ನವದೆಹಲಿ: ದೇಶೀಯ ಪೂರೈಕೆ ಹೆಚ್ಚಿಸಲು ಮತ್ತು ಚಿಲ್ಲರೆ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಸರ್ಕಾರವು ಈರುಳ್ಳಿ ಆಮದಿನ ಸಡಿಲಿಕೆಯ ಮುಂದಿನ ವರ್ಷ ಜನವರಿ 31ರವರೆಗೆ ವಿಸ್ತರಿಸಿದೆ.
ಈರುಳ್ಳಿ ಆಮದು ಮಾಡಲು ಅನುಕೂಲವಾಗುವಂತೆ 2020ರ ಡಿಸೆಂಬರ್ 15ರವರೆಗೆ ಆಮದು ಮಾಡಿಕೊಳ್ಳಲು ಕ್ಯಾರೆಂಟೈನ್ ಆರ್ಡರ್ (ಪಿಕ್ಯೂ), 2003ರ ಫೈಟೊಸಾನಟರಿ ಸರ್ಟಿಫಿಕೇಟ್ (ಪಿಎಸ್ಸಿ) ಅಡಿ ಹೆಚ್ಚುವರಿ ಷರತ್ತುಗಳನ್ನು ಸರ್ಕಾರ ಅಕ್ಟೋಬರ್ 21ರಂದು ಸಡಿಲಿಸಿತ್ತು.
ಕೆಲವು ವಾರ ಇಲ್ಲವೇ ತಿಂಗಳಲ್ಲಿ ಕೊರೊನಾ ಲಸಿಕೆ ಸಿದ್ಧವಾಗುತ್ತೆ: ಸದಾನಂದಗೌಡ ವಿಶ್ವಾಸ
ಕೃಷಿ ಸಚಿವಾಲಯವು ಮಾರುಕಟ್ಟೆಯಲ್ಲಿ ಈರುಳ್ಳಿಯ ಹೆಚ್ಚಿನ ಬೆಲೆಗಳ ಬಗ್ಗೆ ಸಾರ್ವಜನಿಕರ ಕಾಳಜಿಯ ಹಿನ್ನೆಲೆಯಲ್ಲಿ 2021ರ ಜನವರಿ 31ರವರೆಗೆ ಆಮದುಗಳಿಗೆ ವಿಶ್ರಾಂತಿ ನೀಡಲು ನಿರ್ಧರಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಈ ವಿನಾಯತಿಯು ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ. ಆಮದು ಮಾಡಿಕೊಂಡ ಈರುಳ್ಳಿಯ ಸರಕುಗಳನ್ನು ಭಾರತೀಯ ಬಂದರಿಗೆ ತಂದು ರಾಸಾಯನಿಕ ಸಿಂಪಡಣೆ ಮಾಡಬಾರದು. ಮಾನ್ಯತೆ ಪಡೆದ ಪೂರೈಕೆದಾರರ ಮೂಲಕ ಆಮದುದಾರರು ಭಾರತದಲ್ಲಿ ಔಷಧಿ ಸಿಂಪಡಣೆ ಮಾಡುತ್ತಾರೆ ಎಂದು ಹೇಳಿದೆ.
ಈ ರವಾನೆಯನ್ನು ಕ್ಯಾರೆಂಟೈನ್ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸುತ್ತಾರೆ. ಸಿಂಪಡಣೆ ಸಂಬಂಧಿಸಿದ ಕಾಯಿಲೆಗಳಿಂದ ಮುಕ್ತವಾಗಿದ್ದರೆ ಮಾತ್ರ ಸರಕು ಬಿಡುಗಡೆ ಮಾಡಲಾಗುತ್ತದೆ. ತಪಾಸಣೆಯ ಸಮಯದಲ್ಲಿ ಒಣ ಕೊಳೆತವನ್ನು ತಡೆದರೆ, ತಿರಸ್ಕರಿಸಿ ಹಿಂದಕ್ಕೆ ಕಳುಹಿಸಲಾಗುತ್ತದೆ.
ರಾಷ್ಟ್ರ ರಾಜಧಾನಿಯಲ್ಲಿ ಈರುಳ್ಳಿ ಬೆಲೆ ಅಕ್ಟೋಬರ್ನಲ್ಲಿ ಪ್ರತಿ ಕೆ.ಜಿಗೆ 65-70 ರೂ.ಗಳಿಂದ ಗುರುವಾರ ಪ್ರತಿ ಕೆ.ಜಿ.ಗೆ 40 ರೂ.ಗೆ ತಲುಪಿದೆ. ಬೆಲೆ ಏರಿಕೆಯ ಬೇಸತಿದ ಗ್ರಾಹಕರಿಗೆ ಸ್ವಲ್ಪ ನಿರಾಳ ಸಿಕ್ಕಂತಾಗಿದೆ.