ETV Bharat / bharat

ಕೇಂದ್ರ ಸರ್ಕಾರ ಇಷ್ಟು ವರ್ಷ ಏನು ಸಾಧನೆ ಮಾಡಿದೆ ಎಂದು ಕೇಳಬೇಡಿ.. ಮೋದಿ ಕಾಲೆಳೆದ ರಾಹುಲ್‌ ಗಾಂಧಿ

ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಆದರೆ, ಇನ್ನೊಂದೆಡೆ ಸರ್ಕಾರ ನಡೆಸುವ ಅವರವರ ಆಪ್ತರ ಆದಾಯವೂ ದ್ವಿಗುಣಗೊಂಡಿದೆ ಎಂದು ಟೀಕಿಸಿ ಟ್ವೀಟ್​ ಮಾಡಿರುವ ಅವರು, ಯುವಕರಿಗೆ ಉದ್ದೋಗ ನೀಡುವಲ್ಲಿ ಮೋದಿ ಸೋತಿದ್ದಾರೆ..

author img

By

Published : Mar 20, 2021, 4:06 PM IST

Updated : Mar 20, 2021, 5:33 PM IST

This govt has only increased unemployment, inflation and poverty: Rahul Gandhi
ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ನಿರುದ್ಯೋಗ, ಬಡತನದಂತಹ ಸಮಸ್ಯೆಗಳನ್ನೇ ಹೆಚ್ಚಿಸಿದ್ದಾರೆಯೇ ಹೊರತು ಮತ್ತಿನ್ನೇನನ್ನೂ ಹೆಚ್ಚಿಸಿಲ್ಲ ಎಂದು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಸಾಮಾನ್ಯ ಜನರನ್ನು ದೂರವಿಟ್ಟಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಆದರೆ, ಇನ್ನೊಂದೆಡೆ ಸರ್ಕಾರ ನಡೆಸುವ ಅವರವರ ಆಪ್ತರ ಆದಾಯವೂ ದ್ವಿಗುಣಗೊಂಡಿದೆ ಎಂದು ಟೀಕಿಸಿ ಟ್ವೀಟ್​ ಮಾಡಿರುವ ಅವರು, ಯುವಕರಿಗೆ ಉದ್ದೋಗ ನೀಡುವಲ್ಲಿ ಮೋದಿ ಸೋತಿದ್ದಾರೆ.

ದೇಶದ ಆದಾಯ ಹೆಚ್ಚುಸುವ ಬದಲಾಗಿ ಬಡತನದಂತಹ ಸಮಸ್ಯೆಗಳನ್ನೇ ಹೆಚ್ಚಿಸಿದ್ದಾರೆಯೇ ಹೊರೆತು ಮತ್ತಿನ್ನೇನು ಇಲ್ಲ ಎಂದಿದ್ದಾರೆ. ಮಧ್ಯಮ ವರ್ಗದ ಜನಸಂಖ್ಯೆಯ ವರದಿಯೊಂದಿಗೆ ತಮ್ಮ ಟ್ವೀಟ್​ಗೆ ಟ್ಯಾಗ್​ ಮಾಡಿಕೊಂಡಿರುವ ರಾಹುಲ್​ ಗಾಂಧಿ, ಮೋದಿ ಸರ್ಕಾರ ನಿರುದ್ಯೋಗ, ಹಣದುಬ್ಬರ ಮತ್ತು ಬಡತನ ಹೆಚ್ಚು ಮಾಡಿದೆ ಎಂದು ಕಾಲೆಳೆದಿದ್ದಾರೆ.

ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ

ಇನ್ನು ಅಸ್ಸೋಂನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿಯೂ ರಾಹುಲ್​ ಗಾಂದಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕ್ರಮಕ್ಕೂ ಮುನ್ನ ಬೃಹತ್​ ರ‍್ಯಾಲಿ ನಡೆಸಿದರು.

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ನಿರುದ್ಯೋಗ, ಬಡತನದಂತಹ ಸಮಸ್ಯೆಗಳನ್ನೇ ಹೆಚ್ಚಿಸಿದ್ದಾರೆಯೇ ಹೊರತು ಮತ್ತಿನ್ನೇನನ್ನೂ ಹೆಚ್ಚಿಸಿಲ್ಲ ಎಂದು ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರ ಸಾಮಾನ್ಯ ಜನರನ್ನು ದೂರವಿಟ್ಟಿದೆ. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಆದರೆ, ಇನ್ನೊಂದೆಡೆ ಸರ್ಕಾರ ನಡೆಸುವ ಅವರವರ ಆಪ್ತರ ಆದಾಯವೂ ದ್ವಿಗುಣಗೊಂಡಿದೆ ಎಂದು ಟೀಕಿಸಿ ಟ್ವೀಟ್​ ಮಾಡಿರುವ ಅವರು, ಯುವಕರಿಗೆ ಉದ್ದೋಗ ನೀಡುವಲ್ಲಿ ಮೋದಿ ಸೋತಿದ್ದಾರೆ.

ದೇಶದ ಆದಾಯ ಹೆಚ್ಚುಸುವ ಬದಲಾಗಿ ಬಡತನದಂತಹ ಸಮಸ್ಯೆಗಳನ್ನೇ ಹೆಚ್ಚಿಸಿದ್ದಾರೆಯೇ ಹೊರೆತು ಮತ್ತಿನ್ನೇನು ಇಲ್ಲ ಎಂದಿದ್ದಾರೆ. ಮಧ್ಯಮ ವರ್ಗದ ಜನಸಂಖ್ಯೆಯ ವರದಿಯೊಂದಿಗೆ ತಮ್ಮ ಟ್ವೀಟ್​ಗೆ ಟ್ಯಾಗ್​ ಮಾಡಿಕೊಂಡಿರುವ ರಾಹುಲ್​ ಗಾಂಧಿ, ಮೋದಿ ಸರ್ಕಾರ ನಿರುದ್ಯೋಗ, ಹಣದುಬ್ಬರ ಮತ್ತು ಬಡತನ ಹೆಚ್ಚು ಮಾಡಿದೆ ಎಂದು ಕಾಲೆಳೆದಿದ್ದಾರೆ.

ಕಾಂಗ್ರೆಸ್​ ಸಂಸದ ರಾಹುಲ್​ ಗಾಂಧಿ

ಇನ್ನು ಅಸ್ಸೋಂನಲ್ಲಿ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿಯೂ ರಾಹುಲ್​ ಗಾಂದಿ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾರ್ಯಕ್ರಮಕ್ಕೂ ಮುನ್ನ ಬೃಹತ್​ ರ‍್ಯಾಲಿ ನಡೆಸಿದರು.

Last Updated : Mar 20, 2021, 5:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.