ETV Bharat / city

ವಿಜಯನಗರ ಜಿಲ್ಲೆಗಾಗಿ ಹೋರಾಟ: ಮಠಾಧೀಶರ ಬೆಂಬಲ ಕೋರಿದ ಆನಂದಸಿಂಗ್

author img

By

Published : Sep 16, 2019, 6:28 PM IST

ಇತ್ತೀಚೆಗೆ ಬಿಜೆಪಿಯ ಮಾಜಿ ಶಾಸಕರೊಂದಿಗೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜನಿ ಪೀಠದ ಸ್ವಾಮೀಜಿಯನ್ನು ಅನರ್ಹ ಶಾಸಕ ಆನಂದಸಿಂಗ್ ಭೇಟಿ ಮಾಡಿದ್ದರು. ಈಗ ಕೊಟ್ಟೂರು ಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ, ಹಂಪಿ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ವಿಜಯನಗರವನ್ನು ಜಿಲ್ಲೆಯನ್ನಾಗಿಸುವ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಕೋರಿದ್ದಾರೆ.

ವಿಜಯನಗರ ಜಿಲ್ಲೆ ಹೋರಾಟಕ್ಕೆ ಮಠಾಧೀಶರ ಬೆಂಬಲ ಕೋರಿದ ಆನಂದಸಿಂಗ್

ಬಳ್ಳಾರಿ: ಜಿಲ್ಲೆಯ ವಿಜಯನಗರ(ಹೊಸಪೇಟೆ)ವನ್ನು ಜಿಲ್ಲೆಯನ್ನಾಗಿಸುವ ಹೋರಾಟಕ್ಕೆ ಅನರ್ಹ ಶಾಸಕ ಆನಂದಸಿಂಗ್ ಮಠಾಧೀಶರ ಬೆಂಬಲ ಕೋರಿದ್ದಾರೆ.

ಮೊನ್ನೆಯಷ್ಟೇ ಬಿಜೆಪಿಯ ಮಾಜಿ ಶಾಸಕರೊಂದಿಗೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜನಿ ಪೀಠದ ಸ್ವಾಮೀಜಿಯನ್ನು ಆನಂದಸಿಂಗ್ ಭೇಟಿ ಮಾಡಿದ್ದರು. ಈ ವೇಳೆ ವಿಜಯನಗರ ಜಿಲ್ಲೆಯನ್ನಾಗಿಸುವ ಅಗತ್ಯತೆಯ ಕುರಿತು ಮನವರಿಕೆ ಮಾಡಿದ್ದರು. ಈಗ ಕೊಟ್ಟೂರು ಮಠದ ಸಂಗನಬಸವ ಸ್ವಾಮೀಜಿ, ಹಂಪಿ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಅವರು ಕೋರಿದ್ದಾರೆ.

ಇದಕ್ಕೂ ಮುಂಚೆ ಹಂಪಿಯ ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿದ ಆನಂದಸಿಂಗ್, ವಿಶೇಷಪೂಜೆ ಸಲ್ಲಿಸಿದರು. ಜಿಲ್ಲೆಯ ಹೊಸಪೇಟೆ ಕ್ಷೇತ್ರವನ್ನು ವಿಜಯನಗರ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ಈ ಭಾಗದ ಸಾರ್ವಜನಿಕರ ಪ್ರಬಲ ಕೂಗಾಗಿದೆ. ಇದಕ್ಕೆ ಸದಾ ತಮ್ಮ ಬೆಂಬಲ ಇರಬೇಕು. ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ವಿನಂತಿ ಮಾಡಿದ್ದಾರೆ.

ಹೋರಾಟಕ್ಕೆ ಆನಂದಸಿಂಗ್​ಗೆ ಸಾಥ್ ನೀಡುವುದಾಗಿ ಮಠಾಧೀಶರು ಭರವಸೆ ನೀಡಿದ್ದಾರೆ.

ಬಳ್ಳಾರಿ: ಜಿಲ್ಲೆಯ ವಿಜಯನಗರ(ಹೊಸಪೇಟೆ)ವನ್ನು ಜಿಲ್ಲೆಯನ್ನಾಗಿಸುವ ಹೋರಾಟಕ್ಕೆ ಅನರ್ಹ ಶಾಸಕ ಆನಂದಸಿಂಗ್ ಮಠಾಧೀಶರ ಬೆಂಬಲ ಕೋರಿದ್ದಾರೆ.

ಮೊನ್ನೆಯಷ್ಟೇ ಬಿಜೆಪಿಯ ಮಾಜಿ ಶಾಸಕರೊಂದಿಗೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜನಿ ಪೀಠದ ಸ್ವಾಮೀಜಿಯನ್ನು ಆನಂದಸಿಂಗ್ ಭೇಟಿ ಮಾಡಿದ್ದರು. ಈ ವೇಳೆ ವಿಜಯನಗರ ಜಿಲ್ಲೆಯನ್ನಾಗಿಸುವ ಅಗತ್ಯತೆಯ ಕುರಿತು ಮನವರಿಕೆ ಮಾಡಿದ್ದರು. ಈಗ ಕೊಟ್ಟೂರು ಮಠದ ಸಂಗನಬಸವ ಸ್ವಾಮೀಜಿ, ಹಂಪಿ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಅವರು ಕೋರಿದ್ದಾರೆ.

ಇದಕ್ಕೂ ಮುಂಚೆ ಹಂಪಿಯ ವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿದ ಆನಂದಸಿಂಗ್, ವಿಶೇಷಪೂಜೆ ಸಲ್ಲಿಸಿದರು. ಜಿಲ್ಲೆಯ ಹೊಸಪೇಟೆ ಕ್ಷೇತ್ರವನ್ನು ವಿಜಯನಗರ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ಈ ಭಾಗದ ಸಾರ್ವಜನಿಕರ ಪ್ರಬಲ ಕೂಗಾಗಿದೆ. ಇದಕ್ಕೆ ಸದಾ ತಮ್ಮ ಬೆಂಬಲ ಇರಬೇಕು. ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ವಿನಂತಿ ಮಾಡಿದ್ದಾರೆ.

ಹೋರಾಟಕ್ಕೆ ಆನಂದಸಿಂಗ್​ಗೆ ಸಾಥ್ ನೀಡುವುದಾಗಿ ಮಠಾಧೀಶರು ಭರವಸೆ ನೀಡಿದ್ದಾರೆ.

Intro:ವಿಜಯನಗರ ಜಿಲ್ಲೆ ಹೋರಾಟಕ್ಕೆ ಮಠಾಧೀಶರ ಬೆಂಬಲ
ಕೋರಿದ ಅನರ್ಹ ಶಾಸಕ ಆನಂದಸಿಂಗ್!
ಬಳ್ಳಾರಿ: ಜಿಲ್ಲೆಯ ವಿಜಯನಗರ (ಹೊಸಪೇಟೆ) ಜಿಲ್ಲೆಯ ನ್ನಾಗಿಸುವ ಹೋರಾಟಕ್ಕೆ ಅನರ್ಹ ಶಾಸಕ ಆನಂದಸಿಂಗ್
ಅವರು ಮಠಾಧೀಶರ ಬೆಂಬಲ ಕೋರಿದ್ದಾರೆ.
ಮೊನ್ನೆಯಷ್ಟೇ ಬಿಜೆಪಿಯ ಮಾಜಿ ಶಾಸಕರೊಂದಿಗೆ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಉಜ್ಜನಿ ಪೀಠದ ಸ್ವಾಮೀಜಿಯನ್ನು ಭೇಟಿ ನೀಡಿ, ವಿಜಯನಗರ ಜಿಲ್ಲೆಯನ್ನಾಗಿಸುವ ಅಗತ್ಯತೆಯ ಕುರಿತು ಮನವರಿಕೆ ಮಾಡಿದ್ದ ಅನರ್ಹ ಶಾಸಕ ಆನಂದಸಿಂಗ್ ಅವರು, ಈಗ ಕೊಟ್ಟೂರುಸ್ವಾಮಿ ಮಠದ ಸಂಗನಬಸವ ಸ್ವಾಮೀಜಿ, ಹಂಪಿ ವಿದ್ಯಾರಣ್ಯ ಪೀಠದ ವಿದ್ಯಾರಣ್ಯ ಭಾರತೀ ಸ್ವಾಮೀಜಿಯವರನ್ನು ಭೇಟಿ ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ ಕೋರಿದ್ದಾರೆ.
ಇದಕ್ಕೂ ಮುಂಚೆ ಹಂಪಿಯ ವಿರುಪಾಕ್ಷ ದೇಗುಲಕ್ಕೆ ಭೇಟಿ ನೀಡಿದ ಆನಂದಸಿಂಗ್ ಅವರು, ವಿಶೇಷಪೂಜೆ ಸಲ್ಲಿಸಿದ್ದಾರೆ.
Body:ಜಿಲ್ಲೆಯ ಹೊಸಪೇಟೆ ಕ್ಷೇತ್ರವನ್ನು ವಿಜಯನಗರ ಜಿಲ್ಲೆಯನ್ನಾಗಿ ಘೋಷಿಸಬೇಕೆಂಬುದು ಈ ಭಾಗದ ಸಾರ್ವಜನಿಕರ ಪ್ರಬಲ ಕೂಗಾಗಿದೆ. ಇದಕ್ಕೆ ಸದಾ ತಮ್ಮ ಬೆಂಬಲ ಇರಬೇಕು. ಹಾಗೂ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದು ವಿನಂತಿಸಿದ್ದಾರೆ.
ಈ‌ ಹೋರಾಟಕ್ಕೆ ಆನಂದಸಿಂಗ್ ರವರಿಗೆ ಸಾಥ್ ನೀಡುವುದಾಗಿ ಮಠಾಧೀಶರು ಭರವಸೆ ನೀಡಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_4_EX_MLA_ANADASINGH_VISIT_MATH_7203310

KN_BLY_4b_EX_MLA_ANADASINGH_VISIT_MATH_7203310

KN_BLY_4c_EX_MLA_ANADASINGH_VISIT_MATH_7203310

KN_BLY_4d_EX_MLA_ANADASINGH_VISIT_MATH_7203310

ETV Bharat Logo

Copyright © 2024 Ushodaya Enterprises Pvt. Ltd., All Rights Reserved.