ETV Bharat / briefs

ನೇತ್ರದಾನ ಮಹಾದಾನ: ಅಗರ್‌ವಾಲ್‌ ಆಸ್ಪತ್ರೆಯಲ್ಲಿ ಯಶಸ್ವಿ ಕಣ್ಣು ಶಸ್ತ್ರಚಿಕಿತ್ಸೆ - undefined

ಹುಬ್ಬಳ್ಳಿಯ ಅಗರ್‌ವಾಲ್ ಕಣ್ಣಿನ ಆಸ್ಪತ್ರೆಯಲ್ಲಿ ಈಚೆಗೆ ನಡೆದ ಕಣ್ಣಿನ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ. ಕಣ್ಣು ದಾನದ ಮೂಲಕ ಇಂತಹ ಚಿಕಿತ್ಸೆ ಮಾಡಿ ಸಂಪೂರ್ಣ ಅಂಧತ್ವ ಹೊಂದಿದವರಿಗೆ ದೃಷ್ಟಿ ನೀಡಬಹುದು ಎಂದು ಆಸ್ಪತ್ರೆ ನಿರ್ದೇಶಕ ಶ್ರೀಕೃಷ್ಣ ನಾಡಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಗರವಾಲ್ ಆಸ್ಪತ್ರೆಯ ವೈದ್ಯರು ಮಾತನಾಡಿದರು
author img

By

Published : Jun 12, 2019, 8:29 PM IST

ಹುಬ್ಬಳ್ಳಿ: ಇಲ್ಲಿನ ಅಗರವಾಲ್​ ಕಣ್ಣಿನ ಆಸ್ಙತ್ರೆಯಲ್ಲಿ ದೃಷ್ಟಿದೋಷದಿಂದ ಚಿಕಿತ್ಸೆಗೆ ದಾಖಲಾದ ಎಸ್​.ವಿನಯಬಾಬು ಅವರಿಗೆ ಆಪ್ಟಿಕಲ್ ಕೆರಟೋಪ್ಲಾಸ್ಟಿ ಮತ್ತು ಡಿಎಎಲ್​ಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಈ ಮೂಲಕ ಅವರಿಗೆ ದೃಷ್ಟಿ ನೀಡಲಾಗಿದೆ ಎಂದು ಆಸ್ಪತ್ರೆ ನಿರ್ದೇಶಕ ಶ್ರೀಕೃಷ್ಣನಾಡಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಗರವಾಲ್ ಆಸ್ಪತ್ರೆಯ ವೈದ್ಯರು ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರದಾನ ಮಹಾದಾನ. ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂಪ್ರೇರಣೆಯಿಂದ ನೇತ್ರದಾನ ಮಾಡುವ ಮೂಲಕ ದೇಶದ ಅಂಧತ್ವ ನಿವಾರಣೆ ಮಾಡಬಹುದು ಎಂದು ಸಲಹೆ ನೀಡಿದರು.

ವಿನಯಬಾಬು ಎಂಬವರ ಅವರ ಕಣ್ಣಿನ ದೃಷ್ಟಿ ಮಂದವಾಗುತ್ತಿತ್ತು. ಜತೆಗೆ ಗಂಭೀರ ಸ್ವರೂಪ ತಾಳಿ ಕಣ್ಣಿನ ಒಳರಚನೆಯ ಕಾರ್ನಿಯಾವನ್ನು ಹಾನಿಗೊಳಿಸುವ ಹಂತಕ್ಕೆ ತಲುಪಿತ್ತು. ಇದೇ ಸಂದರ್ಭದಲ್ಲಿ ಕಾರ್ನಿಯಾ ಆ್ಯಂಡ್ ರಿಫ್ರಾಕ್ಟಿವ್ ಸರ್ಜರಿಯ ಹಿರಿಯ ತಜ್ಞ ರಘು ನಾಗರಾಜ ನೇತೃತ್ವದ ತಂಡ 34 ವರ್ಷದ ರೋಗಿಗೆ ದೃಷ್ಟಿ ಮರುಕಳಿಸುವಂತೆ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ರು.

ರೋಗಿ ವಿನಯಬಾಬು ಬಲಗಣ್ಣಿನಲ್ಲಿ ಕಾರ್ನಿಯಲ್ ಪರ್ಫೋರೇಶನ್ ಮತ್ತು ಎಡಗಣ್ಣಿನಲ್ಲಿ ಗಂಭೀರ ಸ್ವರೂಪದ ಕೆರಟೊಕೊನಸ್ ಎಂಬ ತೊಂದರೆಯಿಂದ ಬಳಲುತ್ತಿದ್ದರು ಎಂದರು.

ಹುಬ್ಬಳ್ಳಿ: ಇಲ್ಲಿನ ಅಗರವಾಲ್​ ಕಣ್ಣಿನ ಆಸ್ಙತ್ರೆಯಲ್ಲಿ ದೃಷ್ಟಿದೋಷದಿಂದ ಚಿಕಿತ್ಸೆಗೆ ದಾಖಲಾದ ಎಸ್​.ವಿನಯಬಾಬು ಅವರಿಗೆ ಆಪ್ಟಿಕಲ್ ಕೆರಟೋಪ್ಲಾಸ್ಟಿ ಮತ್ತು ಡಿಎಎಲ್​ಕೆ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಲಾಗಿದೆ. ಈ ಮೂಲಕ ಅವರಿಗೆ ದೃಷ್ಟಿ ನೀಡಲಾಗಿದೆ ಎಂದು ಆಸ್ಪತ್ರೆ ನಿರ್ದೇಶಕ ಶ್ರೀಕೃಷ್ಣನಾಡಗೌಡ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಅಗರವಾಲ್ ಆಸ್ಪತ್ರೆಯ ವೈದ್ಯರು ಮಾತನಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರದಾನ ಮಹಾದಾನ. ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂಪ್ರೇರಣೆಯಿಂದ ನೇತ್ರದಾನ ಮಾಡುವ ಮೂಲಕ ದೇಶದ ಅಂಧತ್ವ ನಿವಾರಣೆ ಮಾಡಬಹುದು ಎಂದು ಸಲಹೆ ನೀಡಿದರು.

ವಿನಯಬಾಬು ಎಂಬವರ ಅವರ ಕಣ್ಣಿನ ದೃಷ್ಟಿ ಮಂದವಾಗುತ್ತಿತ್ತು. ಜತೆಗೆ ಗಂಭೀರ ಸ್ವರೂಪ ತಾಳಿ ಕಣ್ಣಿನ ಒಳರಚನೆಯ ಕಾರ್ನಿಯಾವನ್ನು ಹಾನಿಗೊಳಿಸುವ ಹಂತಕ್ಕೆ ತಲುಪಿತ್ತು. ಇದೇ ಸಂದರ್ಭದಲ್ಲಿ ಕಾರ್ನಿಯಾ ಆ್ಯಂಡ್ ರಿಫ್ರಾಕ್ಟಿವ್ ಸರ್ಜರಿಯ ಹಿರಿಯ ತಜ್ಞ ರಘು ನಾಗರಾಜ ನೇತೃತ್ವದ ತಂಡ 34 ವರ್ಷದ ರೋಗಿಗೆ ದೃಷ್ಟಿ ಮರುಕಳಿಸುವಂತೆ ಮಾಡಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದ್ರು.

ರೋಗಿ ವಿನಯಬಾಬು ಬಲಗಣ್ಣಿನಲ್ಲಿ ಕಾರ್ನಿಯಲ್ ಪರ್ಫೋರೇಶನ್ ಮತ್ತು ಎಡಗಣ್ಣಿನಲ್ಲಿ ಗಂಭೀರ ಸ್ವರೂಪದ ಕೆರಟೊಕೊನಸ್ ಎಂಬ ತೊಂದರೆಯಿಂದ ಬಳಲುತ್ತಿದ್ದರು ಎಂದರು.

Intro:*34ರ ಯುವಕನಿಗೆ ಶಸ್ತ್ರಚಿಕಿತ್ಸೆ ಮೂಲಕ ಹೊಸ ದೃಷ್ಟಿ ನೀಡಿದ ಅಗರವಾಲ್ ಕಣ್ಣಿನ ಆಸ್ಪತ್ರೆ*

ಹುಬ್ಬಳ್ಳಿ: ಹು-ಧಾ ಮಹಾನಗರದಲ್ಲಿ ಕಣ್ಣಿನ ಸಮಸ್ಯೆಗಳಿಗೆ ಸಂಬಂಧಿತ ಕಾಯಿಲೆಗಳಿಗೆ ಗುಣಾತ್ಮಕ ಚಿಕಿತ್ಸೆ ನೀಡುತ್ತಾ ಬಂದಿದ್ದ, ಡಾ.ಅಗರವಾಲ್ ಕಣ್ಣಿನ ಆಸ್ಪತ್ರೆ ಈಗ ಆಪ್ಟಿಕಲ್ ಕೆರಟೋಪ್ಲಾಸ್ಟಿ ಮತ್ತು ಡಿ ಎ ಎಲ್ ಕೆ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡುವ ಮೂಲಕ ಎಸ್.ವಿನಯಬಾಬು ಎಂಬುವ ಯುವಕನ ಜೀವನಕ್ಕೆ ಹೊಸ ಬೆಳಕನ್ನು ಮೂಡಿಸಿದೆ ಎಂದು ಆಸ್ಪತ್ರೆಯ ನಿರ್ದೇಶಕ ಶ್ರೀಕೃಷ್ಣ ನಾಡಗೌಡ ತಿಳಿಸಿದರು.
ನಗರದಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನೇತ್ರದಾನ ಮಹಾದಾನ ಪ್ರತಿಯೊಬ್ಬ ವ್ಯಕ್ತಿಯೂ ಸ್ವಯಂ ಪ್ರೇರಣೆಯಿಂದ ನೇತ್ರದಾನ ಮಾಡುವ ಮೂಲಕ ದೇಶದ ಅಂದತ್ವ ನಿವಾರಣೆ ಮಾಡಬಹುದು ಎಂದು ಅವರು ಹೇಳಿದರು. ವಿನಯಬಾಬು ಅವರ ಕಣ್ಣಿನ ದೃಷ್ಟಿ ಮಂದವಾಗುತ್ತಾ ಬಂದು ಗಂಭೀರ ಸ್ವರೂಪಕ್ಕೆ ತೆರಳಿ ಕಾರ್ನಿಯಾವನ್ನು ಹಾನಿಗೊಳಿಸುವ ಹಂತಕ್ಕೆ ತಲುಪಿತು. ಇದೇ ಸಂದರ್ಭದಲ್ಲಿ ಕಾರ್ನಿಯಾ ಆ್ಯಂಡ್ ರಿಫ್ರಾಕ್ಟಿವ್ ಸರ್ಜರಿಯ ಹಿರಿಯ ತಜ್ಞರಾದ ರಘು ನಾಗರಾಜ ನೇತೃತ್ವದ ತಂಡದಿಂದ 34 ವರ್ಷದ ರೋಗಿಗೆ ದೃಷ್ಟಿ ಮರುಕಳಿಸುವಂತೆ ಮಾಡಿದ್ದಾರೆ ಎಂದರು. ವಿನಯಬಾಬು ಅವರ ಕಣ್ಣಿನ ಪರೀಕ್ಷೆ ನಡೆಸಿದಾಗ ಬಲಗಣ್ಣಿನಲ್ಲಿ ಬೆರಳುಗಳನ್ನು ಎಣಿಸುವಷ್ಟು ದೃಷ್ಟಿಯು ಹಾಗೂ ಎಡಗಣ್ಣಿನಲ್ಲಿ 1/60ರಷ್ಟು ದೃಷ್ಟಿ ಪ್ರಮಾಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಬಲಗಣ್ಣಿನಲ್ಲಿ ಕಾರ್ನಿಯಲ್ ಪರ್ಫೋರೇಶನ್ ಮತ್ತು ಎಡಗಣ್ಣಿನಲ್ಲಿ ಗಂಭೀರ ಸ್ವರೂಪದ ಕೆರಟೊಕೊನಸ್ ಎಂಬ ತೊಂದರೆಯಿಂದ ಬಳಲುತ್ತಿದ್ದರು ಎಂದರು.ವಿನಯಬಾಬು ಅವರ ಜೀವನದಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಯಿಂದ ನವೀನ ಚೇತನ ಮೂಡಿಸುವ ಸದುದ್ದೇಶದಿಂದ ಬಲಗಣ್ಣಿಗೆ ಆಪ್ಟಿಕಲ್ ಕೆರಟೊಪ್ಲಾಸಿ ಶಸ್ತ್ರಚಿಕಿತ್ಸೆ ಹಾಗೂ ಎಡಗಣ್ಣಿಗೆ ಡಿ.ಎ‌.ಎಲ್.ಕೆ ಚಿಕಿತ್ಸೆ ನೀಡುವ ಮೂಲಕ ವಿನಯಬಾಬು ಮತ್ತೆ ಈ ಸುಂದರ ಜಗತ್ತನ್ನು ನೋಡುವಂತೆ ಮಾಡಿರುವುದು ಅಗರವಾಲ್ ಕಣ್ಣಿನ ಆಸ್ಪತ್ರೆಯ ಒಂದು ಹೆಮ್ಮೆ ಎಂದು ಅವರು ಹೇಳಿದರು. ದೇಶದಲ್ಲಿ ಜನಸಂಖ್ಯೆ ಪ್ರಮಾಣ ಹೆಚ್ಚಾಗಿದ್ದು ‌ಪ್ರತಿಯೊಬ್ಬ ನಾಗರಿಕರು ಕೂಡ ತಮ್ಮ ಮರಣದ ನಂತರದಲ್ಲಿ ಸ್ವಯಂ ಪ್ರೇರಣೆಯಿಂದ ಕಣ್ಣಿನ ದಾನ ಮಾಡುವ ಮೂಲಕ ಮತ್ತೊಬ್ಬ ಅಂದನಿಗೆ ನೇತ್ರದಾನ ಮಾಡುವ ಮೂಲಕ ಅಂದನಿಗೆ ಹೊಸ ಜೀವನ ನೀಡಿದಂತಾಗುತ್ತದೆ ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಇಂದಿನಿಂದಲೇ ನೇತ್ರದಾನಕ್ಕೆ ಕೈ ಜೋಡಿಸಿ ಎಂದು ಸಲಹೆ ನೀಡಿದರು.
ಬಳಿಕ ಮಾತನಾಡಿದ ಎಸ್.ವಿನಯಬಾಬು, ನನ್ನ ಕಣ್ಣಿನ ತೊಂದರೆಯಿಂದ ನಾನು ತುಂಬಾ ಜಿಗುಪ್ಸೆಗೊಂಡಿದ್ದೆ.ಆದರೇ ಅಗರವಾಲ್ ಕಣ್ಣಿನ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯಿಂದ ದೃಷ್ಟಿ ದೋಷ ಸರಿಪಡಿಸುವ ಮೂಲಕ ನನಗೆ ಹೊಸ ಜೀವನ ನೀಡಿದ್ದಾರೆ ಎಂದರು.ನನ್ನ ದೃಷ್ಟಿದೋಷದಿಂದ ನನ್ನ ವೃತ್ತಿಗೆ ವಿಧಾಯ ಹೇಳಬೇಕಾಗಯತ್ತದೆ ಎಂದು ಚಿಂತಿಸುತ್ತಿದ್ದ ಸಂದರ್ಭದಲ್ಲಿ ಅಗರವಾಲ್ ಆಸ್ಪತ್ರೆ ಕಣ್ಣಿನ ಸಮಸ್ಯೆಗೆ ಪೂರಕ ಚಿಕಿತ್ಸೆ ನೀಡಿ ನನ್ನ ಜೀವನಕ್ಕೆ ಹೊಸ ತಿರುವು ನೀಡಿತು ಎಂದು ಕೃತಜ್ಞತೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಾ. ರವಿ‌ ನಾಡಗೀರ, ಎಸ್.ವಿನಯಬಾಬು ಸೇರಿದಂತೆ ಇತರರು ಇದ್ದರು.Body:H B GaddadConclusion:Etv hubli

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.