ETV Bharat / business

20 ಲಕ್ಷ ಕೋಟಿ  ಪ್ಯಾಕೇಜ್:  ಯೋಜನೆ  ರೂಪುರೇಷೆ ತೆರೆದಿಟ್ಟ ಮುಖ್ಯ ಆರ್ಥಿಕ ಸಲಹೆಗಾರ

ಕೆಲವು ಅಂದಾಜಿನ ಪ್ರಕಾರ, ಸರ್ಕಾರವು 4.2 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ 2021ರ ವಿತ್ತೀಯ ವರ್ಷದಲ್ಲಿ ಹಣಕಾಸಿನ ಕೊರತೆ ಜಿಡಿಪಿಯ ಶೇ 5.8ಕ್ಕೆ ತಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ. ಇಂತಹ ವಿತ್ತೀಯ ಸಂಕಷ್ಟದಲ್ಲಿ 20 ಲಕ್ಷ ಕೋಟಿ ರೂ. ಆರ್ಥಿಕ ಪ್ಯಾಕೇಜ್ ಹೇಗೆ ರೂಪಿಸಲಾಯಿತು ಎಂಬ ರೂಪುರೇಷವನ್ನು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ವಿವರಿಸಿದ್ದಾರೆ.

author img

By

Published : May 14, 2020, 6:38 PM IST

K V Subramanian
ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕವು ಅನಿವಾರ್ಯವಲ್ಲದ ಅಥವಾ ವಿವೇಚನೆಯಿಲ್ಲದ ಸರಕುಗಳ ಬೇಡಿಕೆಯನ್ನು ತೀವ್ರವಾಗಿ ಹಿಂದಕ್ಕೆ ತಳ್ಳಿದ್ದು, ಹಣದುಬ್ಬರ ಏರಿಳಿತದ ಪರಿಸ್ಥಿತಿಗಳನ್ನು ಸೃಷ್ಟಿಸಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಹೇಳಿದ್ದಾರೆ.

20 ಲಕ್ಷ ಕೋಟಿ ರೂ. ಉತ್ತೇಜಕ ಪ್ಯಾಕೇಜ್‌ ಅನ್ನು ಹಣಕಾಸಿನ ಕೊರತೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದರು.

ಕೋವಿಡ್​ ಗಮನಾರ್ಹ ಹಣದುಬ್ಬರವಿಳಿತದ ಪರಿಣಾಮ ಹೊಂದಿದೆ. ಅನಿವಾರ್ಯವಲ್ಲದ ಸರಕು ಮತ್ತು ಸೇವೆಗಳ ಬೇಡಿಕೆ ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಆದ್ದರಿಂದ ನಗದು ಕೊರತೆ ಅಥವಾ ಪ್ರಚೋದಕ ಪ್ಯಾಕೇಜ್ ಮೂಲಕ ಹೆಚ್ಚು ಹಣದುಬ್ಬರ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಸ್ತಾವಿತ ಉತ್ತೇಜಕ ಪ್ಯಾಕೇಜ್, ದ್ರವ್ಯತೆ ತುಂಬುವ ಮೂಲಕ ಬೇಡಿಕೆ ಸೃಷ್ಟಿಸಲಿದೆ. ಇದರಿಂದಾಗಿ ಆರ್ಥಿಕತೆ ವೃದ್ಧಿಯಾಗುತ್ತದೆ. ಉತ್ತೇಜಕ, ಉತ್ತಮ ಹಂತ ತಲುಪಲು ಹತೋಟಿ ಸಾಧನೆವಾಗಿದ್ದು, ಇದೇ ಸಮಯದಲ್ಲಿ ಹಣಕಾಸಿನ ಅಂಶಗಳನ್ನು ನಿಯಂತ್ರಣದಲ್ಲಿ ಇರುವುದನ್ನು ಖಾತ್ರಿಪಡಿಸುತ್ತದೆ ಎಂದರು.

ಕೋವಿಡ್​ -19 ಬಿಕ್ಕಟ್ಟಿನ ವಿರುದ್ಧ ಹೋರಾಡಲು 20 ಲಕ್ಷ ಕೋಟಿ ರೂ. ಸಮಗ್ರ ಉತ್ತೇಜಕ ಪ್ಯಾಕೇಜ್‌ಗೆ ಧನಸಹಾಯ ನೀಡಲು ಕಳೆದ ವಾರ, ಸರ್ಕಾರವು ತನ್ನ ಮಾರುಕಟ್ಟೆ ಸಾಲವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಬಜೆಟ್ ಅಂದಾಜಿನ ಶೇ 54 ರಷ್ಟು ಹೆಚ್ಚಿಸಿ 12 ಲಕ್ಷ ಕೋಟಿ ರೂ.ಗೆ ಏರಿಸಿದೆ.

ಕೆಲವು ಅಂದಾಜಿನ ಪ್ರಕಾರ, ಸರ್ಕಾರವು 4.2 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ 2021ರ ವಿತ್ತೀಯ ವರ್ಷದಲ್ಲಿ ಹಣಕಾಸಿನ ಕೊರತೆ ಜಿಡಿಪಿಯ ಶೇ 5.8ಕ್ಕೆ ತಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ನವದೆಹಲಿ: ಕೋವಿಡ್ -19 ಸಾಂಕ್ರಾಮಿಕವು ಅನಿವಾರ್ಯವಲ್ಲದ ಅಥವಾ ವಿವೇಚನೆಯಿಲ್ಲದ ಸರಕುಗಳ ಬೇಡಿಕೆಯನ್ನು ತೀವ್ರವಾಗಿ ಹಿಂದಕ್ಕೆ ತಳ್ಳಿದ್ದು, ಹಣದುಬ್ಬರ ಏರಿಳಿತದ ಪರಿಸ್ಥಿತಿಗಳನ್ನು ಸೃಷ್ಟಿಸಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ.ವಿ. ಸುಬ್ರಮಣಿಯನ್ ಹೇಳಿದ್ದಾರೆ.

20 ಲಕ್ಷ ಕೋಟಿ ರೂ. ಉತ್ತೇಜಕ ಪ್ಯಾಕೇಜ್‌ ಅನ್ನು ಹಣಕಾಸಿನ ಕೊರತೆ ನಿಯಂತ್ರಣದಲ್ಲಿ ಇಟ್ಟುಕೊಳ್ಳುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದರು.

ಕೋವಿಡ್​ ಗಮನಾರ್ಹ ಹಣದುಬ್ಬರವಿಳಿತದ ಪರಿಣಾಮ ಹೊಂದಿದೆ. ಅನಿವಾರ್ಯವಲ್ಲದ ಸರಕು ಮತ್ತು ಸೇವೆಗಳ ಬೇಡಿಕೆ ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಆದ್ದರಿಂದ ನಗದು ಕೊರತೆ ಅಥವಾ ಪ್ರಚೋದಕ ಪ್ಯಾಕೇಜ್ ಮೂಲಕ ಹೆಚ್ಚು ಹಣದುಬ್ಬರ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆಯಿಲ್ಲ ಎಂದು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಪ್ರಸ್ತಾವಿತ ಉತ್ತೇಜಕ ಪ್ಯಾಕೇಜ್, ದ್ರವ್ಯತೆ ತುಂಬುವ ಮೂಲಕ ಬೇಡಿಕೆ ಸೃಷ್ಟಿಸಲಿದೆ. ಇದರಿಂದಾಗಿ ಆರ್ಥಿಕತೆ ವೃದ್ಧಿಯಾಗುತ್ತದೆ. ಉತ್ತೇಜಕ, ಉತ್ತಮ ಹಂತ ತಲುಪಲು ಹತೋಟಿ ಸಾಧನೆವಾಗಿದ್ದು, ಇದೇ ಸಮಯದಲ್ಲಿ ಹಣಕಾಸಿನ ಅಂಶಗಳನ್ನು ನಿಯಂತ್ರಣದಲ್ಲಿ ಇರುವುದನ್ನು ಖಾತ್ರಿಪಡಿಸುತ್ತದೆ ಎಂದರು.

ಕೋವಿಡ್​ -19 ಬಿಕ್ಕಟ್ಟಿನ ವಿರುದ್ಧ ಹೋರಾಡಲು 20 ಲಕ್ಷ ಕೋಟಿ ರೂ. ಸಮಗ್ರ ಉತ್ತೇಜಕ ಪ್ಯಾಕೇಜ್‌ಗೆ ಧನಸಹಾಯ ನೀಡಲು ಕಳೆದ ವಾರ, ಸರ್ಕಾರವು ತನ್ನ ಮಾರುಕಟ್ಟೆ ಸಾಲವನ್ನು ಪ್ರಸಕ್ತ ಹಣಕಾಸು ವರ್ಷದಲ್ಲಿ ಬಜೆಟ್ ಅಂದಾಜಿನ ಶೇ 54 ರಷ್ಟು ಹೆಚ್ಚಿಸಿ 12 ಲಕ್ಷ ಕೋಟಿ ರೂ.ಗೆ ಏರಿಸಿದೆ.

ಕೆಲವು ಅಂದಾಜಿನ ಪ್ರಕಾರ, ಸರ್ಕಾರವು 4.2 ಲಕ್ಷ ಕೋಟಿ ರೂ. ಹೆಚ್ಚುವರಿ ಸಾಲ 2021ರ ವಿತ್ತೀಯ ವರ್ಷದಲ್ಲಿ ಹಣಕಾಸಿನ ಕೊರತೆ ಜಿಡಿಪಿಯ ಶೇ 5.8ಕ್ಕೆ ತಳ್ಳುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.