ETV Bharat / briefs

ರಾಜ್ಯದಲ್ಲಿ ಜೆಡಿಎಸ್​ ಎಷ್ಟು ಸ್ಥಾನ ಗೆಲ್ಲುತ್ತದೆ: ಶ್ರೀರಾಮುಲು ಹೇಳಿದ್ದಾರೆ ಕೇಳಿ!

ಮಂಡ್ಯದಲ್ಲಿ ಮಗನಿಗಾದ್ರೂ ಗೆಲ್ಲಿಸಿ, ಮರ್ಯಾದೆ ಉಳಿಸಿಕೊಳ್ಳಬೇಕು ಎಂಬ ಉದ್ದೇಶ ಹೆಚ್​ಡಿ ಕುಮಾರಸ್ವಾಮಿಯವರದ್ದು ಎಂದು ಶ್ರೀರಾಮುಲು ಹೇಳಿದ್ದಾರೆ.

author img

By

Published : Mar 29, 2019, 5:11 AM IST

ಶ್ರೀರಾಮುಲು ಹೇಳಿಕೆ

ಶಿವಮೊಗ್ಗ: ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದರ ಮಧ್ಯೆ ರಾಜಕೀಯ ನಾಯಕರ ಕೇಸರೇರಚಾಟ ಜೋರಾಗಿದೆ. ಇದೀಗ ಭಾರತೀಯ ಜನತಾ ಪಕ್ಷದ ಮುಖಂಡ ಶ್ರೀರಾಮುಲು ಮಾತನಾಡಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್​ ಎಷ್ಟು ಸ್ಥಾನ ಗೆಲ್ಲುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಾಮುಲು, ಜೆಡಿಎಸ್ ಒಂದೇ ಒಂದು ಸ್ಥಾನ ಗೆಲ್ಲುವುದು ಕೂಡ ಕಠಿಣವಾಗಿದೆ ಎಂದಿದ್ದಾರೆ.

ಶ್ರೀರಾಮುಲು ಮಾತು

ಗುಪ್ತಚರ ಮಾಹಿತಿ ಪ್ರಕಾರ, ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ. ಹೀಗಾಗಿ ಜೆಡಿಎಸ್​​ ಮುಖಂಡರು ಬೇರೆ ಯಾವುದೇ ಕ್ಷೇತ್ರಕ್ಕೆ ಹೋಗದೆ ಮಂಡ್ಯ, ತುಮಕೂರು, ಹಾಸನದಲ್ಲಿ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ.ಕಾರಣ ಇಷ್ಟೇ ಮೂರು ಕ್ಷೇತ್ರವನ್ನಾದರೂ ಗೆಲ್ಲುವ ಮೂಲಕ ಮರ್ಯಾದೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಮಂಡ್ಯದಲ್ಲಿ ಸುಮಲತಾ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸೋಲುತ್ತಾರೆ, ಹಾಗೆ ತುಮಕೂರಿನಲ್ಲಿ ದೇವೇಗೌಡರು ಸೋಲುತ್ತಾರೆ, ಹಾಸನದಲ್ಲಿ ಪ್ರಜ್ವಲ್ ಸೋಲುತ್ತಾರೆ ಎಂದು ಭವಿಷ್ಯ ನುಡಿದ ಶ್ರೀರಾಮುಲು, ಪ್ರಚಾರಕ್ಕೆ ಡಿ.ಕೆ ಶಿವಕುಮಾರ್ ಬರುತ್ತಾರಂತೆ ಎನ್ನುವ ಪ್ರಶ್ನೆಗೆ ಉತ್ತರಿಸಿದರು. ಡಿ.ಕೆ ಶಿವಕುಮಾರ್ ಜನರಿಗಾಗಿ ಏನು ಸಾಧನೆ ಮಾಡಿದ್ದಾರೆ. ಅವರ ಸಾಧನೆ ಏನು ಇಲ್ಲ ಇರುವುದೊಂದೇ ದುಡ್ಡು. ಬಂದರೆ ದುಡ್ಡು ಖರ್ಚು ಮಾಡುತ್ತಾರೆ ಎಂಬ ಕಾರಣಕ್ಕೆ ಪ್ರಚಾರಕ್ಕೆ ಕರೆಯುತ್ತಾರೆ ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ.

ಶಿವಮೊಗ್ಗ: ಲೋಕಸಭಾ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದರ ಮಧ್ಯೆ ರಾಜಕೀಯ ನಾಯಕರ ಕೇಸರೇರಚಾಟ ಜೋರಾಗಿದೆ. ಇದೀಗ ಭಾರತೀಯ ಜನತಾ ಪಕ್ಷದ ಮುಖಂಡ ಶ್ರೀರಾಮುಲು ಮಾತನಾಡಿದ್ದಾರೆ.

ರಾಜ್ಯದಲ್ಲಿ ಜೆಡಿಎಸ್​ ಎಷ್ಟು ಸ್ಥಾನ ಗೆಲ್ಲುತ್ತದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಾಮುಲು, ಜೆಡಿಎಸ್ ಒಂದೇ ಒಂದು ಸ್ಥಾನ ಗೆಲ್ಲುವುದು ಕೂಡ ಕಠಿಣವಾಗಿದೆ ಎಂದಿದ್ದಾರೆ.

ಶ್ರೀರಾಮುಲು ಮಾತು

ಗುಪ್ತಚರ ಮಾಹಿತಿ ಪ್ರಕಾರ, ಜೆಡಿಎಸ್ ಒಂದು ಸ್ಥಾನವನ್ನು ಗೆಲ್ಲುವುದಿಲ್ಲ. ಹೀಗಾಗಿ ಜೆಡಿಎಸ್​​ ಮುಖಂಡರು ಬೇರೆ ಯಾವುದೇ ಕ್ಷೇತ್ರಕ್ಕೆ ಹೋಗದೆ ಮಂಡ್ಯ, ತುಮಕೂರು, ಹಾಸನದಲ್ಲಿ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ.ಕಾರಣ ಇಷ್ಟೇ ಮೂರು ಕ್ಷೇತ್ರವನ್ನಾದರೂ ಗೆಲ್ಲುವ ಮೂಲಕ ಮರ್ಯಾದೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.

ಮಂಡ್ಯದಲ್ಲಿ ಸುಮಲತಾ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸೋಲುತ್ತಾರೆ, ಹಾಗೆ ತುಮಕೂರಿನಲ್ಲಿ ದೇವೇಗೌಡರು ಸೋಲುತ್ತಾರೆ, ಹಾಸನದಲ್ಲಿ ಪ್ರಜ್ವಲ್ ಸೋಲುತ್ತಾರೆ ಎಂದು ಭವಿಷ್ಯ ನುಡಿದ ಶ್ರೀರಾಮುಲು, ಪ್ರಚಾರಕ್ಕೆ ಡಿ.ಕೆ ಶಿವಕುಮಾರ್ ಬರುತ್ತಾರಂತೆ ಎನ್ನುವ ಪ್ರಶ್ನೆಗೆ ಉತ್ತರಿಸಿದರು. ಡಿ.ಕೆ ಶಿವಕುಮಾರ್ ಜನರಿಗಾಗಿ ಏನು ಸಾಧನೆ ಮಾಡಿದ್ದಾರೆ. ಅವರ ಸಾಧನೆ ಏನು ಇಲ್ಲ ಇರುವುದೊಂದೇ ದುಡ್ಡು. ಬಂದರೆ ದುಡ್ಡು ಖರ್ಚು ಮಾಡುತ್ತಾರೆ ಎಂಬ ಕಾರಣಕ್ಕೆ ಪ್ರಚಾರಕ್ಕೆ ಕರೆಯುತ್ತಾರೆ ಬಿಟ್ಟು ಬೇರೆ ಯಾವುದೇ ಉದ್ದೇಶವಿಲ್ಲ ಎಂದಿದ್ದಾರೆ.

Intro:ಶಿವಮೊಗ್ಗ,
ಜೆಡಿಎಸ್ ರಾಜಕೀಯ ಭವಿಷ್ಯ ನುಡಿದ , ಶ್ರೀರಾಮಲು
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಎಷ್ಟು ಸ್ಥಾನ ಗೆಲ್ಲುತ್ತದೆ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು
ಜೆಡಿಎಸ್ ಒಂದೇ ಒಂದು ಸ್ಥಾನ ಗೆಲ್ಲುವುದು ಸಹ ಕಷ್ಟ ಇದೆ ಎಂದರು.



Body:ಇಂಟಲಿಜೆನ್ಸ್ ರಿಪೋರ್ಟ್ ಪ್ರಕಾರ ಜೆಡಿಎಸ್ ಒಂದು ಸ್ಥಾನವೂ ಗೆಲ್ಲುವುದಿಲ್ಲ ಎಂದಿದೆ.
ಹಾಗಾಗಿ ಎಲ್ಲೂ ಪ್ರಚಾರಕ್ಕೆ ಹೋಗದೆ ಮಂಡ್ಯ, ತುಮಕೂರು, ಹಾಸನ ಮಾತ್ರ ಪ್ರಚಾರ ನಡೆಸುತ್ತಿದ್ದಾರೆ .
ಕಾರಣ ಇಷ್ಟೇ 3 ಕ್ಷೇತ್ರವನ್ನಾದರೂ ಗೆಲ್ಲುವ ಮೂಲಕ ಮರ್ಯಾದೆ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.
ಜೆಡಿಎಸ್ ಒಂದುಸ್ಥಾನ ಸಹ ಗೆಲ್ಲುವುದು ಡೌಟು ಹಾಗಾಗಿ ಮಗನಾದರೂ ಗೆಲ್ಲಿಸಿ ಕೊಳ್ಳುವ ಮೂಲಕ ಮುಖ್ಯಮಂತ್ರಿ ಎನ್ನುವ ಗೌರವನ್ನಾದರು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದರು.


Conclusion:ಸುಮಲತಾ ವಿರುದ್ಧ ನಿಖಿಲ್ ಕುಮಾರಸ್ವಾಮಿ ಸೋಲುತ್ತಾರೆ, ಹಾಗೆ ತುಮಕೂರಿನಲ್ಲಿ ದೇವೇಗೌಡರು ಸೋಲುತ್ತಾರೆ, ಹಾಸನದಲ್ಲಿ ಪ್ರಜ್ವಲ್ ಸೋಲುತ್ತಾರೆ ಎಂದು ಭವಿಷ್ಯ ನುಡಿದರು.
ನಂತರ ದಲ್ಲಿ ಪ್ರಚಾರಕ್ಕೆ ಡಿ.ಕೆ ಶಿವಕುಮಾರ್ ಬರುತ್ತಾರಂತೆ ಎನ್ನುವ ಪ್ರಶ್ನೆ ಗೆ ಉತ್ತರಿಸಿದ ಅವರು.
ಡಿ.ಕೆ ಶಿವಕುಮಾರ್ ಜನರಿಗಾಗಿ ಏನು ಸಾಧನೆ ಮಾಡಿದ್ದಾರೆ ಅವರ ಸಾಧನೆ ಏನು ಇಲ್ಲ ಇರುವುದೊಂದೆ ದುಡ್ಡು ಹಾಗಾಗಿ ಬಂದರೆ ದುಡ್ಡು ಖರ್ಚು ಮಾಡುತ್ತಾರೆ ಎನ್ನುವ ಕಾರಣಕ್ಕೆ ಪ್ರಚಾರಕ್ಕೆ ಕರೆಯುತ್ತಾರೆ ಹೋರತು ಬೆರೆಯಾವುದಕ್ಕೂ ಅಲ್ಲ ಎಂದರು.
ಭೀಮಾನಾಯ್ಕ ಎಸ್ ಶಿವಮೊಗ್ಗ
ETV Bharat Logo

Copyright © 2024 Ushodaya Enterprises Pvt. Ltd., All Rights Reserved.