ETV Bharat / business

ಸೈಲೆಂಟಾಗಿ ಭಾರತಕ್ಕೆ 548 ಕೋಟಿ ರೂ. ನಷ್ಟ ತಂದಿಟ್ಟ ಪಾಕ್​! -

ಪುಲ್ವಾಮದಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಪಾಕ್ ಬೆಂಬಲಿತ ಉಗ್ರರು ದಾಳಿ ನಡೆಸಿದ್ದರಿಂದ ಸುಮಾರು 40 ಸೈನಿಕರು ಹುತಾತ್ಮರಾದರು. ಪ್ರತಿಯಾಗಿ ಭಾರತ ಜೈಷ್​- ಇ- ಮೊಹಮ್ಮದ್‌ ಉಗ್ರ ತರಬೇತಿ ಕೇಂದ್ರದ ಮೇಲೆ ಫೆಬ್ರವರಿಯಲ್ಲಿ ಏರ್​ಸ್ಟ್ರೈಕ್ ನಡೆಸಿತ್ತು. ಇದರಿಂದ ಉಭಯ ರಾಷ್ಟ್ರಗಳ ನಡುವೆ ಯುದ್ಧ ಕಾರ್ಮೋಡ ಕವಿದು, ಪಾಕ್ ಭಾರತೀಯ ವಿಮಾನಗಳ ಹಾರಾಟಕ್ಕೆ ತನ್ನ ವಾಯುಗಡಿ ಪ್ರವೇಶಕ್ಕೆ ನಿರ್ಬಂಧ ಹೇರಿತು.

ಸಾಂದರ್ಭಿಕ ಚಿತ್ರ
author img

By

Published : Jul 6, 2019, 12:16 PM IST

ನವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರ ಗಡಿಯ ಬಾಲಾ​ಕೋಟ್​ ಮೇಲೆ ಭಾರತದ ವಾಯುಪಡೆ ಏರ್​ಸ್ಟ್ರೈಕ್​ ದಾಳಿಯ ಬಳಿಕ ವಿಮಾನ ಹಾರಾಟಕ್ಕೆ ನಿಷೇಧ ಹೇರಿದ್ದರಿಂದ ಸರ್ಕಾರಿ ಸ್ವಾಮ್ಯದ ಏರ್​ ಇಂಡಿಯಾಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

ಪುಲ್ವಾಮದಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಪಾಕ್ ಬೆಂಬಲಿತ ಉಗ್ರರು ದಾಳಿ ನಡೆಸಿದ್ದರಿಂದ ಸುಮಾರು 40 ಸೈನಿಕರು ಹುತಾತ್ಮರಾದರು. ಪ್ರತಿಯಾಗಿ ಭಾರತ ಜೈಷ್​- ಇ- ಮೊಹಮ್ಮದ್‌ ಉಗ್ರ ತರಬೇತಿ ಕೇಂದ್ರದ ಮೇಲೆ ಫೆಬ್ರವರಿಯಲ್ಲಿ ಏರ್​ಸ್ಟ್ರೈಕ್ ನಡೆಸಿತ್ತು. ಇದರಿಂದ ಉಭಯ ರಾಷ್ಟ್ರಗಳ ನಡುವೆ ಯುದ್ಧ ಕಾರ್ಮೋಡ ಕವಿದು, ಪಾಕ್ ಭಾರತೀಯ ವಿಮಾನಗಳ ಹಾರಟಕ್ಕೆ ತನ್ನ ವಾಯುಗಡಿ ಪ್ರವೇಶದ ನಿರ್ಬಂಧ ಹೇರಿತು.

ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ವಾಯುಯಾನ ಸಂಸ್ಥೆಯಾದ ಏರ್​ ಇಂಡಿಯಾ ಜುಲೈ 2ರ ವರೆಗೆ ₹ 495 ಕೋಟಿ ಹಾಗೂ ಇಂಡಿಗೋ ₹ 25.1 ಕೋಟಿಯಷ್ಟು ನಷ್ಟ ಅನುಭವಿಸಿವೆ ಎಂದಿದ್ದಾರೆ.

ವಾಯುಪಡೆ ಪಾಕ್​ಗೆ ಹೊಂದಿಕೊಂಡಿರುವ ಬಾಲಾ​ಕೋಟ್​ ಭಯೋತ್ಪಾದನ ತರಬೇತಿ ಶಿಬಿರದ ಮೇಲೆ ಫೆಬ್ರವರಿಯಲ್ಲಿ ಏರ್​ಸ್ಟ್ರೈಕ್​ ನಡೆಸಿತು. ಇದ್ದಾದ ಬಳಿಕ ತನ್ನ ವಾಯುಗಡಿ ಪ್ರವೇಶಕ್ಕೆ ಭಾರತದ ವಾಯುಯಾನ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿತು. ಪರ್ಯಾಯ ಮಾರ್ಗದಲ್ಲಿ ಹಾರಾಟ ನಡೆಸಿದ್ದರಿಂದ ಈ ನಷ್ಟ ಉಂಟಾಗಿದೆ. ಜೂನ್​ 20ರ ವರೆಗೆ ಸ್ಪೈಸ್​ಜೆಟ್​ ಮತ್ತು ಗೋ ಏರ್​ ಕ್ರಮವಾಗಿ ₹ 30.70 ಕೋಟಿ ಹಾಗೂ ₹ 2.1 ಕೋಟಿಯಷ್ಟು ನಷ್ಟ ಭರಿಸಬೇಕಾಯಿತು ಎಂದು ವಿವರಿಸಿದರು.

ನವದೆಹಲಿ: ಪಾಕ್​ ಆಕ್ರಮಿತ ಕಾಶ್ಮೀರ ಗಡಿಯ ಬಾಲಾ​ಕೋಟ್​ ಮೇಲೆ ಭಾರತದ ವಾಯುಪಡೆ ಏರ್​ಸ್ಟ್ರೈಕ್​ ದಾಳಿಯ ಬಳಿಕ ವಿಮಾನ ಹಾರಾಟಕ್ಕೆ ನಿಷೇಧ ಹೇರಿದ್ದರಿಂದ ಸರ್ಕಾರಿ ಸ್ವಾಮ್ಯದ ಏರ್​ ಇಂಡಿಯಾಕ್ಕೆ ಕೋಟ್ಯಂತರ ರೂಪಾಯಿ ನಷ್ಟವಾಗಿದೆ.

ಪುಲ್ವಾಮದಲ್ಲಿ ಭಾರತೀಯ ಯೋಧರನ್ನು ಗುರಿಯಾಗಿಸಿಕೊಂಡು ಪಾಕ್ ಬೆಂಬಲಿತ ಉಗ್ರರು ದಾಳಿ ನಡೆಸಿದ್ದರಿಂದ ಸುಮಾರು 40 ಸೈನಿಕರು ಹುತಾತ್ಮರಾದರು. ಪ್ರತಿಯಾಗಿ ಭಾರತ ಜೈಷ್​- ಇ- ಮೊಹಮ್ಮದ್‌ ಉಗ್ರ ತರಬೇತಿ ಕೇಂದ್ರದ ಮೇಲೆ ಫೆಬ್ರವರಿಯಲ್ಲಿ ಏರ್​ಸ್ಟ್ರೈಕ್ ನಡೆಸಿತ್ತು. ಇದರಿಂದ ಉಭಯ ರಾಷ್ಟ್ರಗಳ ನಡುವೆ ಯುದ್ಧ ಕಾರ್ಮೋಡ ಕವಿದು, ಪಾಕ್ ಭಾರತೀಯ ವಿಮಾನಗಳ ಹಾರಟಕ್ಕೆ ತನ್ನ ವಾಯುಗಡಿ ಪ್ರವೇಶದ ನಿರ್ಬಂಧ ಹೇರಿತು.

ನಾಗರಿಕ ವಿಮಾನಯಾನ ಖಾತೆಯ ರಾಜ್ಯ ಸಚಿವ ಹರ್ದೀಪ್ ಸಿಂಗ್ ಪುರಿ ಈ ಬಗ್ಗೆ ಮಾಹಿತಿ ನೀಡಿದ್ದು, ರಾಷ್ಟ್ರೀಯ ವಾಯುಯಾನ ಸಂಸ್ಥೆಯಾದ ಏರ್​ ಇಂಡಿಯಾ ಜುಲೈ 2ರ ವರೆಗೆ ₹ 495 ಕೋಟಿ ಹಾಗೂ ಇಂಡಿಗೋ ₹ 25.1 ಕೋಟಿಯಷ್ಟು ನಷ್ಟ ಅನುಭವಿಸಿವೆ ಎಂದಿದ್ದಾರೆ.

ವಾಯುಪಡೆ ಪಾಕ್​ಗೆ ಹೊಂದಿಕೊಂಡಿರುವ ಬಾಲಾ​ಕೋಟ್​ ಭಯೋತ್ಪಾದನ ತರಬೇತಿ ಶಿಬಿರದ ಮೇಲೆ ಫೆಬ್ರವರಿಯಲ್ಲಿ ಏರ್​ಸ್ಟ್ರೈಕ್​ ನಡೆಸಿತು. ಇದ್ದಾದ ಬಳಿಕ ತನ್ನ ವಾಯುಗಡಿ ಪ್ರವೇಶಕ್ಕೆ ಭಾರತದ ವಾಯುಯಾನ ಸಂಸ್ಥೆಗಳಿಗೆ ನಿರ್ಬಂಧ ವಿಧಿಸಿತು. ಪರ್ಯಾಯ ಮಾರ್ಗದಲ್ಲಿ ಹಾರಾಟ ನಡೆಸಿದ್ದರಿಂದ ಈ ನಷ್ಟ ಉಂಟಾಗಿದೆ. ಜೂನ್​ 20ರ ವರೆಗೆ ಸ್ಪೈಸ್​ಜೆಟ್​ ಮತ್ತು ಗೋ ಏರ್​ ಕ್ರಮವಾಗಿ ₹ 30.70 ಕೋಟಿ ಹಾಗೂ ₹ 2.1 ಕೋಟಿಯಷ್ಟು ನಷ್ಟ ಭರಿಸಬೇಕಾಯಿತು ಎಂದು ವಿವರಿಸಿದರು.

Intro:Body:Conclusion:

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.