ETV Bharat / city

ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿ: ಮಾನವೀಯತೆ ಮೆರೆದ ಸಚಿವ ತುಕಾರಂ, ಗವಿಶ್ರೀಗಳು

author img

By

Published : Apr 19, 2019, 11:09 PM IST

ಟಿಪ್ಪರ್ ಲಾರಿಗಳ ನಡುವೆ ಸಂಭವಿಸಿದ ಮುಖಾಮುಖಿ ಅಪಘಾತದಲ್ಲಿ ಗಾಯಾಳುಗಳನ್ನುಆಸ್ಪತ್ರೆಗೆ ಸಾಗಿಸುವಲ್ಲಿ ಸಚಿವ ಈ. ತುಕಾರಾಂ ಮತ್ತು ಕೊಪ್ಪಳ ಗವಿಶ್ರೀಗಳು ಸಹಾಯಹಸ್ತ ಚಾಚಿದರು.

3 ಟಿಪ್ಪರ್ ಮುಖಾಮುಖಿ ಡಿಕ್ಕಿ, ಗಾಯಳುಗಳನ್ನ ರಕ್ಷಿಸಿದ ಸಚಿವ ಈ, ತುಕಾರಂ, ಕೊಪ್ಪಳ ಗವಿಶ್ರಿಗಳು

ಬಳ್ಳಾರಿ: ಮೂರು ಟಿಪ್ಪರ್ ಲಾರಿಗಳ ನಡುವೆ ಅಪಘಾತ ಸಂಭವಿಸಿ, ಚಾಲಕರು ಗಾಯಗೊಂಡ ಘಟನೆ ಸಂಡೂರು- ತೋರಣಗಲ್ ರಸ್ತೆಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಬಳ್ಳಾರಿಯಿಂದ ಸಂಡೂರು ಮಾರ್ಗವಾಗಿ ತೆರಳುತ್ತಿದ್ದ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಕೂಡಲೇ ತಮ್ಮ ವಾಹನಗಳನ್ನ ನಿಲ್ಲಿಸಿ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.

3 ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿ, ಗವಿಶ್ರೀ, ತುಕಾರಾಂ ಮಾನವೀಯತೆ

ಲಾರಿಗಳ ನಡುವೆ ಸಿಲುಕಿಕೊಂಡ ಗಾಯಾಳುಗಳನ್ನು ಸಾರ್ವಜನಿಕರ ಸಹಾಯದೊಂದಿಗೆ ಹೊರತೆಗೆದು ಜಿಂದಾಲ್ ಕೈಗಾರಿಕೆ ಸಂಸ್ಥೆಯ ಆಂಬುಲೆನ್ಸ್‌ನಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂದರ್ಭ ಗವಿಸಿದ್ದೇಶ್ವರ ಸ್ವಾಮೀಜಿ ಹಾಗು ಈ. ತುಕಾರಾಂ ವಿಶೇಷ ಕಾಳಜಿವಹಿಸಿ ಮಾನವೀಯತೆ ಮೆರೆದರು.

ಗಾಯಾಳುಗಳಿಗೆ ಸಚಿವರ ಧನ ಸಹಾಯ

ಅಪಘಾತದಲ್ಲಿ ಗಾಯಗೊಂಡವರ ಸಂಬಂಧಿಕರಿಗೆ ಸಚಿವ ತುಕಾರಾಂ ಧನಸಹಾಯ ಮಾಡಿದರು. ಇದೇ ವೇಳೆ ಖಾಸಗಿ ಸಂಸ್ಥೆಯ ಆಂಬುಲೆನ್ಸ್ ಚಾಲಕನಿಗೂ ಸಚಿವರು ಹಣ ಕೊಟ್ಟರು. ಗಾಯಾಳುಗಳ ಹೆಸರು ತಿಳಿದುಬಂದಿಲ್ಲ. ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಳ್ಳಾರಿ: ಮೂರು ಟಿಪ್ಪರ್ ಲಾರಿಗಳ ನಡುವೆ ಅಪಘಾತ ಸಂಭವಿಸಿ, ಚಾಲಕರು ಗಾಯಗೊಂಡ ಘಟನೆ ಸಂಡೂರು- ತೋರಣಗಲ್ ರಸ್ತೆಯಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ಬಳ್ಳಾರಿಯಿಂದ ಸಂಡೂರು ಮಾರ್ಗವಾಗಿ ತೆರಳುತ್ತಿದ್ದ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಈ. ತುಕಾರಾಂ ಕೂಡಲೇ ತಮ್ಮ ವಾಹನಗಳನ್ನ ನಿಲ್ಲಿಸಿ ಗಾಯಾಳುಗಳ ನೆರವಿಗೆ ಧಾವಿಸಿದ್ದಾರೆ.

3 ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿ, ಗವಿಶ್ರೀ, ತುಕಾರಾಂ ಮಾನವೀಯತೆ

ಲಾರಿಗಳ ನಡುವೆ ಸಿಲುಕಿಕೊಂಡ ಗಾಯಾಳುಗಳನ್ನು ಸಾರ್ವಜನಿಕರ ಸಹಾಯದೊಂದಿಗೆ ಹೊರತೆಗೆದು ಜಿಂದಾಲ್ ಕೈಗಾರಿಕೆ ಸಂಸ್ಥೆಯ ಆಂಬುಲೆನ್ಸ್‌ನಲ್ಲಿ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂದರ್ಭ ಗವಿಸಿದ್ದೇಶ್ವರ ಸ್ವಾಮೀಜಿ ಹಾಗು ಈ. ತುಕಾರಾಂ ವಿಶೇಷ ಕಾಳಜಿವಹಿಸಿ ಮಾನವೀಯತೆ ಮೆರೆದರು.

ಗಾಯಾಳುಗಳಿಗೆ ಸಚಿವರ ಧನ ಸಹಾಯ

ಅಪಘಾತದಲ್ಲಿ ಗಾಯಗೊಂಡವರ ಸಂಬಂಧಿಕರಿಗೆ ಸಚಿವ ತುಕಾರಾಂ ಧನಸಹಾಯ ಮಾಡಿದರು. ಇದೇ ವೇಳೆ ಖಾಸಗಿ ಸಂಸ್ಥೆಯ ಆಂಬುಲೆನ್ಸ್ ಚಾಲಕನಿಗೂ ಸಚಿವರು ಹಣ ಕೊಟ್ಟರು. ಗಾಯಾಳುಗಳ ಹೆಸರು ತಿಳಿದುಬಂದಿಲ್ಲ. ತೋರಣಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Intro:ಮೂರು‌‌ ಟಿಪ್ಪರ್ ಗಳ ನಡುವೆ ಮುಖಾಮುಖಿ ಡಿಕ್ಕಿ
ಅಪಘಾತದಲ್ಲಿ ಗಾಯಗೊಂಡವರಿಗೆ ನೆರವಾದ ಸಚಿವ ಈ.ತುಕಾರಾಂ, ಕೊಪ್ಪಳ ಗವಿಶ್ರೀಗಳು!
ಬಳ್ಳಾರಿ: ಜಿಲ್ಲೆಯ ಸಂಡೂರು - ತೋರಣಗಲ್ ಮಾರ್ಗದ
ಮೂರು ಟಿಪ್ಪರ್ ಲಾರಿಗಳ ನಡುವೆ ನಿನ್ನೆಯ ದಿನ ಮುಖಾ
ಮುಖಿ ಚಾಲಕರು ಗಾಯಗೊಂಡಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಬಳ್ಳಾರಿಯಿಂದ ಸಂಡೂರು ಮಾರ್ಗವಾಗಿ ತೆರಳುತ್ತಿದ್ದ ಕೊಪ್ಪಳ ಗವಿಮಠದ ಗವಿಸಿದ್ದೇಶ್ವರ ಸ್ವಾಮೀಜಿ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಈ.ತುಕಾರಾಂ ಅವರು ಕೂಡಲೇ ತಮ್ಮ ವಾಹನಗಳನ್ನ ನಿಲ್ಲಿಸಿ ಗಾಯಾಳುಗಳ ನೆರವಿಗೆ ಧಾವಿಸಿದ್ದಲ್ಲದೇ, ಆಸ್ಪತ್ರೆಗೆ ಸಾಗಿಸುವ ಮುಖೇನ ಮಾನವೀಯತೆ ಮೆರೆದಿದ್ದಾರೆ.
ಅಪಘಾತ ಸ್ಥಳದಲ್ಲೇ ಸ್ವಾಮೀಜಿ ಹಾಗೂ ಸಚಿವರು ಬೀಡು
ಬಿಟ್ಟಿದ್ದು, ಟಿಪ್ಪರ್ ಲಾರಿಗಳಲ್ಲಿ ಸಿಲುಕಿಕೊಂಡ ಗಾಯಾಳುಗಳನ್ನ ಸಾರ್ವಜನಿಕರ ಸಹಾಯದೊಂದಿಗೆ ಹೊರತೆಗೆದು ಜಿಂದಾಲ್ ಕೈಗಾರಿಕೆ ಸಂಸ್ಥೆಯ ಆ್ಯಂಬುಲೆನ್ಸ್ ನಲ್ಲಿ ಗಾಯಾಳುಗಳನ್ನ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ.
ಗಾಯಾಳುಗಳಿಗೆ ಸಚಿವರ ಸಹಾಯಹಸ್ತ: ಈ ಟಿಪ್ಪರ್ ಲಾರಿಗಳ ನಡುವೆ ಉಂಟಾದ ಅಪಘಾತದಲ್ಲಿ ಗಾಯಗೊಂಡವರಿಗೆ ಸ್ವತಃ ಸಚಿವ ತುಕಾರಾಂ ಅವರೇ ತಮ್ಮ ಜೇಬಿನಿಂದ ಹಣ ತೆಗೆದು ಗಾಯಾಳುಗಳ ಅವಲಂಬಿತರಿಗೆ ನೀಡಿದ್ದಾರೆ. ಅಲ್ಲದೇ, ಖಾಸಗಿ ಸಂಸ್ಥೆಯ ಆ್ಯಂಬುಲೆನ್ಸ್ ಇದಾಗಿರೋದರಿಂದ ಆ್ಯಂಬುಲೆನ್ಸ್ ಚಾಲಕನಿಗೂ ಹಣ ನೀಡಿದ್ದಾರೆ.
Body:ಸರಳತೆ ಮೆರೆದ ಸಚಿವರು: ಸಚಿವರೆಂದರೆ ದರ್ಪ, ದೌವಲತ್ತು ತೋರುವ ಸಚಿವರನ್ನ‌ ನಾವು ಕಂಡಿದ್ದೇವೆ. ಕಣ್ಣಾರೆ ನೋಡಿದ್ದೇವೆ. ಆದರೆ, ಸಚಿವ ಈ.ತುಕಾರಾಂ ಅವರು ತಾವು ಸಚಿವರೆನ್ನದೇ ಮೈ ಮರೆತು ಸಾಮಾನ್ಯರಲ್ಲಿ ಸಾಮಾನ್ಯರಂತೆ ರಸ್ತೆಗಿಳಿದು, ಸ್ವತಃ ತಾವೇ ಗಾಯಾಳುಗಳ ರಕ್ಷಣೆಗೆ ಮುಂದಾಗಿದ್ದಾರೆ. ಅದಕ್ಕೆ ಕೊಪ್ಪಳ ಗವಿ ಮಠದ ಗವಿಸಿದ್ದೇಶ್ವರ ಸ್ವಾಮೀಜಿಯೂ ಕೂಡ ಸಾಥ್ ನೀಡಿದ್ದಾರೆ. ಗಾಯಾಳುಗಳ ಹೆಸರು ತಿಳಿದುಬಂದಿಲ್ಲ. ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಈ ಕುರಿತ ಪ್ರಕರಣ ದಾಖಲಾಗಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:R_KN_BEL_13_190419_TIPPER_ACCIDENT_NEWS

R_KN_BEL_14_190419_TIPPER_ACCIDENT_NEWS

R_KN_BEL_15_190419_TIPPER_ACCIDENT_NEWS

R_KN_BEL_16_190419_TIPPER_ACCIDENT_NEWS



ETV Bharat Logo

Copyright © 2024 Ushodaya Enterprises Pvt. Ltd., All Rights Reserved.