ETV Bharat / city

ಚಿಕ್ಕೋಡಿಯಲ್ಲಿ ಕುಖ್ಯಾತ ಅಂತರ್​ ರಾಜ್ಯ ಕಳ್ಳರ ಬಂಧನ - Arrest of notorious Thief gang

ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ವಸ್ತುಗಳನ್ನು ದೋಚುತ್ತಿದ್ದ ಕಳ್ಳರ ಗುಂಪೊಂದನ್ನು ಚಿಕ್ಕೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Thief
ಅಂತರ್​ ರಾಜ್ಯ ಕಳ್ಳರ ಬಂಧನ
author img

By

Published : Dec 13, 2019, 5:50 PM IST

ಚಿಕ್ಕೋಡಿ: ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ವಸ್ತುಗಳನ್ನು ದೋಚುತ್ತಿದ್ದ ಕಳ್ಳರ ಗುಂಪೊಂದನ್ನು ಚಿಕ್ಕೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಲಕ್ಷ್ಮೀ ತೀರ್ಥ ನಗದ ವಿಶಾಲ ನರಸಿಂಗ್ ಶೇರಖಾನೆ (39) ಹಾಗೂ ರಾಜೇಂದ್ರ ನಗರದ ಅಜರುದ್ದಿನ್ ಅರಬ (33) ಬಂಧಿತರು. ಚಿಕ್ಕೋಡಿ ಪಟ್ಟಣ, ಕಬ್ಬೂರ, ನಿಪ್ಪಾಣಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣ ಕುರಿತು ತನಿಖೆ ನಡೆಸಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಬಂಗಾರ, ಬೆಳ್ಳಿ ಆಭರಣ, ನಗದು, ಸೇರಿದಂತೆ ಇತರೆ ವಸ್ತುಗಳನ್ನು ದೋಚುತ್ತಿದ್ದ ಖದೀಮರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ಇನ್ನು ಬಂಧಿತರಿಂದ 268 ಗ್ರಾಂ ಬಂಗಾರದ ಆಭರಣಗಳು, 200 ಗ್ರಾಂ. ಬೆಳ್ಳಿಯ ಸಾಮಾಗ್ರಿಗಳು, 2 ಕಾರು, 2 ಮೊಬೈಲ್, ಕಬ್ಬಿಣದ ರಾಡ್​​ಗಳು ಸೇರಿದಂತೆ ಒಟ್ಟಿನಲ್ಲಿ 15,65,100 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್​.ಪಿ ರಾಮ ಅರಸಿದ್ದಿ, ಚಿಕ್ಕೋಡಿಯ ಮಿಥುನುಕುಮಾರ್​ ಜಿ. ಕೆ, ಸೇರಿದಂತೆ ಅನೇಕ ಪೊಲೀಸರು ಭಾಗಿಯಾಗಿದ್ದರು.

ಚಿಕ್ಕೋಡಿ: ಮನೆಯ ಬೀಗ ಮುರಿದು ಲಕ್ಷಾಂತರ ರೂಪಾಯಿ ವಸ್ತುಗಳನ್ನು ದೋಚುತ್ತಿದ್ದ ಕಳ್ಳರ ಗುಂಪೊಂದನ್ನು ಚಿಕ್ಕೋಡಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಾರಾಷ್ಟ್ರ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಲಕ್ಷ್ಮೀ ತೀರ್ಥ ನಗದ ವಿಶಾಲ ನರಸಿಂಗ್ ಶೇರಖಾನೆ (39) ಹಾಗೂ ರಾಜೇಂದ್ರ ನಗರದ ಅಜರುದ್ದಿನ್ ಅರಬ (33) ಬಂಧಿತರು. ಚಿಕ್ಕೋಡಿ ಪಟ್ಟಣ, ಕಬ್ಬೂರ, ನಿಪ್ಪಾಣಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನ ಪ್ರಕರಣಗಳು ದಾಖಲಾಗಿದ್ದವು. ಈ ಪ್ರಕರಣ ಕುರಿತು ತನಿಖೆ ನಡೆಸಿದ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ವೇಳೆ ಬಾಗಿಲಿಗೆ ಹಾಕಿದ ಕೀಲಿಯನ್ನು ಮುರಿದು ಬಂಗಾರ, ಬೆಳ್ಳಿ ಆಭರಣ, ನಗದು, ಸೇರಿದಂತೆ ಇತರೆ ವಸ್ತುಗಳನ್ನು ದೋಚುತ್ತಿದ್ದ ಖದೀಮರನ್ನು ಚಿಕ್ಕೋಡಿ ಪೊಲೀಸರು ಬಂಧಿಸಿ ತನಿಖೆ ಆರಂಭಿಸಿದ್ದಾರೆ.

ಇನ್ನು ಬಂಧಿತರಿಂದ 268 ಗ್ರಾಂ ಬಂಗಾರದ ಆಭರಣಗಳು, 200 ಗ್ರಾಂ. ಬೆಳ್ಳಿಯ ಸಾಮಾಗ್ರಿಗಳು, 2 ಕಾರು, 2 ಮೊಬೈಲ್, ಕಬ್ಬಿಣದ ರಾಡ್​​ಗಳು ಸೇರಿದಂತೆ ಒಟ್ಟಿನಲ್ಲಿ 15,65,100 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್​.ಪಿ ರಾಮ ಅರಸಿದ್ದಿ, ಚಿಕ್ಕೋಡಿಯ ಮಿಥುನುಕುಮಾರ್​ ಜಿ. ಕೆ, ಸೇರಿದಂತೆ ಅನೇಕ ಪೊಲೀಸರು ಭಾಗಿಯಾಗಿದ್ದರು.

Intro:ಚಿಕ್ಕೋಡಿಯಲ್ಲಿ ಕುಖ್ಯಾತ ಅಂತರಾಜ್ಯ ಕಳ್ಳರ ಬಂಧನBody:

ಚಿಕ್ಕೋಡಿ :

ಮನೆಯ ಕೀ ಮುರಿದು ಮನೆಯಲ್ಲಿ ಇದ್ದ ಲಕ್ಷಾಂತರ ರೂಪಾಯಿ ವಸ್ತುಗಳನ್ನು ದೋಚ್ಚುತ್ತಿದ್ದ ಕಳ್ಳರ ಗ್ಯಾಂಗವನ್ನು ಚಿಕ್ಕೋಡಿ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮನೆಯಲ್ಲಿ ಯಾರು ಇಲ್ಲದ ಸಂಧರ್ಭದಲ್ಲಿ ಮನೆ ಬಾಗಿಲಗಳಿಗೆ ಹಾಕಿದ ಕೀಲಿಯನ್ನು ಮುರಿದು ಬಂಗಾರದ ಆಭರಣ, ಬೆಳ್ಳಿ ಆಭರಣ, ಇತರೆ ವಸ್ತುಗಳು, ಕಾರಗಳು, ನಗದು ಹಣ ಸೇರಿದಂತೆ ಮುಂತಾದ ವಸ್ತುಗಳನ್ನು ದೋಚ್ಚುತ್ತಿದ್ದ ಖದೀಮರನ್ನು ಚಿಕ್ಕೋಡಿ ಪೋಲಿಸರು ಬಂಧಿಸಿ ತನಿಖೆಯನ್ನು ಆರಂಭಿಸಿದ್ದಾರೆ.

ಚಿಕ್ಕೋಡಿ ಪಟ್ಟಣ, ಕಬ್ಬೂರ, ನಿಪ್ಪಾಣಿ ನಗರ ಸೇರಿದಂತೆ ಹಲವು ಕಡೆಗಳಲ್ಲಿ ಕಳ್ಳತನ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣ ಕುರಿತು ತನಿಖೆಯನ್ನು ನಡೆಸಿದ ಪೋಲಿಸರು ಕಳ್ಳರನ್ನು ಭೇದಿಸುವುಲ್ಲಿ ಯಶಸ್ವಿಯಾಗಿದ್ದಾರೆ. ಮಹಾ ರಾಜ್ಯದ ಕೊಲ್ಲಾಪೂರ ಜಿಲ್ಲೆಯ ಲಕ್ಷ್ಮೀ ತೀರ್ಥ ನಗದ ವಿಶಾಲ ನರಸಿಂಗ್ ಶೇರಖಾನೆ (39) ಹಾಗೂ ರಾಜೇಂದ್ರ ನಗರದ ಅಜರುದ್ದಿನ್ ಅರಬ (33) ಬಂಧಿತ ಕಳ್ಳರು ನೇರೆಯ ಮಹಾರಾಷ್ಟ್ರದ ಕೋಲ್ಹಾಪೂರದ ರಹವಾಸಿ ಎಂದು ಗುರುತಿಸಲಾಗಿದೆ.

ಬಂಧಿತರಿಂದ 268 ಗ್ರಾಮದ ಬಂಗಾರದ ಆಭರಣಗಳು, 200 ಗ್ರಾಮದ ಬೆಳ್ಳಿಯ ಸಾಮಾಗ್ರಿಗಳು, 2 ಕಾರುಗಳು, 2 ಮೊಬೈಲ್, ಸ್ಕ್ರೂ ಡ್ರಾಯರಗಳು, ಕಬ್ಬಿಣದ ರಾಡುಗಳು ಸೇರಿದಂತೆ ಒಟ್ಟಿನಲ್ಲಿ 15,65,100 ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಕಾರ್ಯಾಚರಣೆಯಲ್ಲಿ ಎಸ್ ಪಿ ಲಕ್ಷ್ಮಣ ನಿಂಬರಗಿ, ಹೆಚ್ಚುವರಿ ಎಸ್ ಪಿ ರಾಮ ಅರಸಿದ್ದಿ, ಚಿಕ್ಕೋಡಿಯ ಎಎಸಪಿ ಮಿಥುನುಕುಮಾರ ಜಿ. ಕೆ, ಸೇರಿದಂತೆ ವಿವಿಧ ಪೋಲಿಸರ ಕಾರ್ಯಾಚರಣೆಯಿಂದ ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

Conclusion:ಸಂಜಯ ಕೌಲಗಿ
ಚಿಕ್ಕೋಡಿ
ETV Bharat Logo

Copyright © 2025 Ushodaya Enterprises Pvt. Ltd., All Rights Reserved.