ETV Bharat / briefs

ರಾಮನಗರ ಕೊರೊನಾ ನಿರ್ವಹಣೆ : ಝೂಮ್​ ಮೀಟಿಂಗ್​ ನಡೆಸಿ ಮಾಹಿತಿ ಪಡೆದ ಶಾಸಕಿ ಅನಿತಾ ಕುಮಾರಸ್ವಾಮಿ

author img

By

Published : Jun 1, 2021, 4:26 PM IST

ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ಆ್ಯಂಟಿ ಬಾಡಿ ಟೆಸ್ಟ್​ ಮಾಡಬೇಕು. ಇದರ ಬಗ್ಗೆ ಡಿಹೆಚ್​ಒ ಮತ್ತು ಟಿಹೆಚ್​ಒ ಹೆಚ್ಚಿನ ಗಮನಹರಿಸಬೇಕು. ಗ್ರಾಮ ಪಂಚಾಯತ್‌ನಿಂದ ಪ್ರತಿ ಹಳ್ಳಿಗಳಲ್ಲೂ ಜನರಲ್ಲಿ ಕೊರೊನಾ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು..

ರಾಮನಗರ
ರಾಮನಗರ

ರಾಮನಗರ : ಜಿಲ್ಲೆಯಲ್ಲಿನ ಕೊರೊನಾ ನಿರ್ವಹಣೆ ಸಂಬಂಧ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಝೂಮ್​ ಮೀಟಿಂಗ್ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಅವರು ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಬಗ್ಗೆ ಸಂಪೂರ್ಣ ವಿವರ ಪಡೆದರು. ಈ ಸಭೆಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್‌ಗಳ ಪಿಡಿಒಗಳು ಭಾಗವಹಿಸಿದ್ದರು.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು :

  • ಪ್ರತಿ ಪಂಚಾಯತ್‌ ವ್ಯಾಪ್ತಿಯಲ್ಲಿ ಎಷ್ಟು ಜನ ಸೋಂಕಿತರಿದ್ದಾರೆ. ಎಷ್ಟು ಜನ ಹೋಂ ಐಸೋಲೇಟ್ ಆಗಿದ್ದಾರೆ. ಪಂಚಾಯತ್‌ನಿಂದ ಕೊರೋನಾ ಸಂಬಂಧ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ
  • ಕೊರೊನಾ ಸೋಂಕಿತರಿಗೆ RTPCR, ಸಿಟಿ ಸ್ಕ್ಯಾನ್​, ರಕ್ತ ಪರೀಕ್ಷೆ ಆಗ್ತಿದೆಯೇ. ಡಿಸ್ಚಾರ್ಜ್​ ಮಾಡೋಕೆ ಮುಂಚೆ ರಕ್ತ ಪರೀಕ್ಷೆ ನಡೆಸಲು ಸೂಚನೆ
  • ರಾಮನಗರದಲ್ಲಿರುವ ಆಕ್ಸಿಜನ್ ಬೆಡ್, ವೆಂಟಿಲೇಟರ್ಸ್ ವ್ಯವಸ್ಥೆ ಕುರಿತು ಮಾಹಿತಿ.
  • ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವತ್ತ ಅಧಿಕಾರಿಗಳು ಗಮನ ಹರಿಸಬೇಕೆಂಬ ಸೂಚನೆ
  • ಗ್ರಾಮ ಪಂಚಾಯತ್‌ಗಳಲ್ಲಿ ಕೋವಿಡ್ ತುರ್ತು ನಿಧಿಯಲ್ಲಿ ಮತ್ತು 15ನೇ ಹಣಕಾಸಿನಲ್ಲಿ ನಿರ್ಗತಿಕರನ್ನ, ಕಡುಬಡವರನ್ನ ಗುರುತಿಸಿ ವಿಶೇಷ ಪ್ರಾತಿನಿಧ್ಯದ ಮೇಲೆ ಆಹಾರದ ಕಿಟ್​ಗಳನ್ನ ನೀಡಬೇಕೆಂದು ಸೂಚನೆ

ಇನ್ನು, ಶಾಸಕಿ ಅನಿತಾ ಕುಮಾರಸ್ವಾಮಿ ಅವರು, ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಮಂದಿಗೆ ವ್ಯಾಕ್ಸಿನ್ ಆಗಿದೆ. ರೆಮ್​ಡಿಸಿವರ್​ ಕೊರತೆ ಇದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದರು.

ಈವರೆಗೆ ಸುಮಾರು 45 ವರ್ಷ ಮೇಲ್ಪಟ್ಟವರಿಗೆ ಎಷ್ಟು ವ್ಯಾಕ್ಸಿನ್ ನೀಡಲಾಗಿದೆ, ಕೊರೊನಾ ಕೇರ್ ಸೆಂಟರ್​ಗಳಲ್ಲಿ, ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಕ್ರಮಕೈಗೊಳ್ಳಲು ಸೂಚಿಸಿದರು.

ಇನ್ನು, ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ಆ್ಯಂಟಿ ಬಾಡಿ ಟೆಸ್ಟ್​ ಮಾಡಬೇಕು. ಇದರ ಬಗ್ಗೆ ಡಿಹೆಚ್​ಒ ಮತ್ತು ಟಿಹೆಚ್​ಒ ಹೆಚ್ಚಿನ ಗಮನಹರಿಸಬೇಕು. ಗ್ರಾಮ ಪಂಚಾಯತ್‌ನಿಂದ ಪ್ರತಿ ಹಳ್ಳಿಗಳಲ್ಲೂ ಜನರಲ್ಲಿ ಕೊರೊನಾ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ರಾಮನಗರ : ಜಿಲ್ಲೆಯಲ್ಲಿನ ಕೊರೊನಾ ನಿರ್ವಹಣೆ ಸಂಬಂಧ ಶಾಸಕಿ ಅನಿತಾ ಕುಮಾರಸ್ವಾಮಿ ಅವರು ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಝೂಮ್​ ಮೀಟಿಂಗ್ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಅವರು ಪ್ರತಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿನ ಬಗ್ಗೆ ಸಂಪೂರ್ಣ ವಿವರ ಪಡೆದರು. ಈ ಸಭೆಯಲ್ಲಿ ಕ್ಷೇತ್ರದ ಎಲ್ಲಾ ಗ್ರಾಮ ಪಂಚಾಯತ್‌ಗಳ ಪಿಡಿಒಗಳು ಭಾಗವಹಿಸಿದ್ದರು.

ಸಭೆಯಲ್ಲಿ ಚರ್ಚೆಯಾದ ಪ್ರಮುಖ ವಿಷಯಗಳು :

  • ಪ್ರತಿ ಪಂಚಾಯತ್‌ ವ್ಯಾಪ್ತಿಯಲ್ಲಿ ಎಷ್ಟು ಜನ ಸೋಂಕಿತರಿದ್ದಾರೆ. ಎಷ್ಟು ಜನ ಹೋಂ ಐಸೋಲೇಟ್ ಆಗಿದ್ದಾರೆ. ಪಂಚಾಯತ್‌ನಿಂದ ಕೊರೋನಾ ಸಂಬಂಧ ತೆಗೆದುಕೊಂಡ ಕ್ರಮಗಳ ಕುರಿತು ಮಾಹಿತಿ
  • ಕೊರೊನಾ ಸೋಂಕಿತರಿಗೆ RTPCR, ಸಿಟಿ ಸ್ಕ್ಯಾನ್​, ರಕ್ತ ಪರೀಕ್ಷೆ ಆಗ್ತಿದೆಯೇ. ಡಿಸ್ಚಾರ್ಜ್​ ಮಾಡೋಕೆ ಮುಂಚೆ ರಕ್ತ ಪರೀಕ್ಷೆ ನಡೆಸಲು ಸೂಚನೆ
  • ರಾಮನಗರದಲ್ಲಿರುವ ಆಕ್ಸಿಜನ್ ಬೆಡ್, ವೆಂಟಿಲೇಟರ್ಸ್ ವ್ಯವಸ್ಥೆ ಕುರಿತು ಮಾಹಿತಿ.
  • ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವತ್ತ ಅಧಿಕಾರಿಗಳು ಗಮನ ಹರಿಸಬೇಕೆಂಬ ಸೂಚನೆ
  • ಗ್ರಾಮ ಪಂಚಾಯತ್‌ಗಳಲ್ಲಿ ಕೋವಿಡ್ ತುರ್ತು ನಿಧಿಯಲ್ಲಿ ಮತ್ತು 15ನೇ ಹಣಕಾಸಿನಲ್ಲಿ ನಿರ್ಗತಿಕರನ್ನ, ಕಡುಬಡವರನ್ನ ಗುರುತಿಸಿ ವಿಶೇಷ ಪ್ರಾತಿನಿಧ್ಯದ ಮೇಲೆ ಆಹಾರದ ಕಿಟ್​ಗಳನ್ನ ನೀಡಬೇಕೆಂದು ಸೂಚನೆ

ಇನ್ನು, ಶಾಸಕಿ ಅನಿತಾ ಕುಮಾರಸ್ವಾಮಿ ಅವರು, ರಾಮನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಎಷ್ಟು ಮಂದಿಗೆ ವ್ಯಾಕ್ಸಿನ್ ಆಗಿದೆ. ರೆಮ್​ಡಿಸಿವರ್​ ಕೊರತೆ ಇದೆಯೇ ಎಂಬುದರ ಬಗ್ಗೆ ಮಾಹಿತಿ ಪಡೆದರು.

ಈವರೆಗೆ ಸುಮಾರು 45 ವರ್ಷ ಮೇಲ್ಪಟ್ಟವರಿಗೆ ಎಷ್ಟು ವ್ಯಾಕ್ಸಿನ್ ನೀಡಲಾಗಿದೆ, ಕೊರೊನಾ ಕೇರ್ ಸೆಂಟರ್​ಗಳಲ್ಲಿ, ಆಸ್ಪತ್ರೆಗಳಲ್ಲಿ ಸೋಂಕಿತರಿಗೆ ಗುಣಮಟ್ಟದ ಚಿಕಿತ್ಸೆ ಸಿಗುವಂತೆ ಕ್ರಮಕೈಗೊಳ್ಳಲು ಸೂಚಿಸಿದರು.

ಇನ್ನು, ಆಶಾ ಕಾರ್ಯಕರ್ತೆಯರಿಗೆ ಉಚಿತವಾಗಿ ಆ್ಯಂಟಿ ಬಾಡಿ ಟೆಸ್ಟ್​ ಮಾಡಬೇಕು. ಇದರ ಬಗ್ಗೆ ಡಿಹೆಚ್​ಒ ಮತ್ತು ಟಿಹೆಚ್​ಒ ಹೆಚ್ಚಿನ ಗಮನಹರಿಸಬೇಕು. ಗ್ರಾಮ ಪಂಚಾಯತ್‌ನಿಂದ ಪ್ರತಿ ಹಳ್ಳಿಗಳಲ್ಲೂ ಜನರಲ್ಲಿ ಕೊರೊನಾ ಬಗ್ಗೆ ಇನ್ನೂ ಹೆಚ್ಚು ಜಾಗೃತಿ ಮೂಡಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಸೂಚಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.