕಡಿಮೆ ಮಂದಿ ಬರುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದರ ಜೊತೆಗೆ ಕೆಲವರು ಆನ್ಲೈನ್ ಅಪ್ಲಿಕೇಷನ್​ ಅಪ್ಲೋಡ್ ಮಾಡಲ್ಲ. ಸ್ಲಾಟ್ ಸಿಗದೇ ಇದ್ದಾಗ ಮಧ್ಯವರ್ತಿ ಬಳಿ ತಮ್ಮ ಕೆಲಸ ಮಾಡಿಸಲು ಅಡ್ಡ ದಾರಿಯಲ್ಲಿ ಹೋಗಿ ಮೋಸ ಹೋಗುತ್ತಾರೆ ಇದಕ್ಕೆ ಆರ್​ಟಿಒ ಅಧಿಕಾರಿಗಳು ಜವಾಬ್ದಾರರಲ್ಲ ಎಂದು ಆರ್​ಟಿಒ ಇನ್ಸ್​ಪೆಕ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೊನಾ ಇದ್ದರೂ ಮಧ್ಯವರ್ತಿಗಳಿಗಳಿಂದ ಭಾರೀ ಹಣ ಲೂಟಿ..!

ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿಯವರು ಮಾತಾಡಿ ಸದ್ಯ ಸರ್ಕಾರದ ಅಧೀನದಲ್ಲಿ ಬರುವ ಪ್ರತಿ ಕಚೇರಿಯಲ್ಲಿ ಲಂಚ ಇಲ್ಲದೇ ಯಾವುದೇ ಕೆಲಸಗಳು ನಡೆಯೋದಿಲ್ಲ. ಕೊರೊನಾ ಇದ್ದರೂ ಆರ್​ಟಿಒ ಕಚೇರಿಯಲ್ಲಿ ದೊಡ್ಡ ಮಟ್ಟದಲ್ಲಿ ಮಧ್ಯವರ್ತಿಗಳು ಹಣ ಲೂಟಿ ಮಾಡುತ್ತಿದ್ದಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಸಾರಿಗೆ ಸಚಿವರಿಗೆ ಟಾಂಗ್​ ನೀಡಿದ್ದಾರೆ.

ಮಧ್ಯವರ್ತಿಗಳ ಮೇಲೆ ಎಸಿಬಿ ಕಣ್ಣು..!

ಸದ್ಯ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಎಸಿಬಿ‌ ಕೂಡ‌ ಮುಂದಾಗಿದೆ. ಆರ್​​ಟಿಒ ಕಚೇರಿಗಳಲ್ಲಿ ನಡೆಯುವ ಅವ್ಯಹಾರಗಳ ಕುರಿತು ಎಸಿಬಿಗೆ ಅತಿ ಹೆಚ್ಚು ದೂರುಗಳು ಕೂಡ ದಾಖಲಾಗ್ತಿದೆ. ಕೆಲವು ಮಧ್ಯವರ್ತಿಗಳು ಜನರಿಂದ ಹಣ ಪಡೆದು ಲೈಸನ್ಸ್ ಮಾಡಿಸಿಕೊಡದಿರುವ ಉದಾಹರಣೆಗಳು ಕೂಡ ಇದ್ದು, ಎಸಿಬಿ ಅವರ ಮೇಲೆ ಕಣ್ಣಿಟ್ಟಿದೆ.

ಬೆಂಗಳೂರು: ಪ್ರತಿಯೊಬ್ಬರ ಮನೆಯಲ್ಲಿ ಯಾವುದಾದರೂ ಒಂದು ವಾಹನ ಇದ್ದೇ ಇರುತ್ತದೆ. ಅದರ ಜೊತೆಗೆ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಇಟ್ಟುಕೊಳ್ಳಬೇಕಾಗುವುದು ಅನಿವಾರ್ಯವಾಗಿರುತ್ತದೆ. ಅವುಗಳಲ್ಲಿ ಡ್ರೈವಿಂಗ್​ ಲೈಸನ್ಸ್ ಅತಿ ಮುಖ್ಯವಾಗಿರುತ್ತದೆ. ಇವುಗಳನ್ನು ಆರ್​​ಟಿಒ ಕಚೇರಿಯಲ್ಲಿ ಪಡೆಯಬೇಕು.

ರಾಜ್ಯದಲ್ಲಿ 67 ಆರ್​ಟಿಒ ಕಚೇರಿಗಳಿದ್ದು, ಡಿ ಎಲ್​ ಅಥವಾ ಎಲ್​ ಎಲ್​ ಪಡೆಯೋದಕ್ಕೆ ಕೆಲವರು ಮಧ್ಯವರ್ತಿಗಳ ಮೊರೆ ಹೋಗುತ್ತಾರೆ ಎಂಬ ಆರೋಪ ಕೇಳಿಬರುತ್ತಿದೆ. ಕೆಲವರಿಗಂತೂ ಸದ್ಯ ಜಾರಿಯಲ್ಲಿರುವ ಆನ್​ಲೈನ್​ ಅರ್ಜಿಯ ಬಗ್ಗೆ ಮಾಹಿತಿ ಇಲ್ಲ. ಮಧ್ಯವರ್ತಿಗಳು ಅತಿ ಹೆಚ್ಚು ಹಣ ಪಡೆದುಕೊಂಡು ಡಿ ಎಲ್​ ಹಾಗೂ ಎಲ್​ಎಲ್​ ಮಾಡಿಸಿಕೊಡುತ್ತಾರೆ ಎಂಬ ಆರೋಪಗಳು ದಟ್ಟವಾಗಿವೆ.

ಆರ್​​ಟಿಒ ಕಚೇರಿಗಳಲ್ಲಿ ಭ್ರಷ್ಟಾಚಾರ ಆರೋಪ ಕುರಿತು ಪ್ರತಿಕ್ರಿಯೆ
ಮಧ್ಯವರ್ತಿಗಳು ಯಾವ ರೀತಿ ಹಣ ಲೂಟಿ ಮಾಡುತ್ತಾರೆ..?

ಸದ್ಯ ದ್ವಿಚಕ್ರ ವಾಹನ ಕಲಿಯಲು ನೀಡುವ ಎಲ್ಎಲ್ ಪತ್ರಕ್ಕೆ 150 ರೂಪಾಯಿ, ಹಾಗೆ ಚಾಲನಾ ಪರವಾನಿಗೆಯ ಪರೀಕ್ಷಾ ಶುಲ್ಕಕ್ಕೆ 50 ರೂಪಾಯಿ, ಚಾಲನಾ ಪತ್ರಕ್ಕೆ 300 ರೂಪಾಯಿ ಶುಲ್ಕವನ್ನು ಸರ್ಕಾರ ವಿಧಿಸಿದೆ.

ಆದರೆ 2,500 ಅಥವಾ 3000 ರೂಪಾಯಿ ನೀಡಿದರೆ ಅತಿ ಬೇಗನೆ ಲೈಸೆನ್ಸ್ ಮಾಡಿ ಕೊಡುವುದಾಗಿ ಬ್ರೋಕರ್​ಗಳು ನಂಬಿಸಿ ಲೂಟಿ ಸಾರ್ವಜನಿಕರಿಂದ ಹಣ ಲೂಟಿ ‌ಮಾಡುತ್ತಿದ್ದಾರೆ. ಹಾಗೆಯೇ ಕಾರಿನ ಪರವಾನಿಗೆ ಸರ್ಕಾರಿ ಶುಲ್ಕ 1000 ರೂಪಾಯಿ ಇದ್ದರೆ, ಬ್ರೋಕರ್​ಗಳು ಆರೇಳು ಸಾವಿರ ರೂಪಾಯಿಯಲ್ಲಿ ಬೇಗನೇ ಪರವಾನಿಗೆ ಸಿಗುವಂತೆ ಮಾಡುತ್ತೇವೆ ಎಂದು ನಂಬಿಸುತ್ತಾರೆ.

ಆನ್​​ಲೈನ್​ನಲ್ಲಿ ಸುಲಭವಾಗಿ ಪಡೆಯಬಹುದು ಲೈಸೆನ್ಸ್..!

ಮಧ್ಯವರ್ತಿಗಳ‌ ಬಳಿ‌ಹೋಗದೆ ನಾವು ಆನ್​ಲೈನ್‌ ಮುಖಾಂತರ ಎಲ್ ಎಲ್, ಡಿಎಲ್ ಅಥವಾ ಇತರೆ ಸೇವೆಗಳನ್ನ ಪಡೆಯಬಹುದು. ಸದ್ಯ ಸಾರಥಿ ವೆಬ್ ಹಾಗೂ ಮೊಬೈಲ್ ಆಧಾರಿತ ಅಪ್ಲಿಕೇಷನ್​ ಇದ್ದು, ಇದರಲ್ಲಿ ಎಲ್ಎಲ್ ಅರ್ಜಿ ಸಲ್ಲಿಕೆ ಮಾಡಬಹುದು. ತದನಂತರ ಸ್ಲಾಟ್ ಆಧಾರದ ಮೇರೆಗೆ ಆರ್‌ಟಿಓ ಕಚೇರಿಗೆ ತೆರಳಿ ಪರೀಕ್ಷೆಯನ್ನು ಬರೆದು, ಸ್ಮಾರ್ಟ್ ಕಾರ್ಡ್ ಪಡೆದು ಮೂವತ್ತು ದಿನದ ಬಳಿಕ ಡಿಎಲ್​ ಟೆಸ್ಟ್​ಗೆ ತೆರಳಬಹುದು.

ಆನ್​ಲೈನ್​ನಲ್ಲೇ ಎಲ್ಲಾ ತಾಳ್ಮೆಯಿಂದ ಕೆಲಸ ಮುಗಿಸಿದರೆ ಮಧ್ಯವರ್ತಿಗಳ ಕಾಟ ಇರಲ್ಲ. ಹಾಗೆಯೇ ಪ್ರತಿನಿತ್ಯ ಆರ್‌ಟಿಒ ಕಚೇರಿಗೆ ಅಲೆದಾಡುವುದನ್ನ ತಪ್ಪಿಸಬಹುದು. ಸದ್ಯ ಆರ್​ಟಿಒಗೆ ಸಂಬಂಧಿಸಿದ ಎಲ್ಲಾ ವಹಿವಾಟು ಆನ್​ಲೈನ್​ನಲ್ಲಿ ನಡೆಯುತ್ತದೆ. ಉದಾಹರಣಗೆ ಮಾಲೀಕತ್ವ ವರ್ಗಾವಣೆ, ವಾಹನದ ಫಿಟ್​ನೆಸ್ ಪ್ರಮಾಣಪತ್ರ, ವಾಹನಗಳ ನೋಂದಣಿ ನವೀಕರಣ, ವಾಹನಗಳ ಮಾರ್ಪಾಡು ಹೀಗೆ ಪ್ರತಿಯೊಂದು ಕೂಡ ಆನ್​ಲೈನ್ ನಲ್ಲಿಯೇ ನಡೆಯುತ್ತದೆ‌.

ಮಧ್ಯವರ್ತಿಗಳಿಂದ ಮೋಸ ಹೋಗಿ, ಆರ್​ಟಿಒ ಅಧಿಕಾರಿಗಳನ್ನು ದೂರುತ್ತಾರೆ..!

ಇದೇ ವಿಚಾರವಾಗಿ ಆರ್​ಟಿಒ ಇನ್ಸ್​ಪೆಕ್ಟರ್ ರಾಜಣ್ಣ ಮಾತನಾಡಿ, ಲಾಕ್​ಡೌನ್​ ಆದ ಕಾರಣ ಆರ್​ಟಿಒ ತನ್ನ ಕಾರ್ಯವನ್ನು ಸ್ಥಗಿತಗೊಳಿಸಿದೆ. ಆದರೆ ಲಾಕ್​ಡೌನ್ ರಿಲೀಫ್ ದಿನದಂದು ಸುಮಾರು 70-80 ಅಪ್ಲಿಕೇಷನ್​ಗಳು ಬರುತ್ತವೆ. ನಾವು ಕೂಡ ಪರೀಕ್ಷೆಗೆ ದಿನಕ್ಕೆ ನೂರು ಮಂದಿಯನ್ನು ಫಿಕ್ಸ್ ಮಾಡುತ್ತೇವೆ. ಕೊರೊನಾ ಬರುವ ಮುಂಚೆ ಸಾರ್ವಜನಿಕರು ಬಹಳ ಮಂದಿ ರಿಜಿಸ್ಟರ್ ಲೈಸೆನ್ಸ್, ಲರ್ನಿಂಗ್ ಲೈಸೆನ್ಸ್ , ವಾಹನದ ಫಿಟ್ನೆಸ್, ಡ್ರೈವಿಂಗ್ ಲೈಸೆನ್ಸ್​​ಗಳಿಗೆ ಬರುತ್ತಿದ್ದರು. ಈಗ ಕೊರೊನಾ ಇರುವ ಕಾರಣದಿಂದ ಕಡಿಮೆ ಮಂದಿ ಬರುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಇದರ ಜೊತೆಗೆ ಕೆಲವರು ಆನ್ಲೈನ್ ಅಪ್ಲಿಕೇಷನ್​ ಅಪ್ಲೋಡ್ ಮಾಡಲ್ಲ. ಸ್ಲಾಟ್ ಸಿಗದೇ ಇದ್ದಾಗ ಮಧ್ಯವರ್ತಿ ಬಳಿ ತಮ್ಮ ಕೆಲಸ ಮಾಡಿಸಲು ಅಡ್ಡ ದಾರಿಯಲ್ಲಿ ಹೋಗಿ ಮೋಸ ಹೋಗುತ್ತಾರೆ ಇದಕ್ಕೆ ಆರ್​ಟಿಒ ಅಧಿಕಾರಿಗಳು ಜವಾಬ್ದಾರರಲ್ಲ ಎಂದು ಆರ್​ಟಿಒ ಇನ್ಸ್​ಪೆಕ್ಟರ್ ಪ್ರತಿಕ್ರಿಯೆ ನೀಡಿದ್ದಾರೆ.

ಕೊರೊನಾ ಇದ್ದರೂ ಮಧ್ಯವರ್ತಿಗಳಿಗಳಿಂದ ಭಾರೀ ಹಣ ಲೂಟಿ..!

ಸಾಮಾಜಿಕ ಕಾರ್ಯಕರ್ತ ರವಿಕೃಷ್ಣಾ ರೆಡ್ಡಿಯವರು ಮಾತಾಡಿ ಸದ್ಯ ಸರ್ಕಾರದ ಅಧೀನದಲ್ಲಿ ಬರುವ ಪ್ರತಿ ಕಚೇರಿಯಲ್ಲಿ ಲಂಚ ಇಲ್ಲದೇ ಯಾವುದೇ ಕೆಲಸಗಳು ನಡೆಯೋದಿಲ್ಲ. ಕೊರೊನಾ ಇದ್ದರೂ ಆರ್​ಟಿಒ ಕಚೇರಿಯಲ್ಲಿ ದೊಡ್ಡ ಮಟ್ಟದಲ್ಲಿ ಮಧ್ಯವರ್ತಿಗಳು ಹಣ ಲೂಟಿ ಮಾಡುತ್ತಿದ್ದಾರೆ. ಸರ್ಕಾರ ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಜೊತೆಗೆ ಸಾರಿಗೆ ಸಚಿವರಿಗೆ ಟಾಂಗ್​ ನೀಡಿದ್ದಾರೆ.

ಮಧ್ಯವರ್ತಿಗಳ ಮೇಲೆ ಎಸಿಬಿ ಕಣ್ಣು..!

ಸದ್ಯ ಮಧ್ಯವರ್ತಿಗಳಿಗೆ ಕಡಿವಾಣ ಹಾಕಲು ಎಸಿಬಿ‌ ಕೂಡ‌ ಮುಂದಾಗಿದೆ. ಆರ್​​ಟಿಒ ಕಚೇರಿಗಳಲ್ಲಿ ನಡೆಯುವ ಅವ್ಯಹಾರಗಳ ಕುರಿತು ಎಸಿಬಿಗೆ ಅತಿ ಹೆಚ್ಚು ದೂರುಗಳು ಕೂಡ ದಾಖಲಾಗ್ತಿದೆ. ಕೆಲವು ಮಧ್ಯವರ್ತಿಗಳು ಜನರಿಂದ ಹಣ ಪಡೆದು ಲೈಸನ್ಸ್ ಮಾಡಿಸಿಕೊಡದಿರುವ ಉದಾಹರಣೆಗಳು ಕೂಡ ಇದ್ದು, ಎಸಿಬಿ ಅವರ ಮೇಲೆ ಕಣ್ಣಿಟ್ಟಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.