ಘಾಟಲ್(ಪ.ಬಂಗಾಳ): ಪ್ರತಿಯೊಂದು ಹಂತದ ಲೋಕಸಭಾ ಚುನಾವಣೆಯ ವೇಳೆಯೂ ಹಿಂಸಾಚಾರಕ್ಕೆ ಸುದ್ದಿಯಾಗುವ ಪಶ್ಚಿಮ ಬಂಗಾಳ ಇಂದಿನ ವೋಟಿಂಗ್ನಲ್ಲೂ ಮತ್ತೆ ಇದೇ ವಿಚಾರಕ್ಕೆ ಸುದ್ದಿಯಾಗಿದೆ.
ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿಯ ಘಾಟಲ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿರುವ ಭಾರತಿ ಘೋಷ್ ಕಾರಿನ ಮೇಲೆ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ.
ಈ ಘಟನೆಯಲ್ಲಿ ಭಾರತಿ ಘೋಷ್ ಭದ್ರತಾ ಪಡೆಯ ಓರ್ವ ಸಿಬ್ಬಂದಿಯ ತಲೆಗೆ ಗಾಯವಾಗಿದೆ. ಕಲ್ಲು ತೂರಾಟ ನಡೆಸಿದ ತಂಡವನ್ನು ಭಾರತಿ ಘೋಷ್ ಭದ್ರತಾ ಸಿಬ್ಬಂದಿಗಳು ಬೆನ್ನತ್ತಿದ್ದಾರೆ. ಕೇಶ್ಪುರದ ದೊಗಾಚಿಯಾದಲ್ಲಿ ಈ ಘಟನೆ ನಡೆದಿದೆ.