ETV Bharat / briefs

ತಿಥಿ ಕಾರ್ಡ್ ಹಂಚುತ್ತಲೇ ಯುಪಿಪಿ ಅಭ್ಯರ್ಥಿ ಪರ ಮತಯಾಚಿಸಿದ ವ್ಯಕ್ತಿ! - undefined

ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿವೆ. ಆದರೆ ಉಪೇಂದ್ರ ಅವರ ಪ್ರಜಾಕೀಯ ಪಕ್ಷ ಸದ್ದಿಲ್ಲದೆ ಪ್ರಚಾರ ಮಾಡುತ್ತಿದೆ. ತಿಥಿ ಕಾರ್ಡ್​ ಹಂಚುವ ವೇಳೆ ಅಭ್ಯರ್ಥಿ ಪರ ಮತಯಾಚನೆ ಮಾಡಿರುವ ವಿಡಿಯೋವೊಂದು ವೈರಲ್​ ಆಗಿದೆ.

ಅಭ್ಯರ್ಥಿ ಪರ ಮತಯಾಚಿಸಿದ ಪ್ರಜಾಕೀಯ ಪಕ್ಷದ ಕಾರ್ಯಕರ್ತ ಪುಟ್ಟಮಾದಯ್ಯ
author img

By

Published : Apr 12, 2019, 1:32 PM IST

ರಾಮನಗರ : ತಿಥಿ ಕಾರ್ಡ್ ಹಂಚುವ ವೇಳೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುವ ಮೂಲಕ‌ ಪ್ರಚಾರ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಈ ಕುರಿತಾದ ವಿಡಿಯೋ ಈಗ ವೈರಲ್ ಆಗಿದೆ.

ಜಿಲ್ಲೆಯ ಗೌಡಯ್ಯನದೊಡ್ಡಿ ಗ್ರಾಮದ ಚೂಡದಾರ್ ವೆಂಕಟಸಿದ್ದಯ್ಯ ಇತ್ತೀಚೆಗೆ ನಿಧನರಾಗಿದ್ದರು. ಇಂದು ತಿಥಿ ಕಾರ್ಯ ಇದ್ದು, ಅವರ ಸಂಬಂಧಿ ಪುಟ್ಟಮಾದಯ್ಯ ಎಂಬುವರು ತಿಥಿ ಕಾರ್ಡ್ ಹಂಚುವ ವೇಳೆ ರಿಯಲ್​ ಸ್ಟಾರ್​ ಉಪೇಂದ್ರ ಅವರ ಕಲ್ಪನೆಯ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

ಅಭ್ಯರ್ಥಿ ಪರ ಮತಯಾಚಿಸಿದ ಪ್ರಜಾಕೀಯ ಪಕ್ಷದ ಕಾರ್ಯಕರ್ತ ಪುಟ್ಟಮಾದಯ್ಯ

ಪ್ರಜಾಕೀಯ ಪಕ್ಷದಲ್ಲಿ ಯಾವುದೇ ರೀತಿಯ ವೈಭವದ ರೋಡ್​ ಶೋ ಮಾಡೋ ಹಾಗಿಲ್ಲ, ದುಡ್ಡು ಕೊಡಂಗಿಲ್ಲ, ಜಾತಿ ನಿಂದನೆ ಮಾಡೋ ಹಾಗಿಲ್ಲ. ಇದು ಪ್ರಜಾಕೀಯ ಪಕ್ಷದ ಸಿದ್ಧಾಂತ ಎಂದು ಪುಟ್ಟಮಾದಯ್ಯ ತಿಳಿಸಿದರು. ಅತ್ಯಂತ ಸರಳವಾದ ಮಾರ್ಗಗಳಲ್ಲೇ ಪ್ರಚಾರ ಆರಂಭಿಸಿದ್ದೇವೆ ಎಂದಿರುವ ಪುಟ್ಟಮಾದಯ್ಯ ಅವರ ವಿಡಿಯೋ ವೈರಲ್​ ಆಗಿದೆ.

ರಾಮನಗರ : ತಿಥಿ ಕಾರ್ಡ್ ಹಂಚುವ ವೇಳೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುವ ಮೂಲಕ‌ ಪ್ರಚಾರ ಕಾರ್ಯ ಸದ್ದಿಲ್ಲದೆ ನಡೆಯುತ್ತಿದೆ. ಈ ಕುರಿತಾದ ವಿಡಿಯೋ ಈಗ ವೈರಲ್ ಆಗಿದೆ.

ಜಿಲ್ಲೆಯ ಗೌಡಯ್ಯನದೊಡ್ಡಿ ಗ್ರಾಮದ ಚೂಡದಾರ್ ವೆಂಕಟಸಿದ್ದಯ್ಯ ಇತ್ತೀಚೆಗೆ ನಿಧನರಾಗಿದ್ದರು. ಇಂದು ತಿಥಿ ಕಾರ್ಯ ಇದ್ದು, ಅವರ ಸಂಬಂಧಿ ಪುಟ್ಟಮಾದಯ್ಯ ಎಂಬುವರು ತಿಥಿ ಕಾರ್ಡ್ ಹಂಚುವ ವೇಳೆ ರಿಯಲ್​ ಸ್ಟಾರ್​ ಉಪೇಂದ್ರ ಅವರ ಕಲ್ಪನೆಯ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು.

ಅಭ್ಯರ್ಥಿ ಪರ ಮತಯಾಚಿಸಿದ ಪ್ರಜಾಕೀಯ ಪಕ್ಷದ ಕಾರ್ಯಕರ್ತ ಪುಟ್ಟಮಾದಯ್ಯ

ಪ್ರಜಾಕೀಯ ಪಕ್ಷದಲ್ಲಿ ಯಾವುದೇ ರೀತಿಯ ವೈಭವದ ರೋಡ್​ ಶೋ ಮಾಡೋ ಹಾಗಿಲ್ಲ, ದುಡ್ಡು ಕೊಡಂಗಿಲ್ಲ, ಜಾತಿ ನಿಂದನೆ ಮಾಡೋ ಹಾಗಿಲ್ಲ. ಇದು ಪ್ರಜಾಕೀಯ ಪಕ್ಷದ ಸಿದ್ಧಾಂತ ಎಂದು ಪುಟ್ಟಮಾದಯ್ಯ ತಿಳಿಸಿದರು. ಅತ್ಯಂತ ಸರಳವಾದ ಮಾರ್ಗಗಳಲ್ಲೇ ಪ್ರಚಾರ ಆರಂಭಿಸಿದ್ದೇವೆ ಎಂದಿರುವ ಪುಟ್ಟಮಾದಯ್ಯ ಅವರ ವಿಡಿಯೋ ವೈರಲ್​ ಆಗಿದೆ.

Kn_rmn_01_120419_prajakiya campaign_7204219 ರಾಮನಗರ : ತಿಥಿ ಕಾರ್ಡ್ ಹಂಚುವ ವೇಳೆ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುವ ಮೂಲಕ‌ಪ್ರಚಾರ ಕಾರ್ಯ ಸದಗದಿಲ್ಲದೆ ನಡೆಯುತ್ತಿದೆ. ರಾಮನಗರ ಜಿಲ್ಲೆಯ ಗೌಡಯ್ಯನದೊಡ್ಡಿ ಗ್ರಾಮದ ಚೂಡದಾರ್ ವೆಂಕಟಸಿದ್ದಯ್ಯ ಇತ್ತೀಚೆಗೆ ಮೃತರಾಗಿದ್ದರು . ಇಂದು ತಿಥಿಕಾರ್ಯ ಈ ಸಂಧರ್ಭ ಅವರ ಸಂಭಂದಿ ಪುಟ್ಟಮಾದಯ್ಯ ಉತ್ತರ ಕ್ರಿಯಾಧಿ ಭೂಶಾಂತಿ ಕಾರ್ಯದ ಆಹ್ವಾನ ಪತ್ರಿಕೆ ಹಂಚುವ ವೇಳೆ ರಿಯಲ್ಸ್ಟಾರ್ ಉಪೇಂದ್ರ ಅವರ ಕಲ್ಪನೆಯ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ಗೆ ಮತ ನೀಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೆ ಇಂದು ತಿಥಿಕಾರ್ಯ ನಡೆಯುವ ವೇಳೆ ಆಗಮಿಸಿರುವ ಎಲ್ಲಾ ಸಂಭಂದಿಗಳ ಬಳಿ ಮತಯಾಚನೆ ಮೂಲಕ ಸರಳ ಹಾಗೂ ಭ್ರಷ್ಟಾಚಾರ ರಹಿತ ಪ್ರಚಾರ ಮೂಲಕ ಮತಚಲಾವಣೆಗೆ ಒತ್ತು ನೀಡುತ್ತಿದ್ದೇವೆ ಎಂದು ಪುಟ್ಟಮಾದಯ್ಯ ಅಭಿಪ್ರಾಯಪಟ್ಟಿದ್ದಾರೆ. ಈ ಕುರಿತಾದ ವಿಡಿಯೋ ಕೂಡ ವೈರಲ್ ಅಗಿದೆ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.