ಚೆನ್ನೈ: ತಮಿಳುನಾಡಿನ 234 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಎರಡು ದಿನಗಳ ಹಿಂದೆ ಮತದಾನವಾಗಿದ್ದು, ಇದರ ಮಧ್ಯೆ ನಕಲಿ ಕಿರಾಣಿ ಟೋಕನ್ಗಳೊಂದಿಗೆ ಮತದಾರರಿಗೆ ಮೋಸ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಂಜಾವೂರು ಜಿಲ್ಲೆಯ ಕುಂಬಕೋಣಂನಲ್ಲಿರುವ ಕಿರಾಣಿ ಏಜೆನ್ಸಿ ಮಾಲೀಕ ಇದರಿಂದ ದಿಢೀರ್ ಆಗಿ ಆಘಾತಕ್ಕೊಳಗಾಗಿದ್ದಾರೆ. ಕೈಯಲ್ಲಿ ನಕಲಿ ಟೋಕನ್ ಹಿಡಿದು ಅನೇಕರು ಹಣ ತೆಗೆದುಕೊಂಡು ಹೋಗಲು ಅಂಗಡಿಯತ್ತ ಬರುತ್ತಿದ್ದಂತೆ ಅದರ ಮಾಹಿತಿ ಇಲ್ಲದೇ ಮಾಲೀಕ ಶಾಪ್ ಮುಚ್ಚಿರುವ ಘಟನೆ ನಡೆದಿದೆ.
ಏನಿದು ಘಟನೆ!?
ತಮಿಳುನಾಡು ಚುನಾವಣೆಗೆ ಸ್ಪರ್ಧೆ ಮಾಡಿದ್ದ ಅಭ್ಯರ್ಥಿಯೊಬ್ಬ ಮತದಾರರಿಗೆ 2 ಸಾವಿರ ರೂ. ನಕಲಿ ಟೋಕನ್ ನೀಡಿದ್ದಾನೆ. ತನಗೆ ವೋಟ್ ಹಾಕಿದರೆ ದಿನಸಿ ಅಂಗಡಿಯಲ್ಲಿ 2 ಸಾವಿರ ರೂ. ನೀಡಲಾಗುತ್ತದೆ ಎಂದು ನಂಬಿಸಿದ್ದಾನೆ. ಹೀಗಾಗಿ ಮತದಾನ ಮಾಡಿರುವ ಅನೇಕರು ಕೈಯಲ್ಲಿ ಟೋಕನ್ ಹಿಡಿದು, ದಿನಸಿ ಅಂಗಡಿಯತ್ತ ಲಗ್ಗೆ ಹಾಕಿದ್ದಾರೆ. ಆದರೆ, ಮಾಲೀಕ ಶೇಖ್ ಮೊಹಮ್ಮದ್ ತಮ್ಮೊಂದಿಗೆ ಈ ರೀತಿಯ ಯಾವುದೇ ಒಪ್ಪಂದವಾಗಿಲ್ಲ ಎಂದು ಹೇಳಿದ್ದಾನೆ. ಆದರೆ, ಅಂಗಡಿಯತ್ತ ಬರುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ತಾತ್ಕಾಲಿಕವಾಗಿ ಶಾಪ್ ಬಂದ್ ಮಾಡಿದ್ದಾನೆ.
ಇದನ್ನೂ ಓದಿ: ನಕ್ಸಲ್ರಿಂದ ಅಪಹರಣಗೊಂಡಿದ್ದ ಕೋಬ್ರಾ ಜವಾನ್ ರಿಲೀಸ್.. ಸಂತಸ ವ್ಯಕ್ತಪಡಿಸಿದ ಪತ್ನಿ!
ಕಳೆದ 25 ವರ್ಷಗಳಿಂದ ಮೊಹಮ್ಮದ್ ಅಂಗಡಿ ನಡೆಸುತ್ತಿದ್ದು, ಮಂಗಳವಾರ ಕೂಡ ಎಂದಿನಂತೆ ಶಾಪ್ ಓಪನ್ ಮಾಡಿದ್ದಾರೆ. ಅನೇಕ ಗ್ರಾಹಕರು ಕೈಯಲ್ಲಿ ಟೋಕನ್ ಹಿಡಿದು ಅಂಗಡಿಯತ್ತ ದಾಪುಗಾಲು ಹಾಕಿದ್ದಾರೆ. ವಿಶೇಷವೆಂದರೆ ಟೋಕನ್ ಮೇಲೆ ಕಿರಾಣಿ ಅಂಗಡಿ ಹೆಸರು ಹಾಗೂ ವಿಳಾಸ ನೀಡಲಾಗಿತ್ತು. ಇದರ ಜೊತೆಗೆ 2000 ಸಾವಿರ ರೂ. ಉಚಿತವಾಗಿ ನೀಡಲಾಗುವುದು ಎಂದು ಬರೆಯಲಾಗಿತ್ತು. ಆದರೆ ಈ ಟೋಕನ್ ನೀಡಿರುವುದು ಯಾರು ಎಂಬ ಮಾಹಿತಿ ಮಾತ್ರ ಬಹಿರಂಗಗೊಂಡಿಲ್ಲ.
ತಮಿಳುನಾಡಿನ 234 ಕ್ಷೇತ್ರಗಳಿಗೆ ಮಂಗಳವಾರ ಮತದಾನ ನಡೆದಿದ್ದು, ವೋಟ್ ಮಾಡಿರುವ ಅನೇಕರು ದಿನಸಿ ಪಡೆದುಕೊಳ್ಳಲು ಶಾಪ್ನತ್ತ ದಾಪುಗಾಲು ಹಾಕಿದಾಗ ಶಾಕ್ಗೊಳಗಾಗಿದ್ದಾರೆ.